Homeಅಂಕಣಗಳುಧರ್ಮಗಳನು ಮೀರಿದ ಈ ಮಾತೃತ್ವ

ಧರ್ಮಗಳನು ಮೀರಿದ ಈ ಮಾತೃತ್ವ

- Advertisement -
- Advertisement -

ಗೌರಿ ಲಂಕೇಶ್
20 ಆಗಸ್ಟ್, 2008 (`ಕಂಡಹಾಗೆ’ ಸಂಪಾದಕೀಯದಿಂದ) |

ನಾನು ಸಿನಿಕಳಲ್ಲ. ಆದ್ದರಿಂದ ನಮ್ಮ ದೇಶಕ್ಕೆ ಇನ್ನೂ ಭವಿಷ್ಯವಿದೆ ಇಲ್ಲಿ ಜಾತಿ, ಧರ್ಮ ದಂತಹ ಭೇದಗಳನ್ನು ಮೀರುವ ಜನರಿದ್ದಾರೆ. ಮಮತೆ ಮತ್ತು ಮಾನವೀಯತೆಗೆ ಇನ್ನೂ ಮೌಲ್ಯವಿದೆ ಎಂದು ಸಾರುವ ಒಂದು ನಿಜ ಕಥೆಯನ್ನು ಇಲ್ಲಿ ಹೇಳುತ್ತೇನೆ. ಈ ಕತೆಯ ಕೇಂದ್ರಬಿಂದು ವಿವೇಕ್ ಅಲಿಯಾಸ್ ಮುಜಾಫರ್ ಎಂಬ ಎಂಟು ವರ್ಷದ ಬಾಲಕ. ಮುಖ್ಯಪಾತ್ರಧಾರಿಗಳು ಆತನಿಗೆ ಜನ್ಮಕೊಟ್ಟ ಜಬುನ್ನೀಸಾ ಮತ್ತು ಸಲೀಂ ಎಂಬ ಮುಸ್ಲಿಂ ದಂಪತಿಗಳು ಹಾಗೂ ಆತನನ್ನು ಕಳೆದ ಆರು ವರ್ಷಗಳಿಂದ ಅಕ್ಕರೆಯಿಂದ ಸಾಕಿರುವ ವೀಣಾಪಟ್ನಿ ಎಂಬ ಹಿಂದೂ ತಾಯಿ.
ವಿವೇಕ್ ಅಲಿಯಾಸ್ ಮುಜಾಫರ್‍ನ ಕಥೆ ಪ್ರಾರಂಭವಾಗುವುದು 2002ರಿಂದ. ಅದು ಫೆಬ್ರವರಿ 28. ಹಿಂದಿನ ದಿನವೇ ಗೋದ್ರದಲ್ಲಿ ಸಬರಮತಿ ರೈಲಿನ ಹಲವು ಬೋಗಿಗಳಿಗೆ ಬೆಂಕಿ ಬಿದ್ದು 59 ಅಮಾಯಕರು ಆಹುತಿಯಾಗಿದ್ದರು. ಅದಕ್ಕೆ ಪ್ರತಿಯಾಗಿ ಅಮಾಯಕ ಮುಸಲ್ಮಾನರ ಮೇಲೆ ಹಿಂದುತ್ವವಾದಿಗಳ ದಾಳಿ ಶುರುವಾಗಿತ್ತು.
ಸಲೀಂ ತನ್ನ 2 ವರ್ಷದ ಮಗ ಮುಜಾಫರ್‍ನೊಂದಿಗೆ ಅಹಮದಾಬಾದಿನ ಗುಲ್ಬರ್ಗ್ ಸೊಸೈಟಿಗೆ ಹೋಗಿದ್ದರು. ಆಗ ಅಲ್ಲೇ ಇದ್ದ ಕಾಂಗ್ರೆಸ್‍ನ ಮಾಜಿ ಸಂಸದ ಇಶಾನ್ ಜಾಫ್ರಿಯವರ ಮನೆ ಮೇಲೆ ಹಿಂದೂತ್ವವಾದಿಗಳ ಗುಂಪೊಂದು ದಾಳಿ ಇಟ್ಟು, ಜಾಫ್ರಿ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದಿತ್ತಲ್ಲದೆ, ಅವರ ಮನೆಗೆ ಬೆಂಕಿ ಇಟ್ಟು ಅವತ್ತು ಅವರೊಂದಿಗಿದ್ದ ಎಷ್ಟೋ ಜನರನ್ನು ಕೊಂದು ಹಾಕಿತು. ಇಂತಹ ಅಮಾನುಷ ಗುಂಪಿನಿಂದ ತಪ್ಪಿಸಿಕೊಳ್ಳಲು ಸಲೀಂ ಓಡಿದರು. ಅವರು ವಾಪಸ್ಸು ಬಂದಾಗ, ಹಿಂದುತ್ವವಾದಿಗಳ ಗುಂಪು ಕೊಂದು ಹಾಕಿದ್ದ ಅವರ ಅಜ್ಜಿಯ ಹೆಣ ಇತ್ತೇ ಹೊರತು ಮಗ ಮುಜಾಫರ್‍ನ ಸುಳಿವಿರಲಿಲ್ಲ. ಸುಮಾರು ಎರಡು ತಿಂಗಳ ಕಾಲ ನಡೆದ ಮಾರಣ ಹೋಮದಲ್ಲಿ ಸುಮಾರು ಮೂರು ಸಾವಿರ ಮುಸಲ್ಮಾನರು ಸಾವನ್ನಪ್ಪಿದರೆ, 400ಕ್ಕೂ ಹೆಚ್ಚು ಜನ ಮತ್ತು ಮಕ್ಕಳು ನಾಪತ್ತೆಯಾದರು.
ಅವತ್ತಿನಿಂದ ಮುಜಾಫರ್‍ಗಾಗಿ ತುಂಬಾ ಹುಡುಕಾಡಿದರು, ಪೊಲೀಸರಿಗೆ ದೂರು ನೀಡಿದರು, ತಮ್ಮ ಮಗ ಎಲ್ಲೋ ಸುರಕ್ಷಿತವಾಗಿದ್ದಾನೆ, ಸಿಕ್ಕೇ ಸಿಗುತ್ತಾನೆ ಎಂಬ ಆಶೆಯಲ್ಲಿ ಬದುಕುತ್ತಿದ್ದರು.

veena patni and muzaffar

ಅವರಿಗೆ ಗೊತ್ತಿಲ್ಲದಿದ್ದು ಏನೆಂದರೆ ಪ್ರವೀಣ್ ಪಟ್ನಿ ಎಂಬ ಪೊಲೀಸ್ ಪೇದೆ ತನಗೆ ಸಿಕ್ಕ ಮುಜಾಫರ್‍ನನ್ನು ತನ್ನ ಸಂಬಂಧಿಕರಾದ ವಿಕ್ರಮ್ ಮತ್ತು ವೀಣಾ ಪಟ್ನಿ ಎಂಬ ದಂಪತಿಗಳಿಗೆ ನೀಡಿದ್ದ. ಪಟ್ನಿ ದಂಪತಿಗಳು ಮಕ್ಕಳಿಲ್ಲದವರಾಗಿರಲಿಲ್ಲ, ಹಣವಂತರೂ ಆಗಿರಲಿಲ್ಲ. ಅವರಿಬ್ಬರಿಗೆ ಬೆಳೆದು ನಿಂತಿದ್ದ 4 ಮಕ್ಕಳಿದ್ದರು. ವಿಕ್ರಂ ಕೂಲಿ ಕೆಲಸ ಮಾಡುತ್ತಿದ್ದರೆ, ವೀಣಾ ಮೀನು ಮಾರಿ ಹಣ ಸಂಪಾದಿಸುತ್ತಿದ್ದರು.
ನಾನು ಯಾರು, ಎಲ್ಲಿಂದ ಬಂದೆ ಎಂಬುದು ಗೊತ್ತಿರದ 2 ವರ್ಷದ ಬಾಲಕ ತಮ್ಮ ಸುಪರ್ದಿಗೆ ಬಂದ ನಂತರ ಆತನಿಗೆ ವಿವೇಕ್ ಎಂದು ಮರುನಾಮಕರಣ ಮಾಡಿದ ಪಟ್ನಿ ದಂಪತಿಗಳು ಅವನನ್ನು ಪ್ರೀತಿಯಿಂದಲೇ ಸಲಹಲಾರಂಭಿಸಿದರು. ಆತನಿಗೆ ಕೈತುತ್ತು ನೀಡುತ್ತಾ, ಕೈ ಹಿಡಿದು ನಡೆಸುತ್ತ, ಜೋಗುಳ ಹಾಡುತ್ತಾ, ಆತ ತನಗೆ ಹುಟ್ಟಿದ ಮಗು ಎಂಬಷ್ಟು ಅಕ್ಕರೆಯಿಂದ ವೀಣಾ ಬೆಳೆಸಿದರು.
ಇತ್ತ ತೀಸ್ತಾ ಸೆಟಲ್ವಾಡ್‍ರ ನೆರವಿನೊಂದಿಗೆ ಮಗನಿಗಾಗಿ ಹುಡುಕಾಟವನ್ನು ಸಲೀಂ, ಜಬುನ್ನೀಸಾ ಮುಂದುವರಿಸಿದ್ದರು. ಕೊನೆಗೂ ಮುಜಾಫರ್ ಎಲ್ಲಿದ್ದಾನೆ ಎಂದು ಪತ್ತೆ ಹೆಚ್ಚಿದ ಅವರು ಆತನನ್ನು ಹಿಂದಿರುಗಿಸುವಂತೆ ಕೇಳಿಕೊಂಡರು. ವಿವೇಕ್ ಅವರ ಮಗ ಎಂಬುದಕ್ಕೆ ಸಾಕ್ಷಿ ಏನೆಂದು ವೀಣಾ ಪ್ರಶ್ನಿಸಿದಾಗ ಸಲೀಂ ಮತ್ತು ವಿವೇಕ್ ಆಲಿಯಾಸ್ ಮುಜಾಫರ್ ಡಿಎನ್‍ಎ ಪರೀಕ್ಷಿಸಲಾಯಿತು. ಅದರಿಂದ ವಿವೇಕ್ ನಿಜವಾಗಲೂ ಸಲೀಂ ಮತ್ತು ಜಬುನ್ನೀಸ್ಸಾರ ಮಗ ಎಂದು ಸಾಬೀತಾಯಿತು.
ಆದರೆ ಆರು ವರ್ಷಗಳ ಕಾಲ ಆತನನ್ನು ತನ್ನ ಮಗನೆಂದು ಬೆಳೆಸಿದ್ದ ವೀಣಾ ಅವನನ್ನು ಹೆತ್ತವರಿಗೆ ಹಿಂದಿರುಗಿಸಲು ಒಪ್ಪಲಿಲ್ಲ. ಆಗ ಸಲೀಂ ಮತ್ತು ಜಬುನ್ನೀಸಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ದುರಂತಕ್ಕೆ ವಿವೇಕನಿಗೆ ತನಗೆ ಜನ್ಮ ನೀಡಿರುವವವರ ನೆನಪೇ ಇರಲಿಲ್ಲ ಮಾತ್ರವಲ್ಲ, ನ್ಯಾಯಾಧೀಶರ ಮುಂದೆ ತಾನು ವೀಣಾ ಅಮ್ಮನೊಂದಿಗೆ ಇರುತ್ತೇನೆ ಎಂದ. ಕಾನೂನಿನ ಪ್ರಕಾರ ಆತ ಹೆತ್ತವರಿಗೆ ಸೇರಬೇಕಿದ್ದರು ಆ ಬಾಲಕನ ಮನಸ್ಸನ್ನು ನೋಯಿಸಬಾರದು ಎಂದು ಅವನನ್ನು ವೀಣಾರೊಂದಿಗೆ ಬಿಡಲಾಯಿತು.
ಸಲೀಂ ಮತ್ತು ಜಬುನ್ನಿಸ್ಸಾರಿಗೆ ತಮ್ಮ ಮಗನ ಮೇಲೆ ವೀಣಾರವರಿಗೆ ಇರುವ ಪ್ರೀತಿ ಅರ್ಥವಾಗುತ್ತದೆ. ಹಾಗಂತ ಹೆತ್ತ ಕುಡಿಯನ್ನು ಮರೆತು ಸುಮ್ಮನಿರಲಾಗುವುದಿಲ್ಲ. ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸುವ ಸಲೀಂ “ವೀಣಾ ನನ್ನ ಮಗನ ದೊಡ್ಡಮ್ಮ ಆಗಿರಲಿ, ನನ್ನ ಹೆಂಡತಿಯೇ ಆತನಿಗೆ ಚಿಕ್ಕಮ್ಮನಾಗಿರಲಿ. ನಾನು ಅವರನ್ನು ಅತ್ತಿಗೆಯಂತೆ ನೋಡಿಕೊಳ್ಳುತ್ತೇನೆ. ಆದರೆ ನಮಗೆ ನಮ್ಮ ಮಗ ಬೇಕು” ಎನ್ನುತ್ತಾರೆ.
ಬರ್ಟೋಲ್ಡ್ ಬ್ರೆಕ್ಟ್ ರವರ ‘ಕಕೇಶಿಯನ್ ಚಾಕ್ ಸರ್ಕಲ್’ ಎಂಬ ನಾಟಕದಲ್ಲಿ ಹೆತ್ತ ತಾಯಿಯೇ ತನ್ನ ಮಗನನ್ನು ಎಳೆದಾಡಲು ಸಿದ್ಧರಿರುತ್ತಾಳೆ. ಆದರೆ ಆತನನ್ನು ಸಾಕಿ ಸಲುಹಿದ ದತ್ತು ತಾಯಿ ಅವರಿಗೆ ನೋವಾಗಕೂಡದೆಂದು ಅವನನ್ನು ತನ್ನತ್ತ ಎಳೆಯಲು ನಿರಾಕರಿಸುತ್ತಾಳೆ.
ಆದರೆ ಬೈಬಲ್‍ನಲ್ಲಿ ಬರುವ ‘ಜಡ್ಜ್‍ಮೆಂಟ್ ಆಫ್ ಸೋಲಮನ್’ ಪ್ರಸಂಗದಲ್ಲಿ ನ್ಯಾಯಾಧೀಶ ಸೊಲಮನ್ ಮಗುವನ್ನು ಕತ್ತರಿಸಿ ಇಬ್ಬರು ತಾಯಂದಿರಿಗೆ ಹಂಚಲು ತಯಾರಾದಾಗ, ಆತನನ್ನು ಹೆತ್ತ ತಾಯಿ “ತನ್ನ ಮಗುವನ್ನು ಕೊಲ್ಲಬೇಡಿ ಅವಳಿಗೆ ಕೊಡಿ” ಎಂದು ಕಣ್ಣೀರಿಡುತ್ತಾಳೆ.
ಅಂದರೆ ಹೆತ್ತ ತಾಯಿಯ ಪ್ರೀತಿ ದೊಡ್ಡದು, ಸಾಕಿ ಸಲುಹಿದ ತಾಯಿಯ ಮಮತೆ ಹೆಚ್ಚಿನದು ಎಂದು ತೀರ್ಮಾನಿಸುವುದು ಸುಲಭವಲ್ಲ. ಇವತ್ತು ಜಾತಿ, ಧರ್ಮ, ಅಂತಸ್ತು ಎಂದೆಲ್ಲ ಬಹಳಷ್ಟು ಜನ ಅಂಧರಾಗಿರುವಾಗ ಈ ಪುಟ್ಟ ಬಾಲಕ ಮತ್ತು ಆತನ ಇಬ್ಬರು ತಾಯಂದಿರು ಅವುಗಳನ್ನೆಲ್ಲ ಮೀರಿ ಮಾತೃತ್ವ, ಮಮತೆ ಮತ್ತು ಮಾನವೀಯತೆಯ ಪ್ರತಿಬಿಂಬಗಳಾಗಿದ್ದಾರೆ.
ಈಗಾಗಲೇ ಧರ್ಮದ ಹೆಸರಲ್ಲಿ ಸಾಕಷ್ಟು ದ್ವೇಷ ಮತ್ತು ರಕ್ತಪಾತವನ್ನು ಕಂಡಿರುವ ಗುಜರಾತ್ ಈ ಪ್ರಕರಣದಲ್ಲಾದರೂ ತನ್ನ ಅಂತರಾಳದಲ್ಲಿರುವ ಮನುಷ್ಯತ್ವವನ್ನು ಕಂಡುಕೊಳ್ಳುವಂತಾಗಲಿ.
ಹಾಗಾದರೆ ಎಷ್ಟು ಚೆನ್ನ ಅಲ್ಲವೇ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...