HomeUncategorizedದಿಕ್ಕು ತಪ್ಪಿದ ಮಾತುಗಳು ಮತ್ತು ಅಡ್ಡ ಹಾದಿ ಹಿಡಿದ ಚುನಾವಣಾ ಕಥನ

ದಿಕ್ಕು ತಪ್ಪಿದ ಮಾತುಗಳು ಮತ್ತು ಅಡ್ಡ ಹಾದಿ ಹಿಡಿದ ಚುನಾವಣಾ ಕಥನ

- Advertisement -
- Advertisement -

ಪ್ರಜಾತಂತ್ರದ ಹಬ್ಬಗಳೆಂದು ಕರೆಯುವ ಚುನಾವಣೆಗಳು ಬಂದಿವೆ. ಜನರ ಬೇಕುಬೇಡಗಳನ್ನು ನಿರ್ಧರಿಸುವ ಸಮಯವಿದು. ಹಾಗಾಗಿ ಜನರ ದನಿಗಳು ಜೋರಾದರೆ ಮಾತ್ರ ಆಳಲು ಹೋಗುವವರಿಗೆ ಕೇಳಿಸಲು ಸಾಧ್ಯ. ಏಕೆಂದರೆ ಈಗ ಮಾತ್ರ ರಾಜಕೀಯ ಪಕ್ಷಗಳ ನಾಯಕರುಗಳು ಜನರ ಮನೆ ಮುಂದೆ ಬರುತ್ತಾರೆ. ಹೀಗೆ ಬರುವುದು ಅವರಿಗೆ ಅನಿವಾರ್ಯವಾಗಿರುತ್ತದೆ. ಇದನ್ನೆ ನಾವು ಪ್ರಜಾತಂತ್ರ ಎಂದು ಕರೆಯುವುದು. ಈ ಸಂದರ್ಭದಲ್ಲಿ ಮಾಧ್ಯಮಗಳು ಜನರ ದನಿಯಾಗಿ ಜನ ಮತ್ತು ರಾಜಕೀಯ ಪಕ್ಷಗಳ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು. ಪ್ರಜಾತಂತ್ರದ ಯಶಸ್ಸಿಗೆ ಇದು ಅಗತ್ಯ.
ಕರ್ನಾಟಕದಲ್ಲಿ ಚುನಾವಣೆ ಎರಡು ಹಂತಗಳಲ್ಲಿ ನಡೆಯುತ್ತಿದ್ದು ದಿನೇ ದಿನೇ ಕಾವೇರುತ್ತಿದೆ. ಆದರೆ ಬಹುತೇಕ ಮಾಧ್ಯಮಗಳು ಮಂಡ್ಯ ಕ್ಷೇತ್ರದ ಮೇಲೆ ಮಾತ್ರ ಗಮನ ಹರಿಸುತ್ತಿದ್ದಾರೆ, ಉಳಿದ ಕ್ಷೇತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂಬ ಆರೋಪಗಳು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿವೆ. ಮಂಡ್ಯ ಅಂದ್ರೆ ಇಂಡ್ಯ ಇದ್ದ ಹಾಗೆ ಎಂದು ತಮಾಷೆಗೆ ಹೇಳುತ್ತಿದ್ದುದ್ದನ್ನು ನಿಜ ಮಾಡಲು ಹೊರಟಂತಿದೆ ಮಾಧ್ಯಮಗಳ ನಡೆ. ಚಿತ್ರನಟರು ಇದ್ದರೆ ಟಿಆರ್‍ಪಿ ಸಿಗುತ್ತದೆ ಎಂಬ ಕಾರಣಕ್ಕೆ ಹೆಚ್ಚಿನ ಸಮಯ ಅದಕ್ಕೆ ಮೀಸಲಿಡುವುದು ಎಷ್ಟು ಸರಿ?
ಕರ್ನಾಟಕದಲ್ಲಿರುವ ಚಾಮರಾಜನಗರದಲ್ಲಿ ಅಭಿವೃದ್ದಿ ಕೆಲಸಗಳು ಆಗುತ್ತಿವೆಯೇ ಇಲ್ಲವೇ? ಬೀದರ್‍ನ ಜನಗಳ ಪರಿಸ್ಥಿತಿ ಏನು? ರಾಜ್ಯದ ಜನರಿಗೆ ವಿದ್ಯುತ್ ಕೊಡುವುದಕ್ಕೋಸ್ಕರ ನೆಲೆ ಕಳೆದುಕೊಂಡ ಉತ್ತರ ಕನ್ನಡದ ಜನ ಈಗ ಹೇಗಿದ್ದಾರೆ? ಅಲ್ಲಿನ ಸಂಸದನ ಬೆಂಕಿಯುಗುಳುವ, ತೇಜೋವಧೆಯ ಭಾಷಣಗಳಿಂದ ಅಲ್ಲಿನ ಜನಕ್ಕೇನಾದರೂ ಉಪಯೋಗವಿದೆಯೇ? ಚಿತ್ರದುರ್ಗದ ಜನರು ಬರದಿಂದ ಬೇಯುತ್ತಿರುವುದಕ್ಕೆ ಪರಿಹಾರಗಳೇನು? ಕೋಲಾರ ಚಿಕ್ಕಬಳ್ಳಾಪುರದ ಜನರಿಗೆ ಕುಡಿಯಲು ಉತ್ತಮ ನೀರು ಸಿಗುತ್ತಿದೆಯೇ? ಈ ಯಾವ ವಿಷಯಗಳ ಕುರಿತು ಚುನಾವಣಾ ಸಂದರ್ಭದಲ್ಲಾದರೂ ಮಾಧ್ಯಮಗಳು ಗಮನಹರಿಸುತ್ತಿಲ್ಲ ಎಂಬುದನ್ನು ನಾವು ಮರೆಯಬಾರದು.
ಇನ್ನು ಚುನಾವಣಾ ಸಮಯದಲ್ಲಿ ಕೆಲ ರಾಜಕಾರಣಿಗಳು ಮನಸ್ಸಿಗೆ ಬಂದಹಾಗೆ ಮಾತಾಡುವುದು, ಕೆಟ್ಟ ಕೊಳಕು ಬೈಯ್ಯುವುದನ್ನು ತಮ್ಮ ಕಾಯಕ ಮಾಡಿಕೊಂಡಿರುತ್ತಾರೆ. ಎದುರಾಳಿಗಳನ್ನು ಹಣಿಯಲು ಈ ಕುತಂತ್ರವನ್ನು ಬಳಸುತ್ತಾರೆ. ಕರ್ನಾಟಕದಲ್ಲಿ ಈ ಹಿಂದೆ ಉಪಚುನಾವಣೆಯೊಂದರ ಸಂದರ್ಭದಲ್ಲಿ ಬಿಜೆಪಿ ಪ್ರತಾಪ್ ಸಿಂಹ ಎಂಬ ವ್ಯಕ್ತಿ ‘ಇನ್ನೂ ಗಂಡ ಸತ್ತು ಒಂದು ವಾರ ಆಗಿಲ್ಲ, ಆಗಲೇ ಅವರಿಗೆ ಗೂಟದ ಕಾರಿನ ಮೇಲೆ ಆಸೆ’ ಎಂದಿದ್ದನು. ಇನ್ನು ಈ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅನ್ನು ಟೀಕಿಸುವ ಭರದಲ್ಲಿ ಗಂಡ ಸತ್ತು ತಿಂಗಳಾಗಿಲ್ಲ ಆಗಲೇ ಚುನಾವಣೆಗೆ ಬೇಕಾಯ್ತಾ ಎಂದು ಜೆಡಿಎಸ್‍ನ ಎಚ್.ಡಿ ರೇವಣ್ಣ ಹೇಳುವ ಮೂಲಕ ಸರಿಯಾಗಿ ಛೀಮಾರಿ ಹಾಕಿಸಿಕೊಂಡರು.
ಇಂದು ಕಾಂಗ್ರೆಸ್ ಜೊತೆಗಿರುವ ಪಕ್ಷದ ನಾಯಕಮಣಿಯೊಬ್ಬ ಉತ್ತರ ಪ್ರದೇಶದಲ್ಲಿ ತಮ್ಮ ಪ್ರತಿಸ್ಪರ್ಧಿ ಮಹಿಳಾ ಅಭ್ಯರ್ಥಿಯ ವಿರುದ್ಧ ಅವರು ಎಷ್ಟು ಅಗಲ ಬಿಂದಿ ಇಟ್ಟುಕೊಂಡಿದ್ದಾರೆ ಅಷ್ಟು ಗಂಡಂದಿರು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದೇ ಉತ್ತರ ಪ್ರದೇಶದ ಬಿಜೆಪಿ ವ್ಯಕ್ತಿಯೊಬ್ಬರು ಮಾಯವತಿಯವರು ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ, ಸೌಂದರ್ಯಕ್ಕೆ ಹೆಚ್ಚಿನ ಸಮಯ ನೀಡುತ್ತಾರೆ ಅವರನ್ನು ಗೆಲ್ಲಿಸಬಾರದು ಎಂದಿದ್ದ. ಇವೆಲ್ಲಾ ಉಸಾಬರಿ ಇವರಿಗೆ ಏಕೆ ಎಂಬುದು ಸರಳ ಪ್ರಶ್ನೆ. ಆದರೆ ಇವರೆಲ್ಲರೂ ಮಹಿಳೆಯವರ ವಿರುದ್ಧವೇ ಏಕೆ ತಮ್ಮ ನಾಲಿಗೆಯನ್ನು ಹರಿಯಬಿಡುತ್ತಾರೆ ಎಂಬುದು ಬಹಳ ದೊಡ್ಡ ಪ್ರಶ್ನೆಯಾಗಿದೆ. ಇಂದಿಗೂ ನಮ್ಮನ್ನು ಆಳಲು ಹೋಗುವವರು ಮಹಿಳೆಯರ ಕುರಿತು ಎಂತಹ ಕೀಳು ಮನಸ್ಥಿತಿ ಹೊಂದಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ. ಇದರಲ್ಲಿ ಪಕ್ಷಭೇದವೇ ಇಲ್ಲವಾದರೂ ಸಂಸ್ಕøತಿ ರಕ್ಷಕರ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿಯವರು ಬೆಂಕಿ ಹಚ್ಚುವ ಮಾತಾಡುವುದರಲ್ಲಿ, ಸಮುದಾಯಗಳನ್ನು ಅವಮಾನಿಸುವ ವಿಚಾರದಲ್ಲಿ ಅಗ್ರಗಣ್ಯರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ತಮ್ಮ ಪಕ್ಷ ಮತ್ತು ತಾನು ಏನೆಲ್ಲಾ ಮಾಡಿದ್ದೇನೆ ಎಂಬುದರ ಆಧಾರದಲ್ಲಿ ಆಡಳಿತ ಪಕ್ಷ ಮತ್ತು ಅದರ ಅಭ್ಯರ್ಥಿಗಳು ಮತ ಕೇಳಬೇಕು. ಹಾಗೆಯೇ ವಿರೋಧ ಪಕ್ಷಗಳು ಆಳುವ ಪಕ್ಷ ಹೇಗೆ ವಿಫಲವಾಗಿದೆ ಮತ್ತು ನಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂಬದರ ಮೇಲೆ ಮತಯಾಚಿಸಬೇಕು. ಆದರೆ ಇಂದು ಏನಾಗುತ್ತಿದೆ? ಆಡಳಿತ ನಡೆಸುತ್ತಿದ್ದ ಪಕ್ಷವೂ ಗಡಿಯನ್ನು, ಸೈನಿಕರನ್ನು ದೇಶದ ರಕ್ಷಣೆಯನ್ನು ಮುಂದಿಟ್ಟು ಓಟು ಕೇಳುತ್ತದೆ. ಸ್ವತಃ ಪ್ರಧಾನಿಯವರೇ ಧರ್ಮವನ್ನು ಮುಂದಿಟ್ಟು ಅತಿರೇಕದ ಮಾತುಗಳನ್ನು ಆಡುತ್ತಿದ್ದರೆ, ಮಾಧ್ಯಮಗಳು ಸಹ ರಾಷ್ಟ್ರ ಅಪಾಯದಲ್ಲಿದೆ ಎಂದು ಬಿಂಬಿಸುತ್ತವೆ. ದುರ್ಬಲ ಪ್ರತಿಪಕ್ಷಗಳು ದಿಕ್ಕು ತೋಚದೇ ಕೂರುತ್ತವೆ. ಎಲ್ಲೊ ಒಂದಿಷ್ಟು ಜನಪರವಾಗಿ ಪ್ರತಿಪಕ್ಷಗಳು ಮಾತಾಡಿದರೂ ಸಹ ಈಗಾಗಲೇ ಮಾರಿಕೊಂಡಿರುವ ಮಾಧ್ಯಮಗಳು ಅದಕ್ಕೆ ಮಹತ್ವ ಕೊಡುವುದಿಲ್ಲ.
ಇಂದು ದೊಡ್ಡ ಕಾರ್ಪೊರೇಟ್‍ಗಳು, ಯಾರು ಗೆದ್ದರೆ ನಮಗೆ ಅನುಕೂಲ ಎಂಬ ಆಧಾರದಲ್ಲಿ ಚುನಾವಣೆಗಳನ್ನು ನಿರ್ಧರಿಸಲು ಸಾವಿರಾರು ಕೋಟಿ ಫಂಡ್ ಮಾಡಲು ಚುನಾವಣಾ ಬಾಂಡ್‍ಗಳಂತಹ ಅಧಿಕೃತ ದಾರಿಗಳೂ ತೆರೆದುಕೊಂಡಿವೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಅಭಿಪ್ರಾಯ ರೂಪಿಸಲು ಅವರು ಮಾಧ್ಯಮಗಳನ್ನು ತಯಾರು ಮಾಡಿಕೊಂಡಿರುತ್ತಾರೆ. ಮಾಧ್ಯಮಗಳು ಅವರು ಹೇಳಿದಂತೆ ತುತ್ತೂರಿ ಊದುತ್ತವೆ. ಇದನ್ನು ಬದಲಿಸಬೇಕಾದ ಜವಾಬ್ದಾರಿಯನ್ನು ಇಂದು ಪರ್ಯಾಯ ಮಾಧ್ಯಮಗಳು ಹೊತ್ತಿಕೊಳ್ಳಲೇಬೇಕಿದೆ. ಇದು ಕಾಲದ ತುರ್ತಾಗಿದ್ದು ದೇಶದ ಆರೋಗ್ಯದ ದೃಷ್ಟಿಯಿಂದ, ಪ್ರಜಾತಂತ್ರದ ದೃಷ್ಟಿಯಿಂದ, ಭವಿಷ್ಯದ ದೃಷ್ಟಿಯಿಂದ ಬಹಳ ಬಹಳ ಮಹತ್ವದ್ದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾವೇರಿ: ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಡಿ.ಕೆ.ಶಿವಕುಮಾರ್

ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವಾಗ ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಎಂದು...

‘ಅಸ್ತಿತ್ವದ ಸಮಸ್ಯೆಯಲ್ಲ, ಹೊಣೆಗಾರಿಕೆಯೇ ಮುಖ್ಯ’: ಆರ್‌ಎಸ್‌ಎಸ್ ನೋಂದಣಿ ಕುರಿತು ಬಿ.ಎಲ್. ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಹಾಗೂ ಅದರ ಕಾನೂನಾತ್ಮಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹಾಗೂ ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್...

ನಾನು ‘ದಿಮಾಗಿ ನಕ್ಸಲ್’ ಆಗಿದ್ದರೆ ಅದಕ್ಕೆ ಹೆಮ್ಮೆ ಇದೆ: ಮೋದಿ-ರಿಜಿಜು ವಿರುದ್ಧ ಚಿದಂಬರಂ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ ‘ದಿಮಾಗಿ ನಕ್ಸಲರು’ (ವೈಚಾರಿಕ ನಕ್ಸಲರು) ಎಂಬ ಪದ ಬಳಕೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರಧಾನಿಯವರ ಈ...

CAA ವಿರೋಧಿ ಪ್ರತಿಭಟನೆಗೆ ಕಾರಣವಾಗಿದ್ದ ಪ್ರಶ್ನೆಗಳು ಮತ್ತೆ ಜನಗಣತಿಯಲ್ಲಿ-ವರದಿ

ಶೀಘ್ರದಲ್ಲೇ ಪ್ರಾರಂಭವಾಗಲಿರುವ ಜನಗಣತಿಯ ಜನಸಂಖ್ಯಾ ಎಣಿಕೆ ಹಂತವು, 2011ರ ಜನಗಣತಿಗೆ ಹೋಲಿಸಿದರೆ 14 ಹೊಸ ಅಥವಾ ಮಾರ್ಪಡಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಹಲವು ಪ್ರಶ್ನೆಗಳು 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ...

ಹಿಂಗೋಲಿ ಶಾಲೆಯಲ್ಲಿ ಪ್ರಾಂಶುಪಾಲರ ಮದ್ಯಪಾನ, ಶಿಕ್ಷಕರ ಅಭಾವ: ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅಭಿಜೀತ್ ದೀಪ್ಕೆ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಲಿಂಬಾಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಪ್ರಾಂಶುಪಾಲರ ಹೊಣೆಗೇಡಿತನ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿದೆ. ಶಾಲೆಯ ಪ್ರಾಂಶುಪಾಲರು...

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ? CAG ವರದಿ

ದೇಶಾದ್ಯಂತ ನೆರೆ, ಬರ, ಭೂಕುಸಿತದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ ಭಾರಿ ಪ್ರಮಾಣದ ಕಡಿತವಾಗುತ್ತಿರುವುದು ಈಗ ನಿರೂಪಿತವಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ...

EFLU ವಿದ್ಯಾರ್ಥಿ ಸಂಘದ ಮುಖಂಡರು, NSUI ಸದಸ್ಯರ ಮೇಲೆ ರಾಡ್ ಮತ್ತು ಬಿಯರ್ ಬಾಟಲಿಗಳಿಂದ ಹಲ್ಲೆ; ABVP ಸದಸ್ಯರ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ನ ಪ್ರತಿಷ್ಠಿತ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯ (ಇಎಫ್‌ಎಲ್‌ಯು - EFLU) ಕ್ಯಾಂಪಸ್‌ನಲ್ಲಿ ಭೀಕರ ಹಿಂಸಾಚಾರ ಸಂಭವಿಸಿದ್ದು, ವಿದ್ಯಾರ್ಥಿ ಸಂಘದ ಮುಖಂಡರು ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಸದಸ್ಯರ ಮೇಲೆ...

NALSAR ವಿವಾದ : ಕಾನೂನು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ

ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಹೊರಡಿಸಿದ್ದ ನಿರ್ದೇಶನಗಳ ಕುರಿತು ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಥ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕ್ಷಮೆಯಾಚಿಸಿದ್ದಾರೆ. ಹೈದರಾಬಾದ್‌ನ ನಲ್ಸಾರ್...

ವಿಮಲ್ ‘ಏಲೈಚಿ’ ಜಾಹೀರಾತು ವಿವಾದ: ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಎಫ್‌ಡಿಎ ಶೋಕಾಸ್ ನೋಟಿಸ್

ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರುಗಳು ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ವಿಮಲ್ ಏಲೈಚಿ' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ...

ಹನೂರು ಶೂಟೌಟ್ ಪ್ರಕರಣ: ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲು

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೂವರು ಗುಂಡೇಟಿಗೆ ಬಲಿಯಾದ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್​​​​ಐಆರ್ ದಾಖಲಾಗಿದೆ. ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಹನೂರು...