HomeUncategorizedದಿಕ್ಕು ತಪ್ಪಿದ ಮಾತುಗಳು ಮತ್ತು ಅಡ್ಡ ಹಾದಿ ಹಿಡಿದ ಚುನಾವಣಾ ಕಥನ

ದಿಕ್ಕು ತಪ್ಪಿದ ಮಾತುಗಳು ಮತ್ತು ಅಡ್ಡ ಹಾದಿ ಹಿಡಿದ ಚುನಾವಣಾ ಕಥನ

- Advertisement -
- Advertisement -

ಪ್ರಜಾತಂತ್ರದ ಹಬ್ಬಗಳೆಂದು ಕರೆಯುವ ಚುನಾವಣೆಗಳು ಬಂದಿವೆ. ಜನರ ಬೇಕುಬೇಡಗಳನ್ನು ನಿರ್ಧರಿಸುವ ಸಮಯವಿದು. ಹಾಗಾಗಿ ಜನರ ದನಿಗಳು ಜೋರಾದರೆ ಮಾತ್ರ ಆಳಲು ಹೋಗುವವರಿಗೆ ಕೇಳಿಸಲು ಸಾಧ್ಯ. ಏಕೆಂದರೆ ಈಗ ಮಾತ್ರ ರಾಜಕೀಯ ಪಕ್ಷಗಳ ನಾಯಕರುಗಳು ಜನರ ಮನೆ ಮುಂದೆ ಬರುತ್ತಾರೆ. ಹೀಗೆ ಬರುವುದು ಅವರಿಗೆ ಅನಿವಾರ್ಯವಾಗಿರುತ್ತದೆ. ಇದನ್ನೆ ನಾವು ಪ್ರಜಾತಂತ್ರ ಎಂದು ಕರೆಯುವುದು. ಈ ಸಂದರ್ಭದಲ್ಲಿ ಮಾಧ್ಯಮಗಳು ಜನರ ದನಿಯಾಗಿ ಜನ ಮತ್ತು ರಾಜಕೀಯ ಪಕ್ಷಗಳ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು. ಪ್ರಜಾತಂತ್ರದ ಯಶಸ್ಸಿಗೆ ಇದು ಅಗತ್ಯ.
ಕರ್ನಾಟಕದಲ್ಲಿ ಚುನಾವಣೆ ಎರಡು ಹಂತಗಳಲ್ಲಿ ನಡೆಯುತ್ತಿದ್ದು ದಿನೇ ದಿನೇ ಕಾವೇರುತ್ತಿದೆ. ಆದರೆ ಬಹುತೇಕ ಮಾಧ್ಯಮಗಳು ಮಂಡ್ಯ ಕ್ಷೇತ್ರದ ಮೇಲೆ ಮಾತ್ರ ಗಮನ ಹರಿಸುತ್ತಿದ್ದಾರೆ, ಉಳಿದ ಕ್ಷೇತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂಬ ಆರೋಪಗಳು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿವೆ. ಮಂಡ್ಯ ಅಂದ್ರೆ ಇಂಡ್ಯ ಇದ್ದ ಹಾಗೆ ಎಂದು ತಮಾಷೆಗೆ ಹೇಳುತ್ತಿದ್ದುದ್ದನ್ನು ನಿಜ ಮಾಡಲು ಹೊರಟಂತಿದೆ ಮಾಧ್ಯಮಗಳ ನಡೆ. ಚಿತ್ರನಟರು ಇದ್ದರೆ ಟಿಆರ್‍ಪಿ ಸಿಗುತ್ತದೆ ಎಂಬ ಕಾರಣಕ್ಕೆ ಹೆಚ್ಚಿನ ಸಮಯ ಅದಕ್ಕೆ ಮೀಸಲಿಡುವುದು ಎಷ್ಟು ಸರಿ?
ಕರ್ನಾಟಕದಲ್ಲಿರುವ ಚಾಮರಾಜನಗರದಲ್ಲಿ ಅಭಿವೃದ್ದಿ ಕೆಲಸಗಳು ಆಗುತ್ತಿವೆಯೇ ಇಲ್ಲವೇ? ಬೀದರ್‍ನ ಜನಗಳ ಪರಿಸ್ಥಿತಿ ಏನು? ರಾಜ್ಯದ ಜನರಿಗೆ ವಿದ್ಯುತ್ ಕೊಡುವುದಕ್ಕೋಸ್ಕರ ನೆಲೆ ಕಳೆದುಕೊಂಡ ಉತ್ತರ ಕನ್ನಡದ ಜನ ಈಗ ಹೇಗಿದ್ದಾರೆ? ಅಲ್ಲಿನ ಸಂಸದನ ಬೆಂಕಿಯುಗುಳುವ, ತೇಜೋವಧೆಯ ಭಾಷಣಗಳಿಂದ ಅಲ್ಲಿನ ಜನಕ್ಕೇನಾದರೂ ಉಪಯೋಗವಿದೆಯೇ? ಚಿತ್ರದುರ್ಗದ ಜನರು ಬರದಿಂದ ಬೇಯುತ್ತಿರುವುದಕ್ಕೆ ಪರಿಹಾರಗಳೇನು? ಕೋಲಾರ ಚಿಕ್ಕಬಳ್ಳಾಪುರದ ಜನರಿಗೆ ಕುಡಿಯಲು ಉತ್ತಮ ನೀರು ಸಿಗುತ್ತಿದೆಯೇ? ಈ ಯಾವ ವಿಷಯಗಳ ಕುರಿತು ಚುನಾವಣಾ ಸಂದರ್ಭದಲ್ಲಾದರೂ ಮಾಧ್ಯಮಗಳು ಗಮನಹರಿಸುತ್ತಿಲ್ಲ ಎಂಬುದನ್ನು ನಾವು ಮರೆಯಬಾರದು.
ಇನ್ನು ಚುನಾವಣಾ ಸಮಯದಲ್ಲಿ ಕೆಲ ರಾಜಕಾರಣಿಗಳು ಮನಸ್ಸಿಗೆ ಬಂದಹಾಗೆ ಮಾತಾಡುವುದು, ಕೆಟ್ಟ ಕೊಳಕು ಬೈಯ್ಯುವುದನ್ನು ತಮ್ಮ ಕಾಯಕ ಮಾಡಿಕೊಂಡಿರುತ್ತಾರೆ. ಎದುರಾಳಿಗಳನ್ನು ಹಣಿಯಲು ಈ ಕುತಂತ್ರವನ್ನು ಬಳಸುತ್ತಾರೆ. ಕರ್ನಾಟಕದಲ್ಲಿ ಈ ಹಿಂದೆ ಉಪಚುನಾವಣೆಯೊಂದರ ಸಂದರ್ಭದಲ್ಲಿ ಬಿಜೆಪಿ ಪ್ರತಾಪ್ ಸಿಂಹ ಎಂಬ ವ್ಯಕ್ತಿ ‘ಇನ್ನೂ ಗಂಡ ಸತ್ತು ಒಂದು ವಾರ ಆಗಿಲ್ಲ, ಆಗಲೇ ಅವರಿಗೆ ಗೂಟದ ಕಾರಿನ ಮೇಲೆ ಆಸೆ’ ಎಂದಿದ್ದನು. ಇನ್ನು ಈ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅನ್ನು ಟೀಕಿಸುವ ಭರದಲ್ಲಿ ಗಂಡ ಸತ್ತು ತಿಂಗಳಾಗಿಲ್ಲ ಆಗಲೇ ಚುನಾವಣೆಗೆ ಬೇಕಾಯ್ತಾ ಎಂದು ಜೆಡಿಎಸ್‍ನ ಎಚ್.ಡಿ ರೇವಣ್ಣ ಹೇಳುವ ಮೂಲಕ ಸರಿಯಾಗಿ ಛೀಮಾರಿ ಹಾಕಿಸಿಕೊಂಡರು.
ಇಂದು ಕಾಂಗ್ರೆಸ್ ಜೊತೆಗಿರುವ ಪಕ್ಷದ ನಾಯಕಮಣಿಯೊಬ್ಬ ಉತ್ತರ ಪ್ರದೇಶದಲ್ಲಿ ತಮ್ಮ ಪ್ರತಿಸ್ಪರ್ಧಿ ಮಹಿಳಾ ಅಭ್ಯರ್ಥಿಯ ವಿರುದ್ಧ ಅವರು ಎಷ್ಟು ಅಗಲ ಬಿಂದಿ ಇಟ್ಟುಕೊಂಡಿದ್ದಾರೆ ಅಷ್ಟು ಗಂಡಂದಿರು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದೇ ಉತ್ತರ ಪ್ರದೇಶದ ಬಿಜೆಪಿ ವ್ಯಕ್ತಿಯೊಬ್ಬರು ಮಾಯವತಿಯವರು ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ, ಸೌಂದರ್ಯಕ್ಕೆ ಹೆಚ್ಚಿನ ಸಮಯ ನೀಡುತ್ತಾರೆ ಅವರನ್ನು ಗೆಲ್ಲಿಸಬಾರದು ಎಂದಿದ್ದ. ಇವೆಲ್ಲಾ ಉಸಾಬರಿ ಇವರಿಗೆ ಏಕೆ ಎಂಬುದು ಸರಳ ಪ್ರಶ್ನೆ. ಆದರೆ ಇವರೆಲ್ಲರೂ ಮಹಿಳೆಯವರ ವಿರುದ್ಧವೇ ಏಕೆ ತಮ್ಮ ನಾಲಿಗೆಯನ್ನು ಹರಿಯಬಿಡುತ್ತಾರೆ ಎಂಬುದು ಬಹಳ ದೊಡ್ಡ ಪ್ರಶ್ನೆಯಾಗಿದೆ. ಇಂದಿಗೂ ನಮ್ಮನ್ನು ಆಳಲು ಹೋಗುವವರು ಮಹಿಳೆಯರ ಕುರಿತು ಎಂತಹ ಕೀಳು ಮನಸ್ಥಿತಿ ಹೊಂದಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ. ಇದರಲ್ಲಿ ಪಕ್ಷಭೇದವೇ ಇಲ್ಲವಾದರೂ ಸಂಸ್ಕøತಿ ರಕ್ಷಕರ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿಯವರು ಬೆಂಕಿ ಹಚ್ಚುವ ಮಾತಾಡುವುದರಲ್ಲಿ, ಸಮುದಾಯಗಳನ್ನು ಅವಮಾನಿಸುವ ವಿಚಾರದಲ್ಲಿ ಅಗ್ರಗಣ್ಯರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ತಮ್ಮ ಪಕ್ಷ ಮತ್ತು ತಾನು ಏನೆಲ್ಲಾ ಮಾಡಿದ್ದೇನೆ ಎಂಬುದರ ಆಧಾರದಲ್ಲಿ ಆಡಳಿತ ಪಕ್ಷ ಮತ್ತು ಅದರ ಅಭ್ಯರ್ಥಿಗಳು ಮತ ಕೇಳಬೇಕು. ಹಾಗೆಯೇ ವಿರೋಧ ಪಕ್ಷಗಳು ಆಳುವ ಪಕ್ಷ ಹೇಗೆ ವಿಫಲವಾಗಿದೆ ಮತ್ತು ನಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂಬದರ ಮೇಲೆ ಮತಯಾಚಿಸಬೇಕು. ಆದರೆ ಇಂದು ಏನಾಗುತ್ತಿದೆ? ಆಡಳಿತ ನಡೆಸುತ್ತಿದ್ದ ಪಕ್ಷವೂ ಗಡಿಯನ್ನು, ಸೈನಿಕರನ್ನು ದೇಶದ ರಕ್ಷಣೆಯನ್ನು ಮುಂದಿಟ್ಟು ಓಟು ಕೇಳುತ್ತದೆ. ಸ್ವತಃ ಪ್ರಧಾನಿಯವರೇ ಧರ್ಮವನ್ನು ಮುಂದಿಟ್ಟು ಅತಿರೇಕದ ಮಾತುಗಳನ್ನು ಆಡುತ್ತಿದ್ದರೆ, ಮಾಧ್ಯಮಗಳು ಸಹ ರಾಷ್ಟ್ರ ಅಪಾಯದಲ್ಲಿದೆ ಎಂದು ಬಿಂಬಿಸುತ್ತವೆ. ದುರ್ಬಲ ಪ್ರತಿಪಕ್ಷಗಳು ದಿಕ್ಕು ತೋಚದೇ ಕೂರುತ್ತವೆ. ಎಲ್ಲೊ ಒಂದಿಷ್ಟು ಜನಪರವಾಗಿ ಪ್ರತಿಪಕ್ಷಗಳು ಮಾತಾಡಿದರೂ ಸಹ ಈಗಾಗಲೇ ಮಾರಿಕೊಂಡಿರುವ ಮಾಧ್ಯಮಗಳು ಅದಕ್ಕೆ ಮಹತ್ವ ಕೊಡುವುದಿಲ್ಲ.
ಇಂದು ದೊಡ್ಡ ಕಾರ್ಪೊರೇಟ್‍ಗಳು, ಯಾರು ಗೆದ್ದರೆ ನಮಗೆ ಅನುಕೂಲ ಎಂಬ ಆಧಾರದಲ್ಲಿ ಚುನಾವಣೆಗಳನ್ನು ನಿರ್ಧರಿಸಲು ಸಾವಿರಾರು ಕೋಟಿ ಫಂಡ್ ಮಾಡಲು ಚುನಾವಣಾ ಬಾಂಡ್‍ಗಳಂತಹ ಅಧಿಕೃತ ದಾರಿಗಳೂ ತೆರೆದುಕೊಂಡಿವೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಅಭಿಪ್ರಾಯ ರೂಪಿಸಲು ಅವರು ಮಾಧ್ಯಮಗಳನ್ನು ತಯಾರು ಮಾಡಿಕೊಂಡಿರುತ್ತಾರೆ. ಮಾಧ್ಯಮಗಳು ಅವರು ಹೇಳಿದಂತೆ ತುತ್ತೂರಿ ಊದುತ್ತವೆ. ಇದನ್ನು ಬದಲಿಸಬೇಕಾದ ಜವಾಬ್ದಾರಿಯನ್ನು ಇಂದು ಪರ್ಯಾಯ ಮಾಧ್ಯಮಗಳು ಹೊತ್ತಿಕೊಳ್ಳಲೇಬೇಕಿದೆ. ಇದು ಕಾಲದ ತುರ್ತಾಗಿದ್ದು ದೇಶದ ಆರೋಗ್ಯದ ದೃಷ್ಟಿಯಿಂದ, ಪ್ರಜಾತಂತ್ರದ ದೃಷ್ಟಿಯಿಂದ, ಭವಿಷ್ಯದ ದೃಷ್ಟಿಯಿಂದ ಬಹಳ ಬಹಳ ಮಹತ್ವದ್ದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...

ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ತಮಿಳುನಾಡು ಗೋಹತ್ಯೆ ನಿಷೇಧದ ಹೈಕೋರ್ಟ್ ಆದೇಶಕ್ಕೆ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)...