HomeಮುಖಪುಟEIA-2020 ಕುರಿತ ಕಾಂಗ್ರೆಸ್ ಸಲಹೆಗಳು ಆಧಾರರಹಿತ: ಪ್ರಕಾಶ್ ಜಾವಡೇಕರ್

EIA-2020 ಕುರಿತ ಕಾಂಗ್ರೆಸ್ ಸಲಹೆಗಳು ಆಧಾರರಹಿತ: ಪ್ರಕಾಶ್ ಜಾವಡೇಕರ್

ಮಾಜಿ ಪರಿಸರ ಸಚಿವರಾಗಿದ್ದ ಜೈರಾಮ್ ರಮೇಶ್ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.

- Advertisement -
- Advertisement -

ಪರಿಸರ ಪರಿಣಾಮ ಮೌಲ್ಯಮಾಪನ (EIA)-2020 ರ ಅಧಿಸೂಚನೆಯ ಬಗ್ಗೆ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ತೀವ್ರ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿ ಬರೆದಿರುವ ಪತ್ರಕ್ಕೆ, ನಿಮ್ಮ ಆರೋಪ ಮತ್ತು ಸಲಹೆಗಳು ಆಧಾರರಹಿತ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಉತ್ತರಿಸಿದ್ದಾರೆ.

ಮಾಜಿ ಪರಿಸರ ಸಚಿವರಾಗಿದ್ದ ಜೈರಾಮ್ ರಮೇಶ್ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಕರಡು ಅಧಿಸೂಚನೆಯು, ಸಾರ್ವಜನಿಕ ವಿಚಾರಣೆಗೆ ಸೂಚನೆ ಅವಧಿಯನ್ನು ಕಡಿಮೆ ಮಾಡಿ ಮತ್ತು ದೊಡ್ಡ ವರ್ಗದ ಜನರಿಂದ ದೂರವಿಡುತ್ತಾರೆ. ಇದು ಪರಿಸರ ತೆರವು ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ರಮೆಶ್ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.

ಇದು ಪರಿಸರ ಅನುಮತಿಗಳ ಮಾನ್ಯತೆಯನ್ನು ಹೆಚ್ಚಿಸುತ್ತದೆ, ಯೋಜನೆಗಳು ನಿರ್ಮಾಣವಾಗದಿದ್ದರೂ ಸಹ ದೀರ್ಘಾವಧಿಯವರೆಗೆ ಭೂಮಿಯನ್ನು ಭದ್ರಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಭೂ ಕಬಳಿಕೆಯನ್ನು ಉತ್ತೇಜಿಸುತ್ತದೆಯೇ ಹೊರತು ಅಭಿವೃದ್ಧಿಯನ್ನಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದು ರಾಜ್ಯ EIA ಅಧಿಕಾರಿಗಳನ್ನು ನೇಮಿಸಲು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುತ್ತದೆ. EIA ಕರಡು, ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಮತ್ತೊಂದು ಹೊಡೆತ ಎಂದು ರಮೇಶ್ ಹೇಳಿದ್ದಾರೆ.

ಈ ಕರಡು, ಪರಿಸರ ನಿಯಂತ್ರಣವನ್ನು “ಅನಗತ್ಯ ನಿಯಂತ್ರಕ ಹೊರೆ”ಯಾಗಿ ನೋಡುವ ಮನೋಭಾವದ ಪರಿಣಾಮವಾಗಿದೆ. ಆದರೆ ಜನರ ಕಲ್ಯಾಣ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಸಾಧನವಾಗಿ ಅಲ್ಲ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಜಾವಡೇಕರ್ “ಕರಡು ಅಧಿಸೂಚನೆಯನ್ನು ಸೂಚನೆ ಮತ್ತು ಸಲಹೆಗಳಿಗಾಗಿ ಸಾರ್ವಜನಿಕ ವಲಯದಲ್ಲಿ ಇರಿಸಲಾಗಿದೆ. ನಿಮ್ಮ ಅವಲೋಕನಗಳನ್ನು ಗುರುತಿಸಲಾಗಿದೆ. ಸಲಹೆಗಳಿಗಾಗಿ ಇನ್ನೂ 15 ದಿನಗಳಿವೆ. ನಿಮ್ಮ ಎಲ್ಲಾ ಸಲಹೆಗಳು ಮತ್ತು ಆರೋಪಗಳು ಆಧಾರರಹಿತ ಮತ್ತು ತಪ್ಪು ವ್ಯಾಖ್ಯಾನವನ್ನು ಹೊಂದಿವೆ. ನಾನು ನಿಮಗೆ ವಿವರವಾಗಿ ಉತ್ತರಿಸುತ್ತೇನೆ” ಎಂದಿದ್ದಾರೆ.

ಕರಡನ್ನು ಅಂತಿಮಗೊಳಿಸುವ ಮೊದಲು ಕೇಂದ್ರವು ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಸರ್ಕಾರದ ನಿರ್ಧಾರಗಳನ್ನು ಸಂಸತ್ತು ಮತ್ತು ಸ್ಥಾಯಿ ಸಮಿತಿಗಳು ಪರಿಶೀಲಿಸಬಹುದು ಎಂದು ಪರಿಸರ ಸಚಿವರು ಹೇಳಿದರು.

ಏನಿದು EIA-2020;

ಎನ್ವಿರಾನ್ಮೆಂಟ್ ಇಂಪ್ಯಾಕ್ಟ್ ಅಸೆಸ್ಮೆಂಟ್ (EIA)-2020 ಕರಡು ಅಧಿಸೂಚನೆಯ ಹೊಸ ಮಾರ್ಪಾಡುಗಳು, ಪ್ರಸ್ತುತ ಅಸ್ತಿತ್ವದಲ್ಲಿರುವ EIA-2006ನ್ನು ಕೂಲಂಕಷವಾಗಿ ಪರಿಶೀಲಿಸಲು ಪ್ರಯತ್ನಿಸುತ್ತದೆ.

ಕೈಗಾರಿಕೆಗಳು ತಮ್ಮ ಉದ್ದೇಶಿತ ಚಟುವಟಿಕೆಯ ಪರಿಸರ ಮತ್ತು ಪರಿಸರೀಯ ಪರಿಣಾಮವನ್ನು ಮತ್ತು ಕಾರ್ಯವಿಧಾನವನ್ನು ನಿರ್ಣಯಿಸಲು ಹೊಸ ಕಾರ್ಯವಿಧಾನವನ್ನು ಸೂಚಿಸುತ್ತವೆ. ಇವುಗಳನ್ನು ತಜ್ಞರ ಸಮಿತಿಗಳು ಮೌಲ್ಯಮಾಪನ ಮಾಡುತ್ತವೆ ಎಂದು ಪರಿಸರ ಸಚಿವಾಲಯ ತಿಳಿಸಿದೆ.

ಮಾಹಿತಿ ಹಕ್ಕು ಕಾಯ್ದೆ ಅರ್ಜಿದಾರರು ನೀಡಿದ ದಾಖಲೆಗಳು, ಕರಡು ಕುರಿತು ಸಾರ್ವಜನಿಕ ಪ್ರತಿಕ್ರಿಯೆಗಾಗಿ ನೀಡಿರುವ ಸಮಯದ ಅವಧಿಯನ್ನು ವಿಸ್ತರಿಸುವ ಸಚಿವಾಲಯದ ಹಿರಿಯ ಅಧಿಕಾರಿಯ ಶಿಫಾರಸುಗಳನ್ನು ಜಾವಡೇಕರ್ ರದ್ದುಪಡಿಸಿದ್ದಾರೆ ಎನ್ನಲಾಗಿದೆ.

ಪರಿಸರ ಸಚಿವಾಲಯವು ಕರಡು ಕಾನೂನನ್ನು ಮಾರ್ಚ್ 12 ರಂದು ಚರ್ಚೆಗೆ ಮತ್ತು ಪ್ರತಿಕ್ರಿಯೆಗಾಗಿ 60 ದಿನಗಳ ಅವಧಿಗೆ ಸಾರ್ವಜನಿಕ ವಲಯದಲ್ಲಿ ಇರಿಸಿತ್ತು.

ಜೂನ್ 30 ರಂದು ದೆಹಲಿ ಹೈಕೋರ್ಟ್ ಕರಡು ಬಗ್ಗೆ ಸಾರ್ವಜನಿಕ ಪ್ರತಿಕ್ರಿಯೆ ನೀಡಲು ಗಡುವನ್ನು ಆಗಸ್ಟ್ 11 ಕ್ಕೆ ವಿಸ್ತರಿಸಿದೆ. ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯು ಸಾರ್ವಜನಿಕರ ಪ್ರತಿಕ್ರಿಯೆಗಾಗಿ ಸಮಯವನ್ನು ವಿಸ್ತರಿಸಿದೆ ಎಂದು ಪ್ರಸ್ತಾಪಿಸಲಾಗಿದೆ.


ಇದನ್ನೂ ಓದಿ: ಚೆಂಗ್ಡುವಿನ ಅಮೇರಿಕಾದ ರಾಯಭಾರಿಯ ಕಛೇರಿ ಮುಚ್ಚಿಸಿದ ಚೀನಾ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...