Homeಅಂಕಣಗಳುಬಡ್ತಿ ಮೀಸಲಾತಿಗೆ ವಿರೋಧವಿಲ್ಲ. Consequential Seniority ಯ ತಾರತಮ್ಯಕ್ಕೆ ನಮ್ಮ ವಿರೋಧ: ಸಾಮಾನ್ಯ ವರ್ಗದ ಇಂಜಿನಿಯರ್...

ಬಡ್ತಿ ಮೀಸಲಾತಿಗೆ ವಿರೋಧವಿಲ್ಲ. Consequential Seniority ಯ ತಾರತಮ್ಯಕ್ಕೆ ನಮ್ಮ ವಿರೋಧ: ಸಾಮಾನ್ಯ ವರ್ಗದ ಇಂಜಿನಿಯರ್ ವಾದ

ಬಡ್ತಿ ಮೀಸಲಾತಿ ಕುರಿತ ಪರ ಹಾಗೂ ವಿರೋಧದ ವಿವಾದ

- Advertisement -
- Advertisement -

| ಬಾಲು |
(ಸಾಮಾಜಿಕ ನ್ಯಾಯದ ಪರವಾಗಿರುವ, ಆದರೆ ಬಡ್ತಿ ಮೀಸಲಾತಿಯ ನೀತಿಯಲ್ಲಿ ಲೋಪವಾಗಿದೆ ಎಂದು ಭಾವಿಸುವ ಒಬ್ಬ ಸರ್ಕಾರೀ ಅಧಿಕಾರಿ. ಅವರ ಕೋರಿಕೆಯ ಮೇರೆಗೆ ಪೂರ್ಣ ಹೆಸರನ್ನು ಹಾಕಿಲ್ಲ)

ಸಂವಿಧಾನದ ಕಲಂ 16(4ಎ) ರಂತೆ ಯಾವುದೇ ಸರ್ಕಾರವು ತನ್ನ ಸೇವೆಯಲ್ಲಿನ ಬಡ್ತಿ ಹುದ್ದೆಗಳಲ್ಲಿ ಪ.ಜಾ ಮತ್ತು ಪ.ಪಂಗಡದ ಕೆಲಸಗಾರರ ಕೊರತೆ ಕಂಡುಬಂದರೆ, ಸದರಿಯವರಿಗೆ ಬಡ್ತಿಯಲ್ಲಿ ಮೀಸಲಾತಿ ಒದಗಿಸಬಹುದೆಂದು ಹೇಳುತ್ತದೆ.

ರಾಜ್ಯ ಸರ್ಕಾರದ ಬಡ್ತಿ ಹುದ್ದೆಗಳಲ್ಲಿ ಪ.ಜಾ ಮತ್ತು ಪ.ಪಂಗಡದ ಪ್ರಾತಿನಿಧ್ಯ ಅವರವರ ಸಂಖ್ಯೆ ಪ್ರಮಾಣವಾದ ಶೇ.15+ಶೇ.03= ಶೇ.18ಕ್ಕಿಂತ ಕಡಿಮೆ ಇದ್ದ ಕಾರಣ ಅವರ ಪ್ರಾತಿನಿಧ್ಯವನ್ನು ಹೆಚ್ಚಿಸಲು 1978ರಿಂದ ಬಡ್ತಿಯಲ್ಲಿ ಮೀಸಲಾತಿಯನ್ನು ಕೊಡಲು ಆರಂಭಿಸಿತು. ಇದರಲ್ಲಿ ತಪ್ಪೇನಿಲ್ಲ. ಆದರೆ ಇದನ್ನು ಅನ್ವಯಿಸುವಲ್ಲಿ ಆದ ಲೋಪದ ಕಾರಣದಿಂದ, ಜನಸಂಖ್ಯೆಯ 4-5 ಪಟ್ಟಿನ ತನಕ ಪ್ರಾತಿನಿಧ್ಯ ಹೆಚ್ಚಾಗುವಂತೆ ಆಯಿತು. ಇದೇ ಸಮಸ್ಯೆ. ಉದಾಹರಣೆಗೆ, ಬಿ.ಕೆ.ಪವಿತ್ರ ಪ್ರಕರಣದ ತೀರ್ಪು ಬರುವ ವೇಳೆಗೆ ಕರ್ನಾಟಕ ಸರ್ಕಾರದ ಇಂಧನ/KEB ಇಲಾಖೆಯ ಒಟ್ಟು 35 ಅಇ ಹುದ್ದೆಗಳಲ್ಲಿ 33 ಹುದ್ದೆಗಳಲ್ಲಿ ಎಸ್ಸಿ/ಎಸ್ಟಿ ಗುಂಪಿನವರು, BWSSB ಯ 15 CE ಹುದ್ದೆಗಳಲ್ಲಿ 13 ಹುದ್ದೆಗಳು, ಪಿಡಬ್ಲೂಡಿ ಇಲಾಖೆಯ EE ಹುದ್ದೆಗಳಲ್ಲಿ ಶೇ.50ರಷ್ಟು ಹುದ್ದೆಗಳು ಶೇ.18ರ ವರ್ಗದವರ ಪಾಲಾಗಿದ್ದವು.

ಏಕೆಂದರೆ, ಕ್ಲಾಸ್-1 (ಲೋಯರ್ ಕೆಟಗರಿ)ವರೆಗಿನ ಹುದ್ದೆಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಕೊಡಲಾಯಿತು. ನಂತರದ ಮೇಲು ಹಂತದ ಹುದ್ದೆಗಳಿಗೆ ಮೀಸಲಾತಿ ಇರುವುದಿಲ್ಲ. ಇದರಿಂದ ಹೆಚ್ಚುವರಿಯಾಗಿ ಪ.ಜಾ ಮತ್ತು ಪ.ಪಂಗಡದವರು ಸುಮಾರು 3800ರಷ್ಟು ಹುದ್ದೆಗಳಿಗೆ ಬಡ್ತಿ ಪಡೆದುಕೊಂಡಿದ್ದರು. 2017ರಲ್ಲಿ ಪವಿತ್ರ ಪ್ರಕರಣದಲ್ಲಿ ಬಂದ ತೀರ್ಪಿನಿಂದಾಗಿ ಅವರುಗಳನ್ನು ಹಿಂಬಡ್ತಿಗೊಳಿಸಲಾಯಿತು. ಏಕೆಂದರೆ ಇವು ಬಡ್ತಿ ಮೀಸಲಾತಿಯ ಮಿತಿಯಲ್ಲಿ ಬರದ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ಗುಂಪಿನವರಿಗೆ ಸಿಗಬೇಕಾದ ಹುದ್ದೆಗಳು. ಇದಕ್ಕೆಲ್ಲಾ ಎಡೆಯಾದದ್ದು ಬಡ್ತಿ ಮೀಸಲಾತಿ ನೀತಿಯಲ್ಲಿ ಅಡಕ ಮಾಡಿರುವ ತತ್ಪರಿಣಾಮ ಹಿರಿತನ (Consequential Seniority). ಇದು ಹೆಚ್ಚಿನ ಪಾಲಿನ ಮೀಡಿಯಾ, ಸಾರ್ವಜನಿಕರಿಗೆ ಇದುವರೆಗೆ ಕಗ್ಗಂಟಿನ ಪದವಾಗಿದೆ.

ಏನಿದು Consequential Seniority?
ಈ ಹೋರಾಟದ ಮುಂಚೂಣಿಯಲ್ಲಿರುವ ಪಿಡಬ್ಲೂಡಿ ಇಲಾಖೆಯವರು ತಿಳಿಸುವಂತೆ ಸದರಿ ಇಲಾಖೆಯಲ್ಲಿ AE, AEE, EE, SE, CE ಹುದ್ದೆಗಳಿವೆ. ಮೇಲಿನ AEಹುದ್ದೆಗಳಿಗೆ ಕೆಲಸಕ್ಕೆ ತೆಗೆದುಕೊಂಡನಂತರ AEE ಹುದ್ದೆಯವರೆಗೆ ಮಾತ್ರ ಬಡ್ತಿ ಮೀಸಲಾತಿ ಇದೆ. ಆದರೂ ಸಹ ಇಂಜಿನಿಯರಿಂಗ್ ಇಲಾಖೆಯಲ್ಲೇ ಬಡ್ತಿ ಮೀಸಲಾತಿ ಸಂಗತಿ ಹೆಚ್ಚು ಸದ್ದು ಮಾಡುತ್ತಿದೆ. 1978ರವರೆಗೆ AEE ಹುದ್ದೆಯಿಂದ AEE ಹುದ್ದೆಗೆ ಬಡ್ತಿ ಹೊಂದಲು 5 ವರ್ಷಗಳ ಸೇವೆ ಸಲ್ಲಿಸಿರಬೇಕಿತ್ತು. ಸುಮಾರು 15 ವರ್ಷಗಳ ಸೇವೆ ನಂತರ ಮೊದಲ ಬಡ್ತಿ AEE ಹುದ್ದೆಗೆ ಎಲ್ಲಾ ಗುಂಪಿನವರಿಗೂ ಸಿಗುತ್ತಿತ್ತು. ಆಗ ಹಿರಿತನ ಪಟ್ಟಿಯಲ್ಲಿ ಕೆಳಗಡೆ ಇರುತ್ತಿದ್ದ ಎಸ್ಸಿ/ಎಸ್ಟಿ ಕೆಲಸಗಾರರು ಕೆಳಗಡೆ ಇರುತ್ತಿದ್ದ ಕಾರಣ ತಡವಾಗಿ ಬಡ್ತಿ ದೊರೆತು 1, 2, 3, 4ನೇ ಹಂತದ ಬಡ್ತಿ ಹುದ್ದೆ ತಲುಪುವ ಹೊತ್ತಿಗೆ ಕೆಳಗಿರುವವರು ನಿವೃತ್ತಿಯಾಗುತ್ತಿದ್ದ ಕಾರಣ ಮೇಲಿನ ಹುದ್ದೆಗಳಲ್ಲಿ ಎಸ್ಸಿ/ಎಸ್ಟಿ ಪ್ರಾತಿನಿಧ್ಯ ಕಡಿಮೆ ಇತ್ತು.

ತದನಂತರ 1978ರಲ್ಲಿ ಎಸ್ಸಿ/ಎಸ್ಟಿ ಗುಂಪಿನವರಿಗೆ ಬಡ್ತಿಯಲ್ಲಿ ಮೀಸಲಾತಿ ದೊರಕಿದ ಕಾರಣ 100 ಹುದ್ದೆಗಳಿಗೆ 18 ಹುದ್ದೆಗಳನ್ನು ಹಿರಿತನ ಪಟ್ಟಿಯಲ್ಲಿ ಕೆಳಗಡೆ ಇರುವವರನ್ನು ಆಯ್ಕೆ ಮಾಡಲಾಯಿತು. 1978ರ ನಂತರದ ಮೊದಲ ಹಂತದ ಬಡ್ತಿಗಳಲ್ಲಿ 5 ವರ್ಷ/ಇಲ್ಲವಾದಲ್ಲಿ 3 ವರ್ಷದ ಪ್ರಾರಂಭಿಕ ಸೇವೆ ಸಲ್ಲಿಸಿದವರು, ಕಡಿಮೆ ವಯಸ್ಸಿನವರು, ಬಡ್ತಿ ಪಡೆದರು. ತದನಂತರದ ವರ್ಷಗಳಲ್ಲಿ ಬಡ್ತಿ ಪಡೆಯದೇ ಕೆಳ ಹಂತಗಳಲ್ಲೇ ಸುದೀರ್ಘ ಸೇವೆ ಸಲ್ಲಿಸಿದ ಇತರರು ಮೊದಲು ವಯೋನಿವೃತ್ತಿ ಹಂತ ತಲುಪುವುದರಿಂದ, ಮೇಲು ಹಂತದ ಹುದ್ದೆಗಳಲ್ಲಿ ಕಡಿಮೆ ವಯಸ್ಸಿನ ಎಸ್ಸಿ/ಎಸ್ಟಿ ಕೆಲಸಗಾರ ಸಂಖ್ಯೆ ಹೆಚ್ಚಾಯಿತು. ಯಾವ ಪ್ರಮಾಣಕ್ಕೆ ಹೆಚ್ಚಾಯಿತು ಎಂಬುದನ್ನು ಮೇಲೆ ಹೇಳಲಾಗಿದೆ. ಇದರ ಬೆನ್ನು ಹತ್ತಿ ನ್ಯಾಯಾಲಯದ ಕಟ್ಟೆಯಲ್ಲಿ ಇತರರು 2017ರಲ್ಲಿ ಪವಿತ್ರ ಪ್ರಕರಣದಲ್ಲಿ ಇದಕ್ಕೆ ತಡೆ ಪಡೆಯಲಾಯಿತು.

ಏಕೆಂದರೆ ತಮಗಿಂತ ಸೇವೆಯಲ್ಲಿ 10-15 ವರ್ಷ ಕಿರಿಯರ ಕೈಕೆಳಗೆ ಹಿರಿತನ ಹೊಂದಿರುವ ಇತರರು ಕೆಲಸ ಮಾಡುವ ಸ್ಥಿತಿ ಇತ್ತು. ಇದರಿಂದ ಸಹಜವಾಗಿ ಹಿರಿತನ ಹೊಂದಿರುವ ಕೆಲಸಗಾರರು ಮುಜುಗರದಲ್ಲಿ ಕೆಲಸ ಮಾಡುವಂತಾಯಿತು. ಕೆಲಸಗಳಲ್ಲಿ ಹುರುಪು ಕಡಿಮೆಯಾಗತೊಡಗಿತು. ಹಾಗೂ ಮೇಲು ಹಂತದ ಹುದ್ದೆಗಳಲ್ಲಿ ಕಡಿಮೆ ವಯಸ್ಸಿನ/ಸೇವಾಹಿರಿತನದವರು ಕುಳಿತಿದ್ದರಿಂದ ಇತರೆ ಗುಂಪಿನ ಕೆಲಸಗಾರರು ತಮ್ಮ ಸೇವೆಯ ಕೊನೆಯಲ್ಲಿ 1 ಬಡ್ತಿ/2 ಬಡ್ತಿ ಅಥವಾ ಕೆಲವರು ಬಡ್ತಿ ಇಲ್ಲದೆಯೂ ನಿವೃತ್ತರಾದರು. ಇದು ಎಲ್ಲಾ ಇಲಾಖೆಗಳಲ್ಲಿನ ಪರಿಸ್ಥಿತಿ.

ಇದಕ್ಕೆಲ್ಲಾ ಕಾರಣ 1978ರಲ್ಲಿನ ಬಡ್ತಿ ಮೀಸಲಾತಿ ನೀತಿಯಲ್ಲಿರುವ ಶೇ.18ರ ಪ್ರಾತಿನಿಧ್ಯವನ್ನು ಕ್ಲಾಸ್-1 (ಲೋಯರ್ ಕೆಟಗರಿ) ಹುದ್ದೆಯವರಿಗೆ ಮಾತ್ರ ಕೊಡುತ್ತಿದ್ದದ್ದು. ತದನಂತರ ಮೀಸಲಾತಿಯಿಂದ ಬಡ್ತಿ ಪಡೆದ ಎಸ್ಸಿ/ಎಸ್ಟಿ ವರ್ಗದವರಿಗೆ ನೀಡಿದ ತೀರ್ಪಿನಲ್ಲಿ ತತ್ಪರಿಣಾಮದ ಹಿರಿತನಕ್ಕೆ ತಡೆ ಕೊಟ್ಟಿದ್ದಾರೆ ಮತ್ತು 2019ರ ತೀರ್ಪಿನಲ್ಲಿ ತತ್ಪರಿಣಾಮ ಹಿರಿತನವನ್ನು ಮುಂದುವರೆಸಲು ಸಮ್ಮತಿ ನೀಡಿರುವುದು ಇಂದಿನ ಕೋಲಾಹಲಕ್ಕೆ ಕಾರಣವಾಗಿದೆ.

ಇದನ್ನು ಕೇವಲ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ನೋಡುವ ಪರಿಪಾಠ ಇದೆ. ಇದರಿಂದ ಆಡಳಿತಾಂಗದ ಕೆಲಸದ ಮೇಲೆ ಮತ್ತು ಅದರಿಂದ ಒಟ್ಟು ಸಮಾಜದ ಮೇಲೆ ಆಗುವ ಅಡ್ಡ ಪರಿಣಾಮದ ಅರಿವಿಲ್ಲದೇ ಈ ರೀತಿ ಮಾಡಲಾಗುತ್ತಿದೆ.

ಎಸ್ಸಿ/ಎಸ್ಟಿ ಗುಂಪಿನವರನ್ನು ಮೇಲೆ ತರಲು ಸರ್ಕಾರಿ ಕೆಲಸಗಳಿಂದ ಮಾತ್ರ ಸಾಧ್ಯ ಎಂಬುದನ್ನು ಸರ್ಕಾರ ಮುಂದೊಡ್ಡುತ್ತಿದೆ. ಸೀಮಿತ ಸರ್ಕಾರಿ ಯಂತ್ರಾಂಗವನ್ನು ತಕ್ಕ ಹುರಿಯಾಳುಗಳಿಂದ ಕಟ್ಟಿ ಅದರಿಂದ ಒಳ್ಳೆಯ ಪ್ರೊಡಕ್ಟ್ ಪಡೆದು ಇಡೀ ಸಮಾಜವನ್ನು ಮುಂದೆ ತರಲು ದುಡಿಮೆ ಮಾಡಬೇಕಾದ ಸರ್ಕಾರಗಳು ಎಡವುತ್ತಿರುವುದೆಲ್ಲಿ?

ಹಿಂದಿನ ತಲೆಮಾರಿನಲ್ಲಾದ ಶೋಷಣೆಯನ್ನು ವ್ಯಕ್ತಿಗತವಾಗಿ ಇತರ ಜಾತಿಗಳ ಸದಸ್ಯರ ಮೇಲೇರಿ ಅವರ ಬಡ್ತಿ ಹಕ್ಕನ್ನು ಕಿತ್ತು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಇನ್ನೊಬ್ಬರಿಗೆ ಕೊಟ್ಟು ‘ಊನಗೊಂಡಿರುವ ಆಳ್ವಿಕೆ ಕೆಲಸ ಪಡೆ’ ನಮ್ಮ ನಾಡಿನ ಏಳಿಗೆಗೆ ತೊಡಕು ಎಂಬುದು ಕಟ್ಟುಪಾಡು ಮಾಡುವ ವ್ಯವಸ್ಥೆಗೆ ಅರಿವಾಗಬೇಕು. ಇಂತಹ ನಿಯಮಗಳಿಂದ ಸಮಾಜದೊಳಗಿನ ಹಲಪಂಗಡಗಳ ನಡುವೆ ಅದರಲ್ಲೂ ಎಸ್ಸಿ/ಎಸ್ಟಿ ಮತ್ತು ಇತರರ ನಡುವಿನ ಬಿರುಕು ಮತ್ತಷ್ಟು ಹೆಚ್ಚಾಗಲಿದೆ.

ಹಾಗಾಗಿ ಈ Consequential Seniority ಯ ಅನಾಹುತವ್ನು ತಡೆಯಲು ಹಲವಾರು ಶತಮಾನಗಳಿಂದ ತುಳಿತಕ್ಕೊಳಗಾದ ಎಸ್ಸಿ/ಎಸ್ಟಿ ಗುಂಪಿನವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಎಲ್ಲಾ ಬಡ್ತಿ ಹುದ್ದೆಗಳಲ್ಲಿಯೂ ಅವಕಾಶ ಕೊಡುವ ನಡೆಯ ಕಡೆ ಸರ್ಕಾರ ಹೆಜ್ಜೆ ಇಡಬೇಕಾಗಿದೆ. ಎಲ್ಲಾ ಪಂಗಡಗಳೂ ಒಗ್ಗಟ್ಟಿನಿಂದ ಇರಬೇಕಿದೆ. ಇದಕ್ಕೆ Vertical bifurcation of all cadre ಎಂದು ಕರೆಯಲಾಗುತ್ತಿದೆ. ಇದು ಈಗಿನ ಕಗ್ಗಂಟನ್ನು ಬಿಡಿಸಲು ಇರುವ ದಾರಿ. ಇನ್ನುಳಿದಂತೆ ಎಸ್ಸಿ/ಎಸ್ಟಿ ಪಂಗಡದವರನ್ನು ಮೇಲೆತ್ತಲು ಇರುವ ಇನ್ನುಳಿದ ದಾರಿಗಳನ್ನು ಕಂಡುಕೊಳ್ಳಬೇಕಿದೆ.

ಬಡ್ತಿ ಮೀಸಲಾತಿ ಪರ ಇರುವ ವಾದಕ್ಕೆ ಇದನ್ನೂ ಓದಿ: ಬಡ್ತಿ ಮೀಸಲು ಕುರಿತು ಸುಪ್ರೀಂ ತೀರ್ಪು ದೇಶಕ್ಕೆ ಮಾದರಿಯಾದುದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...