Homeಅಂಕಣಗಳುಬಡ್ತಿ ಮೀಸಲಾತಿಗೆ ವಿರೋಧವಿಲ್ಲ. Consequential Seniority ಯ ತಾರತಮ್ಯಕ್ಕೆ ನಮ್ಮ ವಿರೋಧ: ಸಾಮಾನ್ಯ ವರ್ಗದ ಇಂಜಿನಿಯರ್...

ಬಡ್ತಿ ಮೀಸಲಾತಿಗೆ ವಿರೋಧವಿಲ್ಲ. Consequential Seniority ಯ ತಾರತಮ್ಯಕ್ಕೆ ನಮ್ಮ ವಿರೋಧ: ಸಾಮಾನ್ಯ ವರ್ಗದ ಇಂಜಿನಿಯರ್ ವಾದ

ಬಡ್ತಿ ಮೀಸಲಾತಿ ಕುರಿತ ಪರ ಹಾಗೂ ವಿರೋಧದ ವಿವಾದ

- Advertisement -
- Advertisement -

| ಬಾಲು |
(ಸಾಮಾಜಿಕ ನ್ಯಾಯದ ಪರವಾಗಿರುವ, ಆದರೆ ಬಡ್ತಿ ಮೀಸಲಾತಿಯ ನೀತಿಯಲ್ಲಿ ಲೋಪವಾಗಿದೆ ಎಂದು ಭಾವಿಸುವ ಒಬ್ಬ ಸರ್ಕಾರೀ ಅಧಿಕಾರಿ. ಅವರ ಕೋರಿಕೆಯ ಮೇರೆಗೆ ಪೂರ್ಣ ಹೆಸರನ್ನು ಹಾಕಿಲ್ಲ)

ಸಂವಿಧಾನದ ಕಲಂ 16(4ಎ) ರಂತೆ ಯಾವುದೇ ಸರ್ಕಾರವು ತನ್ನ ಸೇವೆಯಲ್ಲಿನ ಬಡ್ತಿ ಹುದ್ದೆಗಳಲ್ಲಿ ಪ.ಜಾ ಮತ್ತು ಪ.ಪಂಗಡದ ಕೆಲಸಗಾರರ ಕೊರತೆ ಕಂಡುಬಂದರೆ, ಸದರಿಯವರಿಗೆ ಬಡ್ತಿಯಲ್ಲಿ ಮೀಸಲಾತಿ ಒದಗಿಸಬಹುದೆಂದು ಹೇಳುತ್ತದೆ.

ರಾಜ್ಯ ಸರ್ಕಾರದ ಬಡ್ತಿ ಹುದ್ದೆಗಳಲ್ಲಿ ಪ.ಜಾ ಮತ್ತು ಪ.ಪಂಗಡದ ಪ್ರಾತಿನಿಧ್ಯ ಅವರವರ ಸಂಖ್ಯೆ ಪ್ರಮಾಣವಾದ ಶೇ.15+ಶೇ.03= ಶೇ.18ಕ್ಕಿಂತ ಕಡಿಮೆ ಇದ್ದ ಕಾರಣ ಅವರ ಪ್ರಾತಿನಿಧ್ಯವನ್ನು ಹೆಚ್ಚಿಸಲು 1978ರಿಂದ ಬಡ್ತಿಯಲ್ಲಿ ಮೀಸಲಾತಿಯನ್ನು ಕೊಡಲು ಆರಂಭಿಸಿತು. ಇದರಲ್ಲಿ ತಪ್ಪೇನಿಲ್ಲ. ಆದರೆ ಇದನ್ನು ಅನ್ವಯಿಸುವಲ್ಲಿ ಆದ ಲೋಪದ ಕಾರಣದಿಂದ, ಜನಸಂಖ್ಯೆಯ 4-5 ಪಟ್ಟಿನ ತನಕ ಪ್ರಾತಿನಿಧ್ಯ ಹೆಚ್ಚಾಗುವಂತೆ ಆಯಿತು. ಇದೇ ಸಮಸ್ಯೆ. ಉದಾಹರಣೆಗೆ, ಬಿ.ಕೆ.ಪವಿತ್ರ ಪ್ರಕರಣದ ತೀರ್ಪು ಬರುವ ವೇಳೆಗೆ ಕರ್ನಾಟಕ ಸರ್ಕಾರದ ಇಂಧನ/KEB ಇಲಾಖೆಯ ಒಟ್ಟು 35 ಅಇ ಹುದ್ದೆಗಳಲ್ಲಿ 33 ಹುದ್ದೆಗಳಲ್ಲಿ ಎಸ್ಸಿ/ಎಸ್ಟಿ ಗುಂಪಿನವರು, BWSSB ಯ 15 CE ಹುದ್ದೆಗಳಲ್ಲಿ 13 ಹುದ್ದೆಗಳು, ಪಿಡಬ್ಲೂಡಿ ಇಲಾಖೆಯ EE ಹುದ್ದೆಗಳಲ್ಲಿ ಶೇ.50ರಷ್ಟು ಹುದ್ದೆಗಳು ಶೇ.18ರ ವರ್ಗದವರ ಪಾಲಾಗಿದ್ದವು.

ಏಕೆಂದರೆ, ಕ್ಲಾಸ್-1 (ಲೋಯರ್ ಕೆಟಗರಿ)ವರೆಗಿನ ಹುದ್ದೆಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಕೊಡಲಾಯಿತು. ನಂತರದ ಮೇಲು ಹಂತದ ಹುದ್ದೆಗಳಿಗೆ ಮೀಸಲಾತಿ ಇರುವುದಿಲ್ಲ. ಇದರಿಂದ ಹೆಚ್ಚುವರಿಯಾಗಿ ಪ.ಜಾ ಮತ್ತು ಪ.ಪಂಗಡದವರು ಸುಮಾರು 3800ರಷ್ಟು ಹುದ್ದೆಗಳಿಗೆ ಬಡ್ತಿ ಪಡೆದುಕೊಂಡಿದ್ದರು. 2017ರಲ್ಲಿ ಪವಿತ್ರ ಪ್ರಕರಣದಲ್ಲಿ ಬಂದ ತೀರ್ಪಿನಿಂದಾಗಿ ಅವರುಗಳನ್ನು ಹಿಂಬಡ್ತಿಗೊಳಿಸಲಾಯಿತು. ಏಕೆಂದರೆ ಇವು ಬಡ್ತಿ ಮೀಸಲಾತಿಯ ಮಿತಿಯಲ್ಲಿ ಬರದ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ಗುಂಪಿನವರಿಗೆ ಸಿಗಬೇಕಾದ ಹುದ್ದೆಗಳು. ಇದಕ್ಕೆಲ್ಲಾ ಎಡೆಯಾದದ್ದು ಬಡ್ತಿ ಮೀಸಲಾತಿ ನೀತಿಯಲ್ಲಿ ಅಡಕ ಮಾಡಿರುವ ತತ್ಪರಿಣಾಮ ಹಿರಿತನ (Consequential Seniority). ಇದು ಹೆಚ್ಚಿನ ಪಾಲಿನ ಮೀಡಿಯಾ, ಸಾರ್ವಜನಿಕರಿಗೆ ಇದುವರೆಗೆ ಕಗ್ಗಂಟಿನ ಪದವಾಗಿದೆ.

ಏನಿದು Consequential Seniority?
ಈ ಹೋರಾಟದ ಮುಂಚೂಣಿಯಲ್ಲಿರುವ ಪಿಡಬ್ಲೂಡಿ ಇಲಾಖೆಯವರು ತಿಳಿಸುವಂತೆ ಸದರಿ ಇಲಾಖೆಯಲ್ಲಿ AE, AEE, EE, SE, CE ಹುದ್ದೆಗಳಿವೆ. ಮೇಲಿನ AEಹುದ್ದೆಗಳಿಗೆ ಕೆಲಸಕ್ಕೆ ತೆಗೆದುಕೊಂಡನಂತರ AEE ಹುದ್ದೆಯವರೆಗೆ ಮಾತ್ರ ಬಡ್ತಿ ಮೀಸಲಾತಿ ಇದೆ. ಆದರೂ ಸಹ ಇಂಜಿನಿಯರಿಂಗ್ ಇಲಾಖೆಯಲ್ಲೇ ಬಡ್ತಿ ಮೀಸಲಾತಿ ಸಂಗತಿ ಹೆಚ್ಚು ಸದ್ದು ಮಾಡುತ್ತಿದೆ. 1978ರವರೆಗೆ AEE ಹುದ್ದೆಯಿಂದ AEE ಹುದ್ದೆಗೆ ಬಡ್ತಿ ಹೊಂದಲು 5 ವರ್ಷಗಳ ಸೇವೆ ಸಲ್ಲಿಸಿರಬೇಕಿತ್ತು. ಸುಮಾರು 15 ವರ್ಷಗಳ ಸೇವೆ ನಂತರ ಮೊದಲ ಬಡ್ತಿ AEE ಹುದ್ದೆಗೆ ಎಲ್ಲಾ ಗುಂಪಿನವರಿಗೂ ಸಿಗುತ್ತಿತ್ತು. ಆಗ ಹಿರಿತನ ಪಟ್ಟಿಯಲ್ಲಿ ಕೆಳಗಡೆ ಇರುತ್ತಿದ್ದ ಎಸ್ಸಿ/ಎಸ್ಟಿ ಕೆಲಸಗಾರರು ಕೆಳಗಡೆ ಇರುತ್ತಿದ್ದ ಕಾರಣ ತಡವಾಗಿ ಬಡ್ತಿ ದೊರೆತು 1, 2, 3, 4ನೇ ಹಂತದ ಬಡ್ತಿ ಹುದ್ದೆ ತಲುಪುವ ಹೊತ್ತಿಗೆ ಕೆಳಗಿರುವವರು ನಿವೃತ್ತಿಯಾಗುತ್ತಿದ್ದ ಕಾರಣ ಮೇಲಿನ ಹುದ್ದೆಗಳಲ್ಲಿ ಎಸ್ಸಿ/ಎಸ್ಟಿ ಪ್ರಾತಿನಿಧ್ಯ ಕಡಿಮೆ ಇತ್ತು.

ತದನಂತರ 1978ರಲ್ಲಿ ಎಸ್ಸಿ/ಎಸ್ಟಿ ಗುಂಪಿನವರಿಗೆ ಬಡ್ತಿಯಲ್ಲಿ ಮೀಸಲಾತಿ ದೊರಕಿದ ಕಾರಣ 100 ಹುದ್ದೆಗಳಿಗೆ 18 ಹುದ್ದೆಗಳನ್ನು ಹಿರಿತನ ಪಟ್ಟಿಯಲ್ಲಿ ಕೆಳಗಡೆ ಇರುವವರನ್ನು ಆಯ್ಕೆ ಮಾಡಲಾಯಿತು. 1978ರ ನಂತರದ ಮೊದಲ ಹಂತದ ಬಡ್ತಿಗಳಲ್ಲಿ 5 ವರ್ಷ/ಇಲ್ಲವಾದಲ್ಲಿ 3 ವರ್ಷದ ಪ್ರಾರಂಭಿಕ ಸೇವೆ ಸಲ್ಲಿಸಿದವರು, ಕಡಿಮೆ ವಯಸ್ಸಿನವರು, ಬಡ್ತಿ ಪಡೆದರು. ತದನಂತರದ ವರ್ಷಗಳಲ್ಲಿ ಬಡ್ತಿ ಪಡೆಯದೇ ಕೆಳ ಹಂತಗಳಲ್ಲೇ ಸುದೀರ್ಘ ಸೇವೆ ಸಲ್ಲಿಸಿದ ಇತರರು ಮೊದಲು ವಯೋನಿವೃತ್ತಿ ಹಂತ ತಲುಪುವುದರಿಂದ, ಮೇಲು ಹಂತದ ಹುದ್ದೆಗಳಲ್ಲಿ ಕಡಿಮೆ ವಯಸ್ಸಿನ ಎಸ್ಸಿ/ಎಸ್ಟಿ ಕೆಲಸಗಾರ ಸಂಖ್ಯೆ ಹೆಚ್ಚಾಯಿತು. ಯಾವ ಪ್ರಮಾಣಕ್ಕೆ ಹೆಚ್ಚಾಯಿತು ಎಂಬುದನ್ನು ಮೇಲೆ ಹೇಳಲಾಗಿದೆ. ಇದರ ಬೆನ್ನು ಹತ್ತಿ ನ್ಯಾಯಾಲಯದ ಕಟ್ಟೆಯಲ್ಲಿ ಇತರರು 2017ರಲ್ಲಿ ಪವಿತ್ರ ಪ್ರಕರಣದಲ್ಲಿ ಇದಕ್ಕೆ ತಡೆ ಪಡೆಯಲಾಯಿತು.

ಏಕೆಂದರೆ ತಮಗಿಂತ ಸೇವೆಯಲ್ಲಿ 10-15 ವರ್ಷ ಕಿರಿಯರ ಕೈಕೆಳಗೆ ಹಿರಿತನ ಹೊಂದಿರುವ ಇತರರು ಕೆಲಸ ಮಾಡುವ ಸ್ಥಿತಿ ಇತ್ತು. ಇದರಿಂದ ಸಹಜವಾಗಿ ಹಿರಿತನ ಹೊಂದಿರುವ ಕೆಲಸಗಾರರು ಮುಜುಗರದಲ್ಲಿ ಕೆಲಸ ಮಾಡುವಂತಾಯಿತು. ಕೆಲಸಗಳಲ್ಲಿ ಹುರುಪು ಕಡಿಮೆಯಾಗತೊಡಗಿತು. ಹಾಗೂ ಮೇಲು ಹಂತದ ಹುದ್ದೆಗಳಲ್ಲಿ ಕಡಿಮೆ ವಯಸ್ಸಿನ/ಸೇವಾಹಿರಿತನದವರು ಕುಳಿತಿದ್ದರಿಂದ ಇತರೆ ಗುಂಪಿನ ಕೆಲಸಗಾರರು ತಮ್ಮ ಸೇವೆಯ ಕೊನೆಯಲ್ಲಿ 1 ಬಡ್ತಿ/2 ಬಡ್ತಿ ಅಥವಾ ಕೆಲವರು ಬಡ್ತಿ ಇಲ್ಲದೆಯೂ ನಿವೃತ್ತರಾದರು. ಇದು ಎಲ್ಲಾ ಇಲಾಖೆಗಳಲ್ಲಿನ ಪರಿಸ್ಥಿತಿ.

ಇದಕ್ಕೆಲ್ಲಾ ಕಾರಣ 1978ರಲ್ಲಿನ ಬಡ್ತಿ ಮೀಸಲಾತಿ ನೀತಿಯಲ್ಲಿರುವ ಶೇ.18ರ ಪ್ರಾತಿನಿಧ್ಯವನ್ನು ಕ್ಲಾಸ್-1 (ಲೋಯರ್ ಕೆಟಗರಿ) ಹುದ್ದೆಯವರಿಗೆ ಮಾತ್ರ ಕೊಡುತ್ತಿದ್ದದ್ದು. ತದನಂತರ ಮೀಸಲಾತಿಯಿಂದ ಬಡ್ತಿ ಪಡೆದ ಎಸ್ಸಿ/ಎಸ್ಟಿ ವರ್ಗದವರಿಗೆ ನೀಡಿದ ತೀರ್ಪಿನಲ್ಲಿ ತತ್ಪರಿಣಾಮದ ಹಿರಿತನಕ್ಕೆ ತಡೆ ಕೊಟ್ಟಿದ್ದಾರೆ ಮತ್ತು 2019ರ ತೀರ್ಪಿನಲ್ಲಿ ತತ್ಪರಿಣಾಮ ಹಿರಿತನವನ್ನು ಮುಂದುವರೆಸಲು ಸಮ್ಮತಿ ನೀಡಿರುವುದು ಇಂದಿನ ಕೋಲಾಹಲಕ್ಕೆ ಕಾರಣವಾಗಿದೆ.

ಇದನ್ನು ಕೇವಲ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ನೋಡುವ ಪರಿಪಾಠ ಇದೆ. ಇದರಿಂದ ಆಡಳಿತಾಂಗದ ಕೆಲಸದ ಮೇಲೆ ಮತ್ತು ಅದರಿಂದ ಒಟ್ಟು ಸಮಾಜದ ಮೇಲೆ ಆಗುವ ಅಡ್ಡ ಪರಿಣಾಮದ ಅರಿವಿಲ್ಲದೇ ಈ ರೀತಿ ಮಾಡಲಾಗುತ್ತಿದೆ.

ಎಸ್ಸಿ/ಎಸ್ಟಿ ಗುಂಪಿನವರನ್ನು ಮೇಲೆ ತರಲು ಸರ್ಕಾರಿ ಕೆಲಸಗಳಿಂದ ಮಾತ್ರ ಸಾಧ್ಯ ಎಂಬುದನ್ನು ಸರ್ಕಾರ ಮುಂದೊಡ್ಡುತ್ತಿದೆ. ಸೀಮಿತ ಸರ್ಕಾರಿ ಯಂತ್ರಾಂಗವನ್ನು ತಕ್ಕ ಹುರಿಯಾಳುಗಳಿಂದ ಕಟ್ಟಿ ಅದರಿಂದ ಒಳ್ಳೆಯ ಪ್ರೊಡಕ್ಟ್ ಪಡೆದು ಇಡೀ ಸಮಾಜವನ್ನು ಮುಂದೆ ತರಲು ದುಡಿಮೆ ಮಾಡಬೇಕಾದ ಸರ್ಕಾರಗಳು ಎಡವುತ್ತಿರುವುದೆಲ್ಲಿ?

ಹಿಂದಿನ ತಲೆಮಾರಿನಲ್ಲಾದ ಶೋಷಣೆಯನ್ನು ವ್ಯಕ್ತಿಗತವಾಗಿ ಇತರ ಜಾತಿಗಳ ಸದಸ್ಯರ ಮೇಲೇರಿ ಅವರ ಬಡ್ತಿ ಹಕ್ಕನ್ನು ಕಿತ್ತು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಇನ್ನೊಬ್ಬರಿಗೆ ಕೊಟ್ಟು ‘ಊನಗೊಂಡಿರುವ ಆಳ್ವಿಕೆ ಕೆಲಸ ಪಡೆ’ ನಮ್ಮ ನಾಡಿನ ಏಳಿಗೆಗೆ ತೊಡಕು ಎಂಬುದು ಕಟ್ಟುಪಾಡು ಮಾಡುವ ವ್ಯವಸ್ಥೆಗೆ ಅರಿವಾಗಬೇಕು. ಇಂತಹ ನಿಯಮಗಳಿಂದ ಸಮಾಜದೊಳಗಿನ ಹಲಪಂಗಡಗಳ ನಡುವೆ ಅದರಲ್ಲೂ ಎಸ್ಸಿ/ಎಸ್ಟಿ ಮತ್ತು ಇತರರ ನಡುವಿನ ಬಿರುಕು ಮತ್ತಷ್ಟು ಹೆಚ್ಚಾಗಲಿದೆ.

ಹಾಗಾಗಿ ಈ Consequential Seniority ಯ ಅನಾಹುತವ್ನು ತಡೆಯಲು ಹಲವಾರು ಶತಮಾನಗಳಿಂದ ತುಳಿತಕ್ಕೊಳಗಾದ ಎಸ್ಸಿ/ಎಸ್ಟಿ ಗುಂಪಿನವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಎಲ್ಲಾ ಬಡ್ತಿ ಹುದ್ದೆಗಳಲ್ಲಿಯೂ ಅವಕಾಶ ಕೊಡುವ ನಡೆಯ ಕಡೆ ಸರ್ಕಾರ ಹೆಜ್ಜೆ ಇಡಬೇಕಾಗಿದೆ. ಎಲ್ಲಾ ಪಂಗಡಗಳೂ ಒಗ್ಗಟ್ಟಿನಿಂದ ಇರಬೇಕಿದೆ. ಇದಕ್ಕೆ Vertical bifurcation of all cadre ಎಂದು ಕರೆಯಲಾಗುತ್ತಿದೆ. ಇದು ಈಗಿನ ಕಗ್ಗಂಟನ್ನು ಬಿಡಿಸಲು ಇರುವ ದಾರಿ. ಇನ್ನುಳಿದಂತೆ ಎಸ್ಸಿ/ಎಸ್ಟಿ ಪಂಗಡದವರನ್ನು ಮೇಲೆತ್ತಲು ಇರುವ ಇನ್ನುಳಿದ ದಾರಿಗಳನ್ನು ಕಂಡುಕೊಳ್ಳಬೇಕಿದೆ.

ಬಡ್ತಿ ಮೀಸಲಾತಿ ಪರ ಇರುವ ವಾದಕ್ಕೆ ಇದನ್ನೂ ಓದಿ: ಬಡ್ತಿ ಮೀಸಲು ಕುರಿತು ಸುಪ್ರೀಂ ತೀರ್ಪು ದೇಶಕ್ಕೆ ಮಾದರಿಯಾದುದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...