Homeಅಂಕಣಗಳುಬಡ್ತಿ ಮೀಸಲಾತಿಗೆ ವಿರೋಧವಿಲ್ಲ. Consequential Seniority ಯ ತಾರತಮ್ಯಕ್ಕೆ ನಮ್ಮ ವಿರೋಧ: ಸಾಮಾನ್ಯ ವರ್ಗದ ಇಂಜಿನಿಯರ್...

ಬಡ್ತಿ ಮೀಸಲಾತಿಗೆ ವಿರೋಧವಿಲ್ಲ. Consequential Seniority ಯ ತಾರತಮ್ಯಕ್ಕೆ ನಮ್ಮ ವಿರೋಧ: ಸಾಮಾನ್ಯ ವರ್ಗದ ಇಂಜಿನಿಯರ್ ವಾದ

ಬಡ್ತಿ ಮೀಸಲಾತಿ ಕುರಿತ ಪರ ಹಾಗೂ ವಿರೋಧದ ವಿವಾದ

- Advertisement -
- Advertisement -

| ಬಾಲು |
(ಸಾಮಾಜಿಕ ನ್ಯಾಯದ ಪರವಾಗಿರುವ, ಆದರೆ ಬಡ್ತಿ ಮೀಸಲಾತಿಯ ನೀತಿಯಲ್ಲಿ ಲೋಪವಾಗಿದೆ ಎಂದು ಭಾವಿಸುವ ಒಬ್ಬ ಸರ್ಕಾರೀ ಅಧಿಕಾರಿ. ಅವರ ಕೋರಿಕೆಯ ಮೇರೆಗೆ ಪೂರ್ಣ ಹೆಸರನ್ನು ಹಾಕಿಲ್ಲ)

ಸಂವಿಧಾನದ ಕಲಂ 16(4ಎ) ರಂತೆ ಯಾವುದೇ ಸರ್ಕಾರವು ತನ್ನ ಸೇವೆಯಲ್ಲಿನ ಬಡ್ತಿ ಹುದ್ದೆಗಳಲ್ಲಿ ಪ.ಜಾ ಮತ್ತು ಪ.ಪಂಗಡದ ಕೆಲಸಗಾರರ ಕೊರತೆ ಕಂಡುಬಂದರೆ, ಸದರಿಯವರಿಗೆ ಬಡ್ತಿಯಲ್ಲಿ ಮೀಸಲಾತಿ ಒದಗಿಸಬಹುದೆಂದು ಹೇಳುತ್ತದೆ.

ರಾಜ್ಯ ಸರ್ಕಾರದ ಬಡ್ತಿ ಹುದ್ದೆಗಳಲ್ಲಿ ಪ.ಜಾ ಮತ್ತು ಪ.ಪಂಗಡದ ಪ್ರಾತಿನಿಧ್ಯ ಅವರವರ ಸಂಖ್ಯೆ ಪ್ರಮಾಣವಾದ ಶೇ.15+ಶೇ.03= ಶೇ.18ಕ್ಕಿಂತ ಕಡಿಮೆ ಇದ್ದ ಕಾರಣ ಅವರ ಪ್ರಾತಿನಿಧ್ಯವನ್ನು ಹೆಚ್ಚಿಸಲು 1978ರಿಂದ ಬಡ್ತಿಯಲ್ಲಿ ಮೀಸಲಾತಿಯನ್ನು ಕೊಡಲು ಆರಂಭಿಸಿತು. ಇದರಲ್ಲಿ ತಪ್ಪೇನಿಲ್ಲ. ಆದರೆ ಇದನ್ನು ಅನ್ವಯಿಸುವಲ್ಲಿ ಆದ ಲೋಪದ ಕಾರಣದಿಂದ, ಜನಸಂಖ್ಯೆಯ 4-5 ಪಟ್ಟಿನ ತನಕ ಪ್ರಾತಿನಿಧ್ಯ ಹೆಚ್ಚಾಗುವಂತೆ ಆಯಿತು. ಇದೇ ಸಮಸ್ಯೆ. ಉದಾಹರಣೆಗೆ, ಬಿ.ಕೆ.ಪವಿತ್ರ ಪ್ರಕರಣದ ತೀರ್ಪು ಬರುವ ವೇಳೆಗೆ ಕರ್ನಾಟಕ ಸರ್ಕಾರದ ಇಂಧನ/KEB ಇಲಾಖೆಯ ಒಟ್ಟು 35 ಅಇ ಹುದ್ದೆಗಳಲ್ಲಿ 33 ಹುದ್ದೆಗಳಲ್ಲಿ ಎಸ್ಸಿ/ಎಸ್ಟಿ ಗುಂಪಿನವರು, BWSSB ಯ 15 CE ಹುದ್ದೆಗಳಲ್ಲಿ 13 ಹುದ್ದೆಗಳು, ಪಿಡಬ್ಲೂಡಿ ಇಲಾಖೆಯ EE ಹುದ್ದೆಗಳಲ್ಲಿ ಶೇ.50ರಷ್ಟು ಹುದ್ದೆಗಳು ಶೇ.18ರ ವರ್ಗದವರ ಪಾಲಾಗಿದ್ದವು.

ಏಕೆಂದರೆ, ಕ್ಲಾಸ್-1 (ಲೋಯರ್ ಕೆಟಗರಿ)ವರೆಗಿನ ಹುದ್ದೆಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಕೊಡಲಾಯಿತು. ನಂತರದ ಮೇಲು ಹಂತದ ಹುದ್ದೆಗಳಿಗೆ ಮೀಸಲಾತಿ ಇರುವುದಿಲ್ಲ. ಇದರಿಂದ ಹೆಚ್ಚುವರಿಯಾಗಿ ಪ.ಜಾ ಮತ್ತು ಪ.ಪಂಗಡದವರು ಸುಮಾರು 3800ರಷ್ಟು ಹುದ್ದೆಗಳಿಗೆ ಬಡ್ತಿ ಪಡೆದುಕೊಂಡಿದ್ದರು. 2017ರಲ್ಲಿ ಪವಿತ್ರ ಪ್ರಕರಣದಲ್ಲಿ ಬಂದ ತೀರ್ಪಿನಿಂದಾಗಿ ಅವರುಗಳನ್ನು ಹಿಂಬಡ್ತಿಗೊಳಿಸಲಾಯಿತು. ಏಕೆಂದರೆ ಇವು ಬಡ್ತಿ ಮೀಸಲಾತಿಯ ಮಿತಿಯಲ್ಲಿ ಬರದ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ಗುಂಪಿನವರಿಗೆ ಸಿಗಬೇಕಾದ ಹುದ್ದೆಗಳು. ಇದಕ್ಕೆಲ್ಲಾ ಎಡೆಯಾದದ್ದು ಬಡ್ತಿ ಮೀಸಲಾತಿ ನೀತಿಯಲ್ಲಿ ಅಡಕ ಮಾಡಿರುವ ತತ್ಪರಿಣಾಮ ಹಿರಿತನ (Consequential Seniority). ಇದು ಹೆಚ್ಚಿನ ಪಾಲಿನ ಮೀಡಿಯಾ, ಸಾರ್ವಜನಿಕರಿಗೆ ಇದುವರೆಗೆ ಕಗ್ಗಂಟಿನ ಪದವಾಗಿದೆ.

ಏನಿದು Consequential Seniority?
ಈ ಹೋರಾಟದ ಮುಂಚೂಣಿಯಲ್ಲಿರುವ ಪಿಡಬ್ಲೂಡಿ ಇಲಾಖೆಯವರು ತಿಳಿಸುವಂತೆ ಸದರಿ ಇಲಾಖೆಯಲ್ಲಿ AE, AEE, EE, SE, CE ಹುದ್ದೆಗಳಿವೆ. ಮೇಲಿನ AEಹುದ್ದೆಗಳಿಗೆ ಕೆಲಸಕ್ಕೆ ತೆಗೆದುಕೊಂಡನಂತರ AEE ಹುದ್ದೆಯವರೆಗೆ ಮಾತ್ರ ಬಡ್ತಿ ಮೀಸಲಾತಿ ಇದೆ. ಆದರೂ ಸಹ ಇಂಜಿನಿಯರಿಂಗ್ ಇಲಾಖೆಯಲ್ಲೇ ಬಡ್ತಿ ಮೀಸಲಾತಿ ಸಂಗತಿ ಹೆಚ್ಚು ಸದ್ದು ಮಾಡುತ್ತಿದೆ. 1978ರವರೆಗೆ AEE ಹುದ್ದೆಯಿಂದ AEE ಹುದ್ದೆಗೆ ಬಡ್ತಿ ಹೊಂದಲು 5 ವರ್ಷಗಳ ಸೇವೆ ಸಲ್ಲಿಸಿರಬೇಕಿತ್ತು. ಸುಮಾರು 15 ವರ್ಷಗಳ ಸೇವೆ ನಂತರ ಮೊದಲ ಬಡ್ತಿ AEE ಹುದ್ದೆಗೆ ಎಲ್ಲಾ ಗುಂಪಿನವರಿಗೂ ಸಿಗುತ್ತಿತ್ತು. ಆಗ ಹಿರಿತನ ಪಟ್ಟಿಯಲ್ಲಿ ಕೆಳಗಡೆ ಇರುತ್ತಿದ್ದ ಎಸ್ಸಿ/ಎಸ್ಟಿ ಕೆಲಸಗಾರರು ಕೆಳಗಡೆ ಇರುತ್ತಿದ್ದ ಕಾರಣ ತಡವಾಗಿ ಬಡ್ತಿ ದೊರೆತು 1, 2, 3, 4ನೇ ಹಂತದ ಬಡ್ತಿ ಹುದ್ದೆ ತಲುಪುವ ಹೊತ್ತಿಗೆ ಕೆಳಗಿರುವವರು ನಿವೃತ್ತಿಯಾಗುತ್ತಿದ್ದ ಕಾರಣ ಮೇಲಿನ ಹುದ್ದೆಗಳಲ್ಲಿ ಎಸ್ಸಿ/ಎಸ್ಟಿ ಪ್ರಾತಿನಿಧ್ಯ ಕಡಿಮೆ ಇತ್ತು.

ತದನಂತರ 1978ರಲ್ಲಿ ಎಸ್ಸಿ/ಎಸ್ಟಿ ಗುಂಪಿನವರಿಗೆ ಬಡ್ತಿಯಲ್ಲಿ ಮೀಸಲಾತಿ ದೊರಕಿದ ಕಾರಣ 100 ಹುದ್ದೆಗಳಿಗೆ 18 ಹುದ್ದೆಗಳನ್ನು ಹಿರಿತನ ಪಟ್ಟಿಯಲ್ಲಿ ಕೆಳಗಡೆ ಇರುವವರನ್ನು ಆಯ್ಕೆ ಮಾಡಲಾಯಿತು. 1978ರ ನಂತರದ ಮೊದಲ ಹಂತದ ಬಡ್ತಿಗಳಲ್ಲಿ 5 ವರ್ಷ/ಇಲ್ಲವಾದಲ್ಲಿ 3 ವರ್ಷದ ಪ್ರಾರಂಭಿಕ ಸೇವೆ ಸಲ್ಲಿಸಿದವರು, ಕಡಿಮೆ ವಯಸ್ಸಿನವರು, ಬಡ್ತಿ ಪಡೆದರು. ತದನಂತರದ ವರ್ಷಗಳಲ್ಲಿ ಬಡ್ತಿ ಪಡೆಯದೇ ಕೆಳ ಹಂತಗಳಲ್ಲೇ ಸುದೀರ್ಘ ಸೇವೆ ಸಲ್ಲಿಸಿದ ಇತರರು ಮೊದಲು ವಯೋನಿವೃತ್ತಿ ಹಂತ ತಲುಪುವುದರಿಂದ, ಮೇಲು ಹಂತದ ಹುದ್ದೆಗಳಲ್ಲಿ ಕಡಿಮೆ ವಯಸ್ಸಿನ ಎಸ್ಸಿ/ಎಸ್ಟಿ ಕೆಲಸಗಾರ ಸಂಖ್ಯೆ ಹೆಚ್ಚಾಯಿತು. ಯಾವ ಪ್ರಮಾಣಕ್ಕೆ ಹೆಚ್ಚಾಯಿತು ಎಂಬುದನ್ನು ಮೇಲೆ ಹೇಳಲಾಗಿದೆ. ಇದರ ಬೆನ್ನು ಹತ್ತಿ ನ್ಯಾಯಾಲಯದ ಕಟ್ಟೆಯಲ್ಲಿ ಇತರರು 2017ರಲ್ಲಿ ಪವಿತ್ರ ಪ್ರಕರಣದಲ್ಲಿ ಇದಕ್ಕೆ ತಡೆ ಪಡೆಯಲಾಯಿತು.

ಏಕೆಂದರೆ ತಮಗಿಂತ ಸೇವೆಯಲ್ಲಿ 10-15 ವರ್ಷ ಕಿರಿಯರ ಕೈಕೆಳಗೆ ಹಿರಿತನ ಹೊಂದಿರುವ ಇತರರು ಕೆಲಸ ಮಾಡುವ ಸ್ಥಿತಿ ಇತ್ತು. ಇದರಿಂದ ಸಹಜವಾಗಿ ಹಿರಿತನ ಹೊಂದಿರುವ ಕೆಲಸಗಾರರು ಮುಜುಗರದಲ್ಲಿ ಕೆಲಸ ಮಾಡುವಂತಾಯಿತು. ಕೆಲಸಗಳಲ್ಲಿ ಹುರುಪು ಕಡಿಮೆಯಾಗತೊಡಗಿತು. ಹಾಗೂ ಮೇಲು ಹಂತದ ಹುದ್ದೆಗಳಲ್ಲಿ ಕಡಿಮೆ ವಯಸ್ಸಿನ/ಸೇವಾಹಿರಿತನದವರು ಕುಳಿತಿದ್ದರಿಂದ ಇತರೆ ಗುಂಪಿನ ಕೆಲಸಗಾರರು ತಮ್ಮ ಸೇವೆಯ ಕೊನೆಯಲ್ಲಿ 1 ಬಡ್ತಿ/2 ಬಡ್ತಿ ಅಥವಾ ಕೆಲವರು ಬಡ್ತಿ ಇಲ್ಲದೆಯೂ ನಿವೃತ್ತರಾದರು. ಇದು ಎಲ್ಲಾ ಇಲಾಖೆಗಳಲ್ಲಿನ ಪರಿಸ್ಥಿತಿ.

ಇದಕ್ಕೆಲ್ಲಾ ಕಾರಣ 1978ರಲ್ಲಿನ ಬಡ್ತಿ ಮೀಸಲಾತಿ ನೀತಿಯಲ್ಲಿರುವ ಶೇ.18ರ ಪ್ರಾತಿನಿಧ್ಯವನ್ನು ಕ್ಲಾಸ್-1 (ಲೋಯರ್ ಕೆಟಗರಿ) ಹುದ್ದೆಯವರಿಗೆ ಮಾತ್ರ ಕೊಡುತ್ತಿದ್ದದ್ದು. ತದನಂತರ ಮೀಸಲಾತಿಯಿಂದ ಬಡ್ತಿ ಪಡೆದ ಎಸ್ಸಿ/ಎಸ್ಟಿ ವರ್ಗದವರಿಗೆ ನೀಡಿದ ತೀರ್ಪಿನಲ್ಲಿ ತತ್ಪರಿಣಾಮದ ಹಿರಿತನಕ್ಕೆ ತಡೆ ಕೊಟ್ಟಿದ್ದಾರೆ ಮತ್ತು 2019ರ ತೀರ್ಪಿನಲ್ಲಿ ತತ್ಪರಿಣಾಮ ಹಿರಿತನವನ್ನು ಮುಂದುವರೆಸಲು ಸಮ್ಮತಿ ನೀಡಿರುವುದು ಇಂದಿನ ಕೋಲಾಹಲಕ್ಕೆ ಕಾರಣವಾಗಿದೆ.

ಇದನ್ನು ಕೇವಲ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ನೋಡುವ ಪರಿಪಾಠ ಇದೆ. ಇದರಿಂದ ಆಡಳಿತಾಂಗದ ಕೆಲಸದ ಮೇಲೆ ಮತ್ತು ಅದರಿಂದ ಒಟ್ಟು ಸಮಾಜದ ಮೇಲೆ ಆಗುವ ಅಡ್ಡ ಪರಿಣಾಮದ ಅರಿವಿಲ್ಲದೇ ಈ ರೀತಿ ಮಾಡಲಾಗುತ್ತಿದೆ.

ಎಸ್ಸಿ/ಎಸ್ಟಿ ಗುಂಪಿನವರನ್ನು ಮೇಲೆ ತರಲು ಸರ್ಕಾರಿ ಕೆಲಸಗಳಿಂದ ಮಾತ್ರ ಸಾಧ್ಯ ಎಂಬುದನ್ನು ಸರ್ಕಾರ ಮುಂದೊಡ್ಡುತ್ತಿದೆ. ಸೀಮಿತ ಸರ್ಕಾರಿ ಯಂತ್ರಾಂಗವನ್ನು ತಕ್ಕ ಹುರಿಯಾಳುಗಳಿಂದ ಕಟ್ಟಿ ಅದರಿಂದ ಒಳ್ಳೆಯ ಪ್ರೊಡಕ್ಟ್ ಪಡೆದು ಇಡೀ ಸಮಾಜವನ್ನು ಮುಂದೆ ತರಲು ದುಡಿಮೆ ಮಾಡಬೇಕಾದ ಸರ್ಕಾರಗಳು ಎಡವುತ್ತಿರುವುದೆಲ್ಲಿ?

ಹಿಂದಿನ ತಲೆಮಾರಿನಲ್ಲಾದ ಶೋಷಣೆಯನ್ನು ವ್ಯಕ್ತಿಗತವಾಗಿ ಇತರ ಜಾತಿಗಳ ಸದಸ್ಯರ ಮೇಲೇರಿ ಅವರ ಬಡ್ತಿ ಹಕ್ಕನ್ನು ಕಿತ್ತು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಇನ್ನೊಬ್ಬರಿಗೆ ಕೊಟ್ಟು ‘ಊನಗೊಂಡಿರುವ ಆಳ್ವಿಕೆ ಕೆಲಸ ಪಡೆ’ ನಮ್ಮ ನಾಡಿನ ಏಳಿಗೆಗೆ ತೊಡಕು ಎಂಬುದು ಕಟ್ಟುಪಾಡು ಮಾಡುವ ವ್ಯವಸ್ಥೆಗೆ ಅರಿವಾಗಬೇಕು. ಇಂತಹ ನಿಯಮಗಳಿಂದ ಸಮಾಜದೊಳಗಿನ ಹಲಪಂಗಡಗಳ ನಡುವೆ ಅದರಲ್ಲೂ ಎಸ್ಸಿ/ಎಸ್ಟಿ ಮತ್ತು ಇತರರ ನಡುವಿನ ಬಿರುಕು ಮತ್ತಷ್ಟು ಹೆಚ್ಚಾಗಲಿದೆ.

ಹಾಗಾಗಿ ಈ Consequential Seniority ಯ ಅನಾಹುತವ್ನು ತಡೆಯಲು ಹಲವಾರು ಶತಮಾನಗಳಿಂದ ತುಳಿತಕ್ಕೊಳಗಾದ ಎಸ್ಸಿ/ಎಸ್ಟಿ ಗುಂಪಿನವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಎಲ್ಲಾ ಬಡ್ತಿ ಹುದ್ದೆಗಳಲ್ಲಿಯೂ ಅವಕಾಶ ಕೊಡುವ ನಡೆಯ ಕಡೆ ಸರ್ಕಾರ ಹೆಜ್ಜೆ ಇಡಬೇಕಾಗಿದೆ. ಎಲ್ಲಾ ಪಂಗಡಗಳೂ ಒಗ್ಗಟ್ಟಿನಿಂದ ಇರಬೇಕಿದೆ. ಇದಕ್ಕೆ Vertical bifurcation of all cadre ಎಂದು ಕರೆಯಲಾಗುತ್ತಿದೆ. ಇದು ಈಗಿನ ಕಗ್ಗಂಟನ್ನು ಬಿಡಿಸಲು ಇರುವ ದಾರಿ. ಇನ್ನುಳಿದಂತೆ ಎಸ್ಸಿ/ಎಸ್ಟಿ ಪಂಗಡದವರನ್ನು ಮೇಲೆತ್ತಲು ಇರುವ ಇನ್ನುಳಿದ ದಾರಿಗಳನ್ನು ಕಂಡುಕೊಳ್ಳಬೇಕಿದೆ.

ಬಡ್ತಿ ಮೀಸಲಾತಿ ಪರ ಇರುವ ವಾದಕ್ಕೆ ಇದನ್ನೂ ಓದಿ: ಬಡ್ತಿ ಮೀಸಲು ಕುರಿತು ಸುಪ್ರೀಂ ತೀರ್ಪು ದೇಶಕ್ಕೆ ಮಾದರಿಯಾದುದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...

ಪ್ರತಿಭಟನಾನಿರತ ಮಹಿಳೆಯ ಕೆನ್ನೆಗೆ ಹೊಡೆದ ದೆಹಲಿ ಪೊಲೀಸ್ ಅಧಿಕಾರಿ ಸಂದೀಪ್ ಲಂಬಾ: ವಿಡಿಯೋ ವೈರಲ್ ನಂತರ ವ್ಯಾಪಕ ಟೀಕೆ

ದೆಹಲಿ: ಶಾಂತಿಯುತವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ನಡೆಸಿದ ಕ್ರೂರ ದಮನ ಕಾರ್ಯಾಚರಣೆಯ ಭೀಕರ ಮುಖವಾಡವೊಂದು ಮತ್ತೆ ಜಗಜ್ಜಾಹೀರಾಗಿದೆ. ಸೋಮವಾರ ಸಂಸತ್ತಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ನೆಪದಲ್ಲಿ,...

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...