Homeಅಂಕಣಗಳುಸಂಪಾದಕೀಯ; ಸಾಂವಿಧಾನಿಕ ನೈತಿಕತೆಯಲ್ಲಿ ಕಮಾನು ಕಟ್ಟಬೇಕಿದೆ ಬಣ್ಣಗಳು

ಸಂಪಾದಕೀಯ; ಸಾಂವಿಧಾನಿಕ ನೈತಿಕತೆಯಲ್ಲಿ ಕಮಾನು ಕಟ್ಟಬೇಕಿದೆ ಬಣ್ಣಗಳು

- Advertisement -
- Advertisement -

2017ಅನ್ನಿಸತ್ತೆ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ’ಕಾನ್ಸ್ಟಿಟ್ಯೂಶನ್’ ಎಂಬ ಕ್ರೊಯೇಶಿಯನ್ ಸಿನಿಮಾದ ಪ್ರದರ್ಶನ ಇತ್ತು. ನಾಲ್ಕು ಮುಖ್ಯ ಪಾತ್ರಗಳು, ಅವುಗಳ ನಡುವಿನ ಪೂರ್ವಾಗ್ರಹಗಳು-ಭಿನ್ನಾಭಿಪ್ರಾಯಗಳು ಮತ್ತವುಗಳನ್ನು ಅವರೆಲ್ಲರೂ ಕಳಚಿಕೊಳ್ಳುವ ಅದ್ಭುತ ನಿರೂಪಣೆಯಿದ್ದ ಸಿನಿಮಾವದು.

ವೀಕೋ ಕ್ರೊಯೇಶಿಯನ್ ಪ್ರೊಫೆಸರ್ ಮತ್ತು ಹೋಮೋಸೆಕ್ಷುಯಲ್. ಗಂಡಸಿನ ಬಟ್ಟೆ ತೊಟ್ಟು ಕಾಲೇಜಿನಲ್ಲಿ ಪಾಠ ಮಾಡುವ ಪ್ರೊಫೆಸರ್ ಮನೆಯಲ್ಲಿ ಹೆಂಗಸಿನ ಬಟ್ಟೆ ಹಾಕಿ, ಮಡಿದಿರುವ ತನ್ನ ಪ್ರಿಯಕರನ ನೆನಪಿನಲ್ಲಿ ಪರಿತಪಿಸುತ್ತಿರುತ್ತಾನೆ. ತಂದೆ ಹಾಸಿಗೆ ಹಿಡಿದಿದ್ದಾರೆ. ಅವರು ಹಿಟ್ಲರ್‌ನ ನಾಜಿ ಸೇನೆಯ ಜೊತೆಯಾಗಿ ಹೋರಾಡಿದವರು. ಮಗನ ಸೆಕ್ಷುಯಾಲಿಟಿ ಬಗ್ಗೆ ತನ್ನ ಕೊನೆಯ ದಿನಗಳಲ್ಲೂ ಇನ್ನೂ ಕೋಪ ಇಳಿದಿಲ್ಲ. ಇದರ ಜೊತೆಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಕೆಲವರು ಪ್ರೊಫೆಸರ್ ಅವರ ಈ ನಡವಳಿಕೆಯ ವಿರುದ್ಧವಾಗಿದ್ದಾರೆ.

ಈ ಪ್ರೊಫೆಸರ್ ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿಯೇ ಕೆಳಗೆ ವಾಸಿಸುವ ಒಂದು ಜೋಡಿ. ಗಂಡ ಆಂಟೆ ಸರ್ಬಿಯಾ ಮೂಲದವನು. ಪೊಲೀಸ್ ಕೆಲಸ. ಹೆಂಡತಿ ಮಾಜಾ ಆಸ್ಪತ್ರೆಯಲ್ಲಿ ನರ್ಸ್. ಆಂಟೆ ತನ್ನ ಮುಂಬಡ್ತಿಗಾಗಿ ಸಂವಿಧಾನದ ಒಂದು ಪರೀಕ್ಷೆಯನ್ನು ಪಾಸು ಮಾಡಬೇಕಿರುತ್ತದೆ. ಆದರೆ ಅದು ಆತನಿಗೆ ಬಹಳ ತ್ರಾಸದಾಯಕವಾದದ್ದು.

ಕೆಲವು ಹೋಮೋಫೋಬಿಕ್ ಯುವಕರು ರಸ್ತೆಯಲ್ಲಿ ವೀಕೋ ಮೇಲೆ ದಾಳಿ ನಡೆಸಿ ಆತನನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಮಾಜಾ ಆತನನ್ನು ಗುರುತಿಸಿ ಶುಶ್ರೂಷೆ ಮಾಡುತ್ತಾಳೆ. ಅದನ್ನು ಆತನ ಮನೆಯಲ್ಲಿಯೂ ಮುಂದುವರೆಸುತ್ತಾಳೆ. ಜೊತೆಗೆ ವೀಕೋನ ತಂದೆಯನ್ನು ನೋಡಿಕೊಳ್ಳುತ್ತಾಳೆ. ಇದಕ್ಕೆ ಬದಲಾಗಿ ಆಂಟೆಗೆ ಸಂವಿಧಾನದ ಪಾಠ ಹೇಳಿಕೊಡಲು ಪ್ರೊಫೆಸರ್ ವೀಕೋಗೆ ಕೇಳಿಕೊಳ್ಳುತ್ತಾಳೆ.

ಹೀಗೆ ಏರ್ಪಾಡಾದ ಸಂಬಂಧದಲ್ಲಿ, ಕ್ರೋಯೇಶಿಯನ್ ವೀಕೋ ತಾನೇ ಲೈಂಗಿಕ ಅಲ್ಪಸಂಖ್ಯಾತನಾದರೂ, ಅದಕ್ಕಾಗಿ ದೌರ್ಜನ್ಯವನ್ನು ಎದುರಿಸುತ್ತಿದ್ದರೂ, ಆತನಿಗೆ ಸರ್ಬಿಯನ್ ಅಲ್ಪಸಂಖ್ಯಾತರ ಮೇಲೆ ಪೂರ್ವಾಗ್ರಹಪೀಡಿತ ಅಸಹನೆ. ಆಂಟೆಗೆ ವೀಕೋನ ಲೈಂಗಿಕ ಧೋರಣೆಯ ಬಗ್ಗೆ ವ್ಯಂಗ್ಯದ ಪೂರ್ವಾಗ್ರಹ. ಹೀಗೆ ಅವರ ನಡುವೆ ಘರ್ಷಣೆಗಳು ಜರುಗುತ್ತಲೇ ಇರುತ್ತವೆ.

ಆದರೆ ಸಂವಿಧಾನದ ಪಾಠ ಮಾಡುವ-ಕೇಳುವ ಜೊತೆಜೊತೆಗೇ, ಮಾನವ ಸಂಬಂಧಗಳ ಒಡನಾಟದಿಂದ ಎಲ್ಲರಿಗೂ ತಮ್ಮ ಪೂರ್ವಾಗ್ರಹಗಳನ್ನು ಕಳಚಿಕೊಳ್ಳಲು ಸಾಧ್ಯವಾಗುತ್ತದೆ. ಸಂವಿಧಾನ ಪುಸ್ತಕವನ್ನು ಚೆನ್ನಾಗಿ ಬಲ್ಲ ಪ್ರೊಫೆಸರ್‌ಗೆ ಅದರ ನೈತಿಕತೆ ದಕ್ಕಲು, ತಾವು ಶತ್ರುಗಳು ಎಂದುಕೊಂಡವರ ಪ್ರೀತಿಯ ಒಡನಾಟ ಬೇಕಿರುತ್ತದೆ! ಆಂಟೆಯಲ್ಲು ಬದಲಾವಣೆ ಸಾಧ್ಯವಾಗುತ್ತದೆ.

ಈ ಕಥೆಯನ್ನು ಭಾರತಕ್ಕೆ ಅನ್ವಯಿಸುವುದು ಕಷ್ಟವೇನಲ್ಲ. ಇಲ್ಲಿಯೂ ಲೈಂಗಿಕ ಅಲ್ಪಸಂಖ್ಯಾತರಾಗಿರುವ ಮೇಲ್ಜಾತಿಯ ಬರಹಗಾರರು ಮುಸ್ಲಿಂ ದ್ವೇಷವನ್ನು ತಮ್ಮ ಕಥೆ-ಕಾದಂಬರಿಗಳಲ್ಲಿ ಧಾರಾಳವಾಗಿ ಎಳೆದು ತರುತ್ತಾರೆ. ತಾವೇ ತಮ್ಮ ಲೈಂಗಿಕ ಅಲ್ಪಸಂಖ್ಯಾತ ಹಕ್ಕುಗಳಿಗೆ ಹೋರಾಟ ಮಾಡುತ್ತಿದ್ದರೂ, ಬ್ರಾಹ್ಮಣ್ಯ ಹೋಗಲಾಡಿಸಬೇಕೆನ್ನುವ, ಸಮ ಸಮಾಜದ, ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕೆನ್ನುವ, ಪ್ರಾತಿನಿಧ್ಯ ಸರಿಪಡಿಸಬೇಕೆನ್ನುವ ಸಾಂವಿಧಾನಿಕ ನೈತಿಕತೆಯ ವಿವೇಕ ಅವರಿಗೆ ಸುಲಭವಾಗಿ ಸಿಕ್ಕಿರುವುದಿಲ್ಲ. ತಮ್ಮ ಪ್ರಿವಿಲೆಜ್‌ಗಳನ್ನು ದಾಟಿಕೊಂಡು, ತಮ್ಮ ಹಕ್ಕುಗಳ ಜೊತೆಗೆ ಇತರ ದುರ್ಬಲ ಸಮುದಾಯಗಳ ಹಕ್ಕುಗಳನ್ನು ಗುರುತಿಸುವ, ಅವರ ಶೋಷಣೆಯನ್ನೂ ಪರಿಗಣಿಸಲು ತಮ್ಮ ಪೂರ್ವಾಗ್ರಹಗಳನ್ನು ಕಳೆದುಕೊಳ್ಳಬೇಕಿರುವ ಅಗತ್ಯವನ್ನು ಚಿತ್ರಿಸುವ ಕಾನ್ಸ್ಟಿಟ್ಯೂಶನ್ ಚಿತ್ರಕಥೆ ನೆನಪಿಗೆ ಬಂದದ್ದು ಲೈಂಗಿಕ ಅಲ್ಪಸಂಖ್ಯಾತ ಹೋರಾಟದ ಮುಂಚೂಣಿಯಲ್ಲಿರುವ ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥನದ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದಾಗ.

ಲೈಂಗಿಕತೆಯನ್ನು, ಲೈಂಗಿಕ ಕ್ರಿಯೆಯನ್ನು ತಪ್ಪಾಗಿ ಸಂಬೋಧಿಸಲಾಗಿದ್ದ, ಮತ್ತು ಲೈಂಗಿಕ ಅಲ್ಪಸಂಖ್ಯಾತರನ್ನು ಕ್ರಿಮಿನಲೈಸ್ ಮಾಡಿದ್ದ ಸೆಕ್ಷನ್ 377ಅನ್ನು ರದ್ದುಗೊಳಿಸಲು ಚಳವಳಿ ರೂಪಿಸಿದ್ದವರಲ್ಲಿ ಒಬ್ಬರಾಗಿದ್ದವರು ಅಕ್ಕಯ್ ಪದ್ಮಶಾಲಿ. ಅದಕ್ಕಾಗಿ ಹೋರಾಡಿ ಶ್ರಮಿಸಿದ್ದವರು. 2009 ಜುಲೈ 2ರಂದು ದೆಹಲಿ ನ್ಯಾಯಾಲಯ ಈ ಚಳವಳಿಯನ್ನು ಪುರಸ್ಕರಿಸಿ ನೀಡಿದ ತೀರ್ಪು ಐತಿಹಾಸಿಕವಾದದ್ದು. ಇದರ ಬಗ್ಗೆ ತಮ್ಮ ಪುಸ್ತಕದಲ್ಲಿ ಅಕ್ಕಯ್ ಅವರು ಬರೆಯುತ್ತಾ “ಖಾಸಗಿಯಾಗಿ ವಯಸ್ಕರ ನಡುವೆ ಸಹಮತದ ಲೈಂಗಿಕತೆಯು ಶಿಕ್ಷಾರ್ಹವಲ್ಲ ಎಂದು ಅದು ಹೇಳಿತು. ತೀರ್ಪನ್ನು ಸಾಂವಿಧಾನಿಕ ನೈತಿಕತೆಯ ಹಿನ್ನೆಲೆಯಲ್ಲಿ ನೀಡಲಾಗಿತ್ತು. ನೀವು, ಸ್ವಂತ ನೈತಿಕತೆಯನ್ನು ಕ್ರಿಯಾಚರಣೆಯಲ್ಲಿ ತರಬಹುದು. ಅದು ಭಾರತಕ್ಕೆ ಸಂಬಂಧಿಸಿದಂತೆ ಅಲ್ಲ. ಸಾಂವಿಧಾನಿಕ ನೈತಿಕತೆಯು ಮುಖ್ಯ ನೈತಿಕತೆಯಾಗಿದ್ದು, ಪ್ರತಿಯೊಬ್ಬರೂ ಅದರ ಅಡಿಯಲ್ಲಿ ಬರುತ್ತಾರೆ” ಎನ್ನುತ್ತಾರೆ.

ಈ ತೀರ್ಪನ್ನು ಮತ್ತೆ ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದು, ಅದರ ವಿರುದ್ಧ ಮತ್ತೆ ಚಳವಳಿ, ಮತ್ತೆ ಸಿಕ್ಕ ಜಯ ಹೀಗೆ ಇವುಗಳ ಬಗ್ಗೆ ಪುಸ್ತಕ ಬಿಡುಗಡೆಯಲ್ಲಿಯೂ ಮಾತನಾಡಿದ ಅಕ್ಕಯ್, ಸಾಂವಿಧಾನಿಕ ನೈತಿಕತೆಯನ್ನು ಅಳವಡಿಸಿಕೊಳ್ಳುವುದರ ಅಗತ್ಯದ ಬಗ್ಗೆ ಮತ್ತು ತಮ್ಮ ಹಕ್ಕುಗಳಿಗಾಗಿ ಮಾಡುವ ಹೋರಾಟವನ್ನು ಪ್ರತ್ಯೇಕವಾಗಿ ನೋಡದೆ ಸಮಸ್ತವಾಗಿ ಎಲ್ಲ ದುರ್ಬಲ ಸಮುದಾಯಗಳ ಹೋರಾಟಗಳನ್ನು ಒಟ್ಟಿಗೆ ಕೊಂಡೊಯ್ಯುವ – ಅದು ದಲಿತ ಹೋರಾಟ ಆಗಿರಲಿ, ಅಲ್ಪಸಂಖ್ಯಾತ ಧರ್ಮೀಯರ ಹೋರಾಟವಿರಲಿ ಅಥವಾ ಮಹಿಳಾ ಹಕ್ಕುಗಳ ಹೋರಾಟವಿರಲಿ- ಎಷ್ಟು ಮುಖ್ಯ ಎಂಬುದನ್ನು ಮನಮುಟ್ಟುವಂತೆ ವಿವರಿಸುತ್ತಿದ್ದರು.

ಅಕ್ಕಯ್ ತಮ್ಮ ಆತ್ಮಕತೆಗೆ ಮೊದಲು ’ಕರುಣೆಗೊಂದು ಸವಾಲು’ ಎಂದು ಹೆಸರಿಸಿದ್ದರಂತೆ. ಪ್ರಸಕ್ತ ಸಂಚಿಕೆಯಲ್ಲಿ ಸುಭಾಷ್ ಅವರಿಗೆ ನೀಡಿರುವ ಸಂದರ್ಶನದಲ್ಲೂ ಅವರು ಇದರ ಬಗ್ಗೆ ವಿವರಿಸಿದ್ದಾರೆ. ಕರುಣೆ ಸಾಕೆನ್ನುವ ಅವರು, ಮನುಷ್ಯರಿದ್ದಾರೆ, ಅದರಲ್ಲಿ ವೈವಿಧ್ಯತೆ ಇದೆ, ಅದನ್ನು ಒಪ್ಪಿಕೊಳ್ಳುವುದನ್ನು ಕಲಿಯಿರಿ ಎಂದು ಸಮಸ್ತ ಸಹನಾಗರಿಕರಿಗೆ ಕರೆ ನೀಡುತ್ತಿದ್ದಾರೆ.

LGBTQ ಸಮುದಾಯ ಜಗತ್ತಿನಾದ್ಯಂತ ಸಂಭ್ರಮಿಸುವ ದಿನ ಜೂನ್ 28. ಅದೇ ದಿನ ಅಕ್ಕಯ್ ಪುಸ್ತಕದ ಬಿಡುಗಡೆ ಇತ್ತು. ಜೂನ್ ಅನ್ನು ಪ್ರೈಡ್ ತಿಂಗಳು ಎಂದೇ ಕರೆಯಲಾಗುತ್ತದೆ. ವೈವಿಧ್ಯತೆಯ ಬಣ್ಣಗಳನ್ನು ಅರಿತು ಅದರಲ್ಲಿ ಮಿಂದು ಒಂದಾಗಬೇಕಿರುವ ಮತ್ತು ದೇಶದ ಬಹುತ್ವವನ್ನು ಸರಿ ದಾರಿಯಲ್ಲಿ ಕೊಂಡೊಯ್ಯಬೇಕಿರುವುದಕ್ಕೆ ಹೋರಾಟದ ಬದುಕು ಸಾಗಿಸಿ, ಕರುಣೆಯ ನಿರೀಕ್ಷೆಯನ್ನು ಪಕ್ಕಕ್ಕಿಟ್ಟು, ತಮ್ಮ ನೋವುಗಳನ್ನು ಇತರ ಅಂಚಿನಲ್ಲಿರುವ ಸಮುದಾಯದ ಜನರ ನೋವುಗಳಿಗೆ ಸಮೀಕರಿಸಿಕೊಂಡು ಹೋರಾಡಿದ ಅಕ್ಕಯ್, ಮಾನವಿ ಬಂದೋಪಾಧ್ಯಾಯ, ರೇವತಿ ಇಂತಹ ಮುಂತಾದವರ ಬದುಕು ಬರಹ ನಮಗೆ ಮುಖ್ಯವಾಗುತ್ತದೆ.

ರೇವತಿ ಅವರ ಬಗ್ಗೆ ಗೌರಿಯವರ ಒಂದು ಹಳೆಯ ಬರಹ, ಅಕ್ಕಯ್ ಅವರ ಸಂದರ್ಶನ ಮತ್ತು ಮಾನವಿ ಬಂದೋಪಾಧ್ಯಾಯ ಅವರ ಆತ್ಮಕತೆಯ ಕನ್ನಡಾನುವಾದದ ಒಂದು ಭಾಗವನ್ನು ಈ ಸಂಚಿಕೆಯಲ್ಲಿ ಪ್ರಕಟ ಮಾಡುವುದರೊಂದಿಗೆ ನಾವು ಪ್ರೈಡ್‌ನಲ್ಲಿ ಭಾಗಿಯಾಗುತ್ತಿದ್ದೇವೆ ಹಾಗೂ ಈ ಮೂರು ಜನ ತೋರಿಸಿಕೊಟ್ಟ ಭ್ರಾತೃತ್ವವನ್ನು ಅಪ್ಪಿಕೊಳ್ಳಲು ಮುಂದಾಗುತ್ತಿದ್ದೇವೆ.

ಭ್ರಾತೃತ್ವವೆನ್ನುವುದು (ಬಾಬಾಸಾಹೇಬರೂ ಪ್ರತಿಪಾದಿಸಿದಂತೆ) ರಾಷ್ಟ್ರವೊಂದನ್ನು ರೂಪಿಸುವ ಪ್ರಮುಖ ಮೌಲ್ಯಗಳಲ್ಲೊಂದು. ಅದೇ ದೇಶದ ಘೋಷಿತ ಗಡಿಗಳ ಒಳಗೆ ಬದುಕುವ ಸಹಜೀವಿಯನ್ನು ತನ್ನಂತೆ ಭಾವಿಸದಿದ್ದರೆ ಅದು ಹೇಗೆ ದೇಶವಾದೀತು? ಆ ದೃಷ್ಟಿಯಲ್ಲಿ ಮಹಿಳೆ, ಲೈಂಗಿಕ ಅಲ್ಪಸಂಖ್ಯಾತರು, ದಲಿತರು ಹಾಗೂ ಮುಸ್ಲಿಮರ ಜೊತೆಗಿನ ಬಾಂಧವ್ಯವನ್ನು ’ದೇಶವಾಸಿ’ಗಳು ನೋಡಬೇಕಿದೆ. ಅತ್ಯಂತ ಸಹಜವಾಗಿ. ಆಗ ನಿಜವಾದ ಅರ್ಥದಲ್ಲಿ ರಾಷ್ಟ್ರವು ಮೈದಾಳುತ್ತದೆ; ನಿಧಾನಕ್ಕೆ ಗಡಿಗಳನ್ನೂ ದಾಟಿದ ’ಮನುಷ್ಯ ಸಮಾಜ’ ರೂಪುಗೊಳ್ಳುತ್ತದೆ.


ಇದನ್ನೂ ಓದಿ: ನನ್ನ ತಪ್ಪಿನಿಂದ ರಾಹುಲ್ ಗಾಂಧಿ ಕೆಟ್ಟ ರೀತಿಯ ಟ್ರೋಲ್‌ಗೆ ಒಳಗಾದರು- ನಟಿ ರಮ್ಯಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...