Homeಪುಸ್ತಕ ವಿಮರ್ಶೆಗುರುಪ್ರಸಾದ್ ಕಂಟಲಗೆರೆಯವರ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ವಿಮರ್ಶೆ..

ಗುರುಪ್ರಸಾದ್ ಕಂಟಲಗೆರೆಯವರ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ವಿಮರ್ಶೆ..

- Advertisement -
- Advertisement -

ಗುರುಪ್ರಸಾದ್ ಕಂಟಲಗೆರೆಯವರು ಮೂಲತಃ ಕವಿ-ಕತೆಗಾರ. ಸದ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರಕಟಣೆಯಾದ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ಪ್ರಕಟವಾಗುವುದರ ಮೂಲಕ ಒಬ್ಬ ಸಂಶೋಧಕ, ವಿಮರ್ಶಕನಾಗಿ ಈ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದಂತಾಗಿದೆ. ಗುರುಪ್ರಸಾದ್ ದಲಿತ ಸಾಹಿತ್ಯವನ್ನು ಮರುವ್ಯಾಖ್ಯಾನ ಮಾಡುವುದನ್ನು ಗೌಣಗೊಳಿಸಿ, ನೆಲಮೂಲದವರಾದ ಮಾದಿಗ ಸಮುದಾಯವನ್ನು ಹೇಗೆ ಗ್ರಹಿಸಬಹುದೆಂಬುದನ್ನು ಮೌಖಿಕವಾಗಿ ದೊರೆಯುವ ಸಂಕಥನಗಳನ್ನು ಸಂಗ್ರಹಿಸಿ, ಅವನ್ನು ಸಮಕಾಲೀನ ಸಮಸ್ಯೆಗಳಿಗೆ, ಬಿಕ್ಕಟ್ಟುಗಳಿಗೆ ಹೇಗೆ ಮುಖಾಮುಖಿಯಾಗಬಲ್ಲವು ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಚರ್ಚಿಸಿದ್ದಾರೆ.

ದಲಿತರ ಸಾಂಸ್ಕೃತಿಕ ಲೋಕದ ಕಥನಗಳನ್ನು ಜನಪದ ವಾಙ್ಮಯದಲ್ಲಿರುವ, ಅದರಲ್ಲೂ ಮಾದಾರ ಸಮುದಾಯದಲ್ಲಿರುವ ಮತ್ತು ಜನಪದ ಹಾಗೂ ಸಾಂಸ್ಕೃತಿಕ ಆಚರಣೆಗಳ ಒಳಗಿರುವ ದಲಿತರ ಅಸ್ಮಿತೆಗಳನ್ನು ಇತ್ತೀಚಿನ ದಿನಗಳಲ್ಲಿ ತೀವ್ರತರವಾಗಿ ಶೋಧಿಸುವ ಕೆಲಸ ಈಗಿನ ಯುವ ಸಂಶೋಧಕರಿAದ ಬಹಳ ಅರ್ಥಪೂರ್ಣವಾಗಿ ಜರುಗಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ರೂಪುಗೊಂಡ ಕೃತಿಯೇ ಕಂಟಲಗೆರೆ ಗುರುಪ್ರಸಾದ್ ಅವರ ‘ದಲಿತರ ಸಾಂಸ್ಕೃತಿಕ ಕಥನಗಳ ಅಧ್ಯಯನ’. ಈ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯ ದಲಿತ ಅಧ್ಯಯನಗಳ ಅಡಿಯಲ್ಲಿ ಇದು ಪ್ರಕಟವಾಗಿದೆ. ತುಮಕೂರು ಜಿಲ್ಲೆಯ ದಲಿತರ ಬದುಕಿನ ಪರಂಪರೆಯ ಎಲ್ಲಾ ಮಗ್ಗುಲುಗಳನ್ನು ತಳಸ್ಪರ್ಶಿಯವಾಗಿ ಶೋಧಿಸಿ ಕಟ್ಟಿರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಆಕರ ಕೃತಿಯಾಗಿ ನಿಲ್ಲಬಲ್ಲದು.

‘ದಲಿತ’ ಪದ, ದಲಿತರ ಉಗಮ ವಿಕಾಸ, ಬದುಕಿನ ವಿನ್ಯಾಸ, ದಲಿತ ಚಳವಳಿಯಲ್ಲಿ ಕಂಡುಂಡ ವೈಫಲ್ಯಗಳು-ಸಾಫಲ್ಯಗಳು, ‘ದಲಿತ’ ಪದ ಇಂದು ವಿಸ್ತೃತಗೊಳ್ಳುತ್ತಿರುವ ಆರ್ದ್ರತೆ, ಅವುಗಳಲ್ಲೇ ಮುಂದುವರೆದಿರುವ- ಹಿಂದುಳಿದಿರುವ(ಸ್ಪೃಶ್ಯ-ಅಸ್ಪೃಶ್ಯ) ಜಾತಿಗಳಲ್ಲಿ ತಮ್ಮ ತಮ್ಮ ಐಡೆಂಟಿಗಳ ಹುಡುಕಾಟ, ಅಸ್ತಿತ್ವದ ಪ್ರಶ್ನೆ ಎದುರಾದಾಗ ರಾಜಕೀಯಾತ್ಮಕ ಮೇಲಾಟಗಳು ಜರುಗಿ, ಮತ್ತೊಂದು ಜಾತಿಯ ಮೇಲೆ ಸಣ್ಣದಾದ ಅಸೂಯೆ- ಸಂಘ಼ರ್ಷದಿಂದಾಗಿ ಆಗುತ್ತಿರುವ ಮೂಲದ ಆಶಯ-ಧ್ಯೇಯೋದ್ದೇಶಗಳಿಗೆ ಬಹು ದೊಡ್ಡ ಪೆಟ್ಟಾಗಿರುವುದನ್ನು ಅದರಲ್ಲೇ ಇಂದಿನವರೆಗೆ ಹೋರಾಟ ಮಾಡಿಕೊಂಡು ಬಂದಿರುವ ಚಿಂತಕರು ವಿಷಾದವನ್ನು ತಳೆಯುತ್ತಿರುವುದನ್ನು ಒಂದೆಡೆ ಕಂಡುಬಂದರೆ, ಮತ್ತೊಂದೆಡೆ ಹೋರಾಟದ ಸಾಂಘಿಕ ಫಲದಲ್ಲಿ ಒಂದೆರಡು ಜಾತಿಗಳು ಮಾತ್ರ ಲಾಭ ಹೊಂದಿವೆ ಎಂಬುದನ್ನು ಮನಗಂಡ ಯುವಪೀಳಿಗೆ ಒಳಮೀಸಲಾತಿ ಮತ್ತು ಈಗಾಗಲೇ ಅದರ ನಷ್ಟದಿಂದ ಅರಿವಿರುವ ಕಾರಣದಿಂದ ಸರ್ಕಾರಕ್ಕೆ ಮನವರಿಕೆ ಮಾಡಿ ಸದಾಶಿವ ಆಯೋಗ ವರದಿಯನ್ನು ತಯಾರಿಸಿ, ಸರ್ಕಾರದ ಮಡಿಲಲ್ಲಿದ್ದರೂ ಅದು ಜೀವಪಡೆಯದೇ ಅನಾಥವಾಗುವುದರ ಜೊತೆಗೆ ದೀರ್ಘದಿಂದ ಶೋಷಿತ ಜನಾಂಗ ಮತ್ತೆ ನೋವಿಗೆ ತಳ್ಳಿರುವುದು ಆಘಾತ ತರಿಸಿದೆ. ಇದರ ಹೋರಾಟಗಳು ನಡೆಯುತ್ತಿದ್ದರೂ ಇದೊಂದು ರಾಜಕೀಯದ ದಾಳವಾಗಿರುವುದಂತೂ ಸತ್ಯವೆಂಬುದನ್ನು ಗುರುಪ್ರಸಾದ್ ಚರ್ಚಿಸಿದ್ದಾರೆ.

ಗುರುಪ್ರಸಾದ್ ಅವರು ಸಮುದಾಯದಲ್ಲಿ ಮೌಖಿಕವಾಗಿರುವ ದಲಿತರ ಸಾಂಸ್ಕೃತಿಕ ಸಂಕಥನಗಳನ್ನು ಕ್ಷೇತ್ರಕಾರ್ಯದ ಮೂಲಕ ಪ್ರಶ್ನಾವಳಿ ರೂಪಿಸಿಕೊಂಡು ವಕ್ತೃ-ಹಾಡುಗಾರರೊಟ್ಟಿಗೆ ಸಂವಾದಿಸಿ, ತಮಗೆ ಬೇಕಾದುದನ್ನು ಪಡೆದು, ಕಳೆದುಹೋಗುವುದನ್ನು ಅಕ್ಷರರೂಪಕ್ಕೆ ತಂದಿರುವುದು ಮೆಚ್ಚತಕ್ಕದ್ದು. ಮಾದಿಗರ ಸೃಷ್ಟಿಮೂಲದ ಸಂಕಥನಗಳನ್ನು ಭಿನ್ನ ಪ್ರದೇಶಗಳಲ್ಲಿ ದೊರೆತಿರುವ ಭಿನ್ನಪಠ್ಯಗಳನ್ನು ಶೋಧಿಸಿರುವ ಗುರುಪ್ರಸಾದ್ ಚೌಡಿಕೆಯಲ್ಲಯ್ಯ ಹೇಳಿದ ಸಂಕಥನ ಕನ್ನಡ ಪುಸ್ತಕ ಪ್ರಾಧಿಕಾರದಿಂದ ದಕ್ಕಲಿಗರು ಕರ್ತೃ ಜಾನಕಲ್ ರಾಜಣ್ಣನವರು ಹೇಳಿದ ಸೃಷ್ಟಿಮೂಲದ ಬಗೆಗೆ ಇರುವ ವ್ಯತ್ಯಾಸವನ್ನು ಗುರುತಿಸುವುದನ್ನು ಕೃತಿಯಲ್ಲಿ ಕಾಣಬಹುದು.

‘ದಲಿತ’ ಪದದ ಒಳಗಿರುವ ಸಿಕ್ಕು, ಅದರೊಳಗೆ ಪಡೆಯುತ್ತಿರುವ ಸೌಲಭ್ಯಗಳು, ನಿಜವಾದ ದಲಿತರು ಯಾರು? ದಲಿತತ್ವ ಎಂದರೆ ಏನು? ಎಂಬುದನ್ನು ತಮ್ಮ ಅಭಿಪ್ರಾಯದೊಂದಿಗೆ ಅಂಬೇಡ್ಕರ್, ಕೆ.ಬಿ. ಸಿದ್ದಯ್ಯ ಅವರ ಆಲೋಚನೆಗಳನ್ನು ಇಲ್ಲಿ ಚರ್ಚಿಸಿದ್ದಾರೆ. ದಲಿತ ಅಂದರೆ ಡಿಪ್ರೆಸ್ಡ್ ಅನ್ನುವ ಇಂಗ್ಲಿಷ್ ಪದವಿದ್ದು, ಅದನ್ನೆ ತುಳಿತಕ್ಕೆ ಒಳಗಾದವರೆಲ್ಲರೂ ಸಮಾನ ದುಃಖಿಗಳೆಂಬುದನ್ನು ಚರ್ಚಿಸಿದ್ದಾರೆ. ದಲಿತರಲ್ಲಿ ಸ್ಪೃಶ್ಯ ಅಸ್ಪೃಶ್ಯರು ನಿರ್ಮಾಣಗೊಂಡು ಅದರ ಲಾಭವನ್ನು ಅಧಿಕವಾಗಿ ಸ್ಪೃಶ್ಯರೇ ಪಡೆಯುವ ಆತಂಕಕಾರಿ ಚಿತ್ರಣವನ್ನು ವಿಶ್ಲೇಶಿಸುವುದಾಗಿದೆ. ಆದರೆ ಇಂದು 101 ಜಾತಿಗಳ ಸಾಂಘಿಕ ಸಂಘಟನೆಯ ನೆಲೆಯೊಳಗೆ ಒಡಕು ಬಂದು ತಮ್ಮ ಅಸ್ಮಿತೆಗಳ ಹುಡುಕಾಟ ಶುರುವಾಗಿದೆ.

ಮೂಲದ ಪುರಾಣ ಸಂಕಥನಗಳು ತಿರುಚುವ ಪ್ರಯತ್ನ ನಿರಂತರವಾಗಿ ನಡೆದಿದೆ. ಸಂಕಥನಗಳಲ್ಲಿ ಭಿನ್ನ ಪಠ್ಯಗಳು ಹೇಗೆ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ವಿರುದ್ಧ ನಿಂತು ಮಾತಾಡುತ್ತವೆಂಬುದನ್ನು ಗುರುಪ್ರಸಾದ್ ಗುರುತಿಸಿದ್ದಾರೆ. ನೆಲಮೂಲದವರು ಯರ‍್ಯಾರೆಂಬುದು ಜಿಜ್ಞಾಸೆ ವ್ಯಕ್ತವಾಗುತ್ತಿರುವ ಇದೇ ಸಂದರ್ಭದಲ್ಲಿ ಆದಿಜಾಂಬವರು, ಯಾದವರು ನೆಲ ಸಂಸ್ಕೃತಿಯನ್ನು ಸಾರುವ ವಕ್ತಾರರೆನಿಸಿದ್ದಾರೆಂಬುದನ್ನು ಸಾಬೀತು ಪಡಿಸಿದ್ದಾರೆ. ಜೊತೆಗೆ ಕುರುಬರು, ಕುಂಚಿಟಿಗರು, ಮ್ಯಾಸಬೇಡರು ಕುಲ(ಪಂಗಡ)ಗಳಲ್ಲಿ ಹಲವು ಸಾಮ್ಯತೆಗಳಿವೆಯೆಂದರೆ ಈ ಸಮುದಾಯಗಳೆಲ್ಲವೂ ಈ ನೆಲಮೂಲದವರು, ಒಂದೇ ಸಂಸ್ಕೃತಿಯ ವಕ್ತಾರರೆಂಬುದನ್ನು ಅರಿಯಬಹುದು.

ಕೃತಿಯ ಎರಡನೆಯ ಹಂತದಲ್ಲಿ ಸಂಶೋಧಕರು ಆರು ದಲಿತರೊಟ್ಟಿಗೆ ಸಂವಾದಿಸುತ್ತಾರೆ. ಇವರೆಲ್ಲರೂ ಭಿನ್ನ ನೆಲೆಯಲ್ಲಿ ಬದುಕುತ್ತಿರುವವರು, ಆಲೋಚಿಸುತ್ತಿರುವವರು. ಲೇಖಕರ ಮೂಲ ಆಶಯವಿರುವುದು ಗ್ರಾಮ್ಯದ ಸ್ಥಳೀಯ ಹಂತದಿಂದ ರಾಜ್ಯಮಟ್ಟದ ಹೋರಾಟಗಾರರಲ್ಲಿ, ಚಿಂತಕರಲ್ಲಿ ದಲಿತತ್ವದ ನಿಲುವು ಹೇಗಿದೆ, ಅದರಲ್ಲೂ ಮಾದಿಗರ ಬದುಕಿಗೆ ಹೊಸ ಆಯಾಮವನ್ನು ಕೊಡುವ ದಾರಿ ಯಾವುದೆಂಬುದನ್ನು ಚರ್ಚಿಸುವುದು ಇಲ್ಲಿ ಮುಖ್ಯವಾಗಿದೆ. ಅವರ ಎಲ್ಲಾ ನಿಲುವುಗಳನ್ನು ಒಂದೆಡೆ ಸಂಗ್ರಹಿಸುವುದು ಅಷ್ಟೇ ಮುಖ್ಯವಾಗಿದೆ.

‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿಯು ಮೇಲ್ನೋಟದಲ್ಲಿ ಹಲವು ಹಂತಗಳಲ್ಲಿ ರೂಪುಗೊಂಡಿದೆ. ಅವಗಳನ್ನು ಹೀಗೆ ಪಟ್ಟಿ ಮಾಡಬಹುದು.

1. ಪುರಾಣದ ಕಥನಗಳಲ್ಲಿ ಮಾದಿಗರ ಪ್ರಾಮುಖ್ಯತೆ ಹಾಗೂ ಪರಂಪರೆ ಹೇಗೆ ನಯವಾಗಿ ಅದನ್ನು ವಂಚಿಸಿದೆಂಬುದನ್ನು ಗ್ರಹಿಸುವುದು.

2. ಕಂಚಿ ಫರ್ಮಾನ್‌ನಲ್ಲಿರುವ ಎಡಗೈ ಜನಾಂಗಕ್ಕಿರುವ ಸಾಂಸ್ಕೃತಿಕ ಬಿರುದಾವಳಿಗಳು, ಅಲ್ಲಿಯೂ

ಬಲಗೈಯೊಂದಿಗೆ ಸಂಘರ್ಷವಾದರೂ ಪೂರ್ವದ ಶ್ರೇಷ್ಠತೆಯಿಂದ ಮತ್ತೆ ಪಾರಮ್ಯ ಮೆರೆಯುವಿಕೆ.

3. ದಲಿತರ ಪ್ರಸ್ತ್ತುತ ಬದುಕಿನ ಆಯಾಮಗಳು, ‘ದಲಿತ’ ಪದದ ಮರುಚಿಂತನೆಯಲ್ಲಿ ಒಳಮೀಸಲಾತಿ

ಕೂಗು ಹಾಗೂ ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಒತ್ತಾಯ.

4. ಸಾಹಿತ್ಯದ ಚರಿತ್ರೆಯಲ್ಲಿ ಮಾದಿಗರನ್ನು ಗೌಣಗೊಳಿಸಿ ಮಾಡಿದ ಅನ್ಯಾಯದ ವಿರುದ್ಧ ದನಿಯೆತ್ತುವಿಕೆ.

5. ದಲಿತರ ಭವಿಷ್ಯ ಹೇಗಿರಬೇಕು ಎಂಬ ಪರ್ಯಾಯ ದಲಿತ ಚಿಂತನೆಯಿದೆ.

6. ದಲಿತತನದ ಒಳಗಿರುವ ಭಿನ್ನ ಆಯಾಮಗಳು, ಜಾತಿಯೆಂಬ ಪದದ ಐಡೆಂಟಿಟಿಯ ಒತ್ತಾಸೆಗಳು,

ಅಸ್ಮಿತೆಯ ಹುಡುಕಾಟಗಳು.

ಗುರುಪ್ರಸಾದ್ ಅವರು ದಲಿತರ ಬದುಕಿನ ಸಮಗ್ರ ಚಿತ್ರಣದ ಬಗೆಗೆ ಆಲೋಚಿಸುತ್ತಲೇ, ಸಮಕಾಲೀನ ಬಿಕ್ಕಟ್ಟುಗಳ ಕಡೆಗೂ ಹೊರಳಿಕೊಳ್ಳುವುದರಿಂದ ಈ ಕೃತಿಯು ಎಲ್ಲಾ ಕಾಲಕ್ಕೂ ಮುಖಾಮುಖಿಯಾಗುವ ಸಾಮರ್ಥ್ಯವೊಂದಿದೆ. ಕೃತಿಯ ಸತ್ವ ಇರುವುದು ಪರಂಪರೆಯಲ್ಲಿ ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಮೌಖಿಕ ಕಥನಗಳ ಸಂಗ್ರಹ ಇದೆಯಲ್ಲ ಅದು ಇದುವರೆವಿಗೂ ಯಾರಿಂದಲೂ ಆಗದ್ದನ್ನು ಸಾಧಿಸಿದಂತಿದೆ. ಸಮುದಾಯದಲ್ಲಿ ಸಮೃದ್ಧವಾಗಿರುವ ಮೌಖಿಕ ಕಥನಗಳನ್ನು ಈಗ ಹೇಳುವ ಕೊಂಡಿಗಳು ಇಲ್ಲವಾಗುತ್ತಿರುವ ಈ ಸಂದರ್ಭದಲ್ಲಿ ದಲಿತರಿಗೆ, ಅದರಲ್ಲೂ ‘ಮಾದಿಗ’ ಜನಾಂಗಕ್ಕೆ ಕೃತಿ ಬೈಬಲ್ ಎಂದೇ ಹೇಳಬಹುದು.

-ಡಾ.ಕೆ.ವಿ.ಮುದ್ದವೀರಪ್ಪ, ತುಮಕೂರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...