ಮತ್ತೊಂದು ಜಾತಿ ದೌರ್ಜನ್ಯದ ಅಮಾನವೀಯ ಘಟನೆ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ಮಹಾರಾಜಪುರ ಬಳಿಯ ಉರ್ದ್ಮೌ ಗ್ರಾಮದಲ್ಲಿ ವರದಿಯಾಗಿದೆ. ಸಾವನಪ್ಪಿದ ದಲಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಸವರ್ಣೀಯರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಶವ ಇಟ್ಟುಕೊಂಡು ದಲಿತರು ಸುಮಾರು 5 ಗಂಟೆಗಳ ಕಾದಿರುವ ಅಮಾನುಷ ಘಟನೆ ಜರುಗಿದೆ.
ಗ್ರಾಮದಲ್ಲಿ ಸ್ಮಶಾನಕ್ಕಾಗಿ ಕಾಯ್ದಿರಿಸಿದ ಸರ್ಕಾರಿ ಜಮೀನಿನಲ್ಲಿ ಶವ ಸಂಸ್ಕಾರ ಮಾಡಲು ದಲಿತರು ಹೊರಟಾಗ ಸವರ್ಣೀಯರು ತಡೆದಿದ್ದಾರೆ. ಈ ಕುರಿತು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ ದಲಿತರು ರಸ್ತೆಯಲ್ಲಿಯೇ ಶವ ಇಟ್ಟುಕೊಂಡು ಕಾದಿದ್ದಾರೆ. ಕೊನೆಗೆ ಸ್ಥಳೀಯ ಆಡಳಿತ ಮಧ್ಯಪ್ರವೇಶಿಸಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಸಿದ ನಂತರ ಮೃತದೇಹವನ್ನು ದಲಿತ ಕುಟುಂಬದವರು ಅಂತ್ಯಸಂಸ್ಕಾರ ಮಾಡಿದ್ದಾರೆ.
ಹಿರಿಯ ದಲಿತ ವ್ಯಕ್ತಿ ಸಾವನಪ್ಪಿದಾಗ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ನಂತರ ದಲಿತರು ದಾರಿಯಲ್ಲಿಯೇ ಶವ ಇಟ್ಟು ಕಾಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ಸ್ಥಳೀಯ ಕಾಂಗ್ರೆಸ್ ಶಾಸಕರ ವಿರುದ್ಧವೂ ಅಸಮಾಧಾನ ಭುಗಿಲೆದ್ದಿದೆ.
#Casteism A yet another shocking case of caste discrimination has been reported from Chhatarpur district of Madhya Pradesh. Some goons from the upper caste Hindu community stopped a Dalit family from cremating the body in the village ground…. pic.twitter.com/9OQ2XDPkvv
— The Dalit Voice (@ambedkariteIND) December 23, 2022
ಗ್ರಾಮದ ಸ್ಮಶಾನದಲ್ಲಿ ದಲಿತರು ಅಂತ್ಯಕ್ರಿಯೆ ನಡೆಸಲು ದಾರಿ ಬಿಡುವುದಿಲ್ಲ ಎಂದು ಸವರ್ಣೀಯರು ಅಡ್ಡಿಪಡಿಸಿದ್ದರು. ಆದರೆ ಆ ದಾರಿಯ ವಿಷಯವು ಈ ಹಿಂದೆಯೆ ನ್ಯಾಯಾಲಯದಲ್ಲಿ ಬಗೆಹರಿದಿದೆ. ವಿಷಯ ತಿಳಿದ ನಂತರ ಸ್ಥಳೀಯ ಆಡಳಿತ ಸ್ಥಳಕ್ಕೆ ಧಾವಿಸಿ ಪೊಲೀಸ್ ಬಲದ ನೆರವಿನೊಂದಿಗೆ ಅಂತ್ಯಕ್ರಿಯೆ ಮಾಡಲು ಸಾಧ್ಯವಾಗಿದೆ ಮತ್ತು ಆ ದಲಿತ ಕುಟುಂಬಕ್ಕೆ ರಕ್ಷಣೆ ನೀಡಿದ್ದೇವೆ ಎಂದು ಸ್ಥಳೀಯ ವಿಜಯ್ ಸೆನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಆಫ್ಘನ್ ಮಹಿಳೆಯರಿಗೆ ವಿಶ್ವವಿದ್ಯಾಲಯ ಶಿಕ್ಷಣ ನಿಷೇಧಿಸಿದ ತಾಲಿಬಾನ್: ಭುಗಿಲೆದ್ದ ಪ್ರತಿಭಟನೆಗಳು
ಭಾರತದಲ್ಲಿ ಈ ಜಾತಿ ಕುಲಗಳು ಕಳೆದುಹೋಗುವವರೆಗೂ ಇಂತಹ ಪರಿಸ್ಥಿತಿಗಳು ಮರುಕಳಿಸುತ್ತಲೇ ಇರುತ್ತವೆ, ಯಾರಾದರೂ ಸರಿಯೇ ಈ ಜಾತಿಗಳ ನಿರ್ಮೂಲನಕ್ಕೆ ಮುಂದೆ ಬನ್ನಿ, ಈ ಜಾತಿಗಳ ನಿರ್ಮೂಲವಾದ ದಿನ ನಮ್ಮ ಭಾರತಕ್ಕಿಂತಲೂ ಶಕ್ತಿಯುತವಾದ ದೇಶ ಯಾವುದು ಇರುವುದಿಲ್ಲ, ಆದರೆ ರಾಜಕಾರಣಿಗಳಿಗೆ ಈ ಜಾತಿ ಭೇದ ಬಿಟ್ಟರೆ ಬೇರೆ ಮಾರ್ಗವೇ ಇಲ್ಲ 🙏