Homeಮುಖಪುಟಮರಣೋತ್ತರ ಪುಲಿಟ್ಝರ್‌ ಪ್ರಶಸ್ತಿಗೆ ದಾನಿಶ್‌ ಸಿದ್ದಿಕಿ ಭಾಜನ

ಮರಣೋತ್ತರ ಪುಲಿಟ್ಝರ್‌ ಪ್ರಶಸ್ತಿಗೆ ದಾನಿಶ್‌ ಸಿದ್ದಿಕಿ ಭಾಜನ

- Advertisement -
- Advertisement -

ಪತ್ರಿಕೋದ್ಯಮ, ಪುಸ್ತಕ, ನಾಟಕ ಮತ್ತು ಸಂಗೀತಕ್ಕೆ ಸಂಬಂಧಿಸಿದಂತೆ 2022ರ ಪುಲಿಟ್ಝರ್‌‌ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಖ್ಯಾತ ಫೋಟೋ ಜರ್ನಲಿಸ್ಟ್‌ ದಾನಿಶ್‌ ಸಿದ್ದಿಕಿ ಅವರಿಗೆ ಮರಣೋತ್ತರ ಪುಲಿಟ್ಝರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಭಾರತದ ಪರಿಸ್ಥಿತಿಯನ್ನು ತೆರೆದಿಟ್ಟ ಫೋಟೋ ಜರ್ನಲಿಸಂಗಾಗಿ ಭಾರತೀಯರಾದ ಅದ್ನಾನ್ ಅಬಿದಿ, ಸನ್ನಾ ಇರ್ಷಾದ್ ಮಟ್ಟೂ, ಅಮಿತ್ ದೇವ್ ಮತ್ತು ತಾಲಿಬಾನ್‌ನ ಸಂಘರ್ಷದ ವೇಳೆ ಕೊಲ್ಲಲ್ಪಟ್ಟ ರಾಯಿಟರ್ಸ್ ಫೋಟೋ ಜರ್ನಲಿಸ್ಟ್‌ ದಾನಿಶ್ ಸಿದ್ದಿಕಿ ಅವರಿಗೆ ಪುಲಿಡ್ಜರ್‌ ಪ್ರಶಸ್ತಿ ನೀಡಲಾಗುತ್ತಿದೆ.

ಅಬಿದಿ ಅವರಿಗೆ ಮೂರನೇ ಬಾರಿಗೆ ಪುಲಿಡ್ಝರ್‌ ಸಂದಿದ್ದರೆ, ಈ ಹಿಂದೆ 2018ರಲ್ಲಿ ಸಿದ್ದಿಕಿ ಕೂಡ ಪ್ರಶಸ್ತಿ ಪಡೆದಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಉಕ್ರೇನ್‌ನ ಪತ್ರಕರ್ತರನ್ನು 2022ರ ಪುಲಿಟ್ಜರ್‌‌ ಪ್ರಶಸ್ತಿಯಲ್ಲಿ ವಿಶೇಷವಾಗಿ ಗುರುತಿಸಲಾಗಿದೆ. ಜನವರಿ 6ರಂದು ಅಮೆರಿಕ ಸಂಸತ್‌ ಮೇಲೆ ಆದ ದಾಳಿ, ಅಫಫಾನಿಸ್ತಾನದ ಬಿಕ್ಕಟ್ಟು ಮತ್ತು ಫ್ಲೋರಿಡಾದಲ್ಲಿ ಸರ್ಫ್‌ಸೈಡ್ ಕಾಂಡೋಮಿನಿಯಂ ಕುಸಿತದ ಕುರಿತ ವರದಿಗಳನ್ನು ತೀರ್ಪುಗಾರರು ಗುರುತಿಸಿದ್ದಾರೆ.

ಪತ್ರಿಕೋದ್ಯಮದಲ್ಲಿ ವಿಭಾಗದಲ್ಲಿ ಪ್ರಶಸ್ತಿ ಪಡೆದವರು

ಸಾರ್ವಜನಿಕ ಸೇವೆ: ಜನವರಿ 6, 2021ರಂದು ವಾಷಿಂಗ್ಟನ್ ಮೇಲಿನ ದಾಳಿಯ ಕುರಿತ ವರದಿಗಾಗಿ ವಾಷಿಂಗ್ಟನ್ ಪೋಸ್ಟ್‌ಗೆ ಪ್ರಶಸ್ತಿ.

ಬ್ರೇಕಿಂಗ್ ನ್ಯೂಸ್ ವರದಿ: ಫ್ಲೋರಿಡಾದಲ್ಲಿ ಸೀಸೈಡ್ ಅಪಾರ್ಟ್‌ಮೆಂಟ್ ಟವರ್‌ಗಳ ಕುಸಿತದ ವರದಿಗಾಗಿ ಮಿಯಾಮಿ ಹೆರಾಲ್ಡ್‌ನ ಸಿಬ್ಬಂದಿಗೆ ಪ್ರಶಸ್ತಿ.

ತನಿಖಾ ವರದಿ: ಟ್ಯಾಂಪಾ ಬೇ ಟೈಮ್ಸ್‌ನ ಕೋರಿ ಜಿ. ಜಾನ್ಸನ್, ರೆಬೆಕಾ ವೂಲಿಂಗ್‌ಟನ್ ಮತ್ತು ಎಲಿ ಮುರ್ರೆ ಅವರು ಫ್ಲೋರಿಡಾದ ಏಕೈಕ ಬ್ಯಾಟರಿ ಮರುಬಳಕೆ ಘಟಕದೊಳಗಿನ ವಿಷಕಾರಿ ಅಪಾಯಗಳನ್ನು ಬಹಿರಂಗಪಡಿಸಿದರು. ಈ ವರದಿಯು ಕಾರ್ಮಿಕರು ಮತ್ತು ಸುತ್ತಲಿನ ನಿವಾಸಿಗಳಿಗೆ ರಕ್ಷಣೆ ನೀಡಲು ಒತ್ತಾಯಿಸಿತು.

ವಿವರಣಾತ್ಮಕ ವರದಿ: ವೆಬ್ ಸ್ಪೇಸ್ ಟೆಲಿಸ್ಕೋಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ವರದಿ ಮಾಡಿದ್ದಕ್ಕಾಗಿ ಕ್ವಾಂಟಾ ಮ್ಯಾಗಜೀನ್‌ನ ಸಿಬ್ಬಂದಿಗೆ ಪ್ರಶಸ್ತಿ ನೀಡಲಾಗಿದೆ. ನಟಾಲಿ ವೋಲ್ಚೋವರ್ ಅವರನ್ನು ವಿಶೇಷವಾಗಿ ಗುರುತಿಸಲಾಗಿದೆ.

ಸ್ಥಳೀಯ ವರದಿ: ಬೆಟರ್ ಗವರ್ನಮೆಂಟ್ ಅಸೋಸಿಯೇಷನ್‌ನ ಮ್ಯಾಡಿಸನ್ ಹಾಪ್ಕಿನ್ಸ್ ಮತ್ತು ಚಿಕಾಗೋ ಟ್ರಿಬ್ಯೂನ್‌ನ ಸಿಸಿಲಿಯಾ ರೆಯೆಸ್ ಅವರು ಅಗ್ನಿಶಾಮಕ ಸುರಕ್ಷತೆಯ ಕುರಿತು ವರದಿ ಮಾಡಿದ್ದರು.

ರಾಷ್ಟ್ರೀಯ ವರದಿ: ಟ್ರಾಫಿಕ್ ಸ್ಟಾಪ್‌ಗಳ ಗೊಂದಲದ ಮಾದರಿಯ ಕುರಿತ ವರದಿಗಾಗಿ ದಿ ನ್ಯೂಯಾರ್ಕ್ ಟೈಮ್ಸ್‌ನ ಸಿಬ್ಬಂದಿಗೆ ಪ್ರಶಸ್ತಿ.

ಇದನ್ನೂ ಓದಿರಿ: ತೀವ್ರವಾದ ಪ್ರತಿಭಟನೆ: ಶ್ರೀಲಂಕಾ ಪ್ರಧಾನಿ ರಾಜೀನಾಮೆ

ಅಂತರಾಷ್ಟ್ರೀಯ ವರದಿ: ಇರಾಕ್, ಸಿರಿಯಾ ಮತ್ತು ಅಫ್ಘಾನಿಸ್ತಾನದಲ್ಲಿ ಅಮೇರಿಕನ್ ಮಿಲಿಟರಿ ತೊಡಗಿಸಿಕೊಂಡಿರುವ ವೈಮಾನಿಕ ದಾಳಿಗಳ ಕುರಿತ ವರದಿಗಾಗಿ ನ್ಯೂಯಾರ್ಕ್ ಟೈಮ್ಸ್‌ ಸಿಬ್ಬಂದಿಗೆ ಪ್ರಶಸ್ತಿ.

ಫೀಚರ್‌ ಬರವಣಿಗೆ: ಕುಟುಂಬಗಳ ನಷ್ಟದ ಲೆಕ್ಕಾಚಾರದ ಚಿತ್ರಣಕ್ಕಾಗಿ ದಿ ಅಟ್ಲಾಂಟಿಕ್‌ನ ಜೆನ್ನಿಫರ್ ಸೀನಿಯರ್‌ಗೆ ಪ್ರಶಸ್ತಿ.

ಕಾಮೆಂಟರಿ ವಿಭಾಗದಲ್ಲಿ ಕಾನ್ಸಾಸ್ ಸಿಟಿ ಸ್ಟಾರ್‌ನ ಮೆಲಿಂಡಾ ಹೆನ್ನೆಬರ್ಗರ್, ವಿಮರ್ಶೆಯ ವಿಭಾಗದಲ್ಲಿ ನ್ಯೂಯಾರ್ಕ್ ಟೈಮ್ಸ್‌ನ ಸಲಾಮಿಶಾ ಟಿಲೆಟ್, ಸಂಪಾದಕೀಯ ಬರವಣಿಗೆ ವಿಭಾಗದಲ್ಲಿ ಹೂಸ್ಟನ್ ಕ್ರಾನಿಕಲ್‌ನ ಲಿಸಾ ಫಾಲ್ಕೆನ್‌ಬರ್ಗ್, ಮೈಕೆಲ್ ಲಿಂಡೆನ್‌ಬರ್ಗರ್, ಜೋ ಹೋಲಿ ಮತ್ತು ಲೂಯಿಸ್ ಕರಾಸ್ಕೊಗೆ ನೀಡಲಾಗುತ್ತಿದೆ. ಜೊತೆಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಘೋಷಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...