Homeಮುಖಪುಟಆತ್ಮೀಯ ಧರ್ಮೇಂದ್ರ ಪ್ರಧಾನ್ ಅವರೆ, ಐಐಟಿ, ಐಐಎಂಗಳನ್ನು ಒಂದು ಕ್ಷಣ ಮರೆತುಬಿಡಿ, ನಿಜವಾದ ಬಿಕ್ಕಟ್ಟು ಶಾಲಾ...

ಆತ್ಮೀಯ ಧರ್ಮೇಂದ್ರ ಪ್ರಧಾನ್ ಅವರೆ, ಐಐಟಿ, ಐಐಎಂಗಳನ್ನು ಒಂದು ಕ್ಷಣ ಮರೆತುಬಿಡಿ, ನಿಜವಾದ ಬಿಕ್ಕಟ್ಟು ಶಾಲಾ ಶಿಕ್ಷಣದಲ್ಲಿದೆ……

- Advertisement -
- Advertisement -

ನಮಗೆ ಹೊಸ  ಕೇಂದ್ರ ಶಿಕ್ಷಣ ಮಂತ್ರಿ ಬಂದಿದ್ದಾರೆ. ಅದೃಷ್ಟವಶಾತ್,  ಅವರು ಈಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಲ್ಲ! ಇನ್ನೂ ಒಳ್ಳೆಯದೆಂದರೆ, ಇನ್ನು ರಮೇಶ್ ಪೋಖ್ರಿಯಾಲ್ ಶಿಕ್ಷಣ ಸಚಿವರಾಗಿ ಮುಂದುವರೆಯುವುದಿಲ್ಲ! ಶಿಕ್ಷಣಕ್ಕೆ ಸಂಬಂಧಿಸಿದಂತೆ ನೈಜ ಸಂಗತಿಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಇನ್ನು ನಾವು ನಿರೀಕ್ಷೆ ಮಾಡಬಹುದೇ?

ಆರೋಗ್ಯ ಮತ್ತು ಆರ್ಥಿಕತೆಯ ನಂತರ, ಸಾಂಕ್ರಾಮಿಕದಿಂದ ತೀವ್ರ ಸಂಕಷ್ಟಕ್ಕೆ ಈಡಾಗಿರುವುದು ಶಿಕ್ಷಣ. ದುಃಖಕರವೆಂದರೆ, ಶೈಕ್ಷಣಿಕ ಬಿಕ್ಕಟ್ಟಿನಲ್ಲಿ ಗೋಚರಿಸುವ ಆಯಾಮಗಳು ಮಾತ್ರ ರಾಜಕೀಯ ಗಮನ ಸೆಳೆಯುತ್ತವೆ. ಇವುಗಳಲ್ಲಿ ಕೆಲವು ಅಂಶಗಳತ್ತ ಹೊಸ ಶಿಕ್ಷಣ ಸಚಿವರು ಗಮನ ಹರಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ಮೊದಲ ದಿನವೇ ಅವರು ಕೆಲವು ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು ಮತ್ತು ಉಪಕುಲಪತಿಗಳ ಪೂರ್ವ ನಿಯೋಜಿತ ಸಮ್ಮೇಳನದಲ್ಲಿ ಭಾಗವಹಿಸಿದರು. ಜೆಇಇ ಮತ್ತು ನೀಟ್ ಕ್ಯಾಲೆಂಡರ್ ಅವರ ಗಮನ ಸೆಳೆದಿದೆ. ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ಅವರು ಕಡ್ಡಾಯವಾಗಿ ಸದ್ದು ಮಾಡಿದ್ದಾರೆ.

ಆದರೆ ಶಿಕ್ಷಣ ಕ್ಷೇತ್ರದಲ್ಲಿ ನಿಜವಾದ ಬಿಕ್ಕಟ್ಟು ಇರುವುದು ಇಲ್ಲಲ್ಲ. ಇದು ಕಳೆದ ಒಂದು ವರ್ಷದಿಂದ ಶಾಲಾ ಮಕ್ಕಳು ಅನುಭವಿಸಿದ ಅಗಾಧವಾದ, ಆದರೆ ಅದೃಶ್ಯವಾದ ಶೈಕ್ಷಣಿಕ ನಷ್ಟದಲ್ಲಿದೆ. ಇಲ್ಲಿಯವರೆಗೆ ಸಚಿವರು ಅಥವಾ ಸಚಿವಾಲಯ ಕೂಡ ಅದರ ಬಗ್ಗೆ ಮಾತನಾಡಿಲ್ಲ. ಒಂದು ದೃಷ್ಟಿಯಲ್ಲಿ ಸಮಸ್ಯೆ ಹೊಸದಲ್ಲ. ಕಪಿಲ್ ಸಿಬಲ್ ಅವರ ಕಾಲದಿಂದಲೂ ಕೇಂದ್ರ ಶಿಕ್ಷಣ ಸಚಿವರು ‘ಉನ್ನತ ಶಿಕ್ಷಣ’ ಮಂತ್ರಿಗಳಂತೆ ವರ್ತಿಸುತ್ತಿದ್ದಾರೆ. ಐಐಟಿಗಳು, ಐಐಎಂಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು, ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು ಮತ್ತು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಮ್ಯಾನೇಜ್‍ಮೆಂಟ್‍ ಅಧ್ಯಯನ ಸಂಸ್ಥೆಗಳ ಪ್ರವೇಶ ಪರೀಕ್ಷೆಗಳ ಗೀಳು ಈಗ ಒಂದು ದಶಕಕ್ಕೂ ಹೆಚ್ಚು ಕಾಲ ಸಚಿವಾಲಯದ ಪ್ರಾಧಾನ್ಯವಾಗಿದೆ.ಇದರೊಂದಿಗೆ ಜಾತ್ಯತೀತತೆ ಅಥವಾ ಭಾರತೀಯಕರಣದ ಬಗ್ಗೆ ಸಾಂದರ್ಭಿಕ ಸೈದ್ಧಾಂತಿಕ ಜಟಾಪಟಿಗಳು ನಡೆಯುತ್ತ ಬಂದಿವೆ. ಈ ಬಾರಿ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ನೀತಿ ನಿರೂಪಣೆಯ ಅಂಚಿನಲ್ಲಿರುವ ಶಾಲಾ ಶಿಕ್ಷಣವು ಸಾರ್ವಜನಿಕ ಚರ್ಚೆಯಿಂದ ಮತ್ತಷ್ಟು ದೂರಕ್ಕೆ ತಳ್ಳಲ್ಪಟ್ಟಿದೆ. ಸಾಂಕ್ರಾಮಿಕವು “ಶಿಕ್ಷಣಿಕ ಹತ್ಯೆಯ” ಪ್ರಕ್ರಿಯೆಯನ್ನು ಹೆಚ್ಚು ಕಾಣುವಂತೆ ಮಾಡಿದೆ, ಆದರೆ ಈ ಮೊದಲು ನಿಧಾನವಾಗಿದ್ದರೂ ಶೈಕ್ಷಣಿಕ ಅವಕಾಶಗಳ ಹತ್ಯೆ, ಸ್ವಲ್ಪ ಸಮಯದಿಂದ ನಡೆಯುತ್ತಿದೆ. ಇದು ಹೊಸ ಸಚಿವರ ಗಮನವನ್ನು ಸೆಳೆಯಬೇಕು.

ಹೊಸ ಸಚಿವರಿಗೆ ಓದುವುದಕ್ಕೆ ಶಿಫಾರಸು

ಹೊಸ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ಓದುವ ಮೂಲಕ ಪ್ರಾರಂಭಿಸಬಹುದು. ಹರಿಯಾಣದ ವಿದ್ಯಮಾನದ ಪ್ರಕಾರ, ಈ ವರ್ಷ ಖಾಸಗಿ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆತಂಕಕಾರಿ ಕುಸಿತವನ್ನು ತೋರಿಸುತ್ತಿದೆ. ಈ ವರ್ಷ 12.5 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ದಾಖಲಾಗಲಿಲ್ಲ, ಇದು ಕುಸಿತ ಶೇಕಡಾ 40ಕ್ಕಿಂತಲೂ ಹೆಚ್ಚಿದೆ. ಈ ಸಂಖ್ಯೆ ಕಳೆದ ವರ್ಷ 29.8 ಲಕ್ಷದಿಂದ ಈ ವರ್ಷ 17.3 ಲಕ್ಷಕ್ಕೆ ಇಳಿದಿದೆ. ಈ ಎಲ್ಲ ಅಥವಾ ಹೆಚ್ಚಿನ ವಿದ್ಯಾರ್ಥಿಗಳು ಶಾಲಾ ಶಿಕ್ಷಣದಿಂದ ಪೂರ್ತಿಯಾಗಿ ಹೊರಗುಳಿದಿದ್ದಾರೆ ಎಂದು ನಾವು ಭಾವಿಸಬಾರದು. ಎಲ್ಲಾ ಸಂಭವನೀಯತೆಗಳಲ್ಲಿ, ಖಾಸಗಿ ಶಾಲೆಗಳ ಹೆಚ್ಚಿನ ಶುಲ್ಕವನ್ನು ತಪ್ಪಿಸಲು ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಆದರೆ ಈ ಸಂಖ್ಯೆಯ ಒಂದು ಸಣ್ಣ ಭಾಗ, ಹೆಚ್ಚಾಗಿ ಹುಡುಗಿಯರು ಯಾವುದೇ ಶಾಲೆಗೆ ಹಿಂತಿರುಗುವುದಿಲ್ಲ ಎಂದು ಭಾವಿಸುವುದು ಸಮಂಜಸವಾಗಿದೆ. ಕುಟುಂಬ ಆದಾಯದಲ್ಲಿ ಆಗಿರುವ ತೀವ್ರ ಕುಸಿತದಿಂದ, ಸರ್ಕಾರಿ ಶಾಲೆಗೆ ಸೇರಿದ ಅನೇಕ ಹುಡುಗರನ್ನು ಕಾರ್ಮಿಕ ವಲಯಕ್ಕೆ ಪ್ರವೇಶಿಸುವಂತೆ ಮತ್ತು ಅನೇಕ ಹುಡುಗಿಯರು ಮನೆಗೆಲಸಕ್ಕೆ ಕಳಿಸುವಂತೆ ಮಾಡುವುದು ನಿಜ. ಅನೇಕ ಇತರ ಮಾಧ್ಯಮ ವರದಿಗಳು ಈ ವಿದ್ಯಮಾನವನ್ನು ದೃಢಿಪಡಿಸುತ್ತವೆ.

ಅವರಿಗೆ ಹೆಚ್ಚಿನ ಸಮಯವಿದ್ದರೆ, ಸಚಿವರು 2020ರ ವಾರ್ಷಿಕ ಶಿಕ್ಷಣ ಸ್ಥಿತಿ ವರದಿಯನ್ನು ಓದಬಹುದು. ಗ್ರಾಮೀಣ ಭಾರತದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟದ ಕುರಿತಾದ ಈ ವರದಿಯು 2020ರಲ್ಲಿ ಕೋವಿಡ್‌ ನಿಂದಾಗಿರುವ ಸಮಸ್ಯೆ ಮತ್ತು ಮೊದಲ ಕೋವಿಡ್ ಅಲೆಯ ಲಾಕ್ಡೌನ್ ನಿಂದ ಶೈಕ್ಷಣಿಕ ನಷ್ಟದ ವ್ಯಾಪ್ತಿಯನ್ನು ದಾಖಲಿಸಿದೆ. ಆ ವರ್ಷದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಹೊಂದಿದ್ದರೂ, ಅವರ ಶಿಕ್ಷಣಕ್ಕೆ ಸಿಕ್ಕ ಬೆಂಬಲ ಅತೀವ ಕಡಿಮೆಯಿತ್ತು ಎಂದು ಅದು ದಾಖಲಿಸುತ್ತದೆ. ಗ್ರಾಮೀಣ ಭಾರತದಲ್ಲಿ ಸ್ಮಾರ್ಟ್‍ಫೋನ್‌ಗಳು ತಮ್ಮ ವ್ಯಾಪ್ತಿಯನ್ನು ಹರಡಿಕೊಂಡಿವೆಯಾದರೂ, ಗ್ರಾಮೀಣ ಭಾರತದಲ್ಲಿ ಶಾಲೆಗೆ ಹೋಗುವ ಮಕ್ಕಳ ಶೇಕಡಾ 42ರಷ್ಟು ಕುಟುಂಬಗಳು ಇನ್ನೂ ಸ್ಮಾರ್ಟ್‍ಫೋನ್‍ ಹೊಂದಿಲ್ಲ. ಈ ಪ್ರಮಾಣವು ಬಡ ಕುಟುಂಬಗಳಿಗೆ ಶೇಕಡಾ 55 ರಷ್ಟಿತ್ತು. ಅವರು ಎಲೆಕ್ಟ್ರಾನಿಕ್ ಸಾಧನವನ್ನು ಹೊಂದಿದ್ದಾರೆಂದು ಊಹಿಸಿದರೆ, ಓದುವ ಸಾಮಗ್ರಿಗಳ ಲಭ್ಯತೆಯ ಸಮಸ್ಯೆ ಕೂಡ ಇರುತ್ತದೆ. ಕೇವಲ 35 ಪ್ರತಿಶತದಷ್ಟು ವಿದ್ಯಾರ್ಥಿಗಳು ತಮ್ಮ ಶಾಲೆಗಳಿಂದ ಯಾವುದೇ ಓದುವ ಅಥವಾ ಬೆಂಬಲ ಸಾಮಗ್ರಿಗಳನ್ನು ಪಡೆದರು. ಖಾಸಗಿ ಶಾಲೆಗಳಿಗೆ ಈ ಪ್ರಮಾಣವು ಶೇಕಡಾ 40ರಷ್ಟಿತ್ತು. ಹೆಚ್ಚುವರಿ ವಸ್ತುಗಳನ್ನು ಬಹುತೇಕ ಸಂಪೂರ್ಣವಾಗಿ ವಾಟ್ಸಾಪ್ ಮೂಲಕ ತಲುಪಿಸಲಾಯಿತು. ಆದ್ದರಿಂದ, ‘ವಾಟ್ಸಾಪ್ ವಿಶ್ವವಿದ್ಯಾಲಯ’ದಿಂದ, ನಾವು ಈಗ ‘ವಾಟ್ಸಾಪ್ ಶಾಲೆಗಳಿಗೆ’ ತೆರಳಿದ್ದೇವೆ.

ಆದ್ಯತೆಯ ವಿಷಯಗಳು ಯಾವುವು?

ಅನೇಕ ಇತರ ವರದಿಗಳು ಶಾಲಾ ಶಿಕ್ಷಣದ ಮೇಲೆ ಸಾಂಕ್ರಾಮಿಕ ರೋಗದ ಇತರ ವ್ಯಾಪಕ ಪರಿಣಾಮಗಳನ್ನು ದೃಢಿಪಡಿಸಿವೆ: ಶಾಲೆಗಳಿಂದ ಡ್ರಾಪ್‍ಔಟ್‍ ಸಂಖ್ಯೆ ಹೆಚ್ಚಿರುವುದು, ಖಾಸಗಿಯಿಂದ ಸರ್ಕಾರಿ ಶಾಲೆಗಳಿಗೆ ಸೇರುತ್ತಿರುವುದು, ಹುಡುಗರು ಬಾಲಕಾರ್ಮಿಕರಾಗುವುದು ಮತ್ತು ಹುಡುಗಿಯರು ಮನೆಗೆಲಸಕ್ಕೆ ಅಂಟಿಕೊಳ್ಳುವುದು ಹೆಚ್ಚುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತಗೊಂಡ ಕಾರಣಕ್ಕೆ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿದೆ ಮತ್ತು ಆರೋಗ್ಯದಲ್ಲಿ ಅಡ್ಡಪರಿಣಾಮ ಬೀರಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕಳೆದ ಒಂದೂವರೆ ದಶಕ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಉಂಟಾದ ಶಾಲಾ ಶಿಕ್ಷಣದ ಪ್ರಗತಿ ಕಳೆದ ಒಂದೂವರೆ ವರ್ಷಗಳಲ್ಲಿ ನಾಶವಾಗಿವೆ. ಇದು ಕೇವಲ ಶಿಕ್ಷಣದ ಗುಣಮಟ್ಟದಲ್ಲಿನ ನಷ್ಟವಲ್ಲ, ಇದು ನಮ್ಮ ಕಾರ್ಮಿಕ ಬಲದ ಕೌಶಲ್ಯದ ನಷ್ಟವೂ ಆಗಿದೆ. ಶಿಕ್ಷಣ ಸಚಿವರು ಕೌಶಲ್ಯ ಅಭಿವೃದ್ಧಿಯ ಖಾತೆ ಕೂಡ  ಹೊಂದಿದ್ದರಿಂದ ಅವರು ಇದರ ಬಗ್ಗೆ ಕಾಳಜಿ ವಹಿಸಬೇಕು.

ಅವರಿಗೆ ಉನ್ನತ ಶಿಕ್ಷಣದಲ್ಲಿನ ಸವಾಲು ವಿಭಿನ್ನವಾಗಿ ಕಾಣಿಸಬಹುದು. ಆದರೆ ಇದು ಕೂಡ ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿದೆ: ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಹೆಚ್ಚಿನ ಡ್ರಾಪ್ ಔಟ್‍, ಶೈಕ್ಷಣಿಕ ಸಾಮಗ್ರಿ ಅಥವಾ ಸಂಪನ್ಮೂಲುಗಳ ಲಭ್ಯತೆಯ ಕೊರತೆ (ವಿಶೇಷವಾಗಿ ಅನಾನುಕೂಲಕರ ಹಾಗೂ ತಳಮಟ್ಟದ

ಹಿನ್ನೆಲೆಯ ವಿದ್ಯಾರ್ಥಿಗಳಿಗೆ) ಮತ್ತು ಶಿಕ್ಷಕರ ಜೊತೆಗಿನ ಸಂಪರ್ಕವನ್ನು ಕಡಿಮೆ ಮಾಡಿರುವುದು.

 ಶಿಕ್ಷಣ ಸಚಿವರಿಗೆ ನನ್ನ ಮನವಿ: ಹೊಸ ಶಿಕ್ಷಣ ನೀತಿಯ ಬಗ್ಗೆ ನೀವು ಉತ್ಸುಕರಾಗಿದ್ದೀರಿ ಎಂದು ನನಗೆ ಅನಿಸಿದೆ. ಪಠ್ಯಕ್ರಮದಲ್ಲಿ ಕೇಸರಿ ಸಿದ್ಧಾಂತವನ್ನು ಹೆಚ್ಚಿಸಲು ಒತ್ತಡವಿರಬಹುದು ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಮಧ್ಯಮ ವರ್ಗದ ಮಕ್ಕಳು ಹೆಚ್ಚು ಹೂಡಿಕೆ ಮಾಡಿರುವ ಪ್ರವೇಶ ಪರೀಕ್ಷೆಗಳನ್ನು ನಿರ್ವಹಿಸಲು ನಿಮ್ಮ ಮೇಲಿನ ಒತ್ತಡವನ್ನು ನಾನು ಊಹಿಸಬಲ್ಲೆ. ನೀವು ಮಾಡಲೇಬೇಕಿರುವ ಇವುಗಳಿಗೆ ಗಮನಹರಿಸಿ, ಆದರೆ ದಯವಿಟ್ಟು ನೀವು ಈ ಎಲ್ಲವನ್ನು ಹಿಂದಕ್ಕೆ ತಳ್ಳಿ  ಶಾಲಾ ಮಕ್ಕಳ ಶಿಕ್ಷಣದ ನೈಜ ಮತ್ತು ಮೂಕ ಬಿಕ್ಕಟ್ಟನ್ನು ನಿವಾರಿಸುವುದಕ್ಕೆ ಕೆಲಸ ಮಾಡಬಹುದೇ?

(ಯೋಗೇಂದ್ರ ಯಾದವ್ ಸ್ವರಾಜ್ ಭಾರತದ ರಾಷ್ಟ್ರೀಯ ಸಂಚಾಲಕರು)

ಕೃಪೆ: ದ ಪ್ರಿಂಟ್

ಕನ್ನಡಕ್ಕೆ: ಪಿ ಮಲ್ಲನಗೌಡರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಶಿಕ್ಷಣದಿಂದ ವಂಚಿತರನ್ನಾಗಿಸುದು ಇವರ ಮೂಲ ಉದ್ದೇಶವಾಗಿತ್ತು.

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...