Homeಮುಖಪುಟಆತ್ಮೀಯ ಧರ್ಮೇಂದ್ರ ಪ್ರಧಾನ್ ಅವರೆ, ಐಐಟಿ, ಐಐಎಂಗಳನ್ನು ಒಂದು ಕ್ಷಣ ಮರೆತುಬಿಡಿ, ನಿಜವಾದ ಬಿಕ್ಕಟ್ಟು ಶಾಲಾ...

ಆತ್ಮೀಯ ಧರ್ಮೇಂದ್ರ ಪ್ರಧಾನ್ ಅವರೆ, ಐಐಟಿ, ಐಐಎಂಗಳನ್ನು ಒಂದು ಕ್ಷಣ ಮರೆತುಬಿಡಿ, ನಿಜವಾದ ಬಿಕ್ಕಟ್ಟು ಶಾಲಾ ಶಿಕ್ಷಣದಲ್ಲಿದೆ……

- Advertisement -
- Advertisement -

ನಮಗೆ ಹೊಸ  ಕೇಂದ್ರ ಶಿಕ್ಷಣ ಮಂತ್ರಿ ಬಂದಿದ್ದಾರೆ. ಅದೃಷ್ಟವಶಾತ್,  ಅವರು ಈಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಲ್ಲ! ಇನ್ನೂ ಒಳ್ಳೆಯದೆಂದರೆ, ಇನ್ನು ರಮೇಶ್ ಪೋಖ್ರಿಯಾಲ್ ಶಿಕ್ಷಣ ಸಚಿವರಾಗಿ ಮುಂದುವರೆಯುವುದಿಲ್ಲ! ಶಿಕ್ಷಣಕ್ಕೆ ಸಂಬಂಧಿಸಿದಂತೆ ನೈಜ ಸಂಗತಿಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಇನ್ನು ನಾವು ನಿರೀಕ್ಷೆ ಮಾಡಬಹುದೇ?

ಆರೋಗ್ಯ ಮತ್ತು ಆರ್ಥಿಕತೆಯ ನಂತರ, ಸಾಂಕ್ರಾಮಿಕದಿಂದ ತೀವ್ರ ಸಂಕಷ್ಟಕ್ಕೆ ಈಡಾಗಿರುವುದು ಶಿಕ್ಷಣ. ದುಃಖಕರವೆಂದರೆ, ಶೈಕ್ಷಣಿಕ ಬಿಕ್ಕಟ್ಟಿನಲ್ಲಿ ಗೋಚರಿಸುವ ಆಯಾಮಗಳು ಮಾತ್ರ ರಾಜಕೀಯ ಗಮನ ಸೆಳೆಯುತ್ತವೆ. ಇವುಗಳಲ್ಲಿ ಕೆಲವು ಅಂಶಗಳತ್ತ ಹೊಸ ಶಿಕ್ಷಣ ಸಚಿವರು ಗಮನ ಹರಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ಮೊದಲ ದಿನವೇ ಅವರು ಕೆಲವು ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು ಮತ್ತು ಉಪಕುಲಪತಿಗಳ ಪೂರ್ವ ನಿಯೋಜಿತ ಸಮ್ಮೇಳನದಲ್ಲಿ ಭಾಗವಹಿಸಿದರು. ಜೆಇಇ ಮತ್ತು ನೀಟ್ ಕ್ಯಾಲೆಂಡರ್ ಅವರ ಗಮನ ಸೆಳೆದಿದೆ. ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ಅವರು ಕಡ್ಡಾಯವಾಗಿ ಸದ್ದು ಮಾಡಿದ್ದಾರೆ.

ಆದರೆ ಶಿಕ್ಷಣ ಕ್ಷೇತ್ರದಲ್ಲಿ ನಿಜವಾದ ಬಿಕ್ಕಟ್ಟು ಇರುವುದು ಇಲ್ಲಲ್ಲ. ಇದು ಕಳೆದ ಒಂದು ವರ್ಷದಿಂದ ಶಾಲಾ ಮಕ್ಕಳು ಅನುಭವಿಸಿದ ಅಗಾಧವಾದ, ಆದರೆ ಅದೃಶ್ಯವಾದ ಶೈಕ್ಷಣಿಕ ನಷ್ಟದಲ್ಲಿದೆ. ಇಲ್ಲಿಯವರೆಗೆ ಸಚಿವರು ಅಥವಾ ಸಚಿವಾಲಯ ಕೂಡ ಅದರ ಬಗ್ಗೆ ಮಾತನಾಡಿಲ್ಲ. ಒಂದು ದೃಷ್ಟಿಯಲ್ಲಿ ಸಮಸ್ಯೆ ಹೊಸದಲ್ಲ. ಕಪಿಲ್ ಸಿಬಲ್ ಅವರ ಕಾಲದಿಂದಲೂ ಕೇಂದ್ರ ಶಿಕ್ಷಣ ಸಚಿವರು ‘ಉನ್ನತ ಶಿಕ್ಷಣ’ ಮಂತ್ರಿಗಳಂತೆ ವರ್ತಿಸುತ್ತಿದ್ದಾರೆ. ಐಐಟಿಗಳು, ಐಐಎಂಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು, ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು ಮತ್ತು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಮ್ಯಾನೇಜ್‍ಮೆಂಟ್‍ ಅಧ್ಯಯನ ಸಂಸ್ಥೆಗಳ ಪ್ರವೇಶ ಪರೀಕ್ಷೆಗಳ ಗೀಳು ಈಗ ಒಂದು ದಶಕಕ್ಕೂ ಹೆಚ್ಚು ಕಾಲ ಸಚಿವಾಲಯದ ಪ್ರಾಧಾನ್ಯವಾಗಿದೆ.ಇದರೊಂದಿಗೆ ಜಾತ್ಯತೀತತೆ ಅಥವಾ ಭಾರತೀಯಕರಣದ ಬಗ್ಗೆ ಸಾಂದರ್ಭಿಕ ಸೈದ್ಧಾಂತಿಕ ಜಟಾಪಟಿಗಳು ನಡೆಯುತ್ತ ಬಂದಿವೆ. ಈ ಬಾರಿ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ನೀತಿ ನಿರೂಪಣೆಯ ಅಂಚಿನಲ್ಲಿರುವ ಶಾಲಾ ಶಿಕ್ಷಣವು ಸಾರ್ವಜನಿಕ ಚರ್ಚೆಯಿಂದ ಮತ್ತಷ್ಟು ದೂರಕ್ಕೆ ತಳ್ಳಲ್ಪಟ್ಟಿದೆ. ಸಾಂಕ್ರಾಮಿಕವು “ಶಿಕ್ಷಣಿಕ ಹತ್ಯೆಯ” ಪ್ರಕ್ರಿಯೆಯನ್ನು ಹೆಚ್ಚು ಕಾಣುವಂತೆ ಮಾಡಿದೆ, ಆದರೆ ಈ ಮೊದಲು ನಿಧಾನವಾಗಿದ್ದರೂ ಶೈಕ್ಷಣಿಕ ಅವಕಾಶಗಳ ಹತ್ಯೆ, ಸ್ವಲ್ಪ ಸಮಯದಿಂದ ನಡೆಯುತ್ತಿದೆ. ಇದು ಹೊಸ ಸಚಿವರ ಗಮನವನ್ನು ಸೆಳೆಯಬೇಕು.

ಹೊಸ ಸಚಿವರಿಗೆ ಓದುವುದಕ್ಕೆ ಶಿಫಾರಸು

ಹೊಸ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ಓದುವ ಮೂಲಕ ಪ್ರಾರಂಭಿಸಬಹುದು. ಹರಿಯಾಣದ ವಿದ್ಯಮಾನದ ಪ್ರಕಾರ, ಈ ವರ್ಷ ಖಾಸಗಿ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆತಂಕಕಾರಿ ಕುಸಿತವನ್ನು ತೋರಿಸುತ್ತಿದೆ. ಈ ವರ್ಷ 12.5 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ದಾಖಲಾಗಲಿಲ್ಲ, ಇದು ಕುಸಿತ ಶೇಕಡಾ 40ಕ್ಕಿಂತಲೂ ಹೆಚ್ಚಿದೆ. ಈ ಸಂಖ್ಯೆ ಕಳೆದ ವರ್ಷ 29.8 ಲಕ್ಷದಿಂದ ಈ ವರ್ಷ 17.3 ಲಕ್ಷಕ್ಕೆ ಇಳಿದಿದೆ. ಈ ಎಲ್ಲ ಅಥವಾ ಹೆಚ್ಚಿನ ವಿದ್ಯಾರ್ಥಿಗಳು ಶಾಲಾ ಶಿಕ್ಷಣದಿಂದ ಪೂರ್ತಿಯಾಗಿ ಹೊರಗುಳಿದಿದ್ದಾರೆ ಎಂದು ನಾವು ಭಾವಿಸಬಾರದು. ಎಲ್ಲಾ ಸಂಭವನೀಯತೆಗಳಲ್ಲಿ, ಖಾಸಗಿ ಶಾಲೆಗಳ ಹೆಚ್ಚಿನ ಶುಲ್ಕವನ್ನು ತಪ್ಪಿಸಲು ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಆದರೆ ಈ ಸಂಖ್ಯೆಯ ಒಂದು ಸಣ್ಣ ಭಾಗ, ಹೆಚ್ಚಾಗಿ ಹುಡುಗಿಯರು ಯಾವುದೇ ಶಾಲೆಗೆ ಹಿಂತಿರುಗುವುದಿಲ್ಲ ಎಂದು ಭಾವಿಸುವುದು ಸಮಂಜಸವಾಗಿದೆ. ಕುಟುಂಬ ಆದಾಯದಲ್ಲಿ ಆಗಿರುವ ತೀವ್ರ ಕುಸಿತದಿಂದ, ಸರ್ಕಾರಿ ಶಾಲೆಗೆ ಸೇರಿದ ಅನೇಕ ಹುಡುಗರನ್ನು ಕಾರ್ಮಿಕ ವಲಯಕ್ಕೆ ಪ್ರವೇಶಿಸುವಂತೆ ಮತ್ತು ಅನೇಕ ಹುಡುಗಿಯರು ಮನೆಗೆಲಸಕ್ಕೆ ಕಳಿಸುವಂತೆ ಮಾಡುವುದು ನಿಜ. ಅನೇಕ ಇತರ ಮಾಧ್ಯಮ ವರದಿಗಳು ಈ ವಿದ್ಯಮಾನವನ್ನು ದೃಢಿಪಡಿಸುತ್ತವೆ.

ಅವರಿಗೆ ಹೆಚ್ಚಿನ ಸಮಯವಿದ್ದರೆ, ಸಚಿವರು 2020ರ ವಾರ್ಷಿಕ ಶಿಕ್ಷಣ ಸ್ಥಿತಿ ವರದಿಯನ್ನು ಓದಬಹುದು. ಗ್ರಾಮೀಣ ಭಾರತದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟದ ಕುರಿತಾದ ಈ ವರದಿಯು 2020ರಲ್ಲಿ ಕೋವಿಡ್‌ ನಿಂದಾಗಿರುವ ಸಮಸ್ಯೆ ಮತ್ತು ಮೊದಲ ಕೋವಿಡ್ ಅಲೆಯ ಲಾಕ್ಡೌನ್ ನಿಂದ ಶೈಕ್ಷಣಿಕ ನಷ್ಟದ ವ್ಯಾಪ್ತಿಯನ್ನು ದಾಖಲಿಸಿದೆ. ಆ ವರ್ಷದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಹೊಂದಿದ್ದರೂ, ಅವರ ಶಿಕ್ಷಣಕ್ಕೆ ಸಿಕ್ಕ ಬೆಂಬಲ ಅತೀವ ಕಡಿಮೆಯಿತ್ತು ಎಂದು ಅದು ದಾಖಲಿಸುತ್ತದೆ. ಗ್ರಾಮೀಣ ಭಾರತದಲ್ಲಿ ಸ್ಮಾರ್ಟ್‍ಫೋನ್‌ಗಳು ತಮ್ಮ ವ್ಯಾಪ್ತಿಯನ್ನು ಹರಡಿಕೊಂಡಿವೆಯಾದರೂ, ಗ್ರಾಮೀಣ ಭಾರತದಲ್ಲಿ ಶಾಲೆಗೆ ಹೋಗುವ ಮಕ್ಕಳ ಶೇಕಡಾ 42ರಷ್ಟು ಕುಟುಂಬಗಳು ಇನ್ನೂ ಸ್ಮಾರ್ಟ್‍ಫೋನ್‍ ಹೊಂದಿಲ್ಲ. ಈ ಪ್ರಮಾಣವು ಬಡ ಕುಟುಂಬಗಳಿಗೆ ಶೇಕಡಾ 55 ರಷ್ಟಿತ್ತು. ಅವರು ಎಲೆಕ್ಟ್ರಾನಿಕ್ ಸಾಧನವನ್ನು ಹೊಂದಿದ್ದಾರೆಂದು ಊಹಿಸಿದರೆ, ಓದುವ ಸಾಮಗ್ರಿಗಳ ಲಭ್ಯತೆಯ ಸಮಸ್ಯೆ ಕೂಡ ಇರುತ್ತದೆ. ಕೇವಲ 35 ಪ್ರತಿಶತದಷ್ಟು ವಿದ್ಯಾರ್ಥಿಗಳು ತಮ್ಮ ಶಾಲೆಗಳಿಂದ ಯಾವುದೇ ಓದುವ ಅಥವಾ ಬೆಂಬಲ ಸಾಮಗ್ರಿಗಳನ್ನು ಪಡೆದರು. ಖಾಸಗಿ ಶಾಲೆಗಳಿಗೆ ಈ ಪ್ರಮಾಣವು ಶೇಕಡಾ 40ರಷ್ಟಿತ್ತು. ಹೆಚ್ಚುವರಿ ವಸ್ತುಗಳನ್ನು ಬಹುತೇಕ ಸಂಪೂರ್ಣವಾಗಿ ವಾಟ್ಸಾಪ್ ಮೂಲಕ ತಲುಪಿಸಲಾಯಿತು. ಆದ್ದರಿಂದ, ‘ವಾಟ್ಸಾಪ್ ವಿಶ್ವವಿದ್ಯಾಲಯ’ದಿಂದ, ನಾವು ಈಗ ‘ವಾಟ್ಸಾಪ್ ಶಾಲೆಗಳಿಗೆ’ ತೆರಳಿದ್ದೇವೆ.

ಆದ್ಯತೆಯ ವಿಷಯಗಳು ಯಾವುವು?

ಅನೇಕ ಇತರ ವರದಿಗಳು ಶಾಲಾ ಶಿಕ್ಷಣದ ಮೇಲೆ ಸಾಂಕ್ರಾಮಿಕ ರೋಗದ ಇತರ ವ್ಯಾಪಕ ಪರಿಣಾಮಗಳನ್ನು ದೃಢಿಪಡಿಸಿವೆ: ಶಾಲೆಗಳಿಂದ ಡ್ರಾಪ್‍ಔಟ್‍ ಸಂಖ್ಯೆ ಹೆಚ್ಚಿರುವುದು, ಖಾಸಗಿಯಿಂದ ಸರ್ಕಾರಿ ಶಾಲೆಗಳಿಗೆ ಸೇರುತ್ತಿರುವುದು, ಹುಡುಗರು ಬಾಲಕಾರ್ಮಿಕರಾಗುವುದು ಮತ್ತು ಹುಡುಗಿಯರು ಮನೆಗೆಲಸಕ್ಕೆ ಅಂಟಿಕೊಳ್ಳುವುದು ಹೆಚ್ಚುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತಗೊಂಡ ಕಾರಣಕ್ಕೆ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿದೆ ಮತ್ತು ಆರೋಗ್ಯದಲ್ಲಿ ಅಡ್ಡಪರಿಣಾಮ ಬೀರಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕಳೆದ ಒಂದೂವರೆ ದಶಕ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಉಂಟಾದ ಶಾಲಾ ಶಿಕ್ಷಣದ ಪ್ರಗತಿ ಕಳೆದ ಒಂದೂವರೆ ವರ್ಷಗಳಲ್ಲಿ ನಾಶವಾಗಿವೆ. ಇದು ಕೇವಲ ಶಿಕ್ಷಣದ ಗುಣಮಟ್ಟದಲ್ಲಿನ ನಷ್ಟವಲ್ಲ, ಇದು ನಮ್ಮ ಕಾರ್ಮಿಕ ಬಲದ ಕೌಶಲ್ಯದ ನಷ್ಟವೂ ಆಗಿದೆ. ಶಿಕ್ಷಣ ಸಚಿವರು ಕೌಶಲ್ಯ ಅಭಿವೃದ್ಧಿಯ ಖಾತೆ ಕೂಡ  ಹೊಂದಿದ್ದರಿಂದ ಅವರು ಇದರ ಬಗ್ಗೆ ಕಾಳಜಿ ವಹಿಸಬೇಕು.

ಅವರಿಗೆ ಉನ್ನತ ಶಿಕ್ಷಣದಲ್ಲಿನ ಸವಾಲು ವಿಭಿನ್ನವಾಗಿ ಕಾಣಿಸಬಹುದು. ಆದರೆ ಇದು ಕೂಡ ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿದೆ: ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಹೆಚ್ಚಿನ ಡ್ರಾಪ್ ಔಟ್‍, ಶೈಕ್ಷಣಿಕ ಸಾಮಗ್ರಿ ಅಥವಾ ಸಂಪನ್ಮೂಲುಗಳ ಲಭ್ಯತೆಯ ಕೊರತೆ (ವಿಶೇಷವಾಗಿ ಅನಾನುಕೂಲಕರ ಹಾಗೂ ತಳಮಟ್ಟದ

ಹಿನ್ನೆಲೆಯ ವಿದ್ಯಾರ್ಥಿಗಳಿಗೆ) ಮತ್ತು ಶಿಕ್ಷಕರ ಜೊತೆಗಿನ ಸಂಪರ್ಕವನ್ನು ಕಡಿಮೆ ಮಾಡಿರುವುದು.

 ಶಿಕ್ಷಣ ಸಚಿವರಿಗೆ ನನ್ನ ಮನವಿ: ಹೊಸ ಶಿಕ್ಷಣ ನೀತಿಯ ಬಗ್ಗೆ ನೀವು ಉತ್ಸುಕರಾಗಿದ್ದೀರಿ ಎಂದು ನನಗೆ ಅನಿಸಿದೆ. ಪಠ್ಯಕ್ರಮದಲ್ಲಿ ಕೇಸರಿ ಸಿದ್ಧಾಂತವನ್ನು ಹೆಚ್ಚಿಸಲು ಒತ್ತಡವಿರಬಹುದು ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಮಧ್ಯಮ ವರ್ಗದ ಮಕ್ಕಳು ಹೆಚ್ಚು ಹೂಡಿಕೆ ಮಾಡಿರುವ ಪ್ರವೇಶ ಪರೀಕ್ಷೆಗಳನ್ನು ನಿರ್ವಹಿಸಲು ನಿಮ್ಮ ಮೇಲಿನ ಒತ್ತಡವನ್ನು ನಾನು ಊಹಿಸಬಲ್ಲೆ. ನೀವು ಮಾಡಲೇಬೇಕಿರುವ ಇವುಗಳಿಗೆ ಗಮನಹರಿಸಿ, ಆದರೆ ದಯವಿಟ್ಟು ನೀವು ಈ ಎಲ್ಲವನ್ನು ಹಿಂದಕ್ಕೆ ತಳ್ಳಿ  ಶಾಲಾ ಮಕ್ಕಳ ಶಿಕ್ಷಣದ ನೈಜ ಮತ್ತು ಮೂಕ ಬಿಕ್ಕಟ್ಟನ್ನು ನಿವಾರಿಸುವುದಕ್ಕೆ ಕೆಲಸ ಮಾಡಬಹುದೇ?

(ಯೋಗೇಂದ್ರ ಯಾದವ್ ಸ್ವರಾಜ್ ಭಾರತದ ರಾಷ್ಟ್ರೀಯ ಸಂಚಾಲಕರು)

ಕೃಪೆ: ದ ಪ್ರಿಂಟ್

ಕನ್ನಡಕ್ಕೆ: ಪಿ ಮಲ್ಲನಗೌಡರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಶಿಕ್ಷಣದಿಂದ ವಂಚಿತರನ್ನಾಗಿಸುದು ಇವರ ಮೂಲ ಉದ್ದೇಶವಾಗಿತ್ತು.

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...