Homeಮುಖಪುಟಪಕ್ಷಾಂತರ ಚರ್ಚೆ: ‘ಸಾಯುವವರೆಗೂ ಬಿಜೆಪಿ ಸೇರಲಾರೆ’ ಎಂದ ಕಪಿಲ್‍ ಸಿಬಲ್‍

ಪಕ್ಷಾಂತರ ಚರ್ಚೆ: ‘ಸಾಯುವವರೆಗೂ ಬಿಜೆಪಿ ಸೇರಲಾರೆ’ ಎಂದ ಕಪಿಲ್‍ ಸಿಬಲ್‍

- Advertisement -
- Advertisement -

ಜಿತಿನ್ ಪ್ರಸಾದ್‍ ನಿರ್ಗಮನ ಕಾಂಗ್ರೆಸ್‍ ಪಕ್ಷದಲ್ಲಿನ ಆಳವಾದ ಬಿಕ್ಕಟ್ಟನ್ನು ಮತ್ತೊಮ್ಮೆ ಬಹಿರಂಗಗೊಳಿಸಿದೆ. ಈ ಹಿಂದೆ ಸೋನಿಯಾ ಗಾಂಧಿಗೆ ಪತ್ರ ಬರೆದ “ಜಿ -23” ಅಥವಾ 23 “ಭಿನ್ನಮತೀಯ” ನಾಯಕರ ಗುಂಪಿನ ಇತರ ಜನರ ಮೇಲೆ ಈ ಪ್ರಕರಣ ಬೆಳಕು ಚೆಲ್ಲುತ್ತದೆ. ಈ  ಜಿ-23 ಕ್ಲಬ್‌ನ ಪ್ರಮುಖ ಸದಸ್ಯರಾದ ಕಪಿಲ್ ಸಿಬಲ್, ಅಂತಹ ಯಾವುದೇ ಕ್ರಮವನ್ನು (ಜಿತಿನ್‍ ಮಾಡಿದಂತೆ) ನಾನು ತೆಗೆದುಕೊಳ್ಳಲಾರೆ. ನಾನು ಮೃತನಾದಾಗ ಅಂಥದ್ದನ್ನು ಊಹಿಸಬಹುದು, ನಾನೆಂದೂ ಬಿಜೆಪಿ ಸೇರಲಾರೆ ಎಂದಿದ್ದಾರೆ.

ಆದರೆ ಸಿಬಲ್‍ ತಮ್ಮ ಆಕ್ಷೇಪ ಮತ್ತು ಆಗ್ರಹಗಳನ್ನು ಪುನರುಚ್ಛರಿಸಿದ್ದಾರೆ. ಈ ಸಂದರ್ಭವನ್ನು ಅವರು ತಮ್ಮ ಪಕ್ಷದ ಉನ್ನತ ನಾಯಕರಿಗೆ ಒಂದು ಸಂದೇಶ ಕಳಿಸುವ ಅವಕಾಶವನ್ನಾಗಿ ಬಳಸಿಕೊಂಡಿದ್ದಾರೆ.

ಸಿದ್ಧಾಂತಕ್ಕಿಂತ ವೈಯಕ್ತಿಕ ಲಾಭದ ಆಧಾರದ ಮೇಲೆ ‘ಪ್ರಸಾದ್‍ ರಾಮ್‍’ (ಅವರೇ ಸೃಷ್ಟಿಸಿದ ಪದ) ಪಕ್ಷಾಂತರ ನಡೆದಿದೆ ಎಂಬುದನ್ನು ಅವರು ಒಪ್ಪಲಿಲ್ಲ ಎಂದು ಎನ್‍ಡಿಟಿವಿ ವರದಿ ಮಾಡಿದೆ.

“ಪಕ್ಷದ ನಾಯಕತ್ವ ಏನು ಮಾಡಿದೆ ಅಥವಾ ಮಾಡಿಲ್ಲ ಎಂಬುದರ ಕುರಿತು ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಾವು ಭಾರತೀಯ ರಾಜಕಾರಣದಲ್ಲಿ ಒಂದು ಹಂತವನ್ನು ತಲುಪಿದ್ದೇವೆ, ಅಲ್ಲಿ ಈ ರೀತಿಯ (ಜಿತಿನ್‍ ನಿರ್ಧಾರ) ನಿರ್ಧಾರಗಳು ಸಿದ್ಧಾಂತವನ್ನು ಆಧರಿಸಿಲ್ಲ. ಅವು ಈಗ ನಾನು ಪ್ರಸಾದ ರಾಮ್ ಎಂದು ಕರೆಯುವ ಆಧಾರದ ಮೇಲೆ ನಡೆಯುತ್ತಿರುವ ರಾಜಕೀಯ. ಇದು ಹಿಂದೆ ಆಯಾ ರಾಮ್ ಗಯಾ ರಾಮ್ ಆಗಿತ್ತು. ಪಶ್ಚಿಮ ಬಂಗಾಳದಲ್ಲಿ ಇದು ನಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಬಿಜೆಪಿ ಯಶಸ್ವಿಯಾಗಲಿದೆ ಎಂದು ಭಾವಿಸಿದ್ದರಿಂದ ಜನರು ಇದ್ದಕ್ಕಿದ್ದಂತೆ ಬಿಜೆಪಿಗೆ ಪಕ್ಷಾಂತರಗೊಂಡರು. ಈಗ ಬಹುಪಾಲು ರಾಜಕಾರಣಿಗಳು ಚುನಾವಣೆಗಳಲ್ಲಿ ಹೋರಾಡಲು ಬಯಸುವುದು ಒಂದು ಸಿದ್ಧಾಂತದ ಬಗೆಗಿನ ನಂಬಿಕೆಗಳ ಆಧಾರದ ಮೇಲೆ ಅಲ್ಲ, ಆದರೆ ವೈಯಕ್ತಿಕವಾಗಿ ಏನನ್ನಾದರೂ ಪಡೆಯಬಹುದು’ ಎಂಬ ದೃಢೀಕರಣದ ಆಧಾರದ ಮೇಲೆ.. ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರದಲ್ಲೂ ಇದೇ ಸಂಭವಿಸಿದೆ…’ ಎಂದು ಹೇಳಿದ್ದಾರೆ.

ಕಾಂಗ್ರೆಸ್‍ಗೆ  ಸುಧಾರಣೆಗಳು ಅಗತ್ಯವಾಗಿವೆ ಮತ್ತು ಪಕ್ಷದ ನಾಯಕತ್ವವು ಇದನ್ನು ಆಲಿಸಬೇಕಾಗಿದೆ ಎಂದು ಸಿಬಲ್ ಹೇಳಿದರು. ಅದೇ ಸಮಯದಲ್ಲಿ, ಜಿತಿನ್ ಪ್ರಸಾದ ಅವರಂತಹ ವ್ಯಕ್ತಿ ಬಿಜೆಪಿಗೆ ಸೇರುತ್ತಾರೆ ಎಂಬುದಕ್ಕೆ ವಿವರಣೆ ನೀಡುವುಸು ಅಸಾಧ್ಯ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.

“ಸಮಸ್ಯೆಗಳನ್ನು ಬಗೆಹರಿಸಿದ್ದರೂ, ನಾನು ಏನನ್ನೂ ಪಡೆಯುತ್ತಿಲ್ಲ ಎಂದು ಒಬ್ಬ ವ್ಯಕ್ತಿಯು ಭಾವಿಸಿದರೆ ಅವನು ಹೊರಟು ಹೋಗುತ್ತಾನೆ. ಜಿತಿನ್ ಹೊರಹೋಗಲು ಒಳ್ಳೆಯ ಕಾರಣಗಳಿರಬಹುದು. ಪಕ್ಷವನ್ನು ತೊರೆದಿದ್ದಕ್ಕಾಗಿ ನಾನು ಅವರನ್ನು ದೂಷಿಸುವುದಿಲ್ಲ. ಅವರು ಬಿಜೆಪಿಗೆ ಸೇರಿದ ಕಾರಣಗಳಿಗಾಗಿ ನಾನು ಅವರನ್ನು ದೂಷಿಸುತ್ತೇನೆ. ಮೂರು ದಶಕಗಳಿಂದ ತಾನು ವಿರೋಧಿಸುತ್ತಿದ್ದ ಒಂದು ಸಿದ್ಧಾಂತವನ್ನು ಈಗ ಸ್ವೀಕರಿಸುತ್ತಿದ್ದೇನೆ ಎಂದು ಅವರು ಯಾವ ಮುಖದಿಂದ ಹೇಳಬಹುದು? ತತ್ವಬದ್ಧ ರಾಜಕೀಯದ ಬಗ್ಗೆ ಮಾತನಾಡುವ ಬಿಜೆಪಿಯವರು, ಜಿತಿನ್ ಅವರನ್ನು ಯಾವ ಮುಖದಿಂದ ತೆಗೆದುಕೊಳ್ಳುತ್ತಾರೆ? ಜನರು ಈ ರೀತಿಯ ರಾಜಕೀಯದ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ” ಎಂದು ಸಿಬಲ್‍ ಹೇಳಿದ್ದಾರೆ.

ಮಧ್ಯಪ್ರದೇಶದ ಪಕ್ಷಾಂತರಗಳು ಮತ್ತು ಹಿಂದಿನ ಲೋಕಸಭಾ  ಚುನಾವಣಾ ಸೋಲುಗಳ ಬಗ್ಗೆ ಕಪಿಲ್‍ ಸಿಬಲ್, ಗುಲಾಮ್ ನಬಿ ಆಜಾದ್ ಮತ್ತು ಆನಂದ್ ಶರ್ಮಾ ಮುಂತಾದ 23 ಕಾಂಗ್ರೆಸ್‍ ನಾಯಕರು ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು, ಪಕ್ಷದಲ್ಲಿ ಆಂತರಿಕ ಸುಧಾರಣೆಗಳಿಗ ಮನವಿ ಮಾಡಿದ್ದರು.

ಕಳೆದ ವರ್ಷ ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದ ನಂತರ ಪಕ್ಷದಲ್ಲಿ ಉತ್ತಮ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದ ಸಚಿನ್ ಪೈಲಟ್ ಬಗ್ಗೆ ಆಗ ಊಹಾಪೋಹ ಹರಿದಾಡಿದ್ದವು.

ತಪ್ಪುಗಳ ತಿದ್ದುಪಡಿಯ ಭರವಸೆಯ ಮೇರೆಗೆ ಪೈಲಟ್ ಅವರ ಬಂಡಾಯವನ್ನು ಕೊನೆಗೊಳಿಸುವಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಯಶಸ್ವಿಯಾಗಿದ್ದರು.

ಪರಿಹಾರಗಳನ್ನು ನೀಡುವಲ್ಲಿ ಕಾಂಗ್ರೆಸ್ ವಿಫಲವಾದ ಬಗ್ಗೆ ಕೇಳಿದಾಗ ಸಿಬಲ್, “ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ, ಅದು ನಿಜ. ಅವುಗಳನ್ನು ಆದಷ್ಟು ಬೇಗ ಪರಿಹರಿಸಬೇಕು. ನಾವು ಆ ಪ್ರಶ್ನೆಗಳನ್ನು  ಎತ್ತುವುದನ್ನು  ಮುಂದುವರಿಸುತ್ತೇವೆ. ಕೆಲವು ಕಾರಣಗಳಿಂದ  ನಾನು ಪಕ್ಷಕ್ಕೆ ಅಗತ್ಯವಿಲ್ಲ ಎಂದು ಪಕ್ಷ ನನಗೆ ಹೇಳಿದರೆ ನಾನು ಪಕ್ಷವನ್ನು ಬಿಡುತ್ತೇನೆ. ನಾನು ನನಗಾಗಿ ಈ ಪಕ್ಷದಲ್ಲಿ ಇಲ್ಲ. ಆದರೆ ರಾಜಕಾರಣಿಯಾಗಿ ಹುಟ್ಟಿದಾಗಿನಿಂದ ವಿರೋಧಿಸಿದ ಬಿಜೆಪಿಗೆ ನಾನು ಎಂದಿಗೂ ಸೇರುವುದಿಲ್ಲ. ಇದು ಜಿತೀನ್ ಪ್ರಸಾದ್‍ ಎತ್ತಿರುವ ಇಶ್ಯೂ’ ಎಂದು ಸಿಬಲ್‍ ತಿಳಿಸಿದ್ದಾರೆ.

ಪಕ್ಷದಲ್ಲಿ ಸುಧಾರಣೆಗಳು ಅಂದರೆ ಏನು ಎಂಬ ಪ್ರಶ್ನೆಗೆ,  “ನನ್ನನ್ನು ಕೇಳಬೇಡಿ, ಯಾರು ಅವನ್ನು ಪರಿಹರಿಸಬೇಕೋ ಅವರನ್ನು ಕೇಳಿ. ಕಾಂಗ್ರೆಸ್ ಮತ್ತೆ ಹಳೆಯ ಭವ್ಯತೆ ಪಡೆದ ಪಕ್ಷವಾಗಬೇಕು. ಅದಕ್ಕಾಗಿ ನಮಗೆ ಸುಧಾರಣೆಗಳು ಬೇಕಾಗುತ್ತವೆ. ನಾವು ಹೇಳಲು ಬಯಸುವುದನ್ನು ಪಕ್ಷ ಆಲಿಸುವ ಸಮಯವಿದು. ಮುಖ್ಯಸ್ಥರು ಆಲಿಸುವುದನ್ನು  ನಿಲ್ಲಿಸಿದರೆ ಪಕ್ಷ ಕುಸಿಯುತ್ತದೆ. ನಮಗೆ ಬೇಕಾಗಿರುವುದು ಕಾಂಗ್ರೆಸ್ ಪಕ್ಷ ನಮ್ಮ ಮಾತನ್ನು ಆಲಿಸಬೇಕು ಎಂಬುದಷ್ಟೇ’ ಎಂದು ಸಿಬಲ್‍ ಹೇಳಿದರು.


ಇದನ್ನೂ ಓದಿ: ಉತ್ತರ ಪ್ರದೇಶ ಸಿಎಂ ಬದಲಾವಣೆ ವದಂತಿ: ಮೋದಿ, ಶಾ ಭೇಟಿಯಾಗಲಿರುವ ಯೋಗಿ ಆದಿತ್ಯನಾಥ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....