Homeಚಳವಳಿವರ್ಷ ಪೂರೈಸಿದ 'ದೆಹಲಿ ಚಲೋ' ರೈತರ ಪ್ರತಿಭಟನೆ; ಖಾನೌರಿ ಗಡಿಯಲ್ಲಿ 'ಮಹಾಪಂಚಾಯತ್ ಏಕತೆ'ಗೆ ಕರೆ

ವರ್ಷ ಪೂರೈಸಿದ ‘ದೆಹಲಿ ಚಲೋ’ ರೈತರ ಪ್ರತಿಭಟನೆ; ಖಾನೌರಿ ಗಡಿಯಲ್ಲಿ ‘ಮಹಾಪಂಚಾಯತ್ ಏಕತೆ’ಗೆ ಕರೆ

- Advertisement -
- Advertisement -

“ದೆಹಲಿ ಚಲೋ ಆಂದೋಲನ 2.0” ಅಡಿಯಲ್ಲಿ ಪಂಜಾಬ್-ಹರಿಯಾಣದ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ರೈತರ ಪ್ರತಿಭಟನೆಯು ಬುಧವಾರ ಬೃಹತ್ ಮಹಾಪಂಚಾಯತ್‌ಗಾಗಿ ಸಾವಿರಾರು ರೈತರು ಒಟ್ಟುಗೂಡಿದರು. ಫೆಬ್ರವರಿ 14 ರಂದು ಕೇಂದ್ರ ಸರ್ಕಾರದೊಂದಿಗೆ ನಿರ್ಣಾಯಕ ಮಾತುಕತೆಗೆ ಮುಂಚಿತವಾಗಿ ಚಳುವಳಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ರೈತರು ತಮ್ಮ ಏಕತೆಯ ಅಗತ್ಯವನ್ನು ಒತ್ತಿ ಹೇಳಿದ್ದು, ಮೊದಲನೇ ಮಹಾಪಂಚಾಯತ್ ರೈತ ನಾಯಕರ ಉಗ್ರ ಭಾಷಣಗಳಿಗೆ ಸಾಕ್ಷಿಯಾಯಿತು. 78 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಗಜಿತ್ ಸಿಂಗ್ ದಲ್ಲೆವಾಲ್, ಅಮೆರಿಕದಿಂದ ಗಡೀಪಾರು ಮಾಡಲಾದ ಯುವಕರನ್ನು ಬೆಂಬಲಿಸಲು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿಯನ್ನು ಪಡೆಯುವ ಬಗ್ಗೆ ತಮ್ಮ ಪಟ್ಟನ್ನು ಪುರುಚ್ಛರಿಸಿದರು.

ಅಕ್ರಮ ವಲಸಿಗರನ್ನು ಅಮೆರಿಕಾದಿಂದ ಗಡೀಪಾರಿನ ಬಗ್ಗೆ ಹೆಚ್ಚುತ್ತಿರುವ ವಿರೋಧಕ್ಕೆ ದಲ್ಲೆವಾಲ್ ಧನಿಗೂಡಿಸಿದ್ದಾರೆ. ಇತ್ತೀಚೆಗೆ ಯುನೈಟೆಡ್ ಸ್ಟೇಟ್ಸ್ ಗಡೀಪಾರು ಮಾಡಿದ 104 ಭಾರತೀಯರಲ್ಲಿ 30 ಕ್ಕೂ ಹೆಚ್ಚು ಪಂಜಾಬಿಗಳು ಸೇರಿದ್ದಾರೆ ಎಂದು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ 200 ಯುವಕರು ಗಡೀಪಾರು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಜೊತೆಗೆ, ತಮ್ಮ ಹಳೆಯ ಬೇಡಿಕೆಯಾದ ಕಾನೂನುಬದ್ಧ ಎಂಎಸ್‌ಪಿ ಹೊಂದಿರುವ ಬಲಿಷ್ಠ ಕೃಷಿ ವಲಯ ಮಾತ್ರ ಸುಸ್ಥಿರ ಉದ್ಯೋಗವನ್ನು ಒದಗಿಸಲು ಹಾಗೂ ಬಲವಂತದ ವಲಸೆಯನ್ನು ತಡೆಯಲು ಸಾಧ್ಯ ಎಂದು ಅವರು ಒತ್ತಿ ಹೇಳಿದರು.

ಪಂಜಾಬ್ ಮತ್ತು ಕೇಂದ್ರ ಸರ್ಕಾರಗಳೆರಡರ ಉದಾಸೀನತೆಯನ್ನು ಖಂಡಿಸಿದ ಅವರು, ಗಡೀಪಾರು ಮಾಡಲಾದ ಯುವಕರನ್ನು ಕೈಬಿಡುವ ಬದಲು ಅವರಿಗೆ ಪುನರ್ವಸತಿ ಕಲ್ಪಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

ಪ್ರತಿಭಟನೆಯ ನಡುವೆ, ರೈತ ನಾಯಕ ಬಲದೇವ್ ಸಿಂಗ್ ಸಿರ್ಸಾ ಖಾನೌರಿ ಗಡಿಯಲ್ಲಿ ಹೃದಯಾಘಾತಕ್ಕೊಳಗಾದರು. ಅವರನ್ನು ಪಟಿಯಾಲಾದ ರಾಜೀಂದ್ರ ಆಸ್ಪತ್ರೆಗೆ ಸಾಗಿಸಲಾಯಿತು. ಬಿಕೆಯು (ಏಕ್ತಾ ಸಿಧುಪುರ) ನಾಯಕ ಚರಣ್‌ಜಿತ್ ಸಿಂಗ್ ಕಲಾ ಅವರು ಬೀದಿ ಪ್ರಾಣಿಯಿಂದ ಉಂಟಾದ ರಸ್ತೆ ಅಪಘಾತದಿಂದ ಗಾಯಗೊಂಡು ಸಾವನ್ನಪ್ಪಿದರು. ಇದು ಗಡಿಗಳಲ್ಲಿ ಬೀಡುಬಿಟ್ಟಿದ್ದ ಪ್ರತಿಭಟನಾಕಾರರು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸಿತು.

ಚಳವಳಿ ನಿರ್ಣಾಯಕ ಹಂತವನ್ನು ಪ್ರವೇಶಿಸುತ್ತಿದ್ದಂತೆ, ರೈತ ನಾಯಕರು ಮೂರು ಹಂತದ ಕಾರ್ಯತಂತ್ರವನ್ನು ರೂಪಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಜೊತೆ ಚರ್ಚೆಯ ಮೂಲಕ ಏಕತೆಯನ್ನು ಬಲಪಡಿಸುವುದು, ಫೆಬ್ರವರಿ 14 ರಂದು ಕೇಂದ್ರ ಸರ್ಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಮಂಡಿಸುವುದು ಮತ್ತು ಮಾತುಕತೆ ವಿಫಲವಾದರೆ ಫೆಬ್ರವರಿ 25 ರಂದು ದೆಹಲಿಗೆ ಬೃಹತ್ ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂಬರುವ ದಿನಗಳು ರೈತರ ಹೋರಾಟದ ಭವಿಷ್ಯದ ಹಾದಿಯನ್ನು ನಿರ್ಧರಿಸುತ್ತವೆ. ಏಕೆಂದರೆ, ಅವರ ದೀರ್ಘಕಾಲದ ಬೇಡಿಕೆಗಳನ್ನು ಪರಿಹರಿಸಲು ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ.

ಖಾನೌರಿಯಲ್ಲಿ ಮಹಾಪಂಚಾಯತ್

ಹಲವು ರಾಜ್ಯಗಳ ರೈತ ಸಂಘಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ, ಎಂಎಸ್‌ಪಿಯ ಕಾನೂನು ಖಾತರಿ, ಬಾಕಿ ಇರುವ ರೈತ ಸಮಸ್ಯೆಗಳ ಪರಿಹಾರ ಮತ್ತು ಗಡೀಪಾರು ಮಾಡಲಾದ ಯುವಕರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರದ ಮಧ್ಯಸ್ಥಿಕೆಗೆ ಕರೆ ನೀಡುವುದು ಸೇರಿದಂತೆ ಇತರ ಬೇಡಿಕೆಗಳನ್ನು ಎತ್ತಿ ತೋರಿಸಲಾಯಿತು.

ಖಾನೌರಿಯಲ್ಲಿ ನಡೆದ ಮಹಾಪಂಚಾಯತ್ ನಡೆಯುತ್ತಿರುವ ರೈತರ ಆಂದೋಲನದಲ್ಲಿ ಒಂದು ನಿರ್ಣಾಯಕ ಕ್ಷಣವಾಗಿತ್ತು. ನಾಯಕರು ಪ್ರತಿಭಟನಾ ಚಳವಳಿಯ ವಿವಿಧ ಬಣಗಳ ನಡುವೆ ‘ಐಕ್ಯತೆ’ಯ ಅಗತ್ಯವನ್ನು ಒತ್ತಿ ಹೇಳಿದರು. ಅನಾರೋಗ್ಯದ ನಡುವೆ ಸಭೆಯನ್ನುದ್ದೇಶಿಸಿ ಮಾತನಾಡಿದ ರೈತ ನಾಯಕ ದಲ್ಲೆವಾಲ್, ರೈತರು ತಮ್ಮ ಹೋರಾಟದಲ್ಲಿ ದೃಢವಾಗಿರಲು ಒತ್ತಾಯಿಸಿದರು.

ತಮ್ಮ ಭಾವನಾತ್ಮಕ ಭಾಷಣದಲ್ಲಿ, “ಯುವಕರ ಗಡೀಪಾರು ಹೆಚ್ಚುತ್ತಿರುವ ಸಮಸ್ಯೆಯ ಬಗ್ಗೆ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದರು. ಇದನ್ನು ಭಾರತದಲ್ಲಿ ಕೃಷಿ ಬಿಕ್ಕಟ್ಟು ಮತ್ತು ನಿರುದ್ಯೋಗಕ್ಕೆ ನೇರವಾಗಿ ಹೋಲಿಸಿದರು. ಯುವಕರನ್ನು ವಲಸೆ ಹೋಗುವಂತೆ ಒತ್ತಾಯಿಸಲು ಭಾರತದಲ್ಲಿ ಉದ್ಯೋಗಾವಕಾಶಗಳ ಕೊರತೆಯನ್ನು ದೂಷಿಸಿದ ಅವರು, “ಕೃಷಿ ಲಾಭದಾಯಕ ವಲಯವಾಗಿದ್ದರೆ, ಯುವಕರು ತಮ್ಮ ತಾಯ್ನಾಡನ್ನು ತೊರೆಯುವುದಿಲ್ಲ. ಡಾ. ಸ್ವಾಮಿನಾಥನ್ ಅವರ ಸಿ2+50 ಸೂತ್ರದಡಿಯಲ್ಲಿ ಸರ್ಕಾರವು ಎಲ್ಲ ಬೆಳೆಗಳಿಗೆ ಕಾನೂನುಬದ್ಧ ಎಂಎಸ್‌ಪಿಯನ್ನು ಪಡೆದುಕೊಳ್ಳಬೇಕಾಗಿದೆ. ಆಗ ಮಾತ್ರ ಕೃಷಿಯು ಕಾರ್ಯಸಾಧ್ಯವಾದ ವೃತ್ತಿ ಆಯ್ಕೆಯಾಗುತ್ತದೆ, ವಲಸೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ” ಎಂದು ದಲ್ಲೆವಾಲ್ ಹೇಳಿದರು.

“ಪಂಜಾಬ್ ಮತ್ತು ಕೇಂದ್ರ ಸರ್ಕಾರಗಳು ಗಡೀಪಾರು ಮಾಡಲ್ಪಟ್ಟವರನ್ನು ಬೆಂಬಲಿಸಲು ವಿಫಲವಾಗಿವೆ. ಇದು ನಾಚಿಕೆಗೇಡಿನ ನಿರ್ಲಕ್ಷ್ಯದ ಕೃತ್ಯ” ಎಂದು ದಲ್ಲೇವಾಲ್ ಕಿಡಿಕಾರಿದರು. ಬಲವಂತವಾಗಿ ಹಿಂತಿರುಗಲು ಒತ್ತಾಯಿಸಲ್ಪಟ್ಟವರಿಗೆ ಪುನರ್ವಸತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದರು, ಅವರು ಅಸಹಾಯಕರಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

“ಹೆಚ್ಚಿನ ಜನರು ಚಳುವಳಿಗೆ ಸೇರಬೇಕು” ಎಂದು ಒತ್ತಾಯಿಸಿದ ಅವರು, “ಇದು ಕೇವಲ ರೈತರ ಪ್ರತಿಭಟನೆಯಲ್ಲ, ಬದಲಾಗಿ ರಾಷ್ಟ್ರದ ಆರ್ಥಿಕ ಸ್ಥಿರತೆಗಾಗಿ ಹೋರಾಟ. ಸರ್ಕಾರ ಈಗ ಕ್ರಮ ಕೈಗೊಳ್ಳಲು ವಿಫಲವಾದರೆ, ತೊಂದರೆ ಅನುಭವಿಸುವುದು ರೈತರು ಮಾತ್ರ ಅಲ್ಲ, ಇಡೀ ಆರ್ಥಿಕತೆಯು ಅದರ ಪರಿಣಾಮವನ್ನು ಅನುಭವಿಸುತ್ತದೆ. ಈ ದೇಶದಲ್ಲಿ ಉತ್ತಮ ಭವಿಷ್ಯದ ಕನಸು ಕಾಣುವ ಪ್ರತಿಯೊಬ್ಬ ಯುವಕರಿಗಾಗಿ ನಾವು ಹೋರಾಡುತ್ತಿದ್ದೇವೆ” ಎಂದು ದಲ್ಲೆವಾಲ್ ತಮ್ಮ ದುರ್ಬಲವಾದ ಧನಿಯಲ್ಲೇ ದೃಢನಿಶ್ಚಯದಿಂದ ಹೇಳಿದರು.

ಕೇಂದ್ರದೊಂದಿಗೆ ನಿರ್ಣಾಯಕ ಮಾತುಕತೆಗೆ ರೈತರ ಸಿದ್ಧತೆ

ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೈತ ಮುಖಂಡರು ಫೆಬ್ರವರಿ 14 ರಂದು ಕೇಂದ್ರ ಸರ್ಕಾರದೊಂದಿಗೆ ನಡೆಯಲಿರುವ ಸಭೆಯತ್ತ ಗಮನ ಹರಿಸಿದ್ದಾರೆ. ಚಂಡೀಗಢದ ಸೆಕ್ಟರ್ 26 ರಲ್ಲಿ ನಡೆಯಲಿರುವ ಈ ಸಭೆಯಲ್ಲಿ ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅಡಿಯಲ್ಲಿ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನುಬದ್ಧ ಖಾತರಿ; ರೈತರಿಗೆ ಸಾಲ ಮನ್ನಾ; 2020-21 ರ ರೈತರ ಆಂದೋಲನದ ಸಮಯದಲ್ಲಿ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವುದು; ಸುಸ್ಥಿರ ಕೃಷಿಯನ್ನು ಖಚಿತಪಡಿಸಿಕೊಳ್ಳಲು ಬೆಳೆ ವೈವಿಧ್ಯೀಕರಣ ನೀತಿಗಳ ಅನುಷ್ಠಾನ; ಮತ್ತು ಪ್ರವಾಹ ಮತ್ತು ನೈಸರ್ಗಿಕ ವಿಕೋಪಗಳಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ಸೇರಿದಂತೆ ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸುವ ನಿರೀಕ್ಷೆಯಿದೆ.

ಯಾವುದೇ ತಪ್ಪು ಹೆಜ್ಜೆಗಳನ್ನು ತಪ್ಪಿಸಲು ಮಾತುಕತೆಯ ಎಲ್ಲ ಅಂಶಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ದಲ್ಲೆವಾಲ್ ರೈತ ನಾಯಕರಿಗೆ ಸೂಚಿಸಿದ್ದಾರೆ. ನಾಯಕರು ಸರ್ಕಾರದ ಮುಂದೆ ಚೆನ್ನಾಗಿ ಸಂಶೋಧಿಸಲ್ಪಟ್ಟ, ದತ್ತಾಂಶ-ಬೆಂಬಲಿತ ವಾದವನ್ನು ಮಂಡಿಸುವ ಗುರಿಯನ್ನು ಹೊಂದಿದ್ದಾರೆ, ಅವರ ಬೇಡಿಕೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುತ್ತಾರೆ.

“ನಮ್ಮ ಹಕ್ಕುಗಳಿಗಾಗಿ, ನಮ್ಮ ಭವಿಷ್ಯಕ್ಕಾಗಿ ಮತ್ತು ಭಾರತೀಯ ರೈತರ ಘನತೆಗಾಗಿ ಹೋರಾಡಿ. ನಾವು ಹಿಂದೆ ಸರಿಯುವುದಿಲ್ಲ ಎಂದು ಸರ್ಕಾರ ಅರ್ಥಮಾಡಿಕೊಳ್ಳಬೇಕು” ಎಂದು ಕಿಸಾನ್ ಮಜ್ದೂರ್ ಮೋರ್ಚಾದ ಸಂಚಾಲಕ ಮತ್ತು ಹಿರಿಯ ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ ಪ್ರತಿಭಟನಾಕಾರರ ದೃಢಸಂಕಲ್ಪವನ್ನು ಪ್ರತಿಧ್ವನಿಸಿದರು.

“ಫೆಬ್ರವರಿ 14 ರ ಮಾತುಕತೆಗಳು ಪ್ರಗತಿಯನ್ನು ಉಂಟುಮಾಡಲು ವಿಫಲವಾದರೆ, ರೈತರು ಈಗಾಗಲೇ ತಮ್ಮ ಮುಂದಿನ ಕ್ರಮವನ್ನು ರೂಪಿಸಿದ್ದಾರೆ. “ನಾವು ಏಕೀಕೃತ ನಿಲುವನ್ನು ಖಚಿತಪಡಿಸಿಕೊಳ್ಳಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಇತರ ಬಣಗಳೊಂದಿಗೆ ಸಭೆಗಳನ್ನು ಮುಂದುವರಿಸುತ್ತೇವೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾದರೆ, ನಾವು ಪಂಜಾಬ್ ಮತ್ತು ಹರಿಯಾಣದಾದ್ಯಂತ ಆಂದೋಲನವನ್ನು ತೀವ್ರಗೊಳಿಸುತ್ತೇವೆ” ಎಂದು ಪಂಧೇರ್ ಹೇಳಿದರು.

ಕೊನೆಯ ತಂತ್ರವಾಗಿ, ಪ್ರತಿಭಟನಾಕಾರರು ಫೆಬ್ರವರಿ 25 ರಂದು ದೆಹಲಿಯ ಕಡೆಗೆ ಮೆರವಣಿಗೆ ನಡೆಸಲು ಸಿದ್ಧರಾಗಿದ್ದಾರೆ. 2020-21 ರ ಚಳುವಳಿಯಂತೆಯೇ, ಸರ್ಕಾರದ ಮೇಲೆ ಪರಿಣಾಮಕಾರಿಯಾಗಿ ಒತ್ತಡ ಒತ್ತಡ ಹೇರಲು ಸನ್ನದ್ಧರಾಗಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ, ಅನಾರೋಗ್ಯ ಪೀಡಿತ ಜಗಜಿತ್ ಸಿಂಗ್ ದಲ್ಲೆವಾಲ್ ನೇತೃತ್ವದ ಎಸ್‌ಕೆಎಂ (ರಾಜಕೀಯೇತರ) ಅನುಪಸ್ಥಿತಿಯಿಂದಾಗಿ ಪಂಜಾಬ್‌ನ ರೈತ ಸಂಘಗಳ ನಡುವೆ ಒಗ್ಗಟ್ಟನ್ನು ಮೂಡಿಸುವ ಪ್ರಯತ್ನಗಳು ಬುಧವಾರ ಹಿನ್ನಡೆ ಅನುಭವಿಸಿದವು. ಜಗಜಿತ್ ಸಿಂಗ್ ದಲ್ಲೆವಾಲ್ ನೇತೃತ್ವದ ಎಸ್‌ಕೆಎಂ (ರಾಜಕೀಯೇತರ) ಅನುಪಸ್ಥಿತಿಯಿಂದಾಗಿ ಪಂಜಾಬ್‌ನ ರೈತ ಸಂಘಗಳ ನಡುವೆ ಒಗ್ಗಟ್ಟನ್ನು ಮೂಡಿಸುವ ಪ್ರಯತ್ನಗಳು ಅಪೂರ್ಣವಾಗಿದ್ದವು.

ಚಂಡೀಗಢದಲ್ಲಿ ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ, ಎಸ್‌ಕೆಎಂ ಮತ್ತು ಕೆಎಂಎಂ ಎರಡೂ ತಮ್ಮ ಪ್ರತಿಭಟನೆಗಳನ್ನು ವಲೀನ ಮಾಡುವ, ರೈತರ ಬೇಡಿಕೆಗಳಿಗಾಗಿ ಜಂಟಿಯಾಗಿ ಹೋರಾಡುವ ಅಗತ್ಯವನ್ನು ಒಪ್ಪಿಕೊಂಡವು. ಆದರೂ, ಕಳೆದ ಒಂದು ವರ್ಷದಿಂದ ಖಾನೌರಿ ಗಡಿಯಲ್ಲಿ ಪ್ರತ್ಯೇಕ ಪ್ರತಿಭಟನೆಯನ್ನು ನಡೆಸುತ್ತಿರುವ ದಲ್ಲೆವಾಲ್ ಅವರ ಬಣದ ಭಾಗವಹಿಸುವಿಕೆ ಇಲ್ಲದೆ ಯಾವುದೇ ಅಂತಿಮ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ.

ಎಸ್‌ಕೆಎಂ (ರಾಜಕೀಯೇತರ) ಸಂಚಾಲಕರಾದ ದಲ್ಲೆವಾಲ್, ಎಂಎಸ್‌ಪಿ ಮತ್ತು ಇತರ ರೈತ ಸಂಬಂಧಿತ ಸಮಸ್ಯೆಗಳಿಗೆ ಕಾನೂನುಬದ್ಧ ಖಾತರಿ ನೀಡುವಂತೆ ಒತ್ತಾಯಿಸಿ ನವೆಂಬರ್ 26 ರಿಂದ ಖಾನೌರಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಫೆಬ್ರವರಿ 14 ರಂದು ಕೇಂದ್ರದೊಂದಿಗೆ ನಡೆಯಲಿರುವ ನಿರ್ಣಾಯಕ ಸಭೆಗೆ ಮುಂಚಿತವಾಗಿ, ಕೆಎಂಎಂ ನಾಯಕರು ದಲ್ಲೆವಾಲ್ ಬಣದೊಂದಿಗೆ ಐಕ್ಯತಾ ಪ್ರಸ್ತಾವನೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈ ಬಿಕ್ಕಟ್ಟನ್ನು ನಿವಾರಿಸುವ ಉದ್ದೇಶದಿಂದ ಕೆಎಂಎಂ ನಾಯಕರು ಕೇಂದ್ರದೊಂದಿಗೆ ಫೆಬ್ರವರಿ 14 ರಂದು ನಡೆಯಲಿರುವ ನಿರ್ಣಾಯಕ ಸಭೆಗೆ ಮುನ್ನ, ರೈತ ನಾಯಕ ಬಲದೇವ್ ಸಿಂಗ್ ಸಿರ್ಸಾ ಹೃದಯಾಘಾತಕ್ಕೆ ಒಳಗಾದರು. ಮಹಾಪಂಚಾಯತ್‌ನಲ್ಲಿ ರೈತ ನಾಯಕ ಬಲದೇವ್ ಸಿಂಗ್ ಸಿರ್ಸಾ ಹೃದಯಾಘಾತಕ್ಕೆ ಒಳಗಾದರು. ಅವರನ್ನು ತಕ್ಷಣ ಪಟಿಯಾಲಾದ ರಾಜೀಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿರ್ಸಾ ಹೃದಯಾಘಾತದಿಂದ ಬಳಲುತ್ತಿರುವುದು ಒಂದು ತಿಂಗಳಲ್ಲಿ ಇದು ಎರಡನೇ ಬಾರಿ, ಆದರೂ ಅವರು ತಮ್ಮ ಸಹ ಪ್ರತಿಭಟನಾಕಾರರನ್ನು ಕೈಬಿಡಲು ನಿರಾಕರಿಸಿ ಚಳವಳಿಗೆ ಬದ್ಧರಾಗಿದ್ದರು.

ಪ್ರತ್ಯೇಕ ದುರಂತ ಘಟನೆಯಲ್ಲಿ, ಬಿಕೆಯು (ಏಕ್ತಾ ಸಿಧುಪುರ) ನಾಯಕ ಚರಣ್‌ಜಿತ್ ಸಿಂಗ್ ಕಲಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ವೈದ್ಯಕೀಯ ಚಿಕಿತ್ಸೆ ಪಡೆದ ನಂತರ ಕಲಾ ಚಂಡೀಗಢದ ಪಿಜಿಐನಿಂದ ಹಿಂತಿರುಗುತ್ತಿದ್ದಾಗ ಇದ್ದಕ್ಕಿದ್ದಂತೆ ಅವರ ವಾಹನದ ಮುಂದೆ ದಾರಿತಪ್ಪಿ ಪ್ರಾಣಿಯೊಂದು ಅಡ್ಡಬಂದು ಮಾರಣಾಂತಿಕ ಅಪಘಾತಕ್ಕೆ ಕಾರಣವಾಯಿತು. ಅವರಿಗೆ 48 ವರ್ಷ ವಯಸ್ಸಾಗಿತ್ತು, 19 ವರ್ಷದ ಮಗ ಮತ್ತು 21 ವರ್ಷದ ಮಗಳು ಸೇರಿದಂತೆ ದುಃಖಿತ ಕುಟುಂಬವನ್ನು ಅಗಲಿದ್ದಾರೆ.

ಒಂದು ವರ್ಷದಲ್ಲಿ ನಡೆದ ಪ್ರಮುಖ ಘಟನೆಗಳು

ಫೆಬ್ರವರಿ 21, 2024: ಬಟಿಂಡಾದ ಬಲ್ಲೋಹ್ ಗ್ರಾಮದ 21 ವರ್ಷದ ರೈತ ಶುಭಕರನ್ ಸಿಂಗ್ ಸಾವನ್ನಪ್ಪಿದರು. ಪ್ರತಿಭಟನಾ ನಿರತ ರೈತರ ದೆಹಲಿ ಮೆರವಣಿಗೆಯನ್ನು ತಡೆಯಲು ಹರಿಯಾಣ ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳು ಮತ್ತು ರಬ್ಬರ್ ಗುಂಡು ಗುಂಡು ಹಾರಿಸಿದಾಗ ಅವರು ಬಲಿಯಾದರು. ಫೆಬ್ರವರಿ 13 ಮತ್ತು ನಂತರ, ಹರಿಯಾಣ ಪೊಲೀಸ್ ಕ್ರಮದಲ್ಲಿ ಅನೇಕ ರೈತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ನವೆಂಬರ್ 26: ರೈತರ ಬೇಡಿಕೆಗಳಿಗಾಗಿ ಒತ್ತಾಯಿಸಲು ದಲ್ಲೆವಾಲ್ ಖಾನೌರಿ ಗಡಿಯಲ್ಲಿ ಆಮರಣ ಉಪವಾಸ ಆರಂಭಿಸಿದರು.

ಡಿಸೆಂಬರ್ 6-14: 101 ರೈತರ ಗುಂಪುಗಳು ದೆಹಲಿಯ ಕಡೆಗೆ ಮೆರವಣಿಗೆ ನಡೆಸಲು ಎರಡು ಪ್ರಯತ್ನಗಳನ್ನು ಮಾಡಿದವು. ಆದರೆ, ಹರಿಯಾಣ ಭದ್ರತಾ ಸಿಬ್ಬಂದಿ ಅವರನ್ನು ತಡೆದರು.

ಜನವರಿ 15-16, 2025: ಪಂಜಾಬ್‌ನ 101 ರೈತರು ದಲ್ಲೆವಾಲ್ ಅವರೊಂದಿಗೆ ಒಗ್ಗಟ್ಟಿನಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಹರಿಯಾಣದ ಹತ್ತು ರೈತರು ಸಹ ಇದನ್ನು ಅನುಸರಿಸಿದರು.

ಜನವರಿ 18, 2025: ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ನೇತೃತ್ವದ ಕೇಂದ್ರ ನಿಯೋಗವು ಖಾನೌರಿಯಲ್ಲಿರುವ ದಲ್ಲೆವಾಲ್‌ ಅವರನ್ನು ಭೇಟಿಯಾಗಿ, ಫೆಬ್ರವರಿ 14 ರಂದು ರೈತ ಪ್ರತಿಭಟನಾಕಾರರೊಂದಿಗೆ ಮಾತುಕತೆಯನ್ನು ಪುನರಾರಂಭಿಸುವ ಕೇಂದ್ರದ ಪ್ರಸ್ತಾವನೆಯನ್ನು ನೀಡಿತು. ನಂತರ, ದಲ್ಲೆವಾಲ್ ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತಾ ವೈದ್ಯಕೀಯ ಸಹಾಯವನ್ನು ಪಡೆಯಲು ಪ್ರಾರಂಭಿಸಿದರು. ಇತರ 111 ರೈತರು ತಮ್ಮ ಉಪವಾಸವನ್ನು ಕೊನೆಗೊಳಿಸಿದರು.

ಇದನ್ನೂ ಓದಿ; ಬುಲೆಟ್ ಓಡಿಸಿದ್ದಕ್ಕೆ ದಲಿತ ಯುವಕನ ಕೈ ಕಡಿದ ಪ್ರಬಲ ಜಾತಿಯವರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...