Homeಮುಖಪುಟರೈತರನ್ನು ಸುತ್ತುವರಿಯಲು ನೋಡಿದರು, ಈಗ ರೈತರೇ ಸರ್ಕಾರವನ್ನು ಸುತ್ತುವರೆದಿದ್ದಾರೆ: ಡಾ. ಅಮಿತ್ ಬಾಧುರಿ

ರೈತರನ್ನು ಸುತ್ತುವರಿಯಲು ನೋಡಿದರು, ಈಗ ರೈತರೇ ಸರ್ಕಾರವನ್ನು ಸುತ್ತುವರೆದಿದ್ದಾರೆ: ಡಾ. ಅಮಿತ್ ಬಾಧುರಿ

ದೆಹಲಿಗೆ ಮೆರವಣಿಗೆ ನಡೆಸಲು ರೈತರು ಆಸಕ್ತಿ ಹೊಂದಿಲ್ಲ. ಸರ್ಕಾರ ನಿಜವಾದ ಆಸಕ್ತಿಯನ್ನು ತೋರಿಸದ ಹೊರತು ಅವರಿಗೆ ಮಾತುಕತೆ ನಡೆಸಲು ಆಸಕ್ತಿ ಇಲ್ಲ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಸಂಸತ್ತಿನಲ್ಲಿನ ಮೋದಿಯವರು ನೀಡಿದ ಮೌಖಿಕ ಆಶ್ವಾಸನೆಗಳನ್ನು ಅವರು ನಿರ್ಲಕ್ಷಿಸಿದ್ದಾರೆ. ಸಂಸತ್ತು ಅಂಗೀಕರಿಸಿದ ಕಾನೂನಿನ ಮೂಲಕ ಅಂತಹ ಬೆಲೆಯನ್ನು ಖಾತರಿಪಡಿಸಬೇಕೆಂದು ರೈತರ ಸರಳ ಬೇಡಿಕೆಯಾಗಿದೆ

- Advertisement -
- Advertisement -

ನಮ್ಮ ಪ್ರಧಾನಿ ನರೇಂದ್ರ ಮೋದಿ ಗೌರವಾನ್ವಿತ ವ್ಯಕ್ತಿ. ಅವರು ಹೇಳಿದ್ದನ್ನು ಮಾಡುತ್ತಾರೆ. ಜನರೇ ಅವರನ್ನು ಅರ್ಥಮಾಡಿಕೊಳ್ಳುವುದಿಲ್ಲ, ಅಷ್ಟೇ!

ಮೋದಿ ತಮ್ಮ ಭರವಸೆಗಳನ್ನು ಉಳಿಸಿಕೊಳ್ಳುತ್ತಾರೆ. ಭಾರತೀಯ ಆರ್ಥಿಕತೆಯಿಂದ ಕಪ್ಪು ಹಣವನ್ನು ತೊಡೆದುಹಾಕುವ ಭರವಸೆ ನೀಡಿದ್ದರು. 2016 ರಲ್ಲಿ, ಅವರು ಡಿಮೋನಿಟೈಸೇಶನ್ ಎಂಬ ಕ್ಷಿಪ್ರ ದಾಳಿಯೊಂದಿಗೆ ತಮ್ಮ ಭರವಸೆಯನ್ನು ಉಳಿಸಿಕೊಂಡರು. ಸ್ಪಷ್ಟವಾಗಿ ರಾತ್ರೋರಾತ್ರಿ, ದೊಡ್ಡ ಉದ್ಯಮಗಳು ತಮ್ಮ ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತಿಸಲು ಸಾಧ್ಯವಾಯಿತು, ಆದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ’ಹಿಂದಿರುಗದ ಸಾಲದ’ ಆಸ್ತಿಗಳ (ನಾನ್ ಪರ್ಫಾಮಿಂಗ್ ಅಸ್ಸೆಟ್ಸ್) ಹೊರೆ ತೀವ್ರವಾಗಿ ಏರುವುದನ್ನು ಕಂಡವು. ಇದರ ಫಲಿತಾಂಶ ಎಲ್ಲರಿಗೂ ಕಾಣುವಂತೆ ಇತ್ತು. ಅನೌಪಚಾರಿಕ ಮತ್ತು ಅಸಂಘಟಿತ ವಲಯದ ಹಲವರಿಗೆ ಮಾತ್ರ ಇದನ್ನು ನೋಡಲು ಸಾಧ್ಯವಾಗಲಿಲ್ಲ. ಕಾರಣ, ಅವರ ವ್ಯವಹಾರಗಳು ಈ ಕ್ಷಿಪ್ರ ದಾಳಿಯನ್ನು ಎದುರಿಸಿ ಬದುಕುಳಿಯಲೇ ಇಲ್ಲ!

PC : COUNTERVIEW.ORG

ಇದು ಕಳೆದ ವರ್ಷದ ಮಾರ್ಚ್‌ನಲ್ಲಿ ನಡೆದದ್ದು ಕೂಡ, ಮೋದಿಯವರ ನಡೆಸಿದ ಮತ್ತೊಂದು ಕ್ಷಿಪ್ರ ದಾಳಿಯಂತೆಯೇ ಇತ್ತು; ನಾಲ್ಕು ಗಂಟೆಗಳ ನೋಟಿಸ್‌ನೊಂದಿಗೆ ಹಠಾತ್ ಲಾಕ್‌ಡೌನ್ ಮತ್ತು ತಮ್ಮ ಪಾತ್ರೆಗಳನ್ನು ಹೊಡೆಯುವ ಮೂಲಕ ಮತ್ತು ನಂತರ ದೀಪಗಳನ್ನು ಬೆಳಗಿಸುವ ಮೂಲಕ ಕೊವಿಡ್-19 ವಿರುದ್ಧ ಹೋರಾಡಲು ನಾಗರಿಕರಿಗೆ ಔಪಚಾರಿಕ ಸಲಹೆ. ಯಾವುದೇ ಉದ್ಯೋಗ ಮತ್ತು ಹಣವಿಲ್ಲದ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂದಿರುಗಲು ನಡೆಸಿದ ಸುದೀರ್ಘ ಪಾದಯಾತ್ರೆಯಲ್ಲಿ ಬಾಲ್ಕನಿಗಳೂ ಇರಲಿಲ್ಲ ಅಥವಾ ಬಡಿಯಲು ಪಾತ್ರೆಗಳು ಸಹ ಇರಲಿಲ್ಲ. ಅವರಲ್ಲಿ ಕೆಲವರು, ಮೋದಿಯವರ ಸಲಹೆಯಂತೆ ವೈರಸ್ ವಿರುದ್ಧ ಹೋರಾಡುವ ಮೊದಲು, ತಮ್ಮ ಹಳ್ಳಿಗಳಿಗೆ ಹೋಗುವ ದಾರಿಯಲ್ಲಿ ನಿಧನರಾದರು.

ಆಗ ನಮ್ಮ ಪ್ರಧಾನಿ ಎರಡು ವರ್ಷಗಳಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದರು. ಹಠಾತ್ ಮತ್ತು ತೀವ್ರವಾದ ಲಾಕ್‌ಡೌನ್ ಮುಸುಕಿನ ಹಿಂದೆ ಅವರು ಈಗಾಗಲೇ ಇದನ್ನು ಮಾಡಿದ್ದಾರೆ. ಮೋದಿ ಸರಳ ವ್ಯಕ್ತಿಯಾಗಿದ್ದು, ಅವರ ಸಾಧನೆಗಳ ಬಗ್ಗೆ ಕೊಚ್ಚಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಆದರೆ ನಿಖರವಾಗಿ 227 ದಿನಗಳಲ್ಲಿ ರೈತರ ಸಂಪತ್ತು ದ್ವಿಗುಣಗೊಂಡಿದೆ ಎಂದು ದೇಶ ತಿಳಿದಿರಬೇಕು!

ಇತ್ತೀಚಿನ ಆಕ್ಸ್‌ಫ್ಯಾಮ್ ವರದಿಯಿಂದ ನಾವು ತಿಳಿದಿದ್ದೇನೆಂದರೆ, “ಮಾರ್ಚ್ 18 ಮತ್ತು ಅಕ್ಟೋಬರ್ 31ರ ನಡುವೆ, ಭಾರತದ ಅತಿ ಶ್ರೀಮಂತ ವ್ಯಕ್ತಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮತ್ತು ಅತಿದೊಡ್ಡ ಷೇರುದಾರರಾದ ಮುಖೇಶ್ ಅಂಬಾನಿ ಅವರ ಸಂಪತ್ತು ದ್ವಿಗುಣವಾಗಿರುವುದಕ್ಕೂ ಹೆಚ್ಚು ವೃದ್ಧಿಯಾಗಿದೆ. ಅದು ಈ ಅವಧಿಯಲ್ಲಿ 36.2 ಬಿಲಿಯನ್ ಡಾಲರ್‌ನಿಂದ 78.3 ಬಿಲಿಯನ್ ಡಾಲರ್‌ಗೆ ಏರಿತು. ಅಂಬಾನಿಯ ಸಂಪತ್ತು ಭಾರತದ ಎರಡನೇ ಶ್ರೀಮಂತ ವ್ಯಕ್ತಿಗಿಂತ ಮೂರು ಪಟ್ಟು ಹೆಚ್ಚಾಗಿದೆ, ಎರಡನೇ ಶ್ರೀಮಂತನೆಂದರೆ ಗೌತಮ್ ಅದಾನಿ, ಲಾಕ್‌ಡೌನ್ ಸಮಯದಲ್ಲಿ ಅವರ ನಿವ್ವಳ ಮೌಲ್ಯವೂ ಹೆಚ್ಚಾಗಿದೆ. ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಭಾರತೀಯ ಆರ್ಥಿಕತೆಯು ತೀವ್ರ ಸಂಕುಚಿತವಾಗುತ್ತಿರುವ ಸಮಯದಲ್ಲಿ ಇವರುಗಳ ಸಂಪತ್ತಿನ ಸ್ಫೋಟವು ಗುರುತ್ವಾಕರ್ಷಣೆಯ ನಿಯಮವನ್ನೂ ಧಿಕ್ಕರಿಸುತ್ತದೆ.

ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಅಪಾರ ರೀಟೇಲ್ ಮತ್ತು ಸಂಗ್ರಹಣೆ (ಸಿಲೋ) ಹಿತಾಸಕ್ತಿಗಳನ್ನು ಹೊಂದಿರುವ ಬಿಲಿಯನೇರ್ ಜೋಡಿ ಅಂಬಾನಿ ಮತ್ತು ಅದಾನಿ ಗೌರವಾನ್ವಿತ ರೈತರು ಎಂದು ಸರಳ ಮನುಷ್ಯನಾದ ಪ್ರಧಾನ ಮಂತ್ರಿ ಉಲ್ಲೇಖಿಸಲಿಲ್ಲ. ಈ ಇಬ್ಬರು ’ರೈತರ’ ಆದಾಯವನ್ನು ಭಾರತದ ಉಳಿದ ರೈತರ ಆದಾಯಕ್ಕೆ ಸೇರಿಸಿದಾಗ, ರೈತರ ಸರಾಸರಿ ಆದಾಯವು ದುಪ್ಪಟ್ಟಿಗಿಂತ ಹೆಚ್ಚಾಗಿ ಜಿಗಿತ ಕಂಡಿರುವುದನ್ನು ಸುಲಭವಾಗಿ ನೋಡಬಹುದು.

ರೈತರಲ್ಲಿ ಇಂತಹ ಸಂಪತ್ತಿನ ಸೃಷ್ಟಿಯನ್ನು, ಈಗಾಗಲೇ ಎಲ್ಲಾ ಕಾರ್ಪೊರೆಟ್ ಪರವಾದ ಮಾರುಕಟ್ಟೆ ಆಧಾರಿತ ಅರ್ಥಶಾಸ್ತ್ರಜ್ಞರು ಅಂದಾಜು ಮಾಡಿರಬಹುದು. ಇವರಲ್ಲಿ ಕೆಲವರು ಭಾರತದಲ್ಲಿ ಮತ್ತು ಇತರರು ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನಲ್ಲಿದ್ದಾರೆ. ಅದಕ್ಕಾಗಿಯೇ ಅವರು ಮೋದಿಯವರ ಹೊಸ ಕೃಷಿ ನೀತಿಗಳಿಗೆ ಬೆಂಬಲ ನೀಡುವ ಬಗ್ಗೆ ಮಾಧ್ಯಮಗಳಲ್ಲಿ ಗಟ್ಟಿ ಧ್ವನಿಯಲ್ಲಿ ಮತ್ತು ವಿಶ್ವಾಸದಿಂದ ಮಾತನಾಡುತ್ತಾರೆ.

ರೈತರಿಗೆ ಆದಾಯದ ಸ್ವಲ್ಪ ರಕ್ಷಣೆ ನೀಡುತ್ತಿದ್ದ, ಕೃಷಿ ಉತ್ಪನ್ನಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಕೃಷಿನೀತಿಗಳು ದೂರವಿಟ್ಟಿವೆ. ಮುಕ್ತ ಮಾರುಕಟ್ಟೆ ಬೆಲೆಗಳು ಮಾತ್ರ ನ್ಯಾಯ ಒದಗಿಸಬಲ್ಲವು ಎಂದು ನಂಬಿದ ಮೋದಿ ಬೆಂಬಲ ಬೆಲೆಯನ್ನು ರೈತರ ಭವಿಷ್ಯದ ಏಳಿಗೆಗೆ ಅಡ್ಡಿ ಎಂದು ಎಣಿಸಿದ್ದಾರೆ. ಅವರ ಮೂರು ಹೊಸ ಕಾನೂನುಗಳನ್ನು ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ರಚಿಸಲು ವಿನ್ಯಾಸಗೊಳಿಸಲಾಗಿದೆ.

ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರು, ಸರಳ ಅಂಕಗಣಿತವು ತಮ್ಮ ಸರಾಸರಿ ಆದಾಯವನ್ನು ಅಗಾಧವಾಗಿ ಹೆಚ್ಚಿಸುತ್ತದೆ ಎಂಬುದನ್ನು ಕಾಣಬೇಕು. ಆದ್ದರಿಂದ ಅವರು ತಮ್ಮ ಸಮುದಾಯಕ್ಕೆ ಇಬ್ಬರು ಹೊಸ ಕಾರ್ಪೊರೆಟ್ ಸದಸ್ಯರನ್ನು ಸ್ವಾಗತಿಸಬೇಕು. ಪ್ರಧಾನಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರೊಂದಿಗೆ ವ್ಯವಹರಿಸಿದ್ದರಿಂದ ಅವರಿಬ್ಬರ ಬಗ್ಗೆ ಭರವಸೆ ನೀಡಬಹುದು. ಈಗ ಅಂಬಾನಿ ಮತ್ತು ಅದಾನಿಗೆ ವಿಮಾನ ನಿಲ್ದಾಣ ಮತ್ತು ಇತರ ಪ್ರಮುಖ ಸರ್ಕಾರಿ ಕೆಲಸಗಳ ಒಪ್ಪಂದಗಳನ್ನು ನೀಡುವುದರೊಂದಿಗೆ ಅವರ ನಡುವಿನ ಬಾಂಧವ್ಯ ಇನ್ನಷ್ಟು ಆಳವಾಗಿದೆ.

ಸರಳ ಅಂಕಗಣಿತದ ಲೆಕ್ಕಾಚಾರದಿಂದ ಹರಿಯುವ ಪ್ರಯೋಜನವನ್ನು ರೈತರು ಏಕೆ ನೋಡುತ್ತಿಲ್ಲ ಎಂದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಭಾರತದ ಗಣ್ಯರು ಸಹ ಗೊಂದಲಕ್ಕೊಳಗಾಗಿದ್ದಾರೆ. ಅಲ್ಲದೆ, ಈ ಎಲ್ಲಾ ಗಣ್ಯರು ಕೂಡ ಷೇರು ಬೆಲೆಗಳ-ವಿಶೇಷವಾಗಿ ಅಂಬಾನಿ ಮತ್ತು ಅದಾನಿ ನಡೆಸುವ ಕಂಪನಿಗಳ- ಷೇರುಗಳ ಏರಿಕೆಯಿಂದಾಗಿ ಮತ್ತಷ್ಟು ಶ್ರೀಮಂತರಾಗಿದ್ದಾರೆ. ಅದೃಷ್ಟದ ಈ ಏರಿಕೆಯನ್ನು ಭಾರತದಲ್ಲಿ ಮತ್ತು ವಿದೇಶದಲ್ಲಿ ಸ್ಟಾಕ್ ದಲ್ಲಾಳಿಗಳು ಗುರುತಿಸಿದ್ದಾರೆ. ಅಲ್ಪ ಆದಾಯಕ್ಕಾಗಿ ರೈತರು ಮಾತ್ರ ತಮ್ಮ ಹೊಲಗಳಲ್ಲಿ ಶ್ರಮಿಸುವುದಕ್ಕಿಂತ ಷೇರುಗಳನ್ನು ಹೊಂದುವ ಅನುಕೂಲವನ್ನು ನೋಡಲು ಹಠಮಾರಿಗಳಂತೆ ನಿರಾಕರಿಸುತ್ತಿದ್ದಾರೆ.

PC : BBC

ಈ ದಿನಗಳಲ್ಲಿ ನಮ್ಮ ರಾಷ್ಟ್ರೀಯ ಗುಪ್ತಚರ ಅಧಿಕಾರಿಗಳಿಗೆ ಚೆನ್ನಾಗಿ ತಿಳಿದಿರುವ ಪ್ರಕಾರ, ಭಯೋತ್ಪಾದಕರು, ಖಲಿಸ್ತಾನಿಗಳು (ಪ್ರತ್ಯೇಕ ರಾಷ್ಟ್ರವನ್ನು ಕೋರುವ ಸಿಖ್ಖರು), ನಗರ ನಕ್ಸಲರು (ಮಾವೋವಾದಿಗಳು) ಮತ್ತು ವಿದೇಶಿ ಪಿತೂರಿಗಳು ಭಾರತವನ್ನು ನಾಶಮಾಡಲು ಕೋವಿಡ್-19 ನೊಂದಿಗೆ ಸ್ಪರ್ಧಿಸುವ ಮಾರಕ ವೈರಸ್‌ಗಳಾಗಿವೆ.

ಈ ವೈರಸ್‌ಗಳೆಲ್ಲವೂ ರಾಷ್ಟ್ರ ವಿರೋಧಿ ಅಲ್ಲದೆ ಹೋದರೆ ಸರ್ಕಾರ ವಿರೋಧಿ ಖಂಡಿತಾ; ಸರ್ಕಾರ ವಿರೋಧಿ ಅಲ್ಲದಿದ್ದರೆ ಖಂಡಿತವಾಗಿಯೂ ಸರ್ಕಾರ ನೀತಿಗಳ ವಿರೋಧಿಗಳು. ಇವರೆಲ್ಲ ರೈತರ ಆಂದೋಲನಕ್ಕೆ ನುಸುಳುತ್ತಿದ್ದಾರೆ ಮತ್ತು ವಿಚಿತ್ರವಾದ ಸಮಸ್ಯೆ ಎಂದರೆ ರೈತರು ಅವರಂತೆಯೇ ಆಗುತ್ತಿದ್ದಾರೆ.

ಮಾಜಿ ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೆಯೇ ಮೋದಿಯವರಿಗೂ ಮಾಧ್ಯಮ ವೈರಸ್ ಎಷ್ಟು ಅಪಾಯಕಾರಿ ಎಂದು ತಿಳಿದಿದೆ. ನ್ಯಾಯಾಲಯ ವಿಚಾರಣೆಗೆ ಕಾಯುತ್ತಿರುವ ಜೈಲಿನಲ್ಲಿರುವ ಭಾರತೀಯ ಮಾವೋವಾದಿಗಳ ಕಂಪ್ಯೂಟರ್‌ಗಳಲ್ಲಿ ರಾಜಿ ಮಾಡಿಕೊಂಡ, ಅನಧಿಕೃತವಾಗಿ ಸೇರಿಸಲ್ಪಟ್ಟ ಸಾಕ್ಷ್ಯಗಳ ಸುದ್ದಿಯನ್ನು ’ದ ವಾಷಿಂಗ್ಟನ್ ಪೋಸ್ಟ್’ ಇತ್ತೀಚೆಗೆ ಪ್ರಕಟಿಸಿದೆ.

ಅಮೆರಿಕದಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರನ್ನು ಅಧ್ಯಕ್ಷಗಾದಿಯಿಂದ ಇಳಿಸಿದ್ದ ವಾಟರ್‌ಗೇಟ್ ಹಗರಣವನ್ನು ಬಯಲುಮಾಡಿದ್ದ ’ದಿ ಪೋಸ್ಟ್’ನ ಇಂತಹ ವರದಿಗಳು ಸಹಜವಾಗಿ ಮತ್ತೊಂದು ’ವಿದೇಶಿ ವಿನಾಶಕಾರಿ ಸಿದ್ಧಾಂತ’ ಎಂದು ಮೋದಿ ನಮ್ಮನ್ನು ಈ ಬಗ್ಗೆ ಸರಿಯಾಗಿಯೇ ಎಚ್ಚರಿಸಿದ್ದಾರೆ.

ಅದೇನೇ ಇದ್ದರೂ, ನಾವು ರಾತ್ರಿಯಲ್ಲಿ ಶಾಂತಿಯುತವಾಗಿ ಮಲಗಬಹುದು, ಏಕೆಂದರೆ ನಾವು 56 ಇಂಚುಗಳಷ್ಟು ಅಳತೆಯ ಎದೆ ಇರುವ, ತಮ್ಮ ಆದರ್ಶಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಬಲವಾದ ಪ್ರಧಾನಮಂತ್ರಿಯ ಸುರಕ್ಷಿತ ಕೈಯಲ್ಲಿದ್ದೇವೆ,

ಆದ್ದರಿಂದ, ಪಾಠ ಕಲಿಯಲು ನಿರಾಕರಿಸುವ ಕೆಟ್ಟ ಶಾಲಾ ವಿದ್ಯಾರ್ಥಿಗಳ ಗುಂಪಿನಂತೆ ರೈತರು ವರ್ತಿಸಿದಾಗ ಮೋದಿಯವರ ಆಯ್ಕೆ ಏನಾಗಿತ್ತು? ರೈತರನ್ನು ಬಂಧಿಸುವ ಮೂಲಕ ಅವರಿಗೆ ಪಾಠ ಕಲಿಸುವುದು. ಅವರಲ್ಲಿ ಕೆಲವರನ್ನು ಸಣ್ಣದೊಂದು ಅನುಮಾನದ ಮೇಲೆ ಅಥವಾ ಯಾವುದೇ ಅನುಮಾನವಿಲ್ಲದೆ ಬಂಧಿಸಲಾಗುತ್ತಿದೆ.

ಇದಲ್ಲದೆ, ಲೋಹದ ಮುಳ್ಳುಗಳು, ಮುಳ್ಳುತಂತಿ, ಸಿಮೆಂಟ್ ಬ್ಲಾಕ್‌ಗಳು ಮತ್ತು ಕಂದಕಗಳ ಜೊತೆಗೆ ಭಾರಿ ಪ್ರಮಾಣದ ಪೊಲೀಸ್ ಉಪಸ್ಥಿತಿಯು ಸಿಂಘು ಮತ್ತು ದೆಹಲಿಯ ಇತರ ಗಡಿ ಪ್ರದೇಶಗಳಲ್ಲಿನ ಪ್ರತಿಭಟನಾನಿರತ ರೈತರನ್ನು ಸುತ್ತುವರಿದಿದೆ, ಇದರ ಪರಿಣಾಮವಾಗಿ, ಅವರು ದೈಹಿಕ ಚಲನವಲನವನ್ನು ನಿಯಂತ್ರಿಸಲಾಗಿದೆ. ಇಡೀ ಪ್ರಭುತ್ವ ಶಕ್ತಿಯ ಬೆಂಬಲದೊಂದಿಗೆ ಪ್ರಧಾನಮಂತ್ರಿ ರೈತರಿಂದ ಬರುವ ಯಾವುದೇ ಸವಾಲನ್ನು-ವಿಶೇಷವಾಗಿ ದೆಹಲಿಯ ಕಡೆಗಿನ ಅವರ ಮೆರವಣಿಗೆಯನ್ನು- ಎದುರಿಸಲು ಸಿದ್ಧರಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ,

ಇದಕ್ಕೆ ವಿರುದ್ಧವಾಗಿ, ಪ್ರತಿಭಟನಾನಿರತ ಪುರುಷರು, ಮಹಿಳೆಯರು ಮತ್ತು ಮಕ್ಕಳು ಶಾಂತಿಯುತ ಗುಂಪುಗಳಾಗಿವೆ. ರೈತರ ಶಸ್ತ್ರಾಸ್ತ್ರಗಳು ಅವರ ಟ್ರಾಕ್ಟರುಗಳು ಮಾತ್ರ. ಅವರು ಎಂದಿಗೂ ಗೆಲ್ಲಲು ಸಾಧ್ಯವಾಗದ ಅಸಮಾನ ಹೋರಾಟದಂತೆ ಇದು ಕಾಣಿಸುತ್ತಿದೆ.

ಇನ್ನೂ, ಈ ಚಕಮಕಿ ಮುಂದುವರೆದಂತೆ, ಅದು ಮೋದಿಯವರಿಗೆ ಕಡಿಮೆ ಮತ್ತು ಇನ್ನೂ ಕಡಿಮೆ ಅನುಕೂಲಕರವಾಗುತ್ತಿದೆ. ರೈತರು ಹಠಮಾರಿ ಮತ್ತು ದೃಢ ನಿಶ್ಚಯವನ್ನು ಹೊಂದಿರುವುದು ಮಾತ್ರವಲ್ಲ, ಈ ಹೋರಾಟವನ್ನು ಎದುರಿಸಲು ಅವರು ವಿರೋಧಾಭಾಸದ ಮಾರ್ಗವನ್ನು ಸಹ ಕಂಡುಕೊಂಡಿದ್ದಾರೆ.

ದೆಹಲಿಗೆ ಮೆರವಣಿಗೆ ನಡೆಸಲು ರೈತರು ಆಸಕ್ತಿ ಹೊಂದಿಲ್ಲ. ಸರ್ಕಾರ ನಿಜವಾದ ಆಸಕ್ತಿಯನ್ನು ತೋರಿಸದ ಹೊರತು ಅವರಿಗೆ ಮಾತುಕತೆ ನಡೆಸಲು ಆಸಕ್ತಿ ಇಲ್ಲ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಸಂಸತ್ತಿನಲ್ಲಿನ ಮೋದಿಯವರು ನೀಡಿದ ಮೌಖಿಕ ಆಶ್ವಾಸನೆಗಳನ್ನು ಅವರು ನಿರ್ಲಕ್ಷಿಸಿದ್ದಾರೆ. ಸಂಸತ್ತು ಅಂಗೀಕರಿಸಿದ ಕಾನೂನಿನ ಮೂಲಕ ಅಂತಹ ಬೆಲೆಯನ್ನು ಖಾತರಿಪಡಿಸಬೇಕೆಂದು ರೈತರ ಸರಳ ಬೇಡಿಕೆಯಾಗಿದೆ.

ದೆಹಲಿಯ ಹೊರಗೆ ಪ್ರತಿಭಟನೆ ನಡೆಸುತ್ತಿರುವ ರೈತರು ಯಾವುದೇ ಆತುರದಲ್ಲಿಲ್ಲ ಎಂದು ತಿಳಿದು ಮೋದಿ ಎಚ್ಚರಗೊಂಡಿದ್ದಾರೆ. ರೈತರು ನೆರೆಯ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸಿಖ್ ಮತ್ತು ಜಾಟ್ ರೈತರ ಬೆಂಬಲವನ್ನು ಬಲಪಡಿಸಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ಕಿಸಾನ್ ಮಹಾಪಂಚಾಯತ್‌ಗಳು- 10 ರಿಂದ 12 ಹಳ್ಳಿಗಳ ಪ್ರತಿಭಟನಾನಿರತ ರೈತರ ಸಭೆ- ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಭಾರಿ, ಉತ್ಸಾಹಭರಿತ ಜನಸಂದಣಿಯನ್ನು ಸೆಳೆಯುತ್ತಿವೆ.

ಅಂತೆಯೇ, ದಕ್ಷಿಣ ರಾಜ್ಯಗಳಾದ ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ದೆಹಲಿ ಪ್ರತಿಭಟನೆಯನ್ನು ಬೆಂಬಲಿಸಿ ಹೆಚ್ಚಿನ ಸಂಖ್ಯೆಯ ರೈತರು ಆಂದೋಲನಕ್ಕೆ ಸೇರುತ್ತಿದ್ದಾರೆ.

ಪಶ್ಚಿಮ ಬಂಗಾಳ, ಒಡಿಶಾ ಮತ್ತು ಇತರ ಪೂರ್ವ ರಾಜ್ಯಗಳಲ್ಲಿ ರೈತ ಪ್ರತಿಭಟನೆ ವ್ಯಾಪಕ ಬೆಂಬಲವನ್ನು ಪಡೆದ ನಂತರ, ಮೋದಿ ಮುಖ್ಯಸ್ಥರಾಗಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ’ಜನಪ್ರಿಯತೆಯು’ ಮತ್ತೊಂದು ಗಂಭೀರ ಹೊಡೆತವನ್ನು ಸಹಿಸಿಕೊಳ್ಳಬೇಕಿದೆ.

ಭಾರತದಲ್ಲಿ ಹಿಂದೆಂದೂ ಕಂಡಿರದ ರೀತಿಯಲ್ಲಿ ರೈತರು ಒಗ್ಗೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಸಾಮಾನ್ಯವಾಗಿ ಜನರನ್ನು ವಿಭಜಿಸುವ ಜಾತಿ, ಧರ್ಮ ಮತ್ತು ವರ್ಗದ ಗಡಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ.

ರೈತರ ಹಿಂದೆ ಒಂದಾಗುವುದು ಮತ್ತು ಮುಳುಗುವುದು ಈಗ ವಿರೋಧ ಪಕ್ಷಗಳಿಗೆ ಬಿಟ್ಟಿದ್ದು. ಈಗ ಕೇವಲ ಮೂರು ಕೃಷಿ ಕಾನೂನುಗಳಲ್ಲ ಮುಳುಗಿಸುವುದಲ್ಲ, ಆದರೆ ಕಾನೂನುಗಳನ್ನು ಅಂಗೀಕರಿಸಿದ ಮೋದಿಯವರ ಸರ್ಕಾರವನ್ನೂ ಕೂಡ – ಪ್ರಜಾಸತ್ತಾತ್ಮಕವಾಗಿ.

ಪ್ರಧಾನಿ ಮೋದಿ ರೈತರನ್ನು ಸುತ್ತುವರಿಯಲು ಯೋಜಿಸಿದ್ದರು. ಆದರೆ ರೈತರು ಈಗ ಅವರ ಸರ್ಕಾರವನ್ನು ಸುತ್ತುವರೆದಿದ್ದಾರೆ.

ಅಮಿತ್ ಬಾಧುರಿ

ಅಮಿತ್ ಬಾಧುರಿ
ಸಂಶೋಧಕರು ಮತ್ತು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಅರ್ಥಶಾಸ್ತ್ರ ಪ್ರಾಧ್ಯಾಪಕ; ಇಟಲಿಯ ಪಾವಿಯಾ ವಿಶ್ವವಿದ್ಯಾಲಯದ ’ಕ್ಲಿಯರ್ ಫೇಮ್ ಪ್ರಾಧ್ಯಾಪಕ. ಜೆಎನ್‌ಯು ಕ್ಯಾಂಪಸ್‌ನಲ್ಲಿ ಭಿನ್ನಾಭಿಪ್ರಾಯ, ಭಿನ್ನಮತ ಹತ್ತಿಕ್ಕುವ ವಿದ್ಯಮಾನ ಸಂಭವಿಸಿದಾಗ ಅವರು ೨೦೨೦ರಲ್ಲಿ ಜೆಎನ್‌ಯುಗೆ ರಾಜೀನಾಮೆ ನೀಡಿದರು.


ಇದನ್ನೂ ಓದಿ: ಭಾರತದ ರೈತ ಹೋರಾಟಕ್ಕೆ ಅಮೆರಿಕದ 87 ಸಂಘಟನೆಗಳ ಬೆಂಬಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...