Homeಮುಖಪುಟಧಾರವಿ ಮರುಅಭಿವೃದ್ದಿ ಯೋಜನೆ ಅದಾನಿ ತೆಕ್ಕೆಗೆ: ನಿಯಮ ಉಲ್ಲಂಘಿಸಿ ಸಹಿ ಹಾಕಿದ ದೇವೇಂದ್ರ ಫಡ್ನವಿಸ್?

ಧಾರವಿ ಮರುಅಭಿವೃದ್ದಿ ಯೋಜನೆ ಅದಾನಿ ತೆಕ್ಕೆಗೆ: ನಿಯಮ ಉಲ್ಲಂಘಿಸಿ ಸಹಿ ಹಾಕಿದ ದೇವೇಂದ್ರ ಫಡ್ನವಿಸ್?

- Advertisement -
- Advertisement -

ಈಗಾಗಲೇ ಬಿಡ್ಡಿಂಗ್‌ನಲ್ಲಿ ದುಬೈ ಮೂಲದ ಸೆಕ್ಲಿಂಗ್ ಟೆಕ್ನಾಲಜಿ ಕಾರ್ಪೊರೇಷನ್‌ ಪಾಲಾಗಿದ್ದ ಧಾರವಿ ಮರುಅಭಿವೃದ್ದಿ ಯೋಜನೆಯನ್ನು ವಾಪಸ್ ಪಡೆದು ಪ್ರಧಾನಿ ಮೋದಿಯವರ ಗೌತಮ್ ಅದಾನಿ ಕಂಪನಿಗೆ ಮಹಾರಾಷ್ಟ್ರ ಸರ್ಕಾರ ಧಾರೆಯೆರೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಜುಲೈ 13 ರಂದು ವಸತಿ ಇಲಾಖೆಯನ್ನು ಹಸ್ತಾಂತರಿಸುವ ಮೊದಲು ದೇವೇಂದ್ರ ಫಡ್ನವೀಸ್ ಅವರ ಕೊನೆಯ ಕೆಲಸವೆಂದರೆ ಮುಂಬೈನ ಪ್ರಧಾನ ಜಾಗದಲ್ಲಿ 600 ಎಕರೆ ಭೂಮಿಯನ್ನು ಒಳಗೊಂಡಿರುವ 5,069 ಕೋಟಿ ರೂಗಳ ಧಾರಾವಿ ಮರುಅಭಿವೃದ್ಧಿ ಯೋಜನೆಯನ್ನು ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಳ್ಳಲು ಔಪಚಾರಿಕವಾಗಿ ಅನುಮೋದನೆ ನೀಡುವುದಾಗಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಈ ಯೋಜನೆ ಮೂಲತಃ ಬೇರೆ ಬಿಡ್‌ದಾರರಿಗೆ ನೀಡಲಾಗಿತ್ತು. ಆದರೆ ಶಿಂದೆ-ಫಡ್ನವಿಸ್ ಸರ್ಕಾರವು ಪಿಎಂ ಮೋದಿ ಅವರ ಆಪ್ತ ಸ್ನೇಹಿತನಿಗೆ ಮಾತ್ರ ಈ ಯೋಜನೆ ಸಿಗುವಂತೆ ಖಚಿತಪಡಿಸಿಕೊಳ್ಳಲು ಟೆಂಡರ್ ಷರತ್ತುಗಳನ್ನು ಬದಲಾಯಿಸಲು ಅದ್ಭುತವಾದ ಚಮತ್ಕಾರ ಮಾಡಿತು. ಹಿಂದಿನ ಬಿಡ್ ವಿಜೇತರನ್ನು ಹೊರಗಿಡಲು ಬಿಡ್ ಅನ್ನು ರೂ. 10,000 ಕೋಟಿಯಿಂದ ರೂ. 20,000 ಕೋಟಿಗೆ ಏರಿಸಲು ಮತ್ತು ಹಣದ ಕೊರತೆಯಿರುವ ಅದಾನಿ ಗ್ರೂಪ್‌ನ ಹಾದಿಯನ್ನು ಸುಗಮಗೊಳಿಸುವ ಕಂತುಗಳಲ್ಲಿ ಪಾವತಿಯನ್ನು ಅನುಮತಿಸಿತು” ಎಂದು ಅವರು ದೂರಿದ್ದಾರೆ.

ಅಷ್ಟೇ ಅಲ್ಲದೆ, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಆಕ್ಷೇಪಣೆಗಳ ಹೊರತಾಗಿಯೂ, ಸರ್ಕಾರದ ನಿರ್ಣಯವು TDR (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ಗಳ ಅನುಮತಿಗಳನ್ನು ಬೆಲೆಯಲ್ಲಿ ಯಾವುದೇ ಸೂಚ್ಯಂಕವಿಲ್ಲದೆ ಮಾರಾಟ ಮಾಡಲು ಮತ್ತು TDR ಅನ್ನು ಧಾರಾವಿ ಸ್ಪೆಷಲ್ ಪರ್ಪಸ್ ವೆಹಿಕಲ್ ಕಡ್ಡಾಯವಾಗಿ 50% ಖರೀದಿಸಲು ಸೂಚಿಸಿದೆ. ಆ ಮೂಲಕ ಯೋಜನೆಗೆ ಯಾವುದೇ ಬಂಡವಾಳ ಹೂಡದೆ ಲಾಭ ಬರುವಂತೆ ಮಾಡಲಾಗುತ್ತಿದೆ. ಏಕೆಂದರೆ ಕೊರತೆಯಿರುವ ಅದಾನಿಯನ್ನು ಉಳಿಸಲು ಹೀಗೆ ಮಾಡಲಾಗಿದೆ. ಬೇರೆ ಯಾವುದೇ ಡೆವಲಪರ್ ಅಂತಹ ಸಿಹಿ ಒಪ್ಪಂದವನ್ನು ಪಡೆದಿದ್ದಾರೆಯೇ ಎಂದು ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿಯವರು ತಮ್ಮ ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳನ್ನು ಹೇಗೆ ತಮ್ಮ ಆಪ್ತರಿಗಾಗಿ ಎಟಿಎಂ ಯಂತ್ರಗಳಾಗಿ ಬಳಸುತ್ತಿದ್ದಾರೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ. ಮುಂಬೈನ ಕೊಳೆಗೇರಿ ನಿವಾಸಿಗಳ ಭೂಮಿ ಮತ್ತು ಜೀವನೋಪಾಯವನ್ನು ಕೂಡ ಮೊದಾನಿ ಮೆಗಾಸ್ಕಾಮ್‌ ಬಿಡುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ವಸತಿ ಖಾತೆಯನ್ನು ನಿರ್ವಹಿಸುತ್ತಿದ್ದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ತಮ್ಮ ಸಹೋದ್ಯೋಗಿ ಅತುಲ್ ಸೇವ್ ಅವರಿಗೆ ಅಧಿಕಾರ ಹಸ್ತಾಂತರಿಸುವ ಒಂದು ದಿನದ ಮೊದಲು ಜಿಆರ್ ಅನ್ನು ತೆರವುಗೊಳಿಸಿದ್ದಾರೆ. ಕೈಗಾರಿಕೋದ್ಯಮಿಯ ಹೊಸ ಯುಗದ ಗುಲಾಮರನ್ನು ಭೇಟಿ ಮಾಡಿ” ಎಂದು ಶಿವಸೇನೆ ಉದ್ದವ್ ಬಣದ ಸ್ವಾತಿ ಚತುರ್ವೇದಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಧಾರಾವಿ ಪುನರಾಭಿವೃದ್ಧಿ ಯೋಜನೆ?

ಮುಂಬೈನಲ್ಲಿರುವ ಧಾರಾವಿ ಏಷ್ಯಾದ ಅತಿದೊಡ್ಡ ಕೊಳೆಗೇರಿ ಪ್ರದೇಶವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಬಿಡ್ಡಿಂಗ್‌ನಲ್ಲಿ ಈ ಯೋಜನೆಯನ್ನು ಅದಾನಿ ಪ್ರಾಪರ್ಟೀಸ್ ಗೆದ್ದುಕೊಂಡಿತ್ತು. 2018 ರಲ್ಲಿ ಧಾರಾವಿ ಯೋಜನೆಗೆ ಟೆಂಡರ್ ಕರೆದಾಗ ದುಬೈ ಮೂಲದ ಸೆಕ್ಲಿಂಕ್ ಟೆಕ್ನಾಲಜಿ ಕಾರ್ಪೊರೇಶನ್ ಅತಿ ಹೆಚ್ಚು ಬಿಡ್ಡರ್ ಗೆದ್ದುಕೊಂಡಿತ್ತು. ಆದರೆ ಫಡ್ನವಿಸ್-ಶಿಂಧೆ ಸರ್ಕಾರವು ಯೋಜನೆಗೆ ಹೊಸ ಬಿಡ್ಡಿಂಗ್ ಕರೆದಿದ್ದರಿಂದ ದುಬೈ ಕಂಪನಿಯು ನ್ಯಾಯಾಲಯದ ಮೆಟ್ಟಿಲೇರಿತು. ದುಬೈ ಕಂಪನಿಯೊಂದಿಗೆ ಯಾವುದೇ ನಿರ್ಣಾಯಕ ಒಪ್ಪಂದವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಯೋಜನೆಯಲ್ಲಿ ಒಟ್ಟು 6.5 ಲಕ್ಷ ಕೊಳೆಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲಾಗುವುದು ಎನ್ನಲಾಗುತ್ತಿದೆ. ಆದರೆ 600 ಎಕರೆ ಜಮೀನು ಮೇಲೆ ಎಲ್ಲರ ಕಣ್ಣು ಬಿದ್ದಿದೆ.

ಇದನ್ನೂ ಓದಿ: ಬಿಜೆಪಿ ಸರ್ಕಾರ RSS ಅಂಗಸಂಸ್ಥೆಗೆ ಭೂಮಿ ನೀಡಿದ್ದ ಆದೇಶಕ್ಕೆ ತಡೆ: ಸಚಿವ ಕೃಷ್ಣಭೈರೇಗೌಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...