Homeಮುಖಪುಟಅಸಮ್ಮತಿಸುತ್ತಿರುವ ಅಧಿಕಾರಿಗಳು ಮತ್ತು ಸಂವಿಧಾನ

ಅಸಮ್ಮತಿಸುತ್ತಿರುವ ಅಧಿಕಾರಿಗಳು ಮತ್ತು ಸಂವಿಧಾನ

- Advertisement -
- Advertisement -

ಅಸಮ್ಮತಿಯು ತನ್ನ ಅತ್ಯಂತ ಪ್ರಬಲ ಅವತಾರದಲ್ಲಿ, ಕೊಲೆ ಬೆದರಿಕೆಯನ್ನೂ ಎದುರಿಸಿ ಸಲ್ಮಾನ್ ರಶ್ದಿಯವರು ದೇಶ ಬಿಟ್ಟುಹೋಗುವ ಥರದಲ್ಲಿ ಅಥವಾ ಬಾಯಿಮುಚ್ಚಿಕೊಂಡಿರುವುದನ್ನು ಒಪ್ಪುವುದರ ಬದಲಿಗೆ ಭಾನುಪ್ರತಾಪ್ ಮೆಹ್ತಾ ರಾಜೀನಾಮೆ ನೀಡುವ ರೀತಿಯಲ್ಲಿ ಅಥವಾ ಆಲ್‌ಫ್ರೆಡ್ ಝೇಯ್‌ಲಸ್‌ನನ್ನು ಸಮರ್ಥಿಸುವುದಕ್ಕಾಗಿ ತನ್ನ ಪ್ರಾಣಕ್ಕಿರುವ ಅಪಾಯವನ್ನೂ ಲೆಕ್ಕಿಸದೆ ಬರೆದ ಲೇಖಕ ಎಮಿಲ್ ಝೋಲಾನ ರೂಪದಲ್ಲಿ ಕಾಣಿಸಿಕೊಂಡಿರಬಹುದು. ಆದರೆ, ಅಸಮ್ಮತಿಯ ಹಲವು ರೂಪಗಳು ಈ ಮೇಲೆ ಪ್ರದರ್ಶಿಸಿದ ಪಟ್ಟಿಗಷ್ಟೇ ಸೀಮಿತವಾಗುವುದಿಲ್ಲ.

ಗುಜರಾತ್‌ನ ಎಡಿಜಿಪಿ (ಇಂಟಲಿಜೆನ್ಸ್) ಆಗಿದ್ದ ಆರ್.ಬಿ.ಶ್ರೀಕುಮಾರ್, 2002ರ ಹತ್ಯಾಕಾಂಡದ ನಂತರ ಆಗಿನ ಮುಖ್ಯ ಕಾರ್ಯದರ್ಶಿ ಮತ್ತು ಆಗಿನ ಮುಖ್ಯಮಂತ್ರಿ ನೀಡಿದ ಆದೇಶಗಳನ್ನು ಕಾನೂನುಬಾಹಿರ ಎಂದು ಪರಿಗಣಿಸಿ ಅದನ್ನು ಪಾಲಿಸಲು ನಿರಾಕರಿಸಿದ ಕಥೆಯನ್ನು ಹೇಳುತ್ತಾ ಅಸಮ್ಮತಿ ಸೂಚಿಸಿದ ಈ ಅಧಿಕಾರಿಯ ಬಗ್ಗೆ ಶಿವ ವಿಶ್ವನಾಥನ್ ಅವರು ಬರೆಯುತ್ತಾರೆ. ಶಿವ ವಿಶ್ವನಾಥನ್ ಅವರ ದೃಷ್ಟಿಯಲ್ಲಿ ’ಅಧಿಕೃತ ಹೇಳಿಕೆ’ ಅಥವಾ ’ಅಫಿಡವಿಟ್’ ರೂಪದಲ್ಲಿ ಕಾಣಿಸಿಕೊಂಡ ಅಧಿಕಾರಿಯೊಬ್ಬರ ಅಸಮ್ಮತಿಯು, ಒಂದು ’ಕೂಗು’ ಅಥವಾ ’ಸವಾಲು’ ಅಥವಾ ’ಮಾನವ ಹಕ್ಕಿನ ಹೋರಾಟ’ವಲ್ಲ; ಬದಲಿಗೆ ಬಹಳ ಸಹಜವಾದ ಕೆಲಸ, ಒಬ್ಬ ಪೊಲೀಸ್ ಪೇದೆ ತನ್ನ ಕೆಲಸ ನಿರ್ವಹಿಸಿದ ಹಾಗೆ. ಅಧಿಕಾರಿಗಳ ಅಸಮ್ಮತಿಯು ’ಹಕ್ಕುಗಳ ಕಾವ್ಯವಾಗಿಯಲ್ಲ ಬದಲಿಗೆ ’ಪ್ರತಿದಿನದ ಕರ್ತವ್ಯಗಳ ಗದ್ಯವಾಗಿ ಅಭಿವ್ಯಕ್ತಿಸಲ್ಪಡುತ್ತದೆ.

PC : Alchetron (ಆರ್.ಬಿ.ಶ್ರೀಕುಮಾರ್)

ಆರ್.ಬಿ.ಶ್ರೀಕುಮಾರ್ ಅವರು ರಾಹುಲ್ ಶರ್ಮಾ, ಸಂಜೀವ್ ಭಟ್, ರಜನೀಶ್ ರೈ ಅವರಂತೆ, ಪ್ರಭುತ್ವದ ಕಾನೂನುವಿರೋಧಿ ಒತ್ತಾಯಗಳನ್ನು ಮೀರಿ ಸಂವಿಧಾನದ ಮೇಲೆ ತಾವು ಸ್ವೀಕರಿಸಿದ ಪ್ರತಿಜ್ಞೆಗೆ ಬದ್ಧರಾಗಿ ನಡೆದುಕೊಂಡ ಅಧಿಕಾರಿಗಳ ಆ ಒಂದು ಪಂಗಡಕ್ಕೆ ಸೇರಿದವರು. ತಮ್ಮ ಅಸಮ್ಮತಿಯನ್ನು ಸೂಚಿಸಿದ್ದಕ್ಕಾಗಿ ಅವರು ಪ್ರಭುತ್ವದಿಂದ ಕಿರುಕುಳ ಮತ್ತು ಕಾನೂನು ಕ್ರಮದಂತಹ ದುಬಾರಿ ಬೆಲೆ ತೆರಬೇಕಾಯಿತು.

ಆಗಿನ ಗುಜರಾತ್ ಮುಖ್ಯಮಂತ್ರಿ ಈ ಹತ್ಯಾಕಾಂಡದಲ್ಲಿ ಶಾಮೀಲಾಗಿದ್ದರೆಂಬುದನ್ನು ದಾಖಲಿಸಿದ್ದಕ್ಕೆ ಸಂಜೀವ್ ಭಟ್‌ರವರು ಎಲ್ಲಕ್ಕಿಂತ ಹೆಚ್ಚಿನ ಬೆಲೆ ತೆರುತ್ತಿದ್ದಾರೆ. ಹಳೆಯ ಮತ್ತು ಸುಳ್ಳು ಕಸ್ಟಡಿ ಸಾವಿನ ಪ್ರಕರಣವೊಂದನ್ನು ದುರುದ್ದೇಶಪೂರ್ವಕವಾಗಿ ಮತ್ತೆ ತೆರೆದು ಅದನ್ನು ನಿರಂತರವಾಗಿ ನಡೆಸಿ ಜೂನ್ 2019ರಲ್ಲಿ ಸಂಜೀವ್ ಭಟ್ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಯಿತು. ಆಗಿನಿಂದಲೂ ಅವರು ಬಂದೀಖಾನೆಯಲ್ಲೇ ಇದ್ದಾರೆ. ಅವರ ಹುಟ್ಟಿದ ದಿನದಂದು, 21 ಡಿಸೆಂಬರ್ 2020ನಲ್ಲಿ ಅವರ ಮಕ್ಕಳಾದ ಆಕಾಶಿ ಮತ್ತು ಶಾಂತನು ಭಟ್ ಅವರುಗಳು ಬಹಳ ಕಟುವಾಗಿ ಹೇಳಿದಂತೆ “ನಮ್ಮ ತಂದೆ ಮಿ.ಸಂಜೀವ್ ಭಟ್ ಅವರು ಈ ಸರ್ವಾಧಿಕಾರಿ ಪ್ರಭುತ್ವದ ವಿರುದ್ಧ ನಿಂತಿದ್ದರಿಂದ ವ್ಯಕ್ತಿಗತವಾಗಿ ಹಾಗೂ ವೃತ್ತಿಯಿಂದ ದೊಡ್ಡ ಬೆಲೆ ತೆತ್ತಿದ್ದಾರೆ; ಈಗಲೂ ಪ್ರಾಮಾಣಿಕರಾಗಿದ್ದಕ್ಕೆ, ದಿಟ್ಟ ನಿಲುವಿನವರಾಗಿದ್ದಕ್ಕೆ, ಧೈರ್ಯವಂತರಾಗಿದ್ದಕ್ಕೆ ಬೆಲೆ ತೆರುತ್ತಿದ್ದಾರೆ. ನಾವು ನಿಮ್ಮಲ್ಲಿ ಬೇಡಿಕೊಳ್ಳುತ್ತೇವೆ, ಅಸ್ತಿತ್ವದಲ್ಲಿ ಇದೆಯೆಂದು ನಮ್ಮ ತಂದೆ ನಂಬಿದ್ದಂತಹ ದೇಶದ ನಾಗರೀಕರಾಗಬೇಕೆಂದು”.

2002ರ ನಂತರ ಗುಜರಾತ್‌ನಲ್ಲಿ ಅಧಿಕಾರಿಗಳ ಅಸಮ್ಮತಿಯ ಪ್ರಕ್ರಿಯೆಗೆ ಪ್ರಭುತ್ವ ಒಂದು ಬಿಗಿಮುಚ್ಚಳ ಹಾಕಿದ್ದರೂ, ಅಸಮ್ಮತಿ ಸೂಚಿಸುವುದನ್ನು ತನ್ನ ಪಾಲಿನ ಕರ್ತವ್ಯ ನಿರ್ವಹಣೆಯೆಂದು ಭಾವಿಸುವ ಆಲೋಚನೆಯನ್ನು ಕೊನೆಗೊಳಿಸುವುದು ಸಾಧ್ಯವಿಲ್ಲ. ಅಧಿಕಾರಿಗಳಲ್ಲಿಯೂ ತಮ್ಮ ವೃತ್ತಿ ತಮಗೆ ನೀಡುವ ಆದೇಶವೇ ಕರ್ತವ್ಯದ ಪಾಲನೆಯೆಂಬ ಸರಳವಾದ ಅಂಶದಿಂದ ಪ್ರಭಾವಿತರಾದ ಭಿನ್ನಮತೀಯರು ಸದಾಕಾಲ ಇದ್ದೇ ಇರುತ್ತಾರೆ.

ನ್ಯಾಯಾಂಗದಲ್ಲೂ ತಮ್ಮ ಕರ್ತವ್ಯವನ್ನು ಯಾವುದೇ ಭೀತಿ ಅಥವಾ ಪಕ್ಷಪಾತವಿಲ್ಲದೆ ಕೆಟ್ಟಕಾಲದಲ್ಲೂ ನಿರ್ವಹಿಸಿರುವ ನ್ಯಾಯಾಧೀಶರಿದ್ದರು. ಅವರಲ್ಲೆಲ್ಲ ಕಷ್ಟಕಾಲದಲ್ಲೂ ಅಪ್ರತಿಮ ನೈತಿಕ ಧೈರ್ಯ ತೋರಿದವರಾಗಿ ಎದ್ದು ಕಾಣುವವರು, ಎಡಿಎಂ ಜಬಲ್‌ಪುರದಲ್ಲಿ ಐದು ಮಂದಿ ನ್ಯಾಯಾಧೀಶರಲ್ಲಿ ಏಕೈಕ ಭಿನ್ನಮತೀಯರಾಗಿ, ತುರ್ತು ಸ್ಥಿತಿಯ ಸಂದರ್ಭದಲ್ಲೂ ಮೂಲಭೂತ ಹಕ್ಕುಗಳು ಅಸ್ತಿತ್ವದಲ್ಲಿರುತ್ತವೆಂಬುದನ್ನು ಎತ್ತಿಹಿಡಿದ ಅಸಾಧಾರಣ ವ್ಯಕ್ತಿ ಜಸ್ಟೀಸ್ ಖನ್ನಾ. ಸಂವಿಧಾನಬದ್ಧವಾದ ತಮ್ಮ ಕರ್ತವ್ಯವನ್ನು ನಿರ್ವಹಿಸುವುದರಲ್ಲಿ ಇರುವ ಧೈರ್ಯವುಳ್ಳವರು ನ್ಯಾಯಾಂಗದ ಬೇರೆ ಬೇರೆ ಹಂತಗಳಲ್ಲೂ ಇದ್ದಾರೆ. ಅಂತಹ ಹೆಚ್ಚೇನೂ ಗುರುತಿಸಲ್ಪಡದ ಮತ್ತು ಮರೆಯಲ್ಪಟ್ಟಿರುವ ವ್ಯಕ್ತಿ, 2002ರ ಗುಜರಾತ್ ಗಲಭೆಯ ನಂತರ ನರೋದಾ ಪಾಟಿಯಾದಲ್ಲಿ ಹತ್ಯೆಗಳು ಮತ್ತು ಲೂಟಿ ನಡೆಸಿದ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶೆ ಜ್ಯೋತ್ಸ್ನಾ ಯಾಜ್ಞಿಕ್.

PC : Youth Ki Awaaz (ಸಂಜೀವ್ ಭಟ್)

ನರೋದಾ ಪಾಟಿಯಾ ಪ್ರಕರಣದ ವಿಚಾರಣೆಯ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ತನಗೆ ಸುಮಾರು 22 ಬೆದರಿಕೆ ಪತ್ರಗಳು ಮತ್ತು ಅನೇಕ ಬ್ಲಾಂಕ್ ಕರೆಗಳು ಬಂದಿದ್ದಾಗಿ ಜಸ್ಟೀಸ್ ಜ್ಯೋತ್ಸ್ನಾ ಯಾಜ್ನಿಕ್ ವಿಶೇಷ ತನಿಖಾ ತಂಡಕ್ಕೆ ಪತ್ರವನ್ನೂ ಕೂಡಾ ಬರೆದಿದ್ದರು. ಕೆಲವು ಬೆದರಿಕೆಗಳಲ್ಲಿ ’ಈಕೆಯನ್ನು ಮುಗಿಸಿಬಿಡಬೇಕು’ ಎಂದು ಬಲಪಂಥೀಯ ದುಷ್ಕರ್ಮಿಗಳು ಕರೆ ಕೊಟ್ಟಿದ್ದರೆ ಇನ್ನೂ ಕೆಲವದರಲ್ಲಿ ಚಾರಿತ್ರ್ಯವಧೆ ಮಾಡುವ ಪ್ರಯತ್ನವೂ ನಡೆದಿತ್ತೆಂದು ಅವರು ಬರೆದಿದ್ದರು. ’ಸಾಕಷ್ಟು ಮಂದಿ ಗುಜರಾತ್ ಗಲಭೆಯ ಸಂತ್ರಸ್ತರಿಗೆ ದ್ರೋಹ ಎಸಗಿದ್ದಾಗಲೂ ನಿಮ್ಮನ್ನು ಮುನ್ನಡೆಸಿದ್ದೇನು?’ ಎಂಬ ಪ್ರಶ್ನೆಗೆ ’ನನ್ನ ಆತ್ಮಸಾಕ್ಷಿಯೆದುರು ತಲೆ ಎತ್ತಿ ನಿಲ್ಲುವುದು ಸಾಧ್ಯವಾಗುವುದಕ್ಕಾಗಿ’, ’ನ್ಯಾಯಾಧೀಶೆಯಾದಾಗ ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ತೆಗೆದುಕೊಂಡಿದ್ದ ಪ್ರತಿಜ್ಞೆಯನ್ನು ಕಾಪಾಡಬೇಕೆಂಬ ಪ್ರಜ್ಞೆಯೇ ನನ್ನನ್ನು ಮುನ್ನಡೆಸಿದ್ದು’ ಎಂದವರು ಉತ್ತರಿಸಿದ್ದರು.

ಹಿಂದೆಂದೂ ನಡೆಯದಿದ್ದಂತಹ ಒಂದು ಘಟನೆ 07.12.2020ರಲ್ಲಿ ಶ್ರೀನಗರದ ಸೆಶನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು. ಆರೋಪಿಯೊಬ್ಬರ ಜಾಮೀನು ಅರ್ಜಿಯ ವಿಚಾರಣೆಯಿಂದ ಒಬ್ಬರು ಸೆಶನ್ಸ್ ಜಡ್ಜ್ ತಾವಾಗಿಯೇ ದೂರವುಳಿದರು. ಆ ಒಂದು ನಿರ್ದಿಷ್ಟ ಪ್ರಕರಣದಲ್ಲಿ ಜಾಮೀನು ನೀಡದಂತೆ, ಫೋನ್ ಮೂಲಕ ಜಮ್ಮು-ಕಾಶ್ಮೀರದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಕಾರ್ಯದರ್ಶಿಯವರಿಂದ ಸೂಚನೆ ಬಂದಿದ್ದ ಹಿನ್ನೆಲೆಯಲ್ಲಿ ಅವರು ಹೀಗೆ ಮಾಡಿದ್ದರು. ವಿಚಾರಣೆಯ ದಿನ ಆ ನ್ಯಾಯಾಧೀಶರು ಆ ಅರ್ಜಿಯ ವಿಚಾರಣೆಯನ್ನು ನಡೆಸಲು ಸಾಧ್ಯವಾಗದ ತನ್ನ ಅಸಾಮರ್ಥ್ಯವನ್ನು ಮುಂದಿಟ್ಟರು ಮತ್ತು ಈ ವಿಚಾರ ವ್ಯಕ್ತಿಯೊಬ್ಬರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದರಿಂದ ಹೈಕೋರ್ಟ್ ರಿಜಿಸ್ಟ್ರಾರ್‌ರವರಿಗೆ ಮೇಲ್ಮನವಿ ಸಲ್ಲಿಸುವಂತೆ ಆದೇಶಿಸಿದರು. ಹೀಗೆ ಆ ಪ್ರಕರಣ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಮುಂದೆ ಆ ಪ್ರಕರಣ ಜಾಮೀನು ಅರ್ಜಿ ವಿಚಾರಣೆಗೆ ಬಂದು, ಅವರು ಮತ್ತೆ ಅದನ್ನು ಸೆಶನ್ಸ್ ನ್ಯಾಯಾಲಯಕ್ಕೇ ವಾಪಾಸ್ ಕಳಿಸಿದರು. ಆ ನಂತರದಲ್ಲಿ ಅದರಲ್ಲಿ ಜಾಮೀನು ಮಂಜೂರಾಯಿತೆಂಬುದು ವರದಿಯಾಗಿದೆ.

ಅಧಿಕಾರಿಗಳು ಅಸಮ್ಮತಿ ಸೂಚಿಸುವುದು ಅಷ್ಟು ಸರಳವಾದ ಕೆಲಸವಾಗಿರುವುದಿಲ್ಲ. ಏಕೆಂದರೆ, ಇಂತಹ ಅನೇಕ ಸಂದರ್ಭಗಳಲ್ಲಿ ಭಿನ್ನಮತೀಯರು ಬಹಳ ವಿರೋಧ ತುಂಬಿದ ವಾತಾವರಣದಲ್ಲಿ ತಮ್ಮ ಅಸಮ್ಮತಿಯೊಂದಿಗೆ ಏಕಾಂಗಿಯಾಗಿರುತ್ತಾರೆ ಮತ್ತು ವ್ಯವಸ್ಥೆಯು ಇಂತಹ ಭಿನ್ನಮತೀಯರ ಬಗ್ಗೆ ಕರುಣೆಯಿಂದ ನಡೆದುಕೊಳ್ಳುವುದಿಲ್ಲ. ಅದೇನೇ ಇದ್ದರೂ, ಅಧಿಕಾರವಲಯದ ಭಿನ್ನಮತೀಯರಿಂದ ಆಗಿರುವ ಅಗಾಧವಾದ ಸಾಧನೆಗಳನ್ನು ಗಮನಿಸಿದಾಗ ಅಂತಹ ಅಸಮ್ಮತಿಯು ಭಾರೀ ಪರಿಣಾಮಕಾರಿಯೆಂಬುದು ತಿಳಿಯುತ್ತದೆ. ಅಮೇರಿಕದ ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ (ಎನ್‌ಎಸ್‌ಎ) ರೂಪಿಸಿದ್ದ ನಿಗರಾಣೆ ಕಾರ್ಯಕ್ರಮದ ವಿಷಯವನ್ನು ಬೆಳಕಿಗೆ ತರುವುದಾಗಿ ತೀರ್ಮಾನಿಸಿದ್ದರಿಂದ ಆಗ ಎನ್‌ಎಸ್‌ಎಯೊಳಗಡೆಯೇ ಗುತ್ತಿಗೆದಾರನಾಗಿದ್ದ ಎಡ್ವರ್ಡ್ ಸ್ನೋಡೆನ್ ಪ್ರಭುತ್ವದ ನಿಗರಾಣೆಯ ವಿಚಾರ ಮತ್ತು ವೈಯಕ್ತಿಕ ಖಾಸಗೀತನದ ಹಕ್ಕುಗಳ ವಿಚಾರದಲ್ಲಿ ಜಾಗತಿಕವಾಗಿ ಭಾರೀ ಪರಿಣಾಮ ಬೀರಬಹುದಾಗಿದ್ದ ಸಂಗತಿಗಳನ್ನು ಹೊರಗೆಹಿಡಿದ.

ಈ ಹಿಂದೆ 19ನೇ ಶತಮಾನದ ಫ್ರಾನ್ಸ್‌ನಲ್ಲಿ ಆಲ್‌ಫ್ರೆಡ್ ಝೇಯ್‌ಲಸ್‌ನು ಕೇವಲ ಯಹೂದಿಯಾಗಿದ್ದ ಕಾರಣಕ್ಕಾಗಿ ಬೇಹುಗಾರಿಕೆಯ ಸುಳ್ಳು ಆರೋಪದಡಿಯಲ್ಲಿ ಅನ್ಯಾಯವನ್ನು ಅನುಭವಿಸಬೇಕಾಗಿ ಬಂದದ್ದನ್ನು ನಾವು ತಿಳಿದಿದ್ದೇವೆ. ಝೇಯ್‌ಲಸ್‌ನನ್ನು ತಪ್ಪಾಗಿ ಅಪರಾಧಕ್ಕೆ ಸಿಲುಕಿಸಿ ಶಿಕ್ಷೆ ನೀಡಲಾಗಿತ್ತೆಂಬುದು ಬೆಳಕಿಗೆ ಬಂದಿದ್ದು ಪಿಕಾರ್ಟ್ ಎಂಬ ಗುಪ್ತಚರ ಅಧಿಕಾರಿ, ಈ ತಪ್ಪು ಶಿಕ್ಷೆಯ ಕುರಿತ ಮಾಹಿತಿ ಸಂಗ್ರಹಿಸಿದ್ದರಿಂದ ಮತ್ತು ತನ್ನ ಮೇಲೆ ಮಿಲಿಟರಿಯ ಒಳಗಿನಿಂದಲೇ ಅಪಾರ ಒತ್ತಡ ಬಂದಾಗಲೂ ಹಿಮ್ಮೆಟ್ಟದೆ ತನ್ನ ವರದಿಯನ್ನು ಹಿಂಪಡೆಯದೆ ಗಟ್ಟಿಯಾಗುಳಿದದ್ದರಿಂದ.

PC : Madhu Kishwar (ಜ್ಯೋತ್ಸ್ನಾ ಯಾಜ್ಞಿಕ್)

ಪಿಕಾರ್ಟ್‌ನ ಅಸಮ್ಮತಿ ಅತ್ಯಂತ ಮಹತ್ವಪೂರ್ಣವಾದುದಾಗಿತ್ತು, ಏಕೆಂದರೆ ಝೇಯ್‌ಲಸ್ ನಿರಪರಾಧಿಯೆಂಬ ಆತನ ವರದಿಯಿಂದಲೇ ಜಾಗತಿಕವಾಗಿ ಝೇಯ್‌ಲಸ್ ಪರವಾಗಿ ಆಂದೋಲನ ಆರಂಭವಾದದ್ದು, ಎಮಿಲ್ ಝೋಲಾನಂತಹ ಖ್ಯಾತಿವೆತ್ತ ಬರಹಗಾರರು ದನಿಯೆತ್ತಿದ್ದು ಮತ್ತು ಕೊನೆಗೆ ಝೇಯ್‌ಲಸ್‌ನ ಕ್ಷಮಾದಾನ ಸಾಧ್ಯವಾದದ್ದು. ಇಂತಹ ಬೆಳವಣಿಗೆ ಪಿಕಾರ್ಟ್‌ನ ಅತ್ಯಗತ್ಯ ಅಧಿಕಾರವಲಯದ ಭಿನ್ನಮತೀಯ ಮಧ್ಯಪ್ರವೇಶವಿಲ್ಲದೆ ಸಾಧ್ಯವೇ ಆಗುತ್ತಿರಲಿಲ್ಲ. ಹನ್ನಾ ಆರೆಂಟ್ ಗುರುತಿಸುವಂತೆ ’ಪಿಕಾರ್ಟ್ ಹೀರೋ ಅಲ್ಲ, ಹುತಾತ್ಮನಂತೂ ಅಲ್ಲವೇ ಅಲ್ಲ. ಆತನೊಬ್ಬ ಸಾರ್ವಜನಿಕ ವಿಷಯಗಳಲ್ಲಿ ಸಾಧಾರಣ ಆಸಕ್ತಿಯನ್ನಷ್ಟೇ ಹೊಂದಿದ್ದ ಸಾಮಾನ್ಯ ನಾಗರಿಕ; ಆದರೆ ಅಪಾಯದ ಸನ್ನಿವೇಶದಲ್ಲಿ (ಅದಕ್ಕಿಂತ ಒಂದೇ ಒಂದು ನಿಮಿಷ ಮೊದಲು ಕೂಡಾ ಅಲ್ಲ) ತಾನು ತನ್ನ ಪ್ರತಿದಿನದ ಕೆಲಸಗಳನ್ನು ಪ್ರಶ್ನಾತೀತವಾಗಿ ನಿಭಾಯಿಸುವಷ್ಟೇ ಸರಳವಾಗಿ ತನ್ನ ದೇಶದ ಸಮರ್ಥನೆಗಾಗಿ ಎದ್ದುನಿಲ್ಲುತ್ತಾನೆ.

ಇದಕ್ಕಾಗಿ ಆತ ಜೈಲುಶಿಕ್ಷೆಯನ್ನು ಅನುಭವಿಸಬೇಕಾಯಿತು ಮತ್ತು ಇದು ನಮಗೆ ಇಲ್ಲಿನ ಮರೆಯಲಸಾಧ್ಯರಾದ ಸಂಜೀವ್ ಭಟ್‌ರಂತಹ ಪಿಕಾರ್ಟ್‌ಗಳನ್ನು ನೆನಪಿಸುತ್ತದೆ. ಭಟ್ ಅವರು ಇನ್ನೂ ಜೈಲಿನಲ್ಲಿದ್ದಾರೆಂಬುದು ನಿಜವಾದರೂ ಅವರ ಅಸಮ್ಮತಿಯ ಪ್ರಕ್ರಿಯೆ ಅಮೂಲ್ಯವಾದುದು. ಈ ಅಧಿಕಾರಿ ’ದಾಖಲೆಗಳ ಜಾಡು’ ನಿರ್ಮಿಸಿದ ಪರಿಣಾಮವಾಗಿ ಒಳ್ಳೆಯದು ಕೆಟ್ಟದ್ದೆಲ್ಲವೂ ಇರಲಿಲ್ಲವೇನೋ ಎಂಬಂತೆ ಕಾಣೆಯಾಗುವ ’ಮರೆವಿನ ಕುಳಿ’ಗಳು ಅಸ್ತಿತ್ವದಲ್ಲಿರುವಂತೆ ಮಾಡುವುದು ಸಾಧ್ಯವಾಯಿತು. ಹನ್ನಾ ಆರೆಂಟ್ ಅವರ ಮಟ್ಟಿಗೆ ಅಸಮ್ಮತಿಯ ಪಾಠ ಸರಳವಾದದ್ದು. ಅದೇನೆಂದರೆ, ’ಭಯೋತ್ಪಾದನೆಯ ಪರಿಸ್ಥಿತಿಯ ಅಡಿಯಲ್ಲಿ’ ಬಹಳಷ್ಟು ಮಂದಿ ಮಣಿಯುತ್ತಾರೆ, ಆದರೆ ಕೆಲವರು ಮಣಿಯುವುದಿಲ್ಲ. ಮಾನವ ಮಾತ್ರರಾಗಿ ಹೇಳುವುದಾದರೆ, ಭೂಮಿಯು ಮನುಷ್ಯರು ವಾಸಿಸಲು ಯೋಗ್ಯವಾದ ಸ್ಥಳವಾಗಿ ಉಳಿದುಕೊಳ್ಳುವುದಕ್ಕೆ ಇಷ್ಟೇ ಸಾಕು; ಇನ್ನೇನೂ ಬೇಕಾಗಿಲ್ಲ, ಇನ್ನೇನನ್ನೂ ನಿರೀಕ್ಷಿಸುವುದೂ ಸಾಧ್ಯವಿಲ್ಲ.

ಧೈರ್ಯವಂತ ಪೊಲೀಸ್ ಅಧಿಕಾರಿಗಳಾದ ಆರ್.ಬಿ.ಶ್ರೀಕುಮಾರ್, ಸಂಜೀವ್ ಭಟ್ ಮತ್ತು ನ್ಯಾಯಾಧೀಶರಾದ ಜ್ಯೋತ್ಸ್ನಾ ಯಾಜ್ಞಿಕ್, ಅಬ್ದುಲ್ ರಶೀದ್ ಮಲಿಕ್ ಅವರಂತಹವರು ವೃತ್ತಿ ನಿಷ್ಟೆಯೆಂಬ ಪರಿಕಲ್ಪನೆಯನ್ನು, ಸಂವಿಧಾನಕ್ಕೆ ನಿಷ್ಟೆಯೆಂಬ ನಂಬಿಕೆಯನ್ನು ಜೀವಂತವಾಗಿರಿಸುತ್ತಾರೆ; ಹಾಗೆಯೇ ಘನತೆ ಮತ್ತು ಮಾನವೀಯತೆಗಳು ಮರೆತು ಹೋಗದಂತೆ ಕಾಪಿಡುತ್ತಾರೆ. ಇಂತಹವರು, ಪ್ರಭುತ್ವಗಳ ಕಾನೂನುವಿರುದ್ಧವಾದ ಒತ್ತಡಗಳು ಏನೇ ಇದ್ದರೂ, ಅಧಿಕಾರಶಾಹಿಯ ಮತ್ತು ನ್ಯಾಯಾಂಗದ ಭಾಗವಾಗಿಯೇ ಇದ್ದರೂ ತಾವು ಹೇಗೆ ನಡೆದುಕೊಳ್ಳಬಹುದು ಎಂಬುದಕ್ಕೆ ಒಂದು ಮಾದರಿಯನ್ನು ನಿರ್ಮಿಸಿದ್ದಾರೆ ಮತ್ತು ಮುಂದಕ್ಕೂ ಈ ವಲಯಗಳೊಳಗಿನವರನ್ನು ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳಲು ಪ್ರೇರೇಪಿಸುತ್ತಾರೆಂಬುದು ಆಶಯ.

(ಕನ್ನಡಕ್ಕೆ): ಮಲ್ಲಿಗೆ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪರ್ಯಾಯ ಕಾನೂನುವೇದಿಕೆ (ಎಎಲ್‌ಎಫ್‌ನ) ಸ್ಥಾಪಕ ಸದಸ್ಯರು


ಇದನ್ನೂ ಓದಿ: ಆರ್ ಎನ್ ರವಿ ವರ್ಗಾವಣೆಯೊಂದಿಗೆ ನಾಗ ಶಾಂತಿ ಪ್ರಕ್ರಿಯೆಯಲ್ಲಿನ ಪ್ರತಿರೋಧ ದೂರವಾಗುವುದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...