Homeಮುಖಪುಟಈ 45 ವರ್ಷಗಳಲ್ಲಿ ರೈತರ ಬೆಳೆಯ ಬೆಲೆ ಹೆಚ್ಚಳ & ಸರ್ಕಾರಿ ನೌಕರರ ವೇತನ ಹೆಚ್ಚಳದ...

ಈ 45 ವರ್ಷಗಳಲ್ಲಿ ರೈತರ ಬೆಳೆಯ ಬೆಲೆ ಹೆಚ್ಚಳ & ಸರ್ಕಾರಿ ನೌಕರರ ವೇತನ ಹೆಚ್ಚಳದ ನಡುವಿನ ವ್ಯತ್ಯಾಸ ಎಷ್ಟು ಗೊತ್ತೆ?

ಸುಪ್ರೀಂ ಕೋರ್ಟಿನ ಅಧಿಕಾರಿಗಳಿಗೆ ಬಟ್ಟೆ ಒಗೆಯಲೆಂದೇ 21 ಸಾವಿರ ರೂ ಭತ್ಯೆ ಸಿಗುತ್ತದೆ ವರ್ಷಕ್ಕೆ. ಭದ್ರತಾ ಸಿಬ್ಬಂದಿಗಳಿಗೆ 20 ಸಾವಿರ ರೂಪಾಯಿ ಸಿಗುತ್ತೆ. ಆದರೆ ರೈತರಿಗೆ...?

- Advertisement -
- Advertisement -

ಇಂದು ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾಗಿರುವುದು ಆರ್ಥಿಕತೆಯ ವಿನ್ಯಾಸದ ಬಗ್ಗೆ. ಅದು ಈಗ ಅಮೆರಿಕ ಅಥವಾ ಯುರೋಪ್ ಅಥವಾ ಭಾರತದಲ್ಲಿ ಪಾಲಿಸಲಾಗುತ್ತಿರುವುದಾಗಿರಲಿ – ಆರ್ಥಿಕತೆಯ ಈ ವಿನ್ಯಾಸ ಹೇಳುವುದೇನೆಂದರೆ, ಕೃಷಿಯನ್ನು ಮುಗಿಸಿಬಿಡಿ ಎಂದು. ಇದನ್ನು ನಾವು ಅರಿತುಕೊಳ್ಳುವುದು ಮುಖ್ಯ. ಅಮೆರಿಕದಲ್ಲಿ ರೈತರು ಇಲ್ಲವಾಗಿದ್ದಾರೆ. ಈಗ ಆ ದೇಶದ ಜನಸಂಖ್ಯೆಯ ಕೇವಲ 2% ಕ್ಕಿಂತ ಕಡಿಮೆ ಜನರು ಕೃಷಿಯಲ್ಲಿದ್ದಾರೆ. ಯುರೋಪಿನಲ್ಲಿ ಪ್ರತಿ ನಿಮಿಷಕ್ಕೊಬ್ಬ ರೈತಳು/ನು ಕೃಷಿಯನ್ನು ಬಿಟ್ಟು ಹೋಗುತ್ತಿದ್ದಾಳೆ/ನೆ. ನಿಮಗೆ ನೆನೆಪಿರಬಹದು, ವಿಶ್ವವಿಖ್ಯಾತ ಆರ್ಥಿಕ ತಜ್ಞ ರಘುರಾಮ್ ರಾಜನ್ ಒಂದು ಸಲ ಹೇಳಿದ್ದು: ’ಭಾರತದಲ್ಲಿ ಎಲ್ಲಕ್ಕಿಂತ ದೊಡ್ಡ ಸುಧಾರಣೆ ಸಾಧ್ಯವಾಗುವುದು ಯಾವಾಗ ಎಂದರೆ, ಕೃಷಿಯಿಂದ ರೈತನನ್ನು ಬಿಡಿಸಿ, ನಗರಕ್ಕೆ ತಂದಾಗ ಮಾತ್ರ. ಏಕೆಂದರೆ, ನಗರಗಳಲ್ಲಿ ಕೂಲಿಕಾರ್ಮಿಕರ ಅವಶ್ಯಕತೆ ಇದೆ’ ಎಂದು. ಇದು ಸ್ವತಃ ರಾಜನ್ ಹೇಳಿದ್ದು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ; ನಮ್ಮ ಆರ್ಥಿಕ ನೀತಿಯ ವಿನ್ಯಾಸವೇ ಇದಾಗಿದೆ.

ನೀವು ಈಗ ರಾಷ್ಟ್ರೀಯ ಕೌಶಲ್ಯ ನೀತಿಯ (ನ್ಯಾಷನಲ್ ಸ್ಕಿಲ್ ಪಾಲಿಸಿ) ದಾಖಲೆಗಳನ್ನು ನೋಡಿ. ಅಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆಂದರೆ, ಕೃಷಿಯಲ್ಲಿ ತೊಡಗಿರುವ ಜನರನ್ನು 56%ನಿಂದ ಕಡಿಮೆ ಮಾಡಿ 18% ಇಳಿಸಬೇಕು ಎಂದು ಬರೆಯಲಾಗಿತ್ತು. ಈಗ ಅದನ್ನು ಬದಲಿಸಿ 38% ಎಂದು ಬರೆಯಲಾಗಿದೆ. ಅಂದರೆ, 2022ರೊಳಗೆ ಕೃಷಿಯಲ್ಲಿ ತೊಡಗಿರುವ ಜನರ ಪ್ರಮಾಣವನ್ನು 57% ಇಂದ 38% ಗೆ ಇಳಿಸಲಾಗುವುದು. ಇದರರ್ಥ, ಇದು ಉದ್ದೇಶಪೂರ್ವಕವಾಗಿ ಮಾಡಿದ ರಣತಂತ್ರದ ಒಂದು ಭಾಗವಾಗಿದೆ; ರೈತರನ್ನು ಕೃಷಿಯಿಂದ ಹೊರತಂದು, ನಗರಕ್ಕೆ ತರುವುದು ಇದರ ಉದ್ದೇಶ. ಇದನ್ನು ಮೊದಲು ತಿಳಿದುಕೊಳ್ಳಬೇಕಿದೆ. ಇದರ ಅನುಗುಣವಾಗಿಯೇ ಈ ಒಂದು ಆರ್ಥಿಕ ಸಂರಚನೆಯನ್ನು ತಯಾರಿಸಲಾಗುತ್ತದೆ.

ಈಗ ನೋಡಿ, ಕೃಷಿಯಲ್ಲಿ ಬಿಕ್ಕಟ್ಟು ಇದೆ. ಇತರ ವಲಯಗಳನ್ನು ನೋಡಿದರೆ ರೈತರಿಗೆ ಆದಾಯ ಆಗುತ್ತಿಲ್ಲ ಎಂದು ಹೇಳುತ್ತೇವೆ. ಒಂದು ಉದಾಹರಣೆ ಕೊಡುವೆ: 1970ರಲ್ಲಿ ಗೋದಿಯ ಬೆಲೆ ಒಂದು ಕ್ವಿಂಟಲ್‌ಗೆ 76 ರೂಪಾಯಿ ಇತ್ತು. ಅದು 2015ರಲ್ಲಿ ಅಂದರೆ 45 ವರ್ಷಗಳ ನಂತರ ಏರಿಕೆ ಆಗಿ, 1450 ರೂಪಾಯಿ ಆಯಿತು. ಅದೇ ಸಮಯದಲ್ಲಿ ನಾನು ಇತರ ವಲಯಗಳಲ್ಲಿ ಆದಾಯದ ಮಟ್ಟದಲ್ಲಿ ಏನಾಗಿದೆ ಎಂಬುದನ್ನು ನೋಡಿದೆ. ನಾನು ಕೇವಲ ಮೂಲ (ಬೇಸಿಕ್) ವೇತನ ಮತ್ತು ತುಟ್ಟಿ ಭತ್ಯೆ (ಡಿಎ) ಗಳನ್ನು ಪರೀಕ್ಷಿಸಿದೆ. ಸರಕಾರಿ ನೌಕರರ ಬೇಸಿಕ್ ಆದಾಯ ಮತ್ತು ಡಿಎ ಯಲ್ಲಿ ಆದ ಏರಿಕೆ 120ರಿಂದ 150ಪಟ್ಟು! ಅದೇ ಅವಧಿಯಲ್ಲಿ ಶಾಲಾ ಶಿಕ್ಷಕರ ಆದಾಯದಲ್ಲಿ ಆದ ವೃದ್ಧಿಯನ್ನು ನೋಡಿದರೆ, 280ರಿಂದ 320ಪಟ್ಟು. ಹಾಗು ಕಾಲೇಜು ಮತ್ತು ಯುನಿವರ್ಸಿಟಿಯ ಅಧ್ಯಾಪಕರ ವೇತನದಲ್ಲಿ ಆದ ವೃದ್ಧಿ- 150 ರಿಂದ 170 ಪಟ್ಟು. ಅದೇ ಸಮಯದಲ್ಲಿ ರೈತರ ಆದಾಯ ಎಷ್ಟು ಹೆಚ್ಚಾಗಿದೆ ಎಂದು ನೋಡಿದರೆ, ಅದಕ್ಕೆ ನಾನು ಗೋಧಿ ಹಾಗೂ ಭತ್ತದ ದರವನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ; ರೈತರ ಆದಾಯದಲ್ಲಿ ಆದ ಹೆಚ್ಚಳ – 19 ಪಟ್ಟು. ಒಂದು ವೇಳೆ ಈ ಸರಕಾರಿ ನೌಕರರು ಮತ್ತು ಶಿಕ್ಷಕರ ಆದಾಯವೂ ಇಷ್ಟೇ ವೃದ್ಧಿ ಆಗಿದ್ದಲ್ಲಿ, ಅವರೆಲ್ಲರೂ ಕೆಲಸ ಬಿಟ್ಟು ಹೋಗಿರುತ್ತಿದ್ದರು. ಈಗ ರೈತರ ಆದಾಯವೂ ಒಂದು ವೇಳೆ ಇತರ ವಲಯಗಳಂತೆ ವೃದ್ಧಿ ಆಗಿದ್ದಲ್ಲಿ, ಅವರ ಆದಾಯದ ಸಮಾನಂತರವಾಗಿ ವೃದ್ಧಿಯಾಗಿದ್ದಲ್ಲಿ, ಕೇವಲ ಒಂದು ನೂರು ಪಟ್ಟು ಹೆಚ್ಚಾಗಿದ್ದರೂ, ಗೋದಿಯ ಕನಿಷ್ಠ ಬೆಂಬಲ ಬೆಲೆ ಈಗ 7600 ರೂ ಪ್ರತಿ ಕ್ವಿಂಟಲ್ ಆಗಿರಬೇಕಿದೆ. ಇದು ಅವರ ಹಕ್ಕು. 7600 ರೂ ಆಗಿರಬೇಕಾಗಿದೆ, ಆದರೆ ಅವರಿಗೆ ಸಿಗುತ್ತಿರುವುದು 1450 ರೂಪಾಯಿಗಳು.

PC : YourStory

ಅನೇಕರು ಕೇಳುತ್ತಾರೆ; ಈ ದುಡ್ಡನ್ನು ಎಲ್ಲಿಂದ ತರುವುದು ಎಂದು. ನಾನು ಕೇಳುವುದು; ಕಾರ್ಪೊರೆಟ್‌ಗಳಿಗೆ ದುಡ್ಡು ಕೊಡುವಾಗ ಆ ದುಡ್ಡು ಎಲ್ಲಿಂದ ಬರುತ್ತೆ ಎಂದು ಕೇಳಿದ್ದೀರಾ? 7ನೇ ವೇತನ ಆಯೋಗದ ದುಡ್ಡು ಎಲ್ಲಿಂದ ಬರುತ್ತದೆ ಎಂದು ಎಂದಾದರೂ ಕೇಳಿದ್ದೀರಾ? 7ನೇ ವೇತನ ಆಯೋಗ ಸದ್ಯಕ್ಕೆ ಕೇಂದ್ರ ಸರಕಾರದ ಉದ್ಯೋಗಿಗಳಿಗಾಗಿ ಜಾರಿಯಲ್ಲಿದೆ. ಒಂದು ವೇಳೆ ಎಲ್ಲಾ ರಾಜ್ಯಗಳಲ್ಲೂ ಜಾರಿಯಾದರೆ, (ಕ್ರೆಡಿಟ್ ಸ್ವಿಸ್ ಬ್ಯಾಂಕ್‌ನ ಅಧ್ಯಯನದ ಅನುಗುಣವಾಗಿ) ಪ್ರತಿವರ್ಷ 4 ಲಕ್ಷ 80 ಸಾವಿರ ಕೋಟಿ ರೂಪಾಯಿಗಳ ಹೆಚ್ಚುವರಿ ಖರ್ಚು ಆಗುತ್ತೆ. ಈ ದುಡ್ಡು ಎಲ್ಲಿಂದ ಬರುವುದು ಎಂದು ಯಾರೂ ಕೇಳುವುದಿಲ್ಲ. ವಿತ್ತೀಯ ಕೊರತೆ (ಫಿಸ್ಕಲ್ ಡೆಫಿಸಿಟ್) ಹೆಚ್ಚುತ್ತೆ ಎಂದು ಯಾರೂ ಹೇಳುವುದಿಲ್ಲ.

ಆದರೆ ರೈತರಿಗೆ ಎರಡು ಲಕ್ಷ ಕೋಟಿ ಕೊಡುತ್ತೇವೆ ಎಂದು ಘೋಷಿಸಿದ ಕೂಡಲೇ, ಹಾಹಾಕಾರ ಶುರು ಆಗಿಬಿಡುತ್ತೆ. ದುಡ್ಡು ವ್ಯರ್ಥ ಆಗುತ್ತೆ, ಇವರಿಗೆ ಈ ರೀತಿ ಕೊಡುವುದು ಸೂಕ್ತವಿಲ್ಲ, ಇವರು ಡಿಸರ್ವ್ ಮಾಡುವುದಿಲ್ಲ, ವಿತ್ತೀಯ ಕೊರತೆ (ಫಿಸ್ಕಲ್ ಡೆಫಿಸಿಟ್) ಹೆಚ್ಚಾಗುತ್ತೆ ಎಂದೆಲ್ಲಾ ಹೇಳತೊಡಗುತ್ತಾರೆ. ಆದರೆ ಸರಕಾರಿ ನೌಕರರಿಗೆ ಆಯೋಗ ಸೂಚಿಸಿದ ವೇತನ ಜಾರಿ ಮಾಡಿದಾಗ ಯಾರಾದರೂ ಹೇಳಿದರಾ – ಫಿಸ್ಕಲ್ ಡೆಫಿಸಿಟ್ ಹೆಚ್ಚಾಗುತ್ತೆ ಎಂದು? ಇದೇ ಈ ಎಲ್ಲಾ ಆರ್ಥಿಕ ನೀತಿಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಎನ್ನುವುದನ್ನು ಸೂಚಿಸುತ್ತದೆ. ರೈತರನ್ನು ಬಡವರನ್ನಾಗಿಯೇ ಇಡಲೆಂದು ವಿನ್ಯಾಸಗೊಳಿಸಲಾಗಿದೆ ಎಂಬುದು ತಿಳಿಯುತ್ತದೆ. ಹಾಗೂ ಈ ನೀತಿಗಳು ಅನೇಕ ದಶಕಗಳಿಂದ ನಡೆದುಬರುತ್ತಿವೆ ಹಾಗಾಗಿ ಎಲ್ಲಾ ಸರಕಾರಗಳು ಇದರಲ್ಲಿ ಶಾಮೀಲಾಗಿವೆ.

ಈಗ ನಿಮ್ಮ ಪ್ರಶ್ನೆ, ಇದಕ್ಕೆ ಕಾರಣವೇನು? ಇದರಲ್ಲಿ ಮಧ್ಯದ ದಾರಿ ಇಲ್ಲವೇ? ಮಧ್ಯದ ದಾರಿ? ನನಗೊಂದು ವಿಷಯ ಹೇಳಿ; ನಿಮಗೆ ಏಳನೇ ವೇತನ ಆಯೋಗದ ಪ್ರಕಾರ ವೇತನ ಸಿಗುತ್ತೆ ಅಥವಾ ಮತ್ಯಾವುದೋ ವೇತನ ಸಿಗುತ್ತೆ, ಆ ವೇತನ ಪಡೆದುಕೊಳ್ಳುವಾಗ ರೈತನಿಗೆ ಯಾವಾಗಾದರೂ ಮನೆ ಬಾಡಿಗೆಯ ಭತ್ಯೆ ಸಿಗುತ್ತಾ ಎಂದು ಯೋಚಿಸಿದ್ದೀರಾ? ಯಾವಾಗಾದರೂ ಆರೋಗ್ಯ ಭತ್ಯೆ ಸಿಕ್ಕಿದೆಯೇ, ಯಾವಾಗಾದರೂ ಶಿಕ್ಷಣದ ಭತ್ಯೆ ಸಿಕ್ಕಿದಿಯೇ, ಮಕ್ಕಳ ಮೆಡಿಕಲ್ ಅಲೋವನ್ಸ್ ಸಿಕ್ಕಿದೆಯೇ? ಹೀಗೆ ಎಂದಾದರೂ ಯೋಚಿಸಿದ್ದೀರಾ? ಏಕೆ ಹೀಗೆ? ಯಾಕೆ ರೈತರು ಸಮಾಜದ ಭಾಗವಲ್ಲವೇ? ಸುಪ್ರೀಮ್ ಕೋರ್ಟಿನ ಅಧಿಕಾರಿಗಳಿಗೆ ಬಟ್ಟೆ ಒಗೆಯಲೆಂದೇ 21 ಸಾವಿರ ರೂಪಾಯಿ ಸಿಗುತ್ತದೆ ವರ್ಷಕ್ಕೆ. ಭದ್ರತಾ ಸಿಬ್ಬಂದಿಗಳಿಗೆ 20 ಸಾವಿರ ರೂಪಾಯಿ ಸಿಗುತ್ತೆ ಬಟ್ಟೆ ತೊಳೆಯುವ ಸಲುವಾಗಿ, ಹಾಗೂ ಈಗ ಭದ್ರತಾ ವಲಯದವರು ಸುಪ್ರೀಮ್ ಕೋರ್ಟಿನವರೊಂದಿಗೆ ವ್ಯಾಜ್ಯ ತೆಗೆದಿದ್ದಾರೆ; ಸುಪ್ರೀಮ್ ಕೋರ್ಟನವರಿಗೇಕೆ ಹೆಚ್ಚು, ನಮಗೇಕೆ ಕಡಿಮೆ, ಗಡಿಗಳಲ್ಲಿ ಇರುವವರು ನಾವು ಎಂದು. ನನ್ನ ಪ್ರಶ್ನೆ: ರೈತರ ಬಳಿ ಬಟ್ಟೆಗಳೇ ಇರುವುದಿಲ್ಲವೇ? ಅವುಗಳನ್ನು ತೊಳೆಯಬಾರದೇ? ರೈತರ ಬಟ್ಟೆ ತೊಳೆಯಲು 20 ಸಾವಿರ ಸೇರಿಸಲಾಗಿದೆ ಎಂದು ಎಂದಾದರೂ ಕೇಳಿದ್ದೀರಾ? ಕನಿಷ್ಠ ಬೆಂಬಲ ಬೆಲೆಯಲ್ಲಿ ನಾವು ಸೇರಿಸುವುದೇನು, ಅವಳಿ/ನಿಗೆ ಆ ಬೆಳೆ ಬೆಳೆಯಲು ತಗಲುವ ಖರ್ಚು ಮತ್ತು ಅವಳ/ನ ಕುಟುಂಬದ ವಹಿಸಿದ ಶ್ರಮ; ಇವರೆಡನ್ನು ಸೇರಿಸುತ್ತೇವೆ. ಇಷ್ಟೇ..,

ಹಾಗೂ ಈಗಂತೂ ನೌಕರರಿಗೆ 108 ಭತ್ಯೆಗಳೂ ಸಿಗುತ್ತವೆ; ಈಗ ವೇತನ ಮತ್ತು ತುಟ್ಟಿ ಭತ್ಯೆಯ (ಡಿಎ) ನಂತರ ಇತರೆ ಭತ್ಯೆಗಳು (ಅಲೋವನ್ಸ್‌ಸ್‌ಗಳು) ಸಿಗುತ್ತವೆ, ನನಗೊಂದು ಮಾತು ಹೇಳಿ; ಯಾವುದೇ ವ್ಯಕ್ತಿಗೆ 108 ಭತ್ಯೆಗಳು ಸಿಗುತ್ತಿದ್ದರೆ, ಆ ವ್ಯಕ್ತಿಗೆ ವೇತನದ ಅವಶ್ಯಕತೆ ಏನಿದೆ? ಇಲ್ಲ, ಅದೆಲ್ಲ ಸಿಗುತ್ತಿದೆ ಎಂದರೆ ನಾನು ಸಿಗಬಾರದು ಎಂದು ಹೇಳುತ್ತಿಲ್ಲ. ಆದರೆ, ರೈತ ಏನು ತಪ್ಪು ಮಾಡಿದ್ದಾನೆಂದು ಅವಳಿ/ನಿಗೆ ಇವೆಲ್ಲ ಸಿಗುವುದಿಲ್ಲ, ಅದಕ್ಕೆ ಕಾರಣ ಹೇಳಿ. ರೈತರ ಎಮ್‌ಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಯಲ್ಲಿ ಮನೆ ಬಾಡಿಗೆಯನ್ನು ಸೇರಿಸಲಾಗಿದೆಯೇ? ವೈದ್ಯಕೀಯ ಭತ್ಯೆ ಸೇರಿಸಲಾಗಿದೆಯೇ? ಅವಳ/ನ ಮಕ್ಕಳಿಗೆ ಶಿಕ್ಷಣದ ಅಲೋವನ್ಸ್ ಸೇರಿಸಲಾಗಿದೆಯೇ? ಯಾಕೆ ಅವಳಿ/ನಿಗೆ ಮಕ್ಕಳಿರುವುದಿಲ್ಲವಾ, ಅವಳು/ನು ಮಕ್ಕಳನ್ನು ಬೆಳೆಸಬಾರದಾ? ರೈತರನ್ನು ದೇಶದ ಮೇಲಿನ ಹೊರೆ ಎಂದು ಯಾಕೆ ಭಾವಿಸಿದ್ದೇವೆ? ಅವರಿಗೆ ದಾನ ಮಾಡುತ್ತಿದ್ದೇವೆ ಎಂದು ನಮಗೇಕೆ ಅನಿಸತ್ತದೆ? ನೀವು ಅವಳಿ/ನಿಗೆ ದಾನ ನೀಡುತ್ತಿಲ್ಲ, ಅವಳ/ನ ಶೋಷಣೆ ಮಾಡುತ್ತಿದ್ದೀರ, ನೀವು ರೈತರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದೀರಿ, ಹಾಗೂ ಅದೇ ಕಾರಣದಿಂದ ನಮ್ಮ ಆರ್ಥಿಕತೆ ನಡೆಯುತ್ತಿದೆ. ಈ ಅರ್ಥವ್ಯವಸ್ಥೆಯ ಸಂರಚನೆಯನ್ನು ನೋಡದಿದ್ದರೆ, ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ, ರೈತರಿಗೆ ಇಷ್ಟು ವರ್ಷಗಳಿಂದ ಯಾಕೆ ಈ ಪೆಟ್ಟುಗಳು ಬೀಳುತ್ತಿವೆ ಎಂಬುದು ನಮಗೆ ಗೊತ್ತಾಗುವುದಿಲ್ಲ.

( ಈ ಲೇಖನ ದೇವಿಂದರ್ ಶರ್ಮಾ ಅವರ ಭಾಷಣದ ಆಯ್ದ ಭಾಗದ ಪಠ್ಯರೂಪ)
ಪಠ್ಯರೂಪ ಮತ್ತು ಅನುವಾದ: ರಾಜಶೇಖರ ಅಕ್ಕಿ

ದೇವಿಂದರ್ ಶರ್ಮ

ಪತ್ರಕರ್ತ ಹಾಗೂ ಕೃಷಿ ತಜ್ಞ. ಇಂಡಿಯನ್ ಎಕ್ಸ್‌ಪ್ರೆಸ್, ದಿ ವೈರ್ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೃಷಿ ಮತ್ತು ಆಹಾರ ನೀತಿ ಕುರಿತು ವಿಶೇಷ ವರದಿ, ಲೇಖನಗಳನ್ನು ಬರೆದಿದ್ದಾರೆ. ಕೃಷಿ ನೀತಿಗೆ ಸಂಬಂಧಿಸಿದ ಇವರ 5 ಕೃತಿಗಳು ಪ್ರಕಟಗೊಂಡಿವೆ.


ಇದನ್ನೂ ಓದಿ: ಕೃಷಿ ಕಾನೂನಿನ ಪ್ರಚಾರಕ್ಕೆ ತನ್ನ ಫೋಟೋ ಬಳಸಿದ ಬಿಜೆಪಿಗೆ ಲೀಗಲ್ ನೋಟಿಸ್ ನೀಡಿದ ರೈತ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...