Homeನಿಜವೋ ಸುಳ್ಳೋನೀವು ನಂಬಿಯೇ ಬಿಟ್ಟಿದ್ದ ಈ ವಾರದ ಫೇಕ್‌ನ್ಯೂಸ್‌ಗಳು ಯಾವುವು ಗೊತ್ತೆ?

ನೀವು ನಂಬಿಯೇ ಬಿಟ್ಟಿದ್ದ ಈ ವಾರದ ಫೇಕ್‌ನ್ಯೂಸ್‌ಗಳು ಯಾವುವು ಗೊತ್ತೆ?

- Advertisement -
- Advertisement -

ಸುಳ್ಳು 1: ವಿಶ್ವದ 35 ದೇಶಗಳಿಗೆ ಮೋದಿ ಜೀವದಾನಿ: ಭಾರತವನ್ನು ಹಾಡಿಹೊಗಳಿದ 35 ವಿಶ್ವನಾಯಕರು

ಈ ರೀತಿಯಾಗಿ ಕನ್ನಡಪ್ರಭ ಪ್ರತ್ರಿಕೆ ವರದಿ ಪ್ರಕಟಿಸಿದೆ. ಇದಕ್ಕೆ ಪತ್ರಿಕೆ ಕೊಟ್ಟಿರುವ ಕಾರಣ ಕೊರೊನಾಗೆ ಸದ್ಯ ಬಳಸುತ್ತಿರುವ ಮಲೆರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಮೋದಿ 35 ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ ಎಂಬುದಾಗಿದೆ.

ಸತ್ಯ: ಭಾರತ ಏಪ್ರಿಲ್ 6ರವರೆಗೆ ಈ ಮಾತ್ರೆಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿತ್ತು. ಭಾರತಕ್ಕೆ ಹೆಚ್ಚು ಈ ಮಾತ್ರೆಗಳ ಅಗತ್ಯವಿದೆಯೆಂಬುದು ಅದಕ್ಕೆ ಕಾರಣವಾಗಿತ್ತು. ಆದರೆ ಏಪ್ರಿಲ್ 7 ರಂದು ಅಮೆರಿಕಾದ ಅಧ್ಯಕ್ಷ ಟ್ರಂಪ್ ಆ ಮಾತ್ರೆಗಳನ್ನು ಅಮೆರಿಕಾಕೆ ರಫ್ತು ಮಾಡದಿದ್ದರೆ ಭಾರತದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು. ಅಂದು ಮಧ್ಯಾಹ್ನದಿಂದಲೇ ಭಾರತ ರಫ್ತು ನಿಷೇಧವನ್ನು ತೆರವುಗೊಳಿಸಿತು.

ಭಾರತವೊಂದೇ ಪ್ರಪಂಚದ ಶೇ.70 ರಷ್ಟು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಉತ್ಪಾದಿಸುತ್ತಿದೆ. ಇದಕ್ಕೆ ಕಾರಣ ನಮ್ಮ ದೇಶವಿನ್ನು ಮಲೇರಿಯಾ, ಡೆಂಗ್ಯುನಂತರ ಮಾರಕ ಕಾಯಿಲೆಗಳಿಂದ ಬಳಲುತ್ತಿದೆ ಎಂಬುದೇ ಆಗಿದೆ. ಬೇರೆ ದೇಶಗಳು ಈ ವಿಷಯಲ್ಲಿ ಸುಧಾರಿಸಿರುವುದರಿಂದ ಅವು ಉತ್ಪಾದನೆಯನ್ನು ನಿಲ್ಲಿಸಿವೆ.

ಭಾರತವು ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ಪಾದಿಸಲು ಬೇಕಾಗುವ ಮಿಶ್ರಣಾಂಶ ಎಪಿಐ ಅನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಚೀನಾ ನೀಡದಿದ್ದರೆ ನಮ್ಮ ಉತ್ಪಾದನೆ ಕಷ್ಟ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಕಡಿಮೆ ಬೆಲೆಗೆ ಸಿಗಲು ಕಾರಣ ಹಿಂದಿನ ನೆಹರೂ ಕಾಲದ ಭಾರತದ ಪೆಟೇಂಟ್ ನೀತಿ ಕಾರಣ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಹೆಚ್ಚು ಉತ್ಪಾದನೆಯಾಗಲು 2014ರ ನಂತ ಬಂದ ಮೋದಿ ಸರ್ಕಾರ ಕಾರಣವಲ್ಲ. ಅದಕ್ಕೂ ಮುಂಚೆ ಇದ್ದ ಸರ್ಕಾರಗಳ ದೂರದೃಷ್ಟಿಯೇ ಕಾರಣ.

ಮೋದಿ ಅಮೆರಿಕಾದ ಬೆದರಿಕೆಗೆ ಮಣಿದು ಮಾತ್ರೆಗಳನ್ನು ರಫ್ತು ಮಾಡುತ್ತಿರುವುದರಿಂದ ಮುಂದೊಂದು ದಿನ ಕೊರೊನಾ ಉಲ್ಭಣಿಸಿದರೆ ಭಾರತಕ್ಕೆ ಕೊರತೆಯುಂಟಾಗುವ ಅಪಾಯವಿದೆ.

ಸುಳ್ಳು 2: ಅಮೆರಿಕಾದಲ್ಲಿ ಕೊರೊನಾ ಚಿಕಿತ್ಸೆಗೆ 55 ಲಕ್ಷ ರೂ (73 ಸಾವಿರ ಡಾಲರ್) ಖರ್ಚು. ಭಾರತದಲ್ಲಿ ಫ್ರಿ?

ಇದು ಪೋಸ್ಟ್‌ಕಾರ್ಡ್‌ನ ಮತ್ತೊಂದು ಸುಳ್ಳು ಸುದ್ದಿಯಾಗಿದೆ. ಭಾರತವನ್ನು ಹೊಗಳುವ ಭರದಲ್ಲಿ ಬಾಯಿಗೆ ಬಂದಷ್ಟು ವೆಚ್ಚವನ್ನು ಅಮೆರಿಕಾದಲ್ಲಿ ಮಾಡಲಾಗುತ್ತಿದೆ ಎಂದು ಬರೆದುಕೊಂಡಿದೆ. ಇದಕ್ಕೆ ಯಾವುದೇ ಮೂಲವನ್ನು ಅದು ಉಲ್ಲೇಖಿಸಿಲ್ಲ.

ಸತ್ಯ: ಚಿಕಿತ್ಸೆಯಲ್ಲಿ ಕೆಲವು ವ್ಯಕ್ತಿಗಳಿಗೆ ಅವರ ಪರಿಸ್ಥಿತಿ ನೋಡಿ ತೀರ್ಮಾನವಾಗುತ್ತದೆಯೇ ಹೊರತು ಎಲ್ಲರಿಗೂ 55 ಲಕ್ಷ ಅಥವಾ 73 ಸಾವಿರ ಡಾಲರ್ ಮಾಡಲು ಸಾಧ್ಯವಿಲ್ಲ.

ಈ ಕುರಿತು ಅಮೆರಿಕಾ ಪ್ರಮುಖ ಪತ್ರಿಕೆಗಳಾದ ಟೈಮ್, ದಿ ನ್ಯೂಯಾರ್ಕ್ ಟೈಮ್ಸ್ ಮತ್ತು ವಾಲ್‌ಸ್ಟ್ರೀಟ್ ಜರ್ನಲ್ ಲೇಖನಗಳನ್ನು ಪರಿಶೀಲಿಸಿದಾಗ ಆರೋಗ್ಯ ವಿಮೆ ಇದ್ದವರಿಗೆ 9 ಸಾವಿರ ಡಾಲರ್ ಮತ್ತು ಇಲ್ಲದವರಿಗೆ 23 ಸಾವಿರ ಡಾಲರ್‌ವರೆಗೆ ಹಣ ಖರ್ಚಾದ ಉಲ್ಲೇಖವಿದೆ ಅಷ್ಟೇ. 73 ಸಾವಿರ ಎಂಬುದು ಕೇವಲ ವದಂತಿ ಅಷ್ಟೇ.

ಸುಳ್ಳು 3: ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಕೆರೆ ಸ್ವಚ್ಛಗೊಳಿಸುವ ಶಿಕ್ಷೆ ಕೊಟ್ಟ ಕರ್ನಾಟಕ ಪೊಲೀಸರು

ಈ ಟೈಟಲ್‌ನಲ್ಲಿ Awesome things in India ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಕೆರೆ ಸ್ವಚ್ಛ ಮಾಡುವ ಫೋಟೊವೊಂದು ಪ್ರಕಟಿಸಿದ್ದು ಅದು ವೈರಲ್ ಆಗಿದೆ.

ಸತ್ಯ: ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಇದು ಸುಳ್ಳೆಂದು ಸಾಬೀತಾಗಿದೆ. ಜುಲೈ 3, 2017ರಂದೇ ಬೆಂಗಳೂರು ಮಿರರ್ ಪತ್ರಿಕೆ ಕೆಲವು ಟೆಕ್ಕಿಗಳು ಕೆರೆ ಸ್ವಚ್ಚಗೊಳಿಸುತ್ತಿರುವುದು ಎಂದು ಈ ಫೋಟೊವನ್ನು ಪ್ರಕಟಿಸಿದೆ.

ಸುಳ್ಳು 4: ಕೊರೊನಾ ತಗುಲಿ ಒಂದೇ ದಿನ ಇಟಲಿಯಲ್ಲಿ 200 ವೈದ್ಯರು, ದಾದಿಯರ ಸಾವು.

Bem vindo ಎಂಬ ಫೇಸ್‌ಬುಕ್ ಬಳಕೆದಾರ ಚಿತ್ರವೊಂದನ್ನು ಪ್ರಕಟಿಸಿ ಏಪ್ರಿಲ್ 13ರ ಒಂದೇ ದಿನ ಇಟಲಿಯಲ್ಲಿ 200 ವೈದ್ಯರು, ದಾದಿಯರ ಸಾವು ಎಂಬ ಸುದ್ದಿ ಹರಡಿದ್ದಾರೆ.

ಸತ್ಯ: ಫೋಟೊವನ್ನು ರಿವರ್ಸ್ ಸರ್ಚ್ ಮಾಡಿದಾಗ ಅದು ಅಮೆರಿಕಾದ ಟಿವಿ ಧಾರವಾಹಿ “Grey’s Anatomy” ಯ ಫೋಟೊ ಎಂದು ತಿಳಿದುಬಂದಿದೆ. ‘Wishin’ and Hopin’ ಎಪಿಸೋಡ್‌ನಲ್ಲಿ ಬರುವ ಚಿತ್ರವನ್ನು ನಿಜವೆಂದು ಹರಡಲಾಗಿದೆ ಅಷ್ಟೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. This looks like kannada version of fake news peddler the print.
    1. It doesn’t say the deal to export HCQ to US was taken before banning it, it also doesn’t say additional negotiation deals that Modi did with US before agreeing to export HCQ. Btw it doesn’t highlight why India has been kept filthy by INC (ruled over 60 years) which increase chances of maleria
    2. So there is a discrepancy of amount being charged, but it doesn’t highlight that it’s still charging patients whereas it’s free in India

LEAVE A REPLY

Please enter your comment!
Please enter your name here

- Advertisment -

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...