Homeಮುಖಪುಟಪಠ್ಯಪುಸ್ತಕಗಳಲ್ಲಿ ನಮ್ಮ ಹೆಸರು ಕೈಬಿಡಿ: ಎನ್‌ಸಿಇಆರ್‌ಟಿಗೆ ಪತ್ರ ಬರೆದ 33 ತಜ್ಞರು

ಪಠ್ಯಪುಸ್ತಕಗಳಲ್ಲಿ ನಮ್ಮ ಹೆಸರು ಕೈಬಿಡಿ: ಎನ್‌ಸಿಇಆರ್‌ಟಿಗೆ ಪತ್ರ ಬರೆದ 33 ತಜ್ಞರು

- Advertisement -
- Advertisement -

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ರಾಜ್ಯಶಾಸ್ತ್ರದ ಪಠ್ಯಗಳನ್ನು “ಗುರುತಿಸಲಾಗದಷ್ಟು ವಿರೂಪಗೊಳಿಸಲಾಗಿದೆ” ಹಾಗಾಗಿ ತಮ್ಮ ಹೆಸರನ್ನು ಕೈಬಿಡುವಂತೆ ದೇಶದ ಪ್ರತಿಷ್ಠಿತ ವಿವಿಗಳ 33 ವಿದ್ವಾಂಸರ ಗುಂಪು ಒತ್ತಾಯಿಸಿದೆ.

ಇತ್ತೀಚೆಗೆ ತಾನೇ ಮುಖ್ಯ ಸಲಹೆಗಾರರ ಮಂಡಳಿಯಿಂದ ಕೈಬಿಡುವಂತೆ ಶಿಕ್ಷಣ ತಜ್ಞ ಸುಹಾಸ್ ಪಾಲ್ಶಿಕರ್ ಮತ್ತು ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಸಹ ಒತ್ತಾಯಿಸಿದ್ದರು. ಸದ್ಯ ಪತ್ರ ಬರೆದ 33 ಶಿಕ್ಷಣ ತಜ್ಞರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಮುಜಾಫರ್ ಅಸ್ಸಾದಿ, ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಸಂದೀಪ್‌ ಶಾಸ್ತ್ರಿ ಕೂಡ ಸೇರಿದ್ದಾರೆ.

‘ವಿಭಿನ್ನ ದೃಷ್ಟಿಕೋನಗಳ ಹೊರತಾಗಿಯೂ ನಾವೆಲ್ಲರೂ ಶಾಲಾ ಪಠ್ಯಪುಸ್ತಕಗಳ ರಾಜಕೀಯ ಶಾಸ್ತ್ರದಲ್ಲಿ ಗಮನಾರ್ಹವಾದ ಪಠ್ಯ ರಚಿಸುವಿಕೆಗೆ ಒಟ್ಟಾಗಿ ಕೆಲಸ ಮಾಡಿದ್ದೇವೆ. ಆದಾಗ್ಯೂ, ಎನ್‌ಸಿಇಆರ್‌ಟಿ ಈಗ ಈ ಪಠ್ಯಪುಸ್ತಕಗಳಲ್ಲಿ ಹಲವು ನಿರ್ಣಾಯಕ ಬದಲಾವಣೆಗಳನ್ನು, ತಿರುಚುವಿಕೆ ಮತ್ತು ಅಳಿಸುವಿಕೆಗಳನ್ನು ಮಾಡಿದೆ. ಇವುಗಳು ಯಾವುದೂ ಸ್ವೀಕಾರಾರ್ಹವಲ್ಲ ಮತ್ತು ಅಪೇಕ್ಷಣೀಯ ವಿಷಯಗಳನ್ನು ಯಾವುದೇ ಪ್ರಮುಖ ಕಾರಣ ನೀಡದೆ ಮುದ್ರಿಸಲಾಗಿದೆ. ಇವು ಶೈಕ್ಷಣಿಕ ಜ್ಞಾನ ಉತ್ಪಾದನೆಗೆ ಆಧಾರವಾಗಿರುವ ಪಾರದರ್ಶಕತೆಯನ್ನು ಉಲ್ಲಂಘಿಸುವುದರ ಜೊತೆ ವಿವಾದವನ್ನು ಸೃಷ್ಟಿಸುತ್ತದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

‘ಮೂಲ ಪಠ್ಯಗಳಲ್ಲಿ ಹಲವಾರು ವಿಷಯಾಧಾರಿತ ಪರಿಷ್ಕರಣೆಗಳು ಇರುವುದರಿಂದ, ಅವುಗಳನ್ನು ವಿಭಿನ್ನ ಪುಸ್ತಕಗಳಾಗಿ ಮಾಡುವುದರಿಂದ ನಾವು ತಯಾರಿಸಿದ ಪುಸ್ತಕಗಳು ಎಂದು ಹೇಳಿಕೊಳ್ಳುವುದು ಮತ್ತು ನಮ್ಮ ಹೆಸರನ್ನು ಅವುಗಳೊಂದಿಗೆ ಸಂಯೋಜಿಸುವುದು ನಮಗೆ ಕಷ್ಟಕರವಾಗಿದೆ. ಬದಲಾವಣೆಯಿಂದ ಪಠ್ಯಪುಸ್ತಕಗಳನ್ನು ಗುರುತಿಸಲಾಗದಷ್ಟು ವಿರೂಪಗೊಳಿಸಲಾಗಿದೆ ಮತ್ತು ಅವುಗಳನ್ನು ಶೈಕ್ಷಣಿಕವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಈಗ ಕೈಗೊಂಡಿರುವ ಸೃಜನಾತ್ಮಕ ಸಾಮೂಹಿಕ ಪ್ರಯತ್ನವು ಅಪಾಯದಲ್ಲಿದೆ ಎಂದು ನಾವು ಈಗ ನಂಬುತ್ತೇವೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸ್ವರಾಜ್ ಅಭಿಯಾನದ ರಾಜಕೀಯ ಪಕ್ಷದ ಸಂಸ್ಥಾಪಕರಾದ ಪಾಲ್ಶಿಕರ್ ಮತ್ತು ಯಾದವ್ ಅವರನ್ನು 9 ರಿಂದ 12 ನೇ ತರಗತಿಯ NCERT ಯ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳಿಗೆ ಮುಖ್ಯ ಸಲಹೆಗಾರರಾಗಿ ಹೆಸರು ಸೇರಿಸಲಾಗಿದೆ.

ಕರೋನವೈರಸ್ ಸಾಂಕ್ರಾಮಿಕ ರೋಗದಿಂದ ಮಕ್ಕಳಿಗೆ ಪಠ್ಯ ಹೊರೆಯಾಗಬಾರದೆಂದು ಕಡಿಮೆ ಮಾಡುವು ಉದ್ದೇಶದಿಂದ ಎನ್‌ಸಿಇಆರ್‌ಟಿಯು ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಆದರೆ ಆ ಸಂದರ್ಭದಲ್ಲಿ ಭಾರತದ ಇತಿಹಾಸದ ಪ್ರಮುಖ ವಿವರಗಳನ್ನು ಕೈಬಿಟ್ಟಿದೆ.

ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರನ್ನು ಹತ್ಯೆ ಮಾಡಲು ಹಿಂದೂ ಉಗ್ರಗಾಮಿಗಳು ನಡೆಸಿದ ಪ್ರಯತ್ನಗಳು ಮತ್ತು ಅವರ ಹತ್ಯೆಯ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ವಿಧಿಸಲಾದ ನಿಷೇಧದ ಪ್ಯಾರಾಗಳನ್ನು ಎನ್‌ಸಿಇಆರ್‌ಟಿ ಪಠ್ಯದಿಂದ ಕೈಬಿಡಲಾಗಿದೆ.

ಕಳೆದ ವರ್ಷ, NCERT 2002ರ ಗುಜರಾತ್ ಗಲಭೆಗಳು, ಭಾರತದಲ್ಲಿ ಮೊಘಲ್ ಆಳ್ವಿಕೆ ಮತ್ತು 1975ರಲ್ಲಿ ಹೇರಲಾದ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ವಿಷಯವನ್ನು ಸಹ ಕೈಬಿಟ್ಟಿತು. ಈಗ NCERT ಪಠ್ಯಪುಸ್ತಕದಲ್ಲಿ ಗುಜರಾತ್ ಗಲಭೆಯ ಬಗ್ಗೆ ಯಾವುದೇ ಉಲ್ಲೇಖಗಳು ಇಲ್ಲದಂತಾಗಿದೆ.

ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಸಕ್ಲಾನಿ ಅವರಿಗೆ ಗುರುವಾರ ಪಾಲ್ಶಿಕರ್ ಮತ್ತು ಯಾದವ್ ಅವರು ಪತ್ರ ಬರೆದಿದ್ದು, ”ತಮ್ಮ ಜೊತೆ ಯಾವುದೇ ಚರ್ಚೆನಡೆಸದೇ ಅಥವಾ ಪಠ್ಯ ಕೈಬಿಡುವ ವಿಚಾರ ತಿಳಿಸಿಲ್ಲ” ಎಂದು ಅವರು ಹೇಳಿದರು.

ಎನ್‌ಸಿಇಆರ್‌ಟಿಯು ಈ ರೀತಿ ಪಠ್ಯ ಕೈಬಿಡುವುದರ ಹಿಂದೆ ಯಾವುದೇ ಶೈಕ್ಷಣಿಕ ತಾರ್ಕಿಕತೆಯನ್ನು ನೋಡಲಾಗಿಲ್ಲ ಎಂದು ಪಾಲ್ಶಿಕರ್ ಮತ್ತು ಯಾದವ್ ಅವರು ಹೇಳಿದ್ದಾರೆ.

”ಪಠ್ಯಪುಸ್ತಕಗಳು ಪಕ್ಷಪಾತದ ರೀತಿಯಲ್ಲಿ ರೂಪಿಸಬಾರದು ಮತ್ತು ಸಮಾಜ ವಿಜ್ಞಾನದ ವಿದ್ಯಾರ್ಥಿಗಳಲ್ಲಿ ವಿಮರ್ಶೆ ಮತ್ತು ಪ್ರಶ್ನಿಸುವ ಮನೋಭಾವವನ್ನು ತಗ್ಗಿಸಬಾರದು” ಎಂದು ಪತ್ರದಲ್ಲಿ ಸೇರಿಸಲಾಗಿದೆ.

“ವಿರೂಪಗೊಂಡ ಮತ್ತು ಶೈಕ್ಷಣಿಕವಾಗಿ ಕಾರ್ಯನಿರ್ವಹಿಸದ ಪಠ್ಯಪುಸ್ತಕಗಳಿಗೆ” ತಮ್ಮ ಹೆಸರುಗಳನ್ನು ಮುಖ್ಯ ಸಲಹೆಗಾರರಾಗಿ ಉಲ್ಲೇಖಿಸಿರುವುದು “ಮುಜುಗರ” ಎಂದು ಶಿಕ್ಷಣತಜ್ಞ ಮತ್ತು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಇದನ್ನೂ ಓದಿ; ಸಿಎಎ, ಎನ್‌ಆರ್‌ಸಿ ಟೀಕಿಸಿ ನಾಟಕ ಪ್ರದರ್ಶನ: ಬೀದರ್‌ನ ಶಾಹೀನ್ ಶಾಲೆಯ ವಿರುದ್ಧದ ದೇಶದ್ರೋಹ ಪ್ರಕರಣ… ರದ್ದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು,...