Homeಚಳವಳಿದೇಶದಲ್ಲಿ ಆವರಿಸಿರುವ ಆರ್ಥಿಕ ಕತ್ತಲೆಗೆ ಟಾರ್ಚು ಬಿಡುವವರು ಯಾರು?

ದೇಶದಲ್ಲಿ ಆವರಿಸಿರುವ ಆರ್ಥಿಕ ಕತ್ತಲೆಗೆ ಟಾರ್ಚು ಬಿಡುವವರು ಯಾರು?

- Advertisement -
- Advertisement -

ಉದ್ಯೋಗ ಸೃಷ್ಟಿ ಅನ್ನೋದು ಉಂಟಾಗುವುದು ನಗರ ಪ್ರದೇಶಗಳಲ್ಲಿ ಕಾರ್ಖಾನೆಗಳ ಕೆಲಸ ಹೆಚ್ಚುವುದು ಹಾಗೂ ಸೇವಾ ಕ್ಷೇತ್ರ ಬೆಳೆಯುವುದರಿಂದ ಆಗುವುದಾದರೆ, ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿಯಂತಹ ಯೋಜನೆಗಳಿಂದ. ಆ ಎರಡೂ ಕ್ಷೇತ್ರಗಳಲ್ಲಿ ಕೆಲಸ ಆಗೊಲ್ಲದು. ನಗರಗಳ ಕಾರಖಾನೆಗಳು ಮುಚ್ಚಲಿಕ್ಕೆ ಹತ್ಯಾವು. ಉಳಿದಿದ್ದವು ಲೇ ಆಫು, ವಿ.ಆರ್.ಎಸ್ಸು, ಡಿಸ್ಸ ಮಿಸ್ಸಲ್ಲು ಅಂತ ಶುರು ಹಚ್ಚಿಕೊಂಡಾವು. ಮನಮೋಹನಾನಂತರ ಸರಕಾರದೊಳಗ ಉದ್ಯೋಗ ಖಾತ್ರಿ ಯೋಜನೆ ನಿಂತು ಹೋಗೇದ.

ಜವಾಹರ ಲಾಲ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕಿ ಪ್ರೊ. ಜಯಂತಿ ಘೋಷ್ ಅವರು ಒಂದು ಮಾತು ಹೇಳ್ಯಾರ.

“ನಮ್ಮ ಅರ್ಥ ವ್ಯವಸ್ಥೆಯನ್ನು ಸುಧಾರಿಸಲಿಕ್ಕೆ ಏನು ಮಾಡಬೇಕೋ, ಅದರ ಯಥಾವತ್ತು ಉಲ್ಟಾ ಕೆಲಸಗಳನ್ನ ಸರಕಾರ ಮಾಡುತ್ತಿದೆ,” ಅಂತ.

ಹಂಗಾರ ಏನು ಮಾಡಬಹುದಿತ್ತು, ಇವರು ಏನು ಮಾಡಲಿಕ್ಕೆ ಹತ್ಯಾರ?

ಮೊದಲನೆಯದಾಗಿ ಈಗ ನಾವು ಎದುರಿಸುತ್ತಿರುವ ಸಮಸ್ಯೆಯ ಹೆಸರು `ಸ್ಟಾಗಫ್ಲೇಷನ್’ ಅಂದರ ‘ಜಡ ಹಣದುಬ್ಬರ’. ಬೇಡಿಕೆ ಕಡಿಮೆಯಾಗಿ, ನಿರುದ್ಯೋಗ ಜಾಸ್ತಿಯಾಗಿ, ಉಬ್ಬರ ಹೆಚ್ಚಾದಾಗ ಉಂಟಾಗುವುದು ಜಡ ಹಣದುಬ್ಬರ. ಇದಕ್ಕೂ ಹಣದುಬ್ಬರಕ್ಕೂ ಏನು ವ್ಯತ್ಯಾಸಪಾ ಅಂದರ ಇದು ಹಣ ದುಬ್ಬರಕ್ಕಿಂತಲೂ ಹೆಚ್ಚು ಅಪಾಯಕಾರಿ.

ಡಯಾಗ್ನೋಸಿಸ್ ಆತು ಅಂದಮ್ಯಾಲೆ ಗುಳಿಗೆ – ಇಂಜಕ್ಷನ್ ಕೊಡಬೇಕಲ್ಲಾ, ಅದನ್ನು ಬಿಟ್ಟು ರೋಗ ಹೆಚ್ಚು ಮಾಡೋ ಮೈಗೆ ಬ್ಯಾಕ್ಟೀರಿಯಾ -ವೈರಸ್ಸು ಗಳನ್ನು ಚುಚ್ಚಿದರೆ ಹೆಂಗೆ? ಆಗ ನಾವು `ಆವ ರೋಗವು ಎನಗೆ ದೇವ ಧನ್ವಂತ್ರಿ’ ಅಂತ ಭೈರವಿ ರಾಗದಾಗ ಹಾಡಿ ಹೋಗಬೇಕು ಅಷ್ಟ.

ಈ ಜಡ ಹಣದುಬ್ಬರಕ್ಕೆ ಏನು ಮಾಡಬೇಕು? ಮೊದಲನೆಯದಾಗಿ ಬೇಡಿಕೆ ಹೆಚ್ಚು ಮಾಡಬೇಕು. ಇದಕ್ಕೊಂದು ಪೂರ್ವಾಪರ ಸಂದರ್ಭ ಕೊಡತೇನಿ. ಹೋದವರ್ಷ ಭಾರತದ ‍ಮಧ್ಯಮ ವರ್ಗದ ಕಣ್ ಕೂಸಾಗಬೇಕಾಗಿದ್ದ ಟಾಟಾ ನ್ಯಾನೋ ಕಾರು ಎಷ್ಟು ಖರ್ಚಾಗಿದ್ದು ಗೊತ್ತ? ಕೇವಲ ಒಂದು. ಒಂದು ನೂರಲ್ಲಾ, ಸಾವಿರಲ್ಲ. ಬರೇ ಒಂದು. ಇದು ಕುಸಿದ ಬೇಡಿಕೆಯ ಉದಾಹರಣೆ.

ಇನ್ನು ನಿರುದ್ಯೋಗದ ಸಮಸ್ಯೆ ಎಷ್ಟು ಭೀಕರವಾದದ್ದು ಅಂದರ ಈಗಿನ ಪರಿಸ್ಥಿತಿ ಕಳೆದ 43 ವರ್ಷಗಳಲ್ಲಿ ಇರಲಿಲ್ಲ. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಮುಖ್ಯಸ್ಥರು ಇದೇ ಮಾತನ್ನು ಆಳುವವರು ಅವರಿಗೆ ಕಾಡಿ ಕಾಡಿ ರಾಜಿನಾಮೆ ಕೊಡಿಸಿದರು. ಚುನಾವಣೆ ಆದ ಮೇಲೆ ಅದೇ ವರದಿಯನ್ನ ಇದೇ ಸರಕಾರ ಯಾವುದೇ ಭಿಡೆ ಇಲ್ಲದೇ ಬಿಡುಗಡೆ ಮಾಡಿತು. ಇವತ್ತಿನ ಲೆಕ್ಕಕ್ಕೆ ಸುಮಾರು ಎಂಟು ಕೋಟಿ ಭಾರತೀಯರಿಗೆ ಯಾವುದೇ ಕೆಲಸ ಇಲ್ಲ. ಸೂಕ್ತ ಉದ್ಯೋಗ ಸೂಚಿ ನೋಡಿದರೆ ಇದು ಸುಮಾರು 40 ಕೋಟಿ.

ಇದನ್ನ ನಮ್ಮ ಸರಕಾರ ಲೆಕ್ಕಕ್ಕೇ ತೊಗೊಳ್ಳವಲ್ಲದು. ಅವರಿಗೆ ಇದು ಕಾಣುತ್ತಿಲ್ಲ. ಅರ್ಜುನಾ ನಿನಗೇನು ಕಾಣುತ್ತಿದೆ ಎಂದರೆ ಬರೀ ಅಚ್ಚೆ ದಿನಗಳು ಹಾಗೂ ಅವು ಬಂದಿಲ್ಲ ಅಂತ ಹೇಳುವ ಸುಳ್ಳುಗಾರರು ಅಂತ ನಮ್ಮ ನಾಯಕರು ಹೇಳುತ್ತಿದ್ದಾರೆ. ಅವರಿಗೆ ಏನು ಕಮ್ಮಿ ಆಗಿದೆ? ಏನೂ ಇಲ್ಲ. ಕೇವಲ ಒಂದು `ಲಾ’ ಕಮ್ಮಿ ಆಗಿದೆ ಅಂತ ಅನಸ್ತದ.

ಕೇಂದ್ರ ರೇಲ್ವೆ ಸಚಿವರೊಬ್ಬರು ಹುಡುಗ- ಹುಡುಗಿಯರು ಮದುವೆ ಆಗುತ್ತಿದ್ದಾರೆ. ಎಲ್ಲ ಸರಿಯಾಗಿದೆ. ಎಲ್ಲಿದೆ ಕುಸಿತ? ಅಂತ ನಚಿಕೇತ ಸಂಹಿತೆಯ ಪ್ರಶ್ನೆ ಕೇಳಿದ್ದರು. ಈ ದೇಶದಾಗ ಯಾರು ಯಾವಾಗ ಮದುವೆ ಮಾಡಿಕೊಳ್ಳುತ್ತಾರೆ ಅಂತ ಕೇಳಬಾರದು. ಅದಕ್ಕೂ ಅರ್ಥ ವ್ಯವಸ್ಥೆಗೂ ಸಂಬಂಧ ಇಲ್ಲ ಅಂತ ಆವಾಗ ತಿಳೀತದ.

ಬೇಡಿಕೆ ಹೆಚ್ಚಾಗಲಿಕ್ಕೆ ಏನು ಮಾಡಬೇಕು? ಉದ್ಯೋಗ ಸೃಷ್ಟಿ ಆಗಬೇಕು, ಮಾಡಿದ ಉದ್ಯೋಗಕ್ಕೆ ಸರಿಯಾದ ಸಂಬಳ ಸಿಗಬೇಕು. ಅಲ್ಲವೇ? ಸಿಂಪಲ್.

ಅತ್ಯಂತ ಗಹನವಾದ ಸಿದ್ಧಾಂತ ಯಶಸ್ಸು ಆಗುವುದು ಯಾವಾಗ ಅಂದರೆ ಅದನ್ನು ಸರಳವಾದ ಭಾಷೆಯಲ್ಲಿ ಹೇಳಿ ಅದನ್ನು ಸಾಮಾನ್ಯ ಜ್ಞಾನದ ಲೆವಲ್ಲಿಗೆ ಏರಿಸಿದಾಗ ಅಂತ ಈ ಶತಮಾನದ ಅತ್ಯದ್ಭುತ ವಿಜ್ಞಾನಿ ರಿಚರ್ಡ್ ಫೆಯನ್ ಮನ್ ಹೇಳಿದ. ಅಂತೆಯೇ ಅಮೆರಿಕೆ- ಇಂಗ್ಲಂಡಿನಲ್ಲಿ ಎಂ.ಎ, ಪಿಎಚ್‍ಡಿಗಳಿಗೆ ಇಂತಹ ಸಿಂಪಲ್ ವಿಷಯಗಳು ಹೊಳೆಯುವುದಿಲ್ಲವೇ?

ಬೇಡಿಕೆ ಹೆಚ್ಚುವುದು- ಖರ್ಚು ಹೆಚ್ಚುವುದು, ಅಭಿವೃದ್ಧಿ ಆಗುವುದು ಎಲ್ಲವೂ ಕೋಳಿ ಮತ್ತು ಮೊಟ್ಟೆಯ ಸಮಸ್ಯೆ ಅಂತ ಹೇಳೋರು ಇದ್ದಾರ. ಆದರ ಪರಿಹಾರ ಅನ್ನೋದು ಮೊಟ್ಟೆಯಿಂದ ಅಥವಾ ಕೋಳಿಯಿಂದ ಶುರು ಆಗಬೇಕು. ಎರಡೂ ಬಿಟ್ಟು ಇರೋ ಮೊಟ್ಟೆಗಳನ್ನ ಆಮಲೇಟು ಮಾಡಿ ತಿಂದು ಆಮ್ಯಾಲೆ ಕೈ ತಿರುವಿದಿರ ಹೆಂಗ?

ಉದ್ಯೋಗ ಸೃಷ್ಟಿ ಅನ್ನೋದು ಉಂಟಾಗುವುದು ನಗರ ಪ್ರದೇಶಗಳಲ್ಲಿ ಕಾರ್ಖಾನೆ ಗಳ ಕೆಲಸ ಹೆಚ್ಚುವುದು ಹಾಗೂ ಸೇವಾ ಕ್ಷೇತ್ರ ಬೆಳೆಯುವುದರಿಂದ ಆಗುವುದಾದರೆ, ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿಯಂತಹ ಯೋಜನೆಗಳಿಂದ. ಆ ಎರಡೂ ಕ್ಷೇತ್ರಗಳಲ್ಲಿ ಕೆಲಸ ಆಗೊಲ್ಲದು. ನಗರಗಳ ಕಾರಖಾನೆಗಳು ಮುಚ್ಚಲಿಕ್ಕೆ ಹತ್ಯಾವು. ಉಳಿದಿದ್ದವು ಲೇ ಆಫು, ವಿ ಆರ್ ಎಸ್ಸು, ಡಿಸ್ಸ ಮಿಸ್ಸಲ್ಲು ಅಂತ ಶುರು ಹಚ್ಚಿಕೊಂಡಾವು. ಮನಮೋಹನಾನಂತರ ಸರಕಾರದೊಳಗ ಉದ್ಯೋಗ ಖಾತ್ರಿ ಯೋಜನೆ ನಿಂತು ಹೋಗೇದ. ಅದಕ್ಕ ಮಹಾತ್ಮಾ ಗಾಂಧಿ ಹೆಸರು ಇಟ್ಟದ್ದನ ತಪ್ಪಾತೋ ಏನೋ. ಈ ಸರಕಾರದವರು ಅದನ್ನ ಮುಟ್ಟಲಿಕ್ಕೆ ಒಲ್ಲರು.

ಇನ್ನು ಸೂಕ್ಷ್ಮ ಅರ್ಥವ್ಯವಸ್ಥೆಯ ನಿರ್ವಹಣೆಯನ್ನು ಇವರು ಮರತುಬಿಟ್ಟಾರ. ಹಣದುಬ್ಬರವನ್ನು ನೋಟು ಪ್ರಿಂಟು ಮಾಡುವ ಪ್ರಮಾಣವನ್ನು ಕಡಿಮೆ ಮಾಡೋದು, ಇತರ ನೀತಿಗಳ ನಿರೂಪಣೆ ಹಾಗೂ ಜಾರಿಯಿಂದಾಗಿ ನಿಯಂತ್ರಿಸಲಿಕ್ಕೆ ಸಾಧ್ಯ ಅದ. ಆದರ ಇವರು ಇವನ್ನೆಲ್ಲ ಮಾಡವಲ್ಲರು. ಅವರಿಗೆ ಇವೆಲ್ಲ ಚಿಲ್ಲರಾ ಸಮಸ್ಯೆ. ಅವರಿಗೆ ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದ ಇರೋ ಹಿಂದುಗಳ ಸಮಸ್ಯೆಯೇ ಮುಖ್ಯ. ಅದಕ್ಕೆ ಇಸ್ರೇಲು ಮಾದರಿಯ ಪರಿಹಾರ ಹುಡುಕತಾರ. ಅದೇ ಇಸ್ರೇಲಿನ ಅರ್ಥ ಪರಿಣಿತಿ ಇವರಿಗೆ ಕಾಣಂಗಿಲ್ಲ. ಭಾರಿ ಭಯಂಕರ ದೇಶ ಪ್ರೇಮದ ಭಾಷಣ ಮಾಡೋ ಇವರಿಗೆ ಭಾರತೀಯರ ಸಮಸ್ಯೆ ಅವರಿಗೆ ಕಾಣಂಗಿಲ್ಲ. ಅದನ್ನ ಸ್ಕ್ಯಾಂಡಿನೇವಿಯಾ ಮಾದರಿಯೊಳಗ ಪರಿಹರಿಸಬಹುದು ಅಂತ ಅವರಿಗೆ ಅನ್ನಿಸೋದಿಲ್ಲ.

ಅಪರೂಪದ ಆರ್ಥಿಕ ತಜ್ಞ ಡಾ. ಡಿ. ಎಂ ನಂಜುಂಡಪ್ಪ ಈ ದೇಶದ ಆರ್ಥಿಕ ಸಮಸ್ಯೆಗಳಿಗೆ ನೀಡಿದ ಪರಿಹಾರದ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

1. ನಮ್ಮ ದೇಶಕ್ಕೆ ಬೇಕಾಗಿರುವುದು ಆದಾಯ ತೆರಿಗೆ ಅಲ್ಲ. ಖರ್ಚಿನ ತೆರಿಗೆ. (ಅಯ್ಯೋ ಬಿಡಿ ಸಾ. ಅದಿಲ್ಲದಿದ್ದರೆ ನಾವು ವಿರೋಧ ಪಕ್ಷಗಳ ಜನಪ್ರಿಯ ನಾಯಕರನ್ನು ಹೆದರಿಸೋದು ಹೇಗೆ?)

2. ಗಳಿಕೆಯನ್ನು ಉತ್ತೇಜಿಸಿದಂತೆಯೇ ಉಳಿಕೆಯನ್ನು ಉತ್ತೇಜಿಸಬೇಕು. ಬರೀ ಗಳಿಸಿ, ಉಳಿಸದೇ ಹೋದ ದೇಶಕ್ಕೆ ಭವಿಷ್ಯವಿಲ್ಲ. (ಕೊಳ್ಳುಬಾಕನೆಂಬೋ ಬೀಜಾಸುರನು ರಾರಾಜಿಸುತ್ತಿರುವಾಗ ಉಳಿಸುವವರು ಯಾರು ಸಾ?)

3. ಎಲ್ಲ ರೀತಿಯ ಆದಾಯ ತೆರಿಗೆ ವಿನಾಯಿತಿಗಳನ್ನು ರದ್ದು ಮಾಡಬೇಕು. ಸುಂಕದ ಮಟ್ಟವನ್ನು ಕಮ್ಮಿ ಮಾಡಬೇಕು. (ವಿನಾಯಿತಿಗೆಂದೇ ಸ್ವಯಂಸೇವಾ ಸಂಸ್ಥೆ ತೆರೆದವರು ಏನು ಮಾಡಬೇಕು ಸಾ?)

4. ಬಡವರ ಕೈಯಲ್ಲಿ ಹಣ ಓಡಾಡುವಂತೆ ಮಾಡಬೇಕು (ಅಯ್ಯೋ ಸಾ, ಹೀಗೆ ಮಾಡುತ್ತೇವೆ ಎನ್ನುವ ಆಶ್ವಾಸನೆಯಿಂದ ನಾವು ಅಧಿಕಾರಕ್ಕೆ ಬರೋದು. ಅದನ್ನು ಪೂರೈಸಿ ಬಿಟ್ಟರೆ ಮುಂದಿನ ಚುನಾವಣೆಯಲ್ಲಿ ನಾವು ಏನು ಮಾತಾಡಬೇಕು?)

ಆ ಶಾರದಾ ಪುತ್ರನ ಶಿಫಾರಸುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ವ್ಯವಧಾನವಂತೂ ನಮಗೆ ಇಲ್ಲ.

ಸುಮ್ಮನೆ ಒಂದು ಜೋಕು ಕೇಳಿ ನಗೋಣ. ಕೆಲವೊಮ್ಮೆ ಜೋಕುಗಳೇ ನಮ್ಮ ಜೀವನ ಸಂಕಷ್ಟಗಳನ್ನು ಸರಿಯಾಗಿ ವಿವರಿಸತಾವ ಅಂತ ಅನ್ನಿಸತದ.

ಅಂಥಾದು ಇಲ್ಲೊಂದು ಅದ ನೋಡ್ರಿ. ಸರದಾರಜೀ ಜೋಕು.

“ನನಗೆ ಹಣದುಬ್ಬರದ ಸಮಸ್ಯೆ ಇಲ್ಲ. ನಾನು ಯಾವಾಗಲೂ ನನ್ನ ಬೈಕಿಗೆ ಕೇವಲ ನೂರು ರೂಪಾಯಿಯ ಪೆಟ್ರೋಲ್ ಹಾಕಿಸೋದು”.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...