HomeUncategorizedಈಕ್ವೆಡಾರ್‌ ದೇಶದ ಮಹಿಳೆಯರಿಗೆ ಅವರ ಗರ್ಭಕೋಶದ ಮೇಲೆ ಹಕ್ಕಿಲ್ಲ

ಈಕ್ವೆಡಾರ್‌ ದೇಶದ ಮಹಿಳೆಯರಿಗೆ ಅವರ ಗರ್ಭಕೋಶದ ಮೇಲೆ ಹಕ್ಕಿಲ್ಲ

- Advertisement -
- Advertisement -

ತಾಯ್ತನ ಎನ್ನುವುದು ಹೆಣ್ಣಿನ ಹೊಣೆಯೂ ಹೌದು, ಅದರ ಆಯ್ಕೆ ಅವಳ ಹಕ್ಕೂ ಹೌದು. ಆದರೆ `ಅದು ಅವಳ ಹೊಣೆ ಮಾತ್ರ’ ಎಂದು ಜಗತ್ತಿನ ಅನೇಕ ದೇಶಗಳು ಕಟ್ಟುನಿಟ್ಟು ಮಾಡಿವೆ. ಹೆಣ್ಣಿನ ಸಮ್ಮತಿ ಇಲ್ಲದೆ ಸಂಭೋಗ ನಡೆದಿರಬಹುದು, ಅತ್ಯಾಚಾರ ಆಗಿರಬಹುದು, ಬಲಾತ್ಕಾರ ನಡೆದಿರಬಹುದು- ಗಂಡಸು ಏನಾದರೂ ಮಾಡಿರಲಿ, ಅದರಿಂದ ಅವಳು ಬಸಿರಾದರೆ ಒಂಬತ್ತು ತಿಂಗಳು ಹೊತ್ತು ಮಗುವನ್ನು ಹೆರಲೇಬೇಕೇ ಹೊರತು, ಗರ್ಭಪಾತ ಮಾಡಿಸಲು ಅವಳಿಗೆ ಹಕ್ಕಿಲ್ಲ ಎಂದು ಆ ದೇಶಗಳ ಕಾನೂನುಗಳು ಹೇಳುತ್ತವೆ. ಕೆಲವೇ ದಿನಗಳ ಹಿಂದೆ, ಈಕ್ವೆಡಾರ್ ದೇಶ ಇದನ್ನು ಮತ್ತೊಮ್ಮೆ ಗಟ್ಟಿಗೊಳಿಸಿತು. ಅತ್ಯಾಚಾರದಿಂದ ಆಗುವ ಬಸಿರನ್ನು ತೆಗೆಸಿಕೊಳ್ಳಲು ಅನುಮತಿ ನೀಡುವ ತಿದ್ದುಪಡಿ ಪ್ರಸ್ತಾವನೆ ಅಲ್ಲಿನ ಸಂಸತ್ತಿನಲ್ಲಿ ಕೇವಲ ಐದು ಮತಗಳಿಂದ ಸೋಲು ಕಂಡಿತು.

ಈಕ್ವೆಡಾರ್ ದೇಶದಲ್ಲಿ 1938 ರಿಂದ ಜಾರಿಯಲ್ಲಿರುವ ಅತ್ಯಂತ ಹಳೆಯ ಕೊಳೆತ ಕಾನೂನಿನ ಪ್ರಕಾರ, ಮಾನಸಿಕ ಅಸ್ವಾಸ್ಥ್ಯ ಇರುವ ಹೆಣ್ಣಿನ ಮೇಲೆ ಅತ್ಯಾಚಾರ ನಡೆದು ಬಸಿರಾದರೆ ಮಾತ್ರ ಗರ್ಭ ತೆಗೆಸಲು ಅವಕಾಶವಿದೆ. ಇದು ಬಿಟ್ಟರೆ ಗರ್ಭದಿಂದ ಹೆಣ್ಣಿನ ಜೀವಕ್ಕೇ ತೊಂದರೆ ಇದ್ದರೆ ಮಾತ್ರ ಗರ್ಭಪಾತ ಮಾಡಿಸಬಹುದು. ಇವೆರಡು ಬಿಟ್ಟರೆ ಇನ್ನಾವ ಕಾರಣಕ್ಕೂ ಗರ್ಭಪಾತ ಮಾಡಿಸಲು ಅವಕಾಶವಿಲ್ಲ. ಏನಾದರೂ ಗರ್ಭ ತೆಗೆಸಿದರೆ, ಅದನ್ನು ಅಪರಾಧ ಎಂದು ಪರಿಗಣಿಸಿ ಸೆರೆಮನೆಗೆ ದೂಡಲಾಗುತ್ತದೆ. ಅಂದರೆ ಹೆಣ್ಣಿನ ಗರ್ಭಕೋಶ, ತಾಯ್ತನದ ಆಯ್ಕೆ ಯಾವುವೂ ಅವಳಿಗೆ ಸೇರಿಲ್ಲ, ಎಲ್ಲವೂ ಪುರುಷಾಧಿಪತ್ಯ, ಅದು ರೂಪಿಸುವ ಕಾನೂನು, ಮತ್ತು ಧರ್ಮವನ್ನು ಹೊದ್ದುಕೊಂಡ ಪುರುಷ ಅಹಂಕಾರದ ಹಿಡಿತದಲ್ಲಿ ಇವೆ. ಹೆಣ್ಣನ್ನು ಬಸಿರು ಮಾಡುವುದೂ ಅದನ್ನು ಉಳಿಸುವುದೂ ಗಂಡಸಿನ ಧರ್ಮ ಎಂದು ಧರ್ಮದ ಹೆಸರಿನಲ್ಲೂ ಹೇಳಲಾಗಿದೆ. ಕೆಥೊಲಿಕ್ ಕ್ರೈಸ್ತ ಧರ್ಮದ ಪ್ರಾಬಲ್ಯ ಇರುವ ಈಕ್ವೆಡಾರ್ ಇದನ್ನೇ ಎತ್ತಿ ಹಿಡಿದಿದೆ.

ಇದನ್ನು ಓದಿ: ಸಂಪಾದಕೀಯ | ಕೊಲೆ, ಅತ್ಯಾಚಾರದ ಬೆದರಿಕೆಗಳಿಗೆ ರಾಜಾಶ್ರಯವಿದ್ದಾಗ…?

ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಎಗ್ಗುಸಿಗ್ಗಿಲ್ಲದೆ ಸಾಂಕ್ರಾಮಿಕ ರೋಗದಂತೆ ಅತ್ಯಾಚಾರ ನಡೆಯುತ್ತಿದೆ, ತೀರಾ ಕಿರಿಯ ವಯಸ್ಸಿನ ಹುಡುಗಿಯರು ಬಸುರಿಯರಾಗುತ್ತಿದ್ದಾರೆ, ಪ್ರತಿದಿನ ಕನಿಷ್ಠ ಹನ್ನೊಂದು ಅತ್ಯಾಚಾರಗಳಾದರೂ ವರದಿಯಾಗುತ್ತವೆ. ಲೈಂಗಿಕ ಸಂಪರ್ಕಕ್ಕೆ ಸಮ್ಮತಿ ನೀಡಲು ಹದಿನಾಲ್ಕು ವರ್ಷ ಆಗಿರಬೇಕು ಎಂಬ ನಿಯಮ ಆ ದೇಶದಲ್ಲಿದೆ, ಆದರೆ ಪ್ರತಿದಿನ ಆ ವಯಸ್ಸಿಗಿಂತ ಚಿಕ್ಕವರಾದ ಏಳು ಹುಡುಗಿಯರು ಮಗುವಿಗೆ ಜನ್ಮ ನೀಡುತ್ತಾರೆ. 15 ರಿಂದ 19 ವಯಸ್ಸಿನೊಳಗೆ ಮಗು ಹೆರುವ ಹುಡುಗಿಯರಲ್ಲಿ ಬಹುಪಾಲು ಅತ್ಯಾಚಾರದ ಬಲಿಪಶುಗಳೇ ಆಗಿರುತ್ತಾರೆ. ಇಂಥ ಹೀನ ಕೃತ್ಯದಿಂದ ಬೇಡದ ಬಸಿರು ಹೊರುವ ಹೆಣ್ಣು ಮಕ್ಕಳಿಗೆ ಗರ್ಭಪಾತದ ಹಕ್ಕು ನೀಡಬೇಕು ಎಂಬ ಆಂದೋಲನವೇ ಶುರುವಾಗಿ, ತಿದ್ದುಪಡಿಗೆ ಒತ್ತಾಯಿಸಲಾಗಿತ್ತು.

ಆದರೆ ಈ ತಿದ್ದುಪಡಿ ಪ್ರಸ್ತಾವನೆಗೆ ಉಗ್ರ ವಿರೋಧವೂ ಇತ್ತು. ಇದು ಧರ್ಮದ್ರೋಹ, ದೇವರು ಕೊಟ್ಟ ಜೀವವನ್ನು ಹೊಸಕಿಹಾಕಬಾರದು, ಆ ಕಾರಣ ಗರ್ಭಪಾತಕ್ಕೆ ಮುಕ್ತ ಅವಕಾಶ ಕೊಡಬಾರದು ಎಂದು ಅದರ ವಿರೋಧಿಗಳು ಆಗ್ರಹಿಸಿದ್ದರು. ಇದಕ್ಕೆ ಅವಕಾಶ ಕೊಡಬೇಡಿ ಎಂದು ಕ್ಯಾಥೊಲಿಕ್ ಚರ್ಚಿನ ಆರ್ಚ್‍ಬಿಷಪ್ ಬೇರೆ ಕರೆನೀಡಿದ್ದರು. ಹೆಣ್ಣಿನ ಹಕ್ಕನ್ನು ಹತ್ತಿಕ್ಕಿ ಅವಳಿಗೆ ಬೇಡದ ಮಗುವನ್ನು ಉಳಿಸುವುದು ಜೀವಪ್ರೀತಿ ಎನ್ನುವ ಧರ್ಮಾಧಿಕಾರಿಗಳು ಮತ್ತು ಸನಾತನವಾದಿಗಳು ಜಗತ್ತಿನಾದ್ಯಂತ ನಡೆಯುವ ಯುದ್ಧಗಳಲ್ಲಿ ಆಗುವ ಸಾವುನೋವುಗಳ ಬಗ್ಗೆ ಸೊಲ್ಲೆತ್ತುವುದಿಲ್ಲ. ಒಟ್ಟಿನಲ್ಲಿ ಅವರ ಕೈಮೇಲಾಯಿತು. ರಾಜಧಾನಿ ಕ್ವಿಟೋದಲ್ಲಿರುವ ಸಂಸತ್ತಿನಲ್ಲಿ ಮತದಾನ ಆಗುತ್ತಿದ್ದಾಗ ಅದರ ಹೊರಗೆ ಸೇರಿದ್ದ ಗರ್ಭಪಾತ ನಮ್ಮ ಹಕ್ಕು ಎನ್ನುತ್ತಿದ್ದ ಮಹಿಳೆಯರ ಮೇಲೆ ಪೊಲೀಸರು ಮೆಣಸಿನಪುಡಿ ಎರಚಿ ಅವರನ್ನು ದೂರ ಅಟ್ಟಿದರು.

ಇದನ್ನು ಓದಿ: ಮುಟ್ಟಿನ ಬಗ್ಗೆ ಭೈರಪ್ಪನವರ ಹೇಳಿಕೆಗೆ ಬಿಸಿಮುಟ್ಟಿಸಿದ ನೆಟ್ಟಿಗರು.. ಇಲ್ಲಿವೆ ನೋಡಿ ಕೆಲ ಸ್ಯಾಂಪಲ್ಸ್..

ಅತ್ಯಾಚಾರದಿಂದ ಬಸಿರಾದರೆ ಮಾತ್ರ ಅದನ್ನು ತೆಗೆಸಲು ಮೆಕ್ಸಿಕೋ, ಬ್ರೆಜಿಲ್, ಚಿಲಿ, ಅರ್ಜೆಂಟೀನ ಮುಂತಾದ ದೇಶಗಳಲ್ಲಿ ಅವಕಾಶವಿದೆ. ಇನ್ನುಳಿದಂತೆ ಗರ್ಭಪಾತ ಹೆಣ್ಣಿನ ಆಯ್ಕೆ ಆಗಿಲ್ಲ. ಆದರೆ, ಹೊಂಡುರಾಸ್, ಎಲ್ ಸಾಲ್ವಡಾರ್, ನಿಕರಾಗುವ ಮುಂತಾದ ದೇಶಗಳಲ್ಲಿ ಅದಕ್ಕೂ ಅವಕಾಶವಿಲ್ಲ. ಅದನ್ನು ಹೊತ್ತು, ಹೆತ್ತು, ಜೀವನವಿಡೀ ಅವಳು ನಿರ್ವಹಿಸಬೇಕು. ಆದ್ದರಿಂದ ಈ ದೇಶಗಳೂ ಸೇರಿ ಜಗತ್ತಿನ ಹಲವು ಭಾಗಗಳಲ್ಲಿ ಹೆಣ್ಣುಮಕ್ಕಳು, ವೈದ್ಯಕೀಯ ತರಬೇತಿ ಇಲ್ಲದ ಜನರಿಂದ ಗುಟ್ಟಾಗಿ ಗರ್ಭಪಾತ ಮಾಡಿಸಿಕೊಂಡು ಸೋಂಕು, ಶಸ್ತ್ರಗಳ ದುರ್ಬಳಕೆ ಮತ್ತಿತರ ಕಾರಣಗಳಿಂದ ಸಾವಿಗೀಡಾಗುತ್ತಾರೆ. ಹೆಣ್ಣಿನ ದೇಹ ತನಗೆ ಸೇರಿದ್ದು ಎಂಬ ಪುರುಷ ಮನೋಭಾವದಿಂದ ಕಾನೂನು ಕೂಡ ಅವಳಿಗೆ ಶತ್ರುವಾಗಿರುತ್ತದೆ. ಆ ಮನೋಭಾವ ಬದಲಾಯಿಸಲು ಪ್ರಯತ್ನಗಳು ನಡೆದರೆ ಮಾತ್ರ ಅವಳ ದುಸ್ಥಿತಿ ಬದಲಾಗಬಹುದು.

ಕೃಪೆ: ಹಿತೈಷಿಣಿ ಮಹಿಳಾ ಪತ್ರಿಕೆ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮಹಿಳೆಯರ ಗರ್ಭದ ಮೇಲೆ ಅವರಿಗೇ ಹಕ್ಕಿಲ್ಲದಿರುವುದು ಖಂಡನಾರ್ಹ. ಇಂತಹ ಅಮಾನವೀಯ ಕಾನೂನುಗಳನ್ನು ತೊಲಗಿಸಲು ವಿಶ್ವಸಂಸ್ಥೆಯು ಪ್ರಯತ್ನ ಮಾಡಿಬೇಕು

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...