ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಬಂಧಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಟಿಎಂಸಿ ನಾಯಕನನ್ನು 18 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಇಡಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಅವರನ್ನು ಬಂಧಿಸಿದ್ದಾರೆ.
ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ಪಶ್ಚಿಮ ಬಂಗಾಳದ ಆಹಾರ ಸಚಿವರಾಗಿದ್ದ ಮಲ್ಲಿಕ್ ಅವರು ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಸ್ತುತ ಅವರು ಅರಣ್ಯ ಖಾತೆ ಸಚಿವಾರಗಿದ್ದಾರೆ.
ಅಕ್ಟೋಬರ್ 14 ರಂದು ಈ ಪ್ರಕರಣದಲ್ಲಿ ಬಂಧಿತರಾದ ಉದ್ಯಮಿ ಬಾಕಿಬುರ್ ರೆಹಮಾನ್ ಅವರೊಂದಿಗೆ ಮಲ್ಲಿಕ್ ಅವರ ಸಂಪರ್ಕ ಹೊಂದಿರುವ ವಿಚಾರವಾಗಿ ಕೇಂದ್ರ ಸಂಸ್ಥೆ ತನಿಖೆ ನಡೆಸುತ್ತಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಅಕ್ಕಿ ಮತ್ತು ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಿದ ಆರೋಪ ರೆಹಮಾನ್ ಮೇಲಿದೆ.
ಗುರುವಾರ, ಜಾರಿ ನಿರ್ದೇಶನಾಲಯವು ಮಲ್ಲಿಕ್ಗೆ ಸಂಬಂಧಿಸಿದ ಸ್ಥಳಗಳು ಸೇರಿದಂತೆ ಎಂಟು ಸ್ಥಳಗಳಲ್ಲಿ ದಾಳಿ ನಡೆಸಿತು. ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಸಚಿವರ ಆಪ್ತ ಸಹಾಯಕ ಅಮಿತ್ ಡೇ ಅವರ ಮನೆಯನ್ನೂ ಸಂಸ್ಥೆ ಶೋಧಿಸಿದೆ.
ಮಲ್ಲಿಕ್ ಅವರನ್ನು ಬಂಧಿಸಿದ ನಂತರ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಕೋಲ್ಕತ್ತಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪಿಟಿಐ ವರದಿ ಮಾಡಿದೆ.
VIDEO | West Bengal minister Jyotipriya Mallick was taken to Joka ESI Hospital, Kolkata after being arrested by ED in the alleged ration distribution scam earlier today. pic.twitter.com/atkJkjmFHs
— Press Trust of India (@PTI_News) October 27, 2023
ಮಲ್ಲಿಕ್ ಅವರಿಗೆ ಆರೋಗ್ಯ ಸರಿಯಿಲ್ಲ, ಮಧುಮೇಹವಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು. “ಅವರು ಸತ್ತರೆ, ನಾನು ಬಿಜೆಪಿ ಮತ್ತು ಇಡಿ ವಿರುದ್ಧ ಎಫ್ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸುತ್ತೇನೆ” ಎಂದು ಅವರು ಹೇಳಿದರು.
”ಕೇಂದ್ರೀಯ ಸಂಸ್ಥೆಗಳು ಪ್ರತಿಯೊಬ್ಬ ಸಚಿವರ ಮನೆಗಳ ಮೇಲೆ ದಾಳಿ ನಡೆಸಿದರೆ ಸರ್ಕಾರವನ್ನು ಯಾರು ನಡೆಸುತ್ತಾರೆ?” ಎಂದು ಬ್ಯಾನರ್ಜಿ ಅವರು ಪ್ರಶ್ನೆ ಮಾಡಿದ್ದಾರೆ.
.@BJP4India's petty vendetta tactics knows no bounds!
Going against Hon'ble SC's orders, they keep sending their puppet @dir_ed to raid opposition leaders' houses, all the while using their washine-machine rajneeti to clean away all the corrupt sins of their own leaders.
Can… pic.twitter.com/r8h4BbL4E3
— All India Trinamool Congress (@AITCofficial) October 26, 2023
”ಪ್ರತಿದಿನ ಬೆಳಿಗ್ಗೆ ದೇಶಾದ್ಯಂತ ನಾಯಕರು ಮತ್ತು ಮಂತ್ರಿಗಳ ಮನೆಗಳ ಮೇಲೆ ದಾಳಿ ಮಾಡಲಾಗುತ್ತದೆ. ಯಾವುದೇ ಬಿಜೆಪಿ ನಾಯಕರ ಮನೆ ಮೇಲೆ ದಾಳಿ ನಡೆದಿದೆಯೇ?” ಎಂದು ಅವರು ಕೇಳಿದರು.
ಇದನ್ನೂ ಓದಿ: ಮಾನವೀಯತೆ ಎಚ್ಚರಗೊಳ್ಳುವುದು ಯಾವಾಗ?: ಇಸ್ರೇಲ್ನ ಹಿಂಸಾಚಾರಕ್ಕೆ ಪ್ರಿಯಾಂಕಾ ಗಾಂಧಿ ಕಿಡಿ