ರಾಜ್ಯ ಬಿಜೆಪಿಯ ಆಂತರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ದೆಹಲಿಗೆ ಆಗಮಿಸಿದ್ದ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರಿಗೆ ಹೈಕಮಾಂಡ್ ನಾಯಕರು ಭೇಟಿಗೆ ಅವಕಾಶ ನೀಡಿಲ್ಲ. 2 ದಿನಗಳ ಕಾಯುವಿಕೆ ಬಳಿಕ ಡಿವಿಎಸ್ ತೀವ್ರ ನಿರಾಸೆಯೊಂದಿಗೆ ಬೆಂಗಳೂರಿಗೆ ಮರಳಿದ್ದಾರೆ.
ಈ ವಿಚಾರವಾಗಿ ಎಕ್ಸಾನಲ್ಲಿ ಟೀಕಿಸಿ ಪೋಸ್ಟ್ ಮಾಡಿರುವ ರಾಜ್ಯ ಕಾಂಗ್ರೆಸ್, ”ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದ ಸದಾನಂದಗೌಡರು ಮೂರು ದಿನಗಳು ಚಪ್ಪಲಿ ಸವೆಸಿದರೂ ನಡ್ಡಾ ದರ್ಶನವಾಗಲಿಲ್ಲ” ಎಂದು ರಾಜ್ಯ ಕಾಂಗ್ರೆಸ್ ಘಟಕ ಟೀಕಿಸಿದೆ.
ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದ ಸದಾನಂದಗೌಡರು ಮೂರು ದಿನಗಳು ಚಪ್ಪಲಿ ಸವೆಸಿದರೂ ನಡ್ಡಾ ದರ್ಶನವಾಗಲಿಲ್ಲ!
ಸದಾನಂದಗೌಡರು ಮಾಜಿ ಸಿಎಂ, ಮಾಜಿ ಕೇಂದ್ರ ಮಂತ್ರಿ, ಹೀಗಿದ್ದೂ ನಯಾಪೈಸೆ ಬೆಲೆ ಕೊಡದೆ ಅವಮಾನಿಸಿದ ಬಿಜೆಪಿ ಹೈಕಮಾಂಡ್ ಕರ್ನಾಟಕದ ನಾಯಕರನ್ನು ಗುಲಾಮರು ಎಂದುಕೊಂಡಿದೆಯೇ? ಬಿಜೆಪಿ ನಾಯಕರಿಗೆ ಕಿಂಚಿತ್ ಸ್ವಾಭಿಮಾನವಿದ್ದಿದ್ದರೆ… pic.twitter.com/lj0XSUiLmt
— Karnataka Congress (@INCKarnataka) October 26, 2023
”ಸದಾನಂದಗೌಡರು ಮಾಜಿ ಸಿಎಂ, ಮಾಜಿ ಕೇಂದ್ರ ಮಂತ್ರಿ, ಹೀಗಿದ್ದೂ ನಯಾಪೈಸೆ ಬೆಲೆ ಕೊಡದೆ ಅವಮಾನಿಸಿದ ಬಿಜೆಪಿ ಹೈಕಮಾಂಡ್ ಕರ್ನಾಟಕದ ನಾಯಕರನ್ನು ಗುಲಾಮರು ಎಂದುಕೊಂಡಿದೆಯೇ? ಬಿಜೆಪಿ ನಾಯಕರಿಗೆ ಕಿಂಚಿತ್ ಸ್ವಾಭಿಮಾನವಿದ್ದಿದ್ದರೆ ಇಂತಹ ಗುಲಾಮಗಿರಿಗೆ ಒಡ್ಡಿಕೊಳ್ಳುತ್ತಿರಲಿಲ್ಲ” ಎಂದು ಹೇಳಿದೆ.
”ಸದಾನಂದಗೌಡರನ್ನು ತಾವೇ ಕರೆಸಿಕೊಂಡು ತಾವೇ ನಿರ್ಲಕ್ಷಿಸುತ್ತಿರುವುದು ಮಹಾ ಅವಮಾನವಲ್ಲವೇ?” ಎಂದು ರಾಜ್ಯ ಬಿಜೆಪಿ ನಾಯಕರಿಗೆ ಕೇಳಿದೆ.
”ಬಿಜೆಪಿ ನಾಯಕರಿಗೆ ಕನಿಷ್ಠ ಸ್ವಾಭಿಮಾನವಿದ್ದರೆ ಇಂತಹ ಗುಲಾಮಗಿರಿಯಿಂದ ಹೊರಬರಲಿ. ಕನ್ನಡಿಗರ ಸ್ವಾಭಿಮಾನದ ಕೆಚ್ಚನ್ನು ತೋರಿಸಲಿ” ಎಂದು ಕಾಂಗ್ರೆಸ್ ಪೋಸ್ಟ್ ಮಾಡಿದೆ.
ರಾಜ್ಯ ಬಿಜೆಪಿಯ ಆಂತರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ದೆಹಲಿಗೆ ಆಗಮಿಸಿದ್ದ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರಿಗೆ ಹೈಕಮಾಂಡ್ ನಾಯಕರು ಭೇಟಿಗೆ ಅವಕಾಶ ನೀಡಿಲ್ಲ. 2 ದಿನಗಳ ಕಾಯುವಿಕೆ ಬಳಿಕ ಡಿವಿಎಸ್ ತೀವ್ರ ನಿರಾಸೆಯೊಂದಿಗೆ ಬೆಂಗಳೂರಿಗೆ ಮರಳಿದ್ದಾರೆ.
ರಾಜ್ಯ ಬಿಜೆಪಿಯಲ್ಲಿನ ಸಮಸ್ಯೆ ಉಲ್ಲೇಖಿಸಿ ಮತ್ತು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಡಿವಿ ಸದಾನಂದಗೌಡ ಪತ್ರ ಬರೆದಿದ್ದರು. ಪತ್ರ ಓದಿದ್ದ ಜೆಪಿ ನಡ್ಡಾ ದೆಹಲಿಯಲ್ಲಿ ಬಂದು ಭೇಟಿ ಮಾಡಿ, ಚರ್ಚಿಸಲು ಸೂಚನೆ ನೀಡಿದ್ದರು.
ಜೆಪಿ ನಡ್ಡಾ ಸೂಚನೆ ಹಿನ್ನೆಲೆ ಬುಧವಾರ ದೆಹಲಿಗೆ ಬಂದಿದ್ದ ಡಿವಿಎಸ್, ಜೆಪಿ ನಡ್ಡಾ ಸೇರಿದಂತೆ ಬೇರೆ ಬೇರೆ ನಾಯಕರ ಭೇಟಿಗೆ ಪ್ರಯತ್ನಿಸಿದರು. ಆದರೆ ಪಂಚ ರಾಜ್ಯಗಳ ಚುನಾವಣೆ ಭರದಲ್ಲಿರುವ ವರಿಷ್ಠರು ಭೇಟಿಗೆ ಸಮಯ ನೀಡಿಲ್ಲ. ಜೆಪಿ ನಡ್ಡಾ ಅವರು 2 ದಿನಗಳ ಸಮಯ ನೀಡುವ ಭರವಸೆ ನೀಡಿ ಕಾಯಿಸಿದ್ದರು.
2 ದಿನಗಳ ಬಳಿಕ ಭೇಟಿಗೆ ಸಮಯ ನೀಡದ ಹಿನ್ನೆಲೆ ಇಂದು (ಶುಕ್ರವಾರ) ಸದಾನಂದಗೌಡ ಬೆಂಗಳೂರಿಗೆ ಮರಳಿದ್ದಾರೆ. ಚೆನ್ನೈನಲ್ಲಿ ನಡೆಯಲಿರುವ ರಕ್ಷಣಾ ಸಮಿತಿ ಸಭೆಯಲ್ಲಿ ಭಾಗಿಯಾಗಲು ಅವರು ಬೆಂಗಳೂರಿಗೆ ಮರಳಿದ್ದು ಅವರು ಸಮಿತಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ಮಾನವೀಯತೆ ಎಚ್ಚರಗೊಳ್ಳುವುದು ಯಾವಾಗ?: ಇಸ್ರೇಲ್ನ ಹಿಂಸಾಚಾರಕ್ಕೆ ಪ್ರಿಯಾಂಕಾ ಗಾಂಧಿ ಕಿಡಿ