Homeಅಂಕಣಗಳುಇದು ಕೇವಲ ಉಪ ಚುನಾವಣೆಯಲ್ಲ, ನೈತಿಕ ರಾಜಕಾರಣ ಉಳಿಸುವ ಗುರುತರ ಜವಾಬ್ಧಾರಿ!

ಇದು ಕೇವಲ ಉಪ ಚುನಾವಣೆಯಲ್ಲ, ನೈತಿಕ ರಾಜಕಾರಣ ಉಳಿಸುವ ಗುರುತರ ಜವಾಬ್ಧಾರಿ!

- Advertisement -
- Advertisement -

ಸರ್ವೋಚ್ಚ ನ್ಯಾಯಾಲಯ ಸ್ಪೀಕರ್ ಅವರಿಂದ ಶಿಕ್ಷೆಗೊಳಗಾದ 15 ಶಾಸಕರು ಉಪಚುನಾವಣೆಗೆ ನಿಲ್ಲಬಹುದೆಂದು ತೀರ್ಪು ನೀಡಿದೆ. ಸ್ಪೀಕರ್ ಅವರು ನೀಡಿದ್ದ ತೀರ್ಪನ್ನು ನ್ಯಾಯಾಧೀಶರು ಅಂಗೀಕರಿಸಿದರಾದರೂ ಶಿಕ್ಷೆಯ ಅವಧಿಯನ್ನು ತೀರ್ಮಾನಿಸುವ ಹಕ್ಕು ಅವರಿಗಿಲ್ಲ ಎಂದು ಹೇಳಿದೆ. ಒಟ್ಟಿನಲ್ಲಿ ಹೇಳುವುದಾದರೆ ಈ ಶಾಸಕರು ಶಿಕ್ಷಾರ್ಹರು ಆದರೆ Technical ground ಮೇಲೆ ಉಪಚುನಾವಣೆಗೆ ನಿಲ್ಲಲು ಅರ್ಹರು ಎಂದು ಹೇಳಿದ ಹಾಗಾಯಿತು. ಅನೇಕ ಸಾರಿ ಕಾನೂನಿಗನುಸಾರ ಸರಿ ಎನಿಸಿದ್ದು ನೈತಿಕವಾಗಿ ತಪ್ಪಾಗಿರುತ್ತದೆ. ಈಗ ಆಗಿರುವುದೂ ಅದೇ. ನ್ಯಾಯಾಧೀಶರು ತೀರ್ಪು ನೀಡುವ ಸಮಯದಲ್ಲಿ `ನೈತಿಕತೆ ಇಲ್ಲದವರನ್ನು ರಾಜಕೀಯ ಪಕ್ಷಗಳು ಪ್ರೋತ್ಸಾಹಿಸುತ್ತಿವೆ, ಅದರ ಫಲವನ್ನು ಅನುಭವಿಸುತ್ತವೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಈ 15 ಶಾಸಕರು ಸಮಯಸಾಧಕರು. ಮಂತ್ರಿ ಪದವಿ ಸಿಗಲಿಲ್ಲವೆಂದು ಗುಂಪುಗಾರಿಕೆ ಮಾಡುವವರು. ಪಿತೂರಿ ಮಾಡುವವರು. ಇವರನ್ನು ಬಳಸಿಕೊಂಡು ಸಮ್ಮಿಶ್ರ ಸರಕಾರವನ್ನು ಕೆಡವಿ ತಾವು ಅಧಿಕಾರಕ್ಕೆ ಬರುವ ಹುನ್ನಾರ ಭಾರತೀಯ ಜನತಾ ಪಕ್ಷದ್ದಾಗಿತ್ತು.

ಮುಖ್ಯಮಂತ್ರಿ ಯಡಿಯೂರಪ್ಪನವರು ಪಕ್ಷದ ಕೋರ್ ಕಮಿಟಿಯ ಸಭೆಯಲ್ಲಿ ಹೇಳಿದರೆನ್ನಲಾದ ಮಾತುಗಳೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಮತ್ತು ಜೆಡಿಎಸ್‍ನ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದವರನ್ನು ಬಿಜೆಪಿ ಶಾಸಕರಾದ ಡಾ. ಅಶ್ವತ್‍ನಾರಾಯಣ್ ಅವರ ಉಸ್ತುವಾರಿಯಲ್ಲಿ ಮುಂಬೈನ ಒಂದು ಹೊಟೇಲ್‍ಗೆ ಕರೆದುಕೊಂಡು ಹೋಗಿ ರೆಸಾರ್ಟ್ ರಾಜಕೀಯ ಮಾಡಿಸಿದ್ದು, ಅವರನ್ನು ಪಕ್ಷಾಂತರ ಮಾಡುವಂತೆ ಪ್ರೇರಣೆ ನೀಡಿದ್ದು ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್‍ಷಾರವರು, ಹಾಗಾಗಿ ನಾವು ಅನರ್ಹ ಶಾಸಕರ ತ್ಯಾಗವನ್ನು ಸ್ಮರಿಸಬೇಕು ಎಂಬುದು ಅವರ ಮಾತಿನ ತಾತ್ಪರ್ಯ.

ಯಡಿಯೂರಪ್ಪನವರ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿತ್ತು. ಈ ಅಶಿಸ್ತಿನ ಶಾಸಕರು ಶಾಸನಸಭೆಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರಿಂದ ಬಿಜೆಪಿ ಶಾಸಕರ ಸಂಖ್ಯಾಬಲ ಹೆಚ್ಚಾಯಿತು. ಈ ಕಾರಣದಿಂದ ಸಮ್ಮಿಶ್ರ ಸರ್ಕಾರ ಪತನವಾಗುವುದು ಅನಿವಾರ್ಯವಾಯ್ತು. ಬಿಜೆಪಿ ಅಧಿಕಾರಕ್ಕೆ ಬಂತು.

ಈ 15 ಶಾಸಕರು ತಮ್ಮ ಅನರ್ಹತೆ ತೆಗೆದುಹಾಕಬೇಕೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು. ಅವರಿಗೆಲ್ಲ ಈಗ ಉಪಚುನಾವಣೆಗೆ ನಿಲ್ಲಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದೆ. ಅವರೆಲ್ಲ ಪಿತೂರಿ ನಡೆಸಿದಾಗಲೇ ತೀರ್ಮಾನವಾಗಿದ್ದಂತೆ ಈಗ ಬಿಜೆಪಿ ಸದಸ್ಯರಾಗಿ ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 13 ಮಂದಿಗೆ ಬಿಜೆಪಿ ಉಪಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿದೆ.

ಈ 13 ಮಂದಿಯ ಭವಿಷ್ಯವನ್ನು ನಿರ್ಧರಿಸುವ ಜವಾಬ್ದಾರಿ ಈಗ ಮತದಾರರ ಕೋರ್ಟಿಗೆ ವರ್ಗಾವಣೆಯಾಗಿದೆ.
ಅನೇಕ ಚುನಾವಣೆಗಳನ್ನು ಅರಿತಿರುವ ನನಗೆ ಹೀಗೆನಿಸುತ್ತಿದೆ: ಮತದಾರರನ್ನು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಮಾಡಿಕೊಳ್ಳುತ್ತವೆ. ಹಣ ಹೆಂಡಕೊಟ್ಟು ಅವರ ಮತವನ್ನು ಕೊಳ್ಳುತ್ತವೆ. 5, 10ರೂ.ಗಳಿಂದ ಆರಂಭವಾದ ಮತದಾರರ ಕೊಳ್ಳುವಿಕೆ ಈಗ ಒಂದು ಮತಕ್ಕೆ 500, 1000ಕ್ಕೆ ಏರಿದೆ. ಇಷ್ಟೆಲ್ಲ ಚುನಾವಣಾ ಭ್ರಷ್ಟಾಚಾರ ಇದ್ದಾಗ್ಯೂ ಕೆಲವೊಮ್ಮೆ ಅನಿರೀಕ್ಷಿತ ಫಲಿತಾಂಶ ಹೊರಬರುವುದನ್ನು ನಾನು ಕಂಡಿದ್ದೇನೆ. ಮತದಾರರೆಲ್ಲ ಮಾತನಾಡಿಕೊಂಡಂತೆ ಕಾಣುವ ಈ ಫಲಿತಾಂಶ ನೋಡಿದಾಗ ಮತದಾರರೆಲ್ಲರೂ ಸಾರಾಸಗಟಾಗಿ ಭ್ರಷ್ಟರು ಎಂದು ಹೇಳಲು ಬರುವುದಿಲ್ಲ.

ಉದಾಹರಣೆಗೆ ಮತದಾತ ಒಂದೇ ಪಕ್ಷಕ್ಕೆ ಪದೇಪದೇ ಮತಹಾಕಿ ನೋಡುತ್ತಾನೆ. ಆ ಪಕ್ಷ ತನ್ನ ನಿರೀಕ್ಷೆಯಂತೆ ನಡೆದುಕೊಳ್ಳುತ್ತಿಲ್ಲ ಆ ಪಕ್ಷದ ಶಾಸಕರು ಅನೀತಿವಂತರು, ಭ್ರಷ್ಟರು, ಸ್ವಾರ್ಥಿಗಳು ಎಂದು ಕಂಡುಬಂದಾಗ ಮತದಾರರೆಲ್ಲ ಮಾತನಾಡಿಕೊಂಡಂತೆ ಆ ಪಕ್ಷಕ್ಕೆ ಸೋಲುಣಿಸುತ್ತಾರೆ. ಮತದಾರರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದವರಲ್ಲೇ ಯಾರೋ ಒಬ್ಬರಿಗೆ ಮಾತ್ರ ಮತ ನೀಡುವ ಅನಿವಾರ್ಯತೆ ಇರುವುದರಿಂದ ಮತದಾರ ಇನ್ನೊಂದು ಭ್ರಷ್ಟ ಪಕ್ಷದ ಅಭ್ಯರ್ಥಿಗೆ ಮತಹಾಕಿ ಗೆಲ್ಲಿಸುತ್ತಾರೆ. ಕಾಂಗ್ರೆಸ್ 50 ವರ್ಷಕ್ಕೆ ಮೇಲ್ಪಟ್ಟು ಸಕ್ರಿಯ ಚುನಾವಣೆಯಲ್ಲಿ ಗೆದ್ದುಬರುತ್ತಿತ್ತು. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ನಿಜ ಜನಸೇವಕರು ಹೆಚ್ಚಾಗಿದ್ದರು. ಅವರು ಚಾರಿತ್ರ್ಯವಂತರಾಗಿದ್ದರು, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವಂತವರಾಗಿದ್ದರು. ಹಣವಿಲ್ಲದಿದ್ದರೂ ಗುಣವಂತರಾಗಿದ್ದರು. ಎಂತಹ ಲಕ್ಷಾಧಿಪತಿ ಇವರ ವಿರುದ್ಧವಾಗಿ ನಿಂತರೂ ಮತದಾತರು ಈ ಸ್ವಾತಂತ್ರ್ಯ ಹೋರಾಟಗಾರನಿಗೇ ತಮ್ಮ ಮತಹಾಕಿ ಗೆಲ್ಲಿಸತ್ತಿದ್ದರು. ಕಾಲಕ್ರಮದಲ್ಲಿ ಹೊಸ ತಲೆಮಾರಿನ ಜನ ಚುನಾವಣೆಗಳಲ್ಲಿ ಸ್ಪರ್ಧಿಸಲು ತೊಡಗಿದರು. ಅವರಿಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸ ಗೊತ್ತಿಲ್ಲ, ತ್ಯಾಗ-ಬಲಿದಾನಗಳ ಪರಿಚಯವಿಲ್ಲ. ಅಪ್ಪನ ಆಸ್ತಿ ದೊರಕಿದೆ ಅದನ್ನು ಉಡಾಯಿಸುವುದು ನನ್ನ ಹಕ್ಕು ಎಂದು ಭಾವಿಸಿಕೊಂಡವರು. ಇವರ ಜೊತೆಗೆ ಅಧಿಕಾರದ ಅಮಲು ಅವರನ್ನು ಮತ್ತಷ್ಟು ಕೆಡಿಸಿತು. ಈ ಸ್ವಾರ್ಥಿಗಳು ಅಧಿಕಾರದ ಲಾಲಸೆಯಿಂದ ಪಕ್ಷಾಂತರ ಮಾಡುವ ಹವ್ಯಾಸ ಬೆಳೆಸಿಕೊಂಡರು. ಈಗ ಎಲ್ಲ ರಾಜಕೀಯ ಪಕ್ಷಗಳಲ್ಲೂ ಈ ಸ್ವಾರ್ಥಿಗಳದೇ ಪಾರುಪತ್ಯ. ಪ್ರಾಮಾಣಿಕರೂ, ನಿಸ್ವಾರ್ಥಿಗಳೂ, ಸಮಾಜಮುಖಿಗಳೂ ಆದ ಸದಸ್ಯರ ಸಂಖ್ಯೆ ಇಳಿಯುತ್ತಾ ಬಂದಿದೆ.

ಈಗ ಕೋಟ್ಯಧಿಪತಿಗಳು ನಮ್ಮ ಪ್ರತಿನಿಧಿಗಳು. ಹಣದ ಮೂಲಕ ಗೆಲ್ಲುವ ಕಲೆಯನ್ನು ಕರಗತ ಮಾಡಿಕೊಂಡಿರುವ, ಜಾತಿಯ ಬಲ ಉಳ್ಳ ಇವರು ಮಾತ್ರ ಚುನಾವಣೆಗಳಲ್ಲಿ ಈಗ ಗೆಲ್ಲುವವರು.

ಈಗ ಈ ಉಪಚುನಾವಣೆಗೆ ನಿಂತಿರುವ ಬಿಜೆಪಿಯ 13 ಉಮೇದುದಾರರೂ ಈ ಕಲ್ಯಾಣ ಗುಣಗಳನ್ನು ಹೊಂದಿದವರು! ನಾಲ್ಕಾರು ತಿಂಗಳಿಂದ ಈ ನೀತಿಗೆಟ್ಟ ಶಾಸಕರ ಹುಚ್ಚಾಟವನ್ನು ಮತದಾತರು ನೋಡುತ್ತಿದ್ದಾರೆ. ಇವರು ಪ್ರಜಾಪ್ರತಿನಿಧಿಗಳಾಗಲು ಯೋಗ್ಯರಲ್ಲ ಎಂಬುದನ್ನು ಗಮನಿಸುತ್ತಾ ಬಂದಿದ್ದಾರೆ. ಈ 13 ಕ್ಷೇತ್ರಗಳ ಮತದಾರ ಅವರಿಗೆಲ್ಲ ಪಾಠ ಕಲಿಸುವರೆಂಬ ನಂಬಿಕೆ ನನ್ನದು.
ಮುಖ್ಯಮಂತ್ರಿ ಯಡಿಯೂರಪ್ಪನವರು ನೇರವಾಗಿ ಒಬ್ಬ ಶಾಸಕರನ್ನು ಕೊಳ್ಳುವ ಪ್ರಯತ್ನ ಮಾಡಿದ ಸಿಡಿಯೊಂದಿದೆ. ಅವರ ವಿರುದ್ಧ ಒಂದು ಕಟ್ಳೆಯನ್ನು ಹೂಡಲಾಗಿದೆ.

ಈ 13 ಮಂದಿ ಭ್ರಷ್ಟ ಸ್ವಾರ್ಥಿ ಶಾಸಕರನ್ನು ಬಿಜೆಪಿಗೆ ಎಳೆಯಲು ಅವರನ್ನು ಮುಂಬಯಿನ ಹೊಟೇಲ್ ಒಂದರಲ್ಲಿ ವಾಸ್ತವ್ಯ ಮಾಡಿಸಿದ ಅಮಿತ್ ಷಾ ಅವರ ಗೇಮ್ ಕುರಿತು ಯಡಿಯೂರಪ್ಪನವರು ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದರೆನ್ನಲಾದ ಧ್ವನಿಮುದ್ರಣವನ್ನು ಲಗತ್ತಿಸಿ ನ್ಯಾಯಾಲಯದಲ್ಲಿ ದೂರನ್ನಿತ್ತಿರುವ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷರು ಮೋದಿ ಮಂತ್ರಿಮಂಡಲದಲ್ಲಿ ಗೃಹಮಂತ್ರಿಯಾಗಿರುವವರು. ಈಗ ಅವರ ಮೇಲೆ 17 ಪ್ರಜಾಪ್ರತಿನಿಧಿಗಳನ್ನು ಭ್ರಷ್ಟರಾಗಿಸಿದ ಆರೋಪ ಕೇಳಿಬಂದಿದೆ. ಮೋದಿಯವರು ಅವರ ಮೇಲೆ ಕ್ರಮಕೈಗೊಳ್ಳುತ್ತಾರಾ? ಅಷ್ಟೊಂದು ಪಾರದರ್ಶಕತೆ, ಪ್ರಾಮಾಣಿಕತೆ ಬಿಜೆಪಿ ಮತ್ತು ಅದನ್ನು ನಿಯಂತ್ರಿಸುತ್ತಿರುವ ಆರೆಸೆಸ್‍ಗಿದೆಯಾ? ಎಲ್ಲವೂ ಈ ಉಪಚುನಾವಣೆಯಲ್ಲಿ ಮತದಾರ ಕೊಡುವ ತೀರ್ಪನ್ನು ಅವಲಂಬಿಸಿದೆ. ಈಗ ನಾವು ಜಾಗೃತಗೊಳ್ಳದಿದ್ದರೆ ಭವಿಷ್ಯದಲ್ಲಿ ಇದಕ್ಕಿಂತಲೂ ಕೆಟ್ಟ ರಾಜಕೀಯ ಪ್ರಹಸನಗಳಿಗೆ ನಾವೇ ಕಾರಣೀಭೂತರಾಗುತ್ತೇವೆ. ಅಷ್ಟೇ ಅಲ್ಲ ಅಂತಹ ಪ್ರಹಸನಗಳ ಹೊರೆ ನಮ್ಮ ಮಕ್ಕಳ ಹೆಗಲೇರಲಿದೆ. ನಮಗಾಗಿ ಅಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆಯವರಿಗಾದರೂ ಒಂದಷ್ಟು ನೈತಿಕ ರಾಜಕಾರಣವನ್ನು ಉಳಿಸುವ ಗುರುತರವಾದ ಜವಾಬ್ಧಾರಿ ನಮ್ಮೆದುರಿಗಿದೆ. ಮತದಾರನ ತೀರ್ಪಿಗಾಗಿ ನಾನು ಆಶಾವಾದಿಯಾಗಿ ಕಾಯುತ್ತಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...