Homeಫ್ಯಾಕ್ಟ್‌ಚೆಕ್ಫಿಲಡೆಲ್ಫಿಯಾ ವಿಮಾನ ಅಪಘಾತದ ದೃಶ್ಯವನ್ನು ಐಎನ್‌ಎಸ್‌ ವಿಕ್ರಾಂತ್ ದಾಳಿ ಎಂದ ಎಬಿಪಿ ಆನಂದ

ಫಿಲಡೆಲ್ಫಿಯಾ ವಿಮಾನ ಅಪಘಾತದ ದೃಶ್ಯವನ್ನು ಐಎನ್‌ಎಸ್‌ ವಿಕ್ರಾಂತ್ ದಾಳಿ ಎಂದ ಎಬಿಪಿ ಆನಂದ

- Advertisement -
- Advertisement -

ಗುರುವಾರ (ಮೇ.8) ರಾತ್ರಿ ಭಾರತದ ಹಲವು ಪ್ರದೇಶಗಳ ಮೇಲೆ ವಿವಿಧ ರೀತಿಯಲ್ಲಿ ದಾಳಿ ನಡೆಸಲು ಪಾಕಿಸ್ತಾನ ಪ್ರಯತ್ನಿಸಿತ್ತು. ಅದನ್ನು ಭಾರತ ಯಶಸ್ವಿಯಾಗಿ ತಡೆದಿದೆ ಎಂದು ವರದಿಯಾಗಿದೆ.

ದೇಶದ ಬಹುತೇಕ ದೃಶ್ಯ ಮಾಧ್ಯಮಗಳು ಗುರುವಾರ ರಾತ್ರಿ ಪಾಕಿಸ್ತಾನ ದಾಳಿ ನಡೆಸಿದೆ ಎಂಬ ಸುದ್ದಿಯನ್ನು ನೇರ ಪ್ರಸಾರ ರೀತಿಯಲ್ಲಿ ಪ್ರಕಟಿಸಿತ್ತು. ಇದೇ ವೇಳೆ ಸಾಮಾಜಿಕ ಮಾಧ್ಯಮಗಳಲ್ಲೂ ಭಾರತ-ಪಾಕಿಸ್ತಾನ ಪರಸ್ಪರ ದಾಳಿ ಮಾಡಿಕೊಂಡಿವೆ ಎಂಬ ಹಲವು ಸುದ್ದಿ ಮತ್ತು ವಿಡಿಯೋಗಳು ಹರಿದಾಡಿತ್ತು. ಅಂತಹ ವಿಡಿಯೋಗಳನ್ನು ದೇಶದ ಮುಖ್ಯವಾಹಿನಿ ಮಾಧ್ಯಮಗಳೂ ಪ್ರಸಾರ ಮಾಡಿತ್ತು.

ವೈರಲ್ ವಿಡಿಯೋಗಳ ಪೈಕಿ 37 ಸೆಕೆಂಡ್‌ ವಿಡಿಯೋವೊಂದನ್ನು ಹೆಚ್ಚಿನ ಜನರು ಹಂಚಿಕೊಂಡಿದ್ದರು. ಅದರಲ್ಲಿ, ಯಾವುದೋ ಸ್ಪೋಟ ಸಂಭವಿಸಿದ ಬಳಿಕದ ಚಿತ್ರಣ ಇತ್ತು. ಸುತ್ತಲು ಕಾರುಗಳು ನಿಂತಿರುವುದು, ಬೆಂಕಿ ಹೊತ್ತಿ ಉರಿಯುತ್ತಿರುವುದು ಮತ್ತು ಒಬ್ಬರು ವ್ಯಕ್ತಿ ಹಿಂದಿ/ಉರ್ದು ಭಾಷೆಯಲ್ಲಿ “ನಿಮ್ಮ ಮಕ್ಕಳು ಮತ್ತು ವೃದ್ಧರನ್ನು ಕರೆದುಕೊಂಡು ಹೋಗಿ, ನಿಮ್ಮ ಮನೆಗೆ ಬೀಗ ಹಾಕಿ ಮತ್ತು ಮುಂದಿನ ರಸ್ತೆಯ ಕಡೆಗೆ ಹೋಗಿ…”ಇತ್ಯಾದಿ ಹೇಳುವುದು ಆ ವಿಡಿಯೋದಲ್ಲಿ ಇತ್ತು.

ಬಂಗಾಳಿ ಸುದ್ದಿ ವಾಹಿನಿ ಎಬಿಪಿ ಆನಂದ ತನ್ನ ನೇರ ಪ್ರಸಾರದ ಸಮಯದಲ್ಲಿ ಮೇಲೆ ತಿಳಿಸಿದ ವಿಡಿಯೋವನ್ನು ಪ್ಲೇ ಮಾಡಿತ್ತು. ವಾಹಿನಿಯ ನಿರೂಪಕರಲ್ಲಿ ಒಬ್ಬರು “ಇದೀಗ ನೀವು ಕರಾಚಿಯ ದೃಶ್ಯಗಳನ್ನು ನೋಡುತ್ತಿದ್ದೀರಿ, ಅಲ್ಲಿ ಎಲ್ಲವೂ ನಾಶವಾಗಿದೆ” ಎಂದಿದ್ದರು. ಮತ್ತೊಬ್ಬ ನಿರೂಪಕ “ಇದು ಐಎನ್ಎಸ್ ವಿಕ್ರಾಂತ್ ನಡೆಸಿದ ದಾಳಿ ದೃಶ್ಯವಾಗಿದೆ” ಎಂದಿದ್ದರು.

ಎಬಿಪಿ ಆನಂದ ಈಗ ನೇರ ಪ್ರಸಾರ ವಿಡಿಯೋವನ್ನು ಡಿಲಿಟ್ ಮಾಡಿದೆ. ಅದರೆ, ಅದರ ಸಂಗ್ರಹ ತುಣುಕು ಮತ್ತು ಆರ್ಕೈವ್ ಲಿಂಕ್ ಕೆಳಗಿದೆ. ವಿಡಿಯೋದಲ್ಲಿ 5 ನಿಮಿಷ 8 ಸೆಕೆಂಡ್‌ ಅವಧಿಯಲ್ಲಿ ನಾವು ಮೇಲ್ಗಡೆ ವಿವರಿಸಿದ ದೃಶ್ಯವಿದೆ.

ಆರ್ಕೈವ್ ಲಿಂಕ್

VC : youtube.com/@abpanandatv Via altnews.in

ಎಬಿಪಿ ಆನಂದ ತನ್ನ ವೆಬ್‌ಸೈಟ್‌ನಲ್ಲಿ ‘ಆಪರೇಷನ್ ಸಿಂಧೂರ್’ ಎಂಬ ಹೆಸರಿನಲ್ಲಿ ಲೈವ್ ಅಪ್ಡೇಟ್ ನೀಡಲು ಮತ್ತು ಭಾರತ-ಪಾಕಿಸ್ತಾನ ಉದ್ವಿಗ್ನತೆ ಕುರಿತು ವರದಿ ಪ್ರಕಟಿಸಲೂ ಅದೇ ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ಇಮೇಜ್ ಬಳಸಿಕೊಂಡಿತ್ತು. ಅದರ ಆರ್ಕೈವ್ ಲಿಂಕ್ ಇಲ್ಲಿ, ಇಲ್ಲಿ ನೋಡಬಹುದು.

ಎರಡೂ ಪುಟಗಳ ಸ್ಕ್ರೀನ್ ಶಾಟ್‌ಗಳು ಕೆಳಗಿವೆ

ವೈರಲ್ ಕ್ಲಿಪ್‌ನ ಸ್ಕ್ರೀನ್‌ಶಾಟ್ ಅನ್ನು ಎಬಿಪಿ ಆನಂದ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ “ಬಿಗ್ ಬ್ರೇಕಿಂಗ್: ಐಎನ್‌ಎಸ್ ವಿಕ್ರಾಂತ್‌ನ ಪ್ರಮುಖ ಕಾರ್ಯಾಚರಣೆ, ಬೃಹತ್ ಸ್ಫೋಟ, ಕರಾಚಿ ಧ್ವಂಸ, ಭಾರತದಿಂದ ಸತತ ದಾಳಿಗಳು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿತ್ತು. ನಂತರ ಪೋಸ್ಟ್ ಎಡಿಟ್ ಮಾಡಿ ವೈರಲ್ ಕ್ಲಿಪ್‌ನ ಸ್ಕ್ರೀನ್‌ಶಾಟ್ ಜಾಗಕ್ಕೆ ಪಾಕಿಸ್ತಾನದ ರಾಷ್ಟ್ರ ಧ್ವಜದ ಚಿತ್ರವನ್ನು ಬದಲಿಸಿದೆ (ಆರ್ಕೈವ್)

Credit: altnews.in

ಅದೇ ವೈರಲ್ ವಿಡಿಯೋವನ್ನು ಹಲವಾರು ಎಕ್ಸ್‌ ಹ್ಯಾಂಡಲ್‌ಗಳು ಹಂಚಿಕೊಂಡಿತ್ತು.

ಎಕ್ಸ್‌ ಬಳಕೆದಾರರಾದ ನೈನಾ ಯಾದವ್ (@NAINAYADAV_06) (ತಮ್ಮ ಎಕ್ಸ್‌ ಬಯೋದಲ್ಲಿ ಪತ್ರಕರ್ತೆ ಎಂದು ಹೇಳಿಕೊಂಡಿದ್ದಾರೆ) ಅವರು ಮೇ 8 ರಂದು ವೈರಲ್ ಕ್ಲಿಪ್ ಅನ್ನು ಹಂಚಿಕೊಂಡಿದ್ದರು. ಅದರ ಜೊತೆಗೆ “ಲಾಹೋರ್‌ನ ಜಿನ್ನಾ ಮಾರುಕಟ್ಟೆ ರಸ್ತೆ ಸಂಪೂರ್ಣವಾಗಿ ನಾಶವಾಯಿತು” #IndiaPakistanWar ಎಂದು ಬರೆದುಕೊಂಡಿದ್ದರು. (ಆರ್ಕೈವ್)

 

 

 

 

 

 

 

 

 

 

 

 

 

 

@IndiaTales7, @JaipurDialogues, @mkr4411, @wokeflix_, @iSinghApurva, @SonOfBharat7, @KreatelyMedia, @madhur_panktiya ಮುಂತಾದ ಎಕ್ಸ್‌ ಬಳೆದಾರರು ವೈರಲ್ ಕ್ಲಿಪ್ ಅನ್ನು ಹಂಚಿಕೊಂಡಿದ್ದರು. ಅವುಗಳು ಕೆಲವು ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿವೆ.

ನಾವು ಇಲ್ಲಿ ಉಲ್ಲೇಖಿಸಿದ ಬಹುತೇಕ ಎಕ್ಸ್ ಬಳಕೆದಾರರು ಈ ಹಿಂದೆ ಹಲವು ಸುಳ್ಳು ಸುದ್ದಿಗಳನ್ನು ಹಂಚಿಕೊಂಡವರಾಗಿದ್ದಾರೆ.

ಫ್ಯಾಕ್ಟ್‌ಚೆಕ್ 

ವೈರಲ್ ಕ್ಲಿಪ್‌ನ ಸತ್ಯಾಸತ್ಯತೆ ತಿಳಿಯಲು ನಾವು ಅದರ ಸ್ಕ್ರೀನ್‌ ಶಾಟ್‌ ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ ಮತ್ತು ವಿವಿಧ ಕೀ ವರ್ಡ್‌ಗಳನ್ನು ಬಳಸಿ ವಿಡಿಯೋ ಕುರಿತು ಮಾಹಿತಿ ಹುಡುಕಿದ್ದೇವೆ. ಈ ವೇಳೆ ಸಾಮಾಜಿಕ ಜಾಲತಾಣ ಥ್ರೆಡ್‌ನಲ್ಲಿ ವೈರಲ್ ಕ್ಲಿಪ್‌ಗೆ ಹೋಲಿಕೆಯಾಗುವ ಫೋಟೋವೊಂದು ನಮಗೆ ದೊರೆತಿದೆ.

ಫೆಬ್ರವರಿ 1, 2025ರಂದು joe.kendra ಎಂಬವರು ಫೋಟೋ ಪೋಸ್ಟ್ ಮಾಡಿದ್ದು, “ಮತ್ತೊಂದು ಅಪಘಾತ ಅಮೆರಿಕದ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದ ಜನನಿಬಿಡ ಪ್ರದೇಶದಲ್ಲಿ ವೈದ್ಯಕೀಯ ಸಾರಿಗೆ ಲಿಯರ್‌ಜೆಟ್ ಅವಳಿ ಎಂಜಿನ್ ಜೆಟ್ ವಿಮಾನ ಅಪಘಾತಕ್ಕೀಡಾಗಿದೆ ಎಂದು ವರದಿಗಳು ಹೇಳಿವೆ. ಈ ಪ್ರದೇಶದಲ್ಲಿ ಮೂರು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ” ಎಂದು ಬರೆದುಕೊಂಡಿದ್ದರು.

 

 

 

 

 

 

 

 

 

ಈ ಪೋಸ್ಟ್‌ನ ಸುಳಿವು ಹಿಡಿದುಕೊಂಡ ನಾವು ಕೀ ವರ್ಡ್‌ ಬಳಸಿ ವಿಡಿಯೋಗಾಗಿ ಹುಡುಕಾಟ ನಡೆಸಿದ್ದೇವೆ. ಈ ವೇಳೆ ಫೆಬ್ರವರಿ 1, 2025ರಂದು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವೊಂದು ನಮಗೆ ಲಭ್ಯವಾಗಿದೆ. Hakan Tuluhan ಎಂಬ ಹೆಸರಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾದ 1 ನಿಮಿಷ 4 ಸೆಕೆಂಡ್‌ನ ವಿಡಿಯೋದಲ್ಲಿ, 25 ಸೆಕಂಡ್‌ನಿಂದ ಎಬಿಪಿ ಆನಂದ ಸುದ್ದಿ ವಾಹಿನಿ ಮತ್ತು ಇತರ ಎಕ್ಸ್ ಬಳಕೆದಾರರು ಹಂಚಿಕೊಂಡಿರುವ ವಿಡಿಯೋ ತುಣುಕನ್ನು ನೋಡಬಹುದು.

ವಿಡಿಯೋದ ಡಿಸ್ಕ್ರಿಪ್ಶನ್‌ನಲ್ಲಿ “ಇದು ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿ ಸಂಭವಿಸಿದ ವಿಮಾನ ಅಪಘಾತದ್ದು” ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ವಿಡಿಯೋದಲ್ಲಿ ಅದನ್ನು ರೆಕಾರ್ಡ್ ಮಾಡಿದ ವ್ಯಕ್ತಿಯು ಡಂಕಿನ್ ಡೋನಟ್ಸ್ ಔಟ್‌ಲೆಟ್‌ಗೆ ಪ್ರವೇಶಿಸುತ್ತಿರುವಂತೆ ಕಾಣುತ್ತಿದೆ. ದೃಶ್ಯಗಳು ಸ್ವಲ್ಪ ಅಸ್ಪಷ್ಟವಾಗಿದ್ದರೂ, ಡಂಕಿನ್ ಡೋನಟ್ಸ್ ಸೈನ್‌ಬೋರ್ಡ್ ಸ್ಪಷ್ಟವಾಗಿ ಗೋಚರಿಸುತ್ತದೆ. ಔಟ್‌ಲೆಟ್ ಇರುವಿಕೆ ಮತ್ತು ಸೈನ್‌ನೇಜ್‌ನ ಆಕಾರ ಮತ್ತು ಬಣ್ಣವನ್ನು ಆಧರಿಸಿ, ಅದನ್ನು ಗುರುತಿಸಬಹುದು.

Credi: altnews.in

ಔಟ್‌ಲೆಟ್‌ ಇರುವಿಕೆಯನ್ನು ಗೂಗಲ್ ಮ್ಯಾಪ್‌ ಮೂಲಕ ನೋಡಬಹುದು..ಲಿಂಕ್ ಇಲ್ಲಿದೆ 

Credit : altnews.in

ಆದ್ದರಿಂದ, ಐಎನ್ಎಸ್ ವಿಕ್ರಾಂತ್‌ನ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಪಾಕಿಸ್ತಾನದಲ್ಲಿ ನಾಶ ಸಂಭವಿಸಿದೆ ಎಂದು ಎಬಿಪಿ ಆನಂದ ಮತ್ತು ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದ ವೈರಲ್ ಕ್ಲಿಪ್ ವಾಸ್ತವವಾಗಿ ಮೂರು ತಿಂಗಳ ಹಳೆಯದು ಮತ್ತು ಫಿಲಡೆಲ್ಫಿಯಾದ್ದಾಗಿದೆ.

ಭಾರತ-ಪಾಕಿಸ್ತಾನ ಸಂಘರ್ಷ | ವಿಡಿಯೊ ಗೇಮ್ ದೃಶ್ಯ ಹಂಚಿ ಪಾಕಿಸ್ತಾನದ ದೃಶ್ಯ ಎಂದ ಪಬ್ಲಿಕ್ ಟಿವಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...