Homeನಿಜವೋ ಸುಳ್ಳೋFact check: ಭಾವುಕರಾಗಿ ಅಳುವ 93ರ ಈ ವೃದ್ದ ಕೊರೊನಾದಿಂದ ಚೇತರಿಸಿದ ವ್ಯಕ್ತಿಯೇ?

Fact check: ಭಾವುಕರಾಗಿ ಅಳುವ 93ರ ಈ ವೃದ್ದ ಕೊರೊನಾದಿಂದ ಚೇತರಿಸಿದ ವ್ಯಕ್ತಿಯೇ?

- Advertisement -
- Advertisement -

ತನ್ನ ಪ್ರೇಯಸಿಗೆ ಬರೆದ ಹಳೆಯ ಪ್ರೇಮ ಪತ್ರ ಓದುತ್ತಾ ದುಃಖಿಸುವ ವೃದ್ದರೊಬ್ಬರ ಫೋಟೋವೊಂದನ್ನು ಕೊರೊನಾ ಸೋಕಿನಿಂದ ಚೇತರಿಕೆ ಹೊಂದಿದ ಇಟಲಿಯ ವ್ಯಕ್ತಿ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡಲಾಗಿದೆ.

ಈ ಚಿತ್ರ ಐದು ವರ್ಷದ ಹಿಂದಿನ ಚಿತ್ರವಾಗಿದ್ದು, ವಾಸ್ತವದಲ್ಲಿ ಆ ವ್ಯಕ್ತಿ ಇಟಲಿಯವರಲ್ಲ. ಚಿತ್ರದಲ್ಲಿ, ಕೊಲೊರಾಡೋ ಮೂಲದ ಬಿಲ್ ಮೂರ್‌ ಎಂಬ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ ಮಾಜಿ ಸೈನಿಕ ತಾನು ಮದುವೆಯಾಗಲು ನಿಶ್ಚಿತ ಮಾಡಿಕೊಂಡಿದ್ದ ಪ್ರೇಯಸಿಗೆ ಬರೆದ ಪತ್ರವನ್ನು ಓದುತ್ತಾ ಭಾವುಕನಾಗುವುದು ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲಾದ ಸಂದೇಶದಲ್ಲಿ, “93 ವರ್ಷದ ವ್ಯಕ್ತಿಯಲ್ಲಿ ವೆಂಟಿಲೇಟರ್ ಬಿಲ್ಲು ಕಟ್ಟುವಂತೆ ಹೇಳಿದಾಗ, ಇದುವರೆಗೆ ಯಾವುದೆ ಬಿಲ್ಲು ಪಡೆಯದೆ ಉಚಿತವಾಗಿ ಉಸಿರಾಡಿಸಿದ ದೇವರ ಅನುಗ್ರಹವನ್ನು ನೆನೆದು ಭಾವುಕನಾಗುತ್ತಾನೆ” ಎಂದು ಬಿತ್ತರಿಸಲಾಗಿದೆ.

ನಾನು ಬಿಲ್ಲು ಕಟ್ಟುತ್ತೇನೆ. ಹಣದ ಬಗ್ಗೆ ಚಿಂತೆಯಿಲ್ಲ. ಆದರೆ 93 ವರ್ಷಗಳ ಕಾಲ ಯಾವುದೇ ಹಣವಿಲ್ಲದೇ ನನಗೆ ಉಸಿರಾಡಲು ಅವಕಾಶ ಮಾಡಿಕೊಟ್ಟ ದೇವರ ಋಣವನ್ನು ಹೇಗೆ ತೀರಿಸಲಿ ಎಂದು ಭಾವುಕರಾಗಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

? After the 93 year old man in Italy got better in the hospital, he was told to pay for the ventilator for one day, and…

Posted by Nermeen Mohamed Ezzat on Thursday, April 2, 2020

 

ಅಲ್ಲದೇ ಹಲವಾರು ಜನರು ಇದನ್ನು ಹೀಗೆಯೆ ಹಂಚಿಕೊಂಡಿದ್ದಾರೆ. ನೋಡಲು ಇಲ್ಲಿ ಕ್ಲಿಕ್ ಮಾಡಿ.

ಮೂರ್ ಅವರ ಚಿತ್ರ, ಇದೇ ರೀತಿಯ ನಿರೂಪಣೆಯೊಂದಿಗೆ ಇನ್‌ಸ್ಟಾಗ್ರಾಮ್ ಶೀರ್ಷಿಕೆಯಂತೆ ಕಾಣುವ ಸ್ಕ್ರೀನ್‌ಶಾಟ್ ಒಂದು ಬಿಜೆಪಿಯ ಮುಖಂಡ ಮತ್ತು ನಟ ಪರೇಶ್ ರಾವಲ್ ಅವರು ಟ್ವೀಟ್ ಮಾಡಿದ್ದಾರೆ. ತನ್ನ ಟ್ವೀಟ್‌ನಲ್ಲಿ ಅವರು, “ಮಾನವ ಜನಾಂಗವಾದ ನಾವು ಅರ್ಥಮಾಡಿಕೊಳ್ಳುತ್ತಿದ್ದೇವೆ ಎಂದು ಭಾವಿಸುತ್ತೇನೆ” ಎಂದು ಬರೆದಿದ್ದರು.

ಅಲ್ಲದೆ ಇನ್ನೂ ಕೆಲವರು ಇದನ್ನು ಟ್ವೀಟ್ ಮಾಡಿದ್ದರು.

 

ಇಟಲಿಯಲ್ಲಿ ಎರಡು ಕೊರೊನಾ ಪ್ರಕರಣಗಳು ವರದಿಯಾದ ನಂತರ, ಇಟಲಿಯೂ ಜನವರಿ 31 ರಿಂದ ಕೊರೊನಾ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಇದುವರೆಗೆ ಇಟಲಿಯಲ್ಲಿ ಕೊರೊನಾ ಸೋಂಕಿನಿಂದ 19,468 ಸಾವುಗಳು ಮತ್ತು 32,534 ಚೇತರಿಕೆಯಾಗಿದ್ದಾರೆಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಚಿತ್ರವೂ ವೈರಲಾಗುತ್ತಿರುವುದರಿವಂದ “ಭೂಮ್ ಲೈವ್” ಚಿತ್ರದ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿ, ಚಿತ್ರವು ಐದು ವರ್ಷ ಹಳೆಯದಾಗಿದೆ ಮತ್ತು ಇದು ಇಟಲಿಯಲ್ಲಿ ನಡೆದ ಘಟನೆಯಲ್ಲ ಎಂದು ಕಂಡುಕೊಂಡಿದೆ.

ಇದರ ಮೂಲ ಚಿತ್ರವನ್ನು ಮಾರ್ಚ್ 2015 ರಿಂದ ಎಬಿಸಿ ನ್ಯೂಸ್ ಎಂಬ ಸುದ್ದಿಜಾಲದ ವರದಿಯಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಚಿತ್ರದಲ್ಲಿರವುದು ನಾನ್‌ಜೆಜೆನೇರಿಯನ್ ಕೊಲೊರಾಡೋ ಮೂಲದ ಎರಡನೇ ಮಹಾಯುದ್ಧದ ಮಾಜಿಸೈನಿಕ ಬಿಲ್ ಮೂರ್. ಯುದ್ಧದ ಸಮಯದಲ್ಲಿ ತನ್ನ ಪ್ರೇಯಸಿಗೆ ಅವರು ಬರೆದ ಪತ್ರ ಕಂಡುಬಂದಿದೆ ಎಂದು ತಿಳಿಸಿದ ನಂತರ ಅವರು ಭಾವುಕರಾಗಿದ್ದರು.

“1944 ರಲ್ಲಿ 20 ವರ್ಷ ಬಿಲ್ ಮೂರ್ ಅವರು ಬರ್ನಾಡಿಯನ್ ಎಂಬ ಯುವತಿಗೆ ಬರೆದ ಪತ್ರವನ್ನು 70 ವರ್ಷಗಳ ನಂತರ ಕಂಡು ಹಿಡಿದು ಓದಿದಾಗ ಮೂರ್ ಭಾವುಕರಗಿದ್ದರು. ವರದಿಯ ವೀಡಿಯೊದಲ್ಲಿ 52 ಸೆಕೆಂಡುಗಳ ನಂತರ ಮೂರ್‌ ಅಂಚೆಚೀಟಿ ಒಡೆಯುವುದನ್ನು ಕಾಣಬಹುದು.

ಇವರಿಗೂ ಕೊರೊನಾದಿಂದ ಗುಣಮುಖರಾದ ರೋಗಿಗೂ ಯಾವುದೇ ಸಂಬಂಧವಿಲ್ಲ. ತಪ್ಪಾಗಿ ಇವರ ಚಿತ್ರವನ್ನು ಬಳಸಿಕೊಳ್ಳಲಾಗಿದೆ ಅಷ್ಟೆ.

ಅಧೀಕೃತ ವರದಿಯಂತೆ ಇಟಲಿಯ ಆರೋಗ್ಯ ರಕ್ಷಣಾ ವ್ಯವಸ್ಥೆಯು ವೆಚ್ಚಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ಅಡಿಯಲ್ಲಿ ಇಟಲಿಯ ಸಾರ್ವಜನಿಕವಾಗಿ ಧನಸಹಾಯ ಪಡೆದ ಆರೋಗ್ಯ ನೀತಿ ಸಾರ್ವತ್ರಿಕತೆಯನ್ನು ಒಳಗೊಳ್ಳುತ್ತದೆ ಮತ್ತು ಸ್ವಯಂಚಾಲಿತವಾಗಿ ಎಲ್ಲಾ ನಾಗರಿಕರು ಮತ್ತು ಕಾನೂನುಬದ್ಧ ವಿದೇಶಿ ನಿವಾಸಿಗಳು ಈ ವರ್ಗಕ್ಕೆ ಸೇರುತ್ತಾರೆ.

ಮತ್ತೊಂದು ವರದಿಯ ಪ್ರಕಾರ, ಆರೋಗ್ಯ ವ್ಯವಸ್ಥೆಯಲ್ಲಿ ಖಾಸಗಿ ಆರೋಗ್ಯ ವಿಮೆ ಸೀಮಿತ ಪಾತ್ರ ವಹಿಸುತ್ತದೆ. ಇಟಲಿಯಲ್ಲಿ ಖಾಸಗಿ ಆರೋಗ್ಯ ವಿಮೆ ಎರಡು ವಿಧದ ಕಾರ್ಪೊರೇಟ್ ಆಗಿದೆ, ಇದಕ್ಕಾಗಿ ಕಂಪನಿಗಳು ಸ್ವಂತ ಉದ್ಯೋಗಿಗಳನ್ನು ಮತ್ತು ಕೆಲವೊಮ್ಮೆ ಅವರ ಕುಟುಂಬಗಳನ್ನು ಒಳಗೊಳ್ಳುತ್ತವೆ. ಕಾರ್ಪೊರೇಟ್ ಅಲ್ಲದ ವ್ಯಕ್ತಿಗಳು ತಮ್ಮ ಅಥವಾ ತಮ್ಮ ಕುಟುಂಬಗಳಿಗೆ ವಿಮೆಯನ್ನು ಖರೀದಿಸಬಹುದು. ಆದ್ದರಿಂದ ಇಟಲಿಯಲ್ಲಿ ಆರೋಗ್ಯ ಸೇವೆಗಳ ವಿಮೆಯನ್ನು ಪಡೆದ ನಂತರ ರೋಗಿಗಳು ವೈಯಕ್ತಿಕವಾಗಿ ಪಾವತಿಸುವ ಸಾಧ್ಯತೆ ಕಡಿಮೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...