ಕಾರ್ಗಿಲ್ ಯುದ್ಧದ ವೀರ ಸುಬೇದಾರ್ ಮೇಜರ್ (ನಿವೃತ್ತ) ಹರಿರಾಮ್ ದುಬೆಯವರ 31 ವರ್ಷದ ಮಗ ಕೋವಿಡ್ ಕಾರಣದಿಂದಾಗಿ ಉತ್ತರಪ್ರದೇಶದ ಕಾನ್ಪುರ ನಗರದಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಬೇದಾರ್ ದುಬೆಯವರು ತನ್ನ ಮಗನ ದೇಹವನ್ನು ಕೊನೆಯ ಬಾರಿಗೆ ನೋಡಲು ಸುಡುವ ಸೂರ್ಯನ ಕೆಳಗೆ ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಕಾನ್ಪುರ್ ಉತ್ತರ ಪ್ರದೇಶದ ಅತಿ ಹೆಚ್ಚು ಕೋವಿಡ್ ಪೀಡಿತ ನಗರಗಳಲ್ಲಿ ಒಂದಾಗಿದೆ.
ಇಂಡಿಯಾ ಟುಡೆ ಟಿವಿ ಜೊತೆ ಹ್ಯಾಲೆಟ್ ಆಸ್ಪತ್ರೆಯಲ್ಲಿ ಸುಬೇದಾರ್ ಮೇಜರ್ (ನಿವೃತ್ತ) ಹರಿರಾಮ್ ದುಬೆ ಮಾತನಾಡಿದ್ದಾರೆ.
“ನಾನು 1981ರಿಂದ 2011ರವರೆಗೆ ನನ್ನ ತಾಯಿನಾಡಿಗೆ ಸೇವೆ ಸಲ್ಲಿಸಿದ್ದೇನೆ. ಕಾರ್ಗಿಲ್ ಯುದ್ಧದ ವೇಳೆ ಭಾಗಿಯಾಗಿದ್ದೇನೆ. ನಂತರ ಬಾರಾಮುಲ್ಲಾ, ಲಡಾಖ್ ಮತ್ತು ಲುಕುಂಗ್ಗೆ ಪ್ರದೇಶಗಳಲ್ಲಿ ಹೋರಾಡಿದ್ದೇನೆ. ನಾನು ಬಾರಾಮುಲ್ಲಾದಲ್ಲಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದೇನೆ ಮತ್ತು ಕಾರ್ಗಿಲ್ನಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದೆ. ಆದರೆ ಈ ದೇಶದ ವ್ಯವಸ್ಥೆಗೆ ನನ್ನ ಮಗನನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಮಂಗಳವಾರ ಸಂಜೆ ಕೋವಿಡ್ನಿಂದ ನಿಧನರಾದ ಮಗ ಅಮಿತಾಬ್ ನೆನೆದು ದುಃಖಿತರಾದರು.
India Today helps army veteran who lost his son to COVID.
(@JournoAshutosh ) #Coronavirus #COVID19 #ITVideo pic.twitter.com/J9eXGMx3vL— IndiaToday (@IndiaToday) April 30, 2021
ವೈದ್ಯಕೀಯ ಆಮ್ಲಜನಕ ಮತ್ತು ಆಮ್ಲಜನಕ ಸಿಲಿಂಡರ್ಗಳಿಗಾಗಿ ಹೆಣಗಾಡುತ್ತಿರುವ ನಗರದಾದ್ಯಂತದ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ತುಂಬಿವೆ. ಮೃತ ರೋಗಿಗಳ ಕುಟುಂಬ ಸದಸ್ಯರು ತಮ್ಮ ಪ್ರೀತಿಪಾತ್ರರ ಮೃತ ದೇಹಗಳನ್ನು ನೋಡಲು ಗಂಟೆಗಟ್ಟಲೆ ಕಾಯಬೇಕಾಗುತ್ತಿದೆ.
ಕಾನ್ಪುರದ ಭೈರವಘಾಟ್ ಪ್ರದೇಶದಲ್ಲಿನ ಸ್ಮಶಾನವನ್ನು ನೋಡಿದರೆ ಪರಿಸ್ಥಿತಿಯ ಭೀಕರತೆ ಅರ್ಥವಾಗುತ್ತದೆ. ಜನರ ಯಾತನೆ ಈಗ ಕೋಪಕ್ಕೆ ತಿರುಗಿದೆ. ದೇಶಕ್ಕೆ ಸೇವೆ ಸಲ್ಲಿಸಿದ ಅನುಭವಿಗಳು ಸಹ ಅಸಹಾಯಕರಾಗಿದ್ದಾರೆ.
ಇನ್ನೂ ಒಂದು ಸ್ಯನಿಕ ಕುಟುಂಬದ ಅಸಹಾಯಕತೆ…
‘ನಾನು ಶ್ರೀನಗರದಲ್ಲಿ ಸೇವೆ ಸಲ್ಲಿಸಿದ್ದೇನೆ, ಯಾರೂ ನನ್ನ ತಂಗಿಯನ್ನು ನೋಡಿಕೊಳ್ಳಲಿಲ್ಲ’ ಎಂದು ಕಾನ್ಪುರದ ನಿವಾಸಿ ಚಂದ್ರಪಾಲ್ ಹೇಳಿದ್ದಾರೆ. ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಹಾಯಕ ಕಮಾಂಡೆಂಟ್ ಆಗಿ ಕೆಲಸ ಮಾಡಿ ಅವರು ನಿವೃತ್ತರಾಗಿದ್ದಾರೆ. ಕೋವಿಡ್ ಪೀಡಿತ ಅವರ ಸಹೋದರಿ ಸಾವಿತ್ರಿ ಬುಧವಾರ ಬೆಳಿಗ್ಗೆ ನಿಧನರಾದರು.
ವಾರ್ಡ್ ಹುಡುಗರು ತಮ್ಮ ಸಹೋದರಿಯ ನಿಧನದ ಬಗ್ಗೆ ಮಾಹಿತಿ ನೀಡಿದರು ಎಂದು ನಿವೃತ್ತ ಸೈನಿಕ ಹೇಳುತ್ತಾರೆ.
ಚಂದ್ರಪಾಲ್ ಅವರ ಕುಟುಂಬ ಸದಸ್ಯ ರಾಮಚಂದ್ರ ಕೂಡ ನಿವೃತ್ತ ಸೈನಿಕ. ಉಸಿರಾಟದ ತೊಂದರೆಯಿಂದಾಗಿ ಕುಟುಂಬವು ಏಪ್ರಿಲ್ 22 ರಂದು ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಗೆ ಸಾವಿತ್ರಿ ಅವರನ್ನು ಕರೆತಂದಿತ್ತು ಎಂದು ಇಂಡಿಯಾ ಟುಡೆ ಟಿವಿಗೆ ತಿಳಿಸಿದರು.
“ಸಾವಿತ್ರಿ ಅವರನ್ನು ಹ್ಯಾಲೆಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಯೋಗಕ್ಷೇಮದ ಬಗ್ಗೆ ಯಾರಿಂದಲೂ ಮಾಹಿತಿ ಸಿಗಲಿಲ್ಲ. ನಾನು ಶ್ರೀನಗರದಲ್ಲಿ ಸೇವೆ ಸಲ್ಲಿಸಿದ್ದೇನೆ ಆದರೆ ಯಾರೂ ನನ್ನ ತಂಗಿಯನ್ನು ನೋಡಿಕೊಳ್ಳಲಿಲ್ಲ. ಅವರು ನಿಧನರಾದರು ಎಂದು ನಮಗೆ ಇಂದು ತಿಳಿದುಬಂದಿದೆ” ಎಂದು ರಾಮಚಂದ್ರ ಹೇಳಿದರು.
ಮಹಿಳೆಯ ದುಃಖಿತ ಮಗ, ಆಮ್ಲಜನಕದ ಮಟ್ಟವು ತೀವ್ರವಾಗಿ ಕುಸಿಯಿತು ಮತ್ತು ತಾಯಿಯನ್ನು ಬೈಪಾಪ್ (ಬಿಲೆವೆಲ್ ಪಾಸಿಟಿವ್ ಏರ್ವೇ ಪ್ರೆಶರ್) ನಲ್ಲಿ ಇರಿಸಲಾಗಿದೆ ಎಂದು ಹೇಳಿದರು. ಆದರೆ ಯಾವುದೂ ನೆರವಾಗಲಿಲ್ಲ ಎಂದರು.
ಇದನ್ನೂ ಓದಿ: ಲಸಿಕೆ ರಾಜಕೀಯ: ರಾಜ್ಯಗಳ ಪಾಲಿಗೆ ವಿಲನ್ ಆದ ಮೋದಿ ಸರ್ಕಾರ?