Homeಮುಖಪುಟಮನುಸ್ಮೃತಿ ಸುಟ್ಟಿದ್ದು ಏಕೆಂದು ವಿವರಿಸಿದ ಅಮಿತಾಬ್ ಬಚ್ಚನ್ ವಿರುದ್ಧ FIR!

ಮನುಸ್ಮೃತಿ ಸುಟ್ಟಿದ್ದು ಏಕೆಂದು ವಿವರಿಸಿದ ಅಮಿತಾಬ್ ಬಚ್ಚನ್ ವಿರುದ್ಧ FIR!

ಡಾ.ಬಿ.ಆರ್ ಅಂಬೇಡ್ಕರ್‌ರವರು ಜಾತಿ ಬೇಧಭಾವ ಮತ್ತು ಅಸ್ಫೃಶ್ಯತೆಯನ್ನು ವೈಚಾರಿಕವಾಗಿ ವಿರೋಧಿಸುವ ಸಲುವಾಗಿ ಪ್ರಾಚೀನ ಹಿಂದೂ ಗ್ರಂಥ ಮನುಸ್ಮೃತಿಯನ್ನು ಸುಟ್ಟು ಹಾಕಿ ಪ್ರತಿಭಟಿಸಿದ್ದರು.

- Advertisement -
- Advertisement -

ಜನಪ್ರಿಯ ಹಿಂದಿ ಕಾರ್ಯಕ್ರಮ ‘ಕೌನ್ ಬನೇಗ ಕರೋಡ್‌ಪತಿ’ ನಿರೂಪಕ ಅಮಿತಾಬ್ ಬಚ್ಚನ್ ಮತ್ತು ಸೋನಿ ಟಿವಿ ಕಾರ್ಯಕ್ರಮ ತಯಾರಕರ ವಿರುದ್ಧ ಲಕ್ನೋ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ‘1927ರ ಡಿಸೆಂಬರ್ 25 ರಂದು ಡಾ.ಬಿ.ಆರ್ ಅಂಬೇಡ್ಕರ್‌ರವರು ಯಾವ ಧರ್ಮಗ್ರಂಥವನ್ನು ಸುಟ್ಟರು’ ಎಂಬ ಪ್ರಶ್ನೆ ಆಧಾರದಲ್ಲಿ ದೂರು ದಾಖಲಾಗಿತ್ತು.

ನಡೆದುದ್ದೇನು?

ಶುಕ್ರವಾರ ನಡೆದ ಕೌನ್ ಬನೇಗ ಕರೋಡ್‌ಪತಿ ಕಾರ್ಯಕ್ರಮದ ‘ಕರಮ್‌​ವೀರ್’ ಎಂಬ ವಿಶೇಷ ಸಂಚಿಕೆಯಲ್ಲಿ ಅತಿಥಿಗಳಾಗಿ ನಟ ಅನುಪ್ ಸೋನಿ ಮತ್ತು ಸಾಮಾಜಿಕ ಕಾರ್ಯಕರ್ತ ಬೆಜವಾಡ ವಿಲ್ಸನ್ ಹಾಟ್​ ಸೀಟ್​ನಲ್ಲಿ ಕುಳಿತಿದ್ದರು. ಅಮಿತಾಭ್ ಬಚ್ಚನ್ 6,40,000 ರೂಪಾಯಿಯ ನಗದು ಬಹುಮಾನಕ್ಕಾಗಿ ಪ್ರಶ್ನೆಯೊಂದನ್ನು ಕೇಳಿದರು. ಆ ಪ್ರಶ್ನೆ ಈಗಿದೆ.

1927ರ ಡಿಸೆಂಬರ್ 25ರಂದು ಡಾ.ಬಿ.ಆರ್.ಅಂಬೇಡ್ಕರ್​ ಹಾಗೂ ಅವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟು ಹಾಕಿದರು?

ಆಯ್ಕೆಗಳು ಹೀಗಿವೆ:

ಎ. ವಿಷ್ಣುಪುರಾಣ

ಬಿ. ಭಗವದ್ಗೀತೆ

ಸಿ. ಋಗ್ವೇದ

ಡಿ. ಮನುಸ್ಮೃತಿ

ಈ ಪ್ರಶ್ನೆಗೆ ಬೆಜವಾಡ ವಿಲ್ಸನ್ ಮತ್ತು ಅನೂಪ್ ಸೋನಿ ಮನುಸ್ಮೃತಿ ಎಂದು ಉತ್ತರ ನೀಡಿದರು. ಸರಿ ಉತ್ತರವೆಂದು ಘೋಷಿಸಿದ ಅಮಿತಾಬ್ ಬಚ್ಚನ್, “1927ರ ಡಿಸೆಂಬರ್ 25 ರಂದು ಡಾ.ಬಿ.ಆರ್ ಅಂಬೇಡ್ಕರ್‌ರವರು ಜಾತಿ ಬೇಧಭಾವ ಮತ್ತು ಅಸ್ಫೃಶ್ಯತೆಯನ್ನು ವೈಚಾರಿಕವಾಗಿ ವಿರೋಧಿಸುವ ಸಲುವಾಗಿ ಪ್ರಾಚೀನ ಹಿಂದೂ ಗ್ರಂಥ ಮನುಸ್ಮೃತಿಯನ್ನು ಸುಟ್ಟು ಹಾಕಿ ಪ್ರತಿಭಟಿಸಿದರು” ಎಂದು ವಿವರಣೆ ನೀಡಿದರು.

ಎಫ್‌ಐಆರ್ ಏಕೆ?

ಇತಿಹಾಸದಲ್ಲಿ ದಾಖಲಾಗಿರುವ ಈ ಘಟನೆಯ ಪ್ರಶ್ನೆ ಮತ್ತು ಅಮಿತಾಬ್ ಬಚ್ಚನ್‌ರವರ ವಿವರಣೆ ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೆರಳಿಸಿದೆ. ಈ ಪ್ರಶ್ನೆಯು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ, ಹಾಗಾಗಿ ಕೌನ್ ಬನೇಗ ಕರೋಡ್‌ಪತಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ. ಅಲ್ಲದೇ ಲಕ್ನೋ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.


ಇದನ್ನೂ ಓದಿ: ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನ ಮತ್ತು RSSನ ಮನಪರಿವರ್ತನೆ! : ಅಂಬೇಡ್ಕರ್‌ ಹೊಗಳಿದ ಬಿ.ಎಲ್‌ ಸಂತೋಷ್‌ಗೆ 9 ಪ್ರಶ್ನೆಗಳು


ಸಿನಿಮಾ ನಿರ್ಮಾಪಕ ವಿವೇಕ್​ ಅಗ್ನಿಹೋತ್ರಿ “ಕೆಬಿಸಿಯನ್ನು (ಕೌನ್ ಬನೇಗ ಕರೋಡ್‌ಪತಿ) ಕಮ್ಮಿಸ್‌ಗಳು ಅಪಹರಿಸಿದ್ದಾರೆ. ಇದರಿಂದ ಸಂಸ್ಕೃತಿ ಯುದ್ಧಗಳು ಹೇಗೆ ಗೆಲ್ಲುತ್ತವೆ ಎಂಬುದನ್ನು ಮುಗ್ಧ ಮಕ್ಕಳು ಕಲಿಯುತ್ತಾರೆ. ಇದನ್ನು ಕೋಡಿಂಗ್ ಎಂದು ಕರೆಯಲಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬರು “ಕೆಬಿಸಿ ತನ್ನ ಕಾರ್ಯಕ್ರಮವನ್ನು ‘ಕೌನ್ ಬನೇಗ ಕಮ್ಯುನಿಷ್ಟ್’ ಎಂದು ಬದಲಿಸಿಕೊಳ್ಳಬೇಕು. ನಾವು ಇದನ್ನು ಬಹಿಷ್ಕರಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಇದು ನಿಜಕ್ಕೂ ವಿವಾದವೇ?

ಅಂಬೇಡ್ಕರ್‌ರವರು ಮನುಸ್ಮೃತಿಯನ್ನು ವಿರೋಧಿಸಿದ್ದುದು, ಅದನ್ನು ಸುಟ್ಟು ಹಾಕಿ ಪ್ರತಿಭಟಿಸಿರುವುದು ಅವರ ಬರಹಗಳಲ್ಲಿ ಮಾತ್ರವಲ್ಲದೇ ನಮ್ಮ ಇತಿಹಾಸದಲ್ಲಿ ದಾಖಲಾಗಿದೆ. ಅದು ನಮಗೆ ಒಪ್ಪಿಗೆ ಇರಬಹುದು ಅಥವಾ ಇಲ್ಲದಿರಬಹುದು. ಆದರೆ ಅದನ್ನು ಅಳಿಸಲು ಅಥವಾ ಬದಲಿಸಲು ಸಾಧ್ಯವಿಲ್ಲ. ಹಾಗಿರುವಾಗ ಇದರಲ್ಲಿ ವಿವಾದ ಎಲ್ಲಿದೆ? ಎಂದು ಕೆಲವರು ಪ್ರಶ್ನಿಸಿದ್ದಾರೆ.

ಕೆಲವರು ಕೆಬಿಸಿಯ ಆ ಪ್ರಶ್ನೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಆ ಪ್ರಶ್ನೆಯಲ್ಲಿ ಯಾವುದೇ ತಪ್ಪಿಲ್ಲ, ಮೊದಲನೆಯದಾಗಿ ಇದು ಕೇವಲ ಸರಳ ಸಾಮಾನ್ಯ ಜ್ಞಾನದ ಪ್ರಶ್ನೆಯಾಗಿದೆ. ಭಾರತದಲ್ಲಿ ನಡೆಯುತ್ತಿರುವ ವರ್ಣಭೇದದ ಇಂದಿನ ಯುಗದಲ್ಲಿ ಅನೇಕ ಭಾರತೀಯರಿಗೆ ಮನುಸ್ಮೃತಿಯ ಅಪಾಯಗಳ ಬಗ್ಗೆ ತಿಳಿದಿಲ್ಲದಿರುವುದರಿಂದ ಪ್ರಶ್ನೆ ಕೇಳಿರುವುದು ಸರಿಯಾಗಿದೆ. ಮನುಸ್ಮೃತಿಯನ್ನು ಸುಡುವುದು ನಿಜಕ್ಕೂ ಒಂದು ಅದ್ಭುತ ಕ್ರಾಂತಿಕಾರಿ ಕ್ರಿಯೆ. ಜಾತಿವಾದವು ಬೇಗನೆ ಕಣ್ಮರೆಯಾದರೆ ಉತ್ತಮ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬರು “ಮನುಸ್ಮೃತಿಯು ತಾರತಮ್ಯದ ದಾರಿದೀಪವಾಗಿದೆ ಮತ್ತು ಅದರಿಂದ ಇಂದಿಗೂ ದಲಿತರಿಗೆ ಕಿರುಕುಳ ನೀಡಲಾಗುತ್ತಿದೆ!! ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕಾಗಿ ಕೆಬಿಸಿಗೆ ಧನ್ಯವಾದಗಳು. ನಾನು ಕೆಬಿಸಿಯನ್ನು ಬೆಂಬಲಿಸುತ್ತೇನೆ. ಕೆಬಿಸಿಯನ್ನು ಬಾಯ್ಕಾಟ್ ಮಾಡಬೇಕು ಎನ್ನುತ್ತಿರುವವರು ಮೊದಲು ಮನುಸ್ಮೃತಿಯನ್ನು ಓದಿ ನಂತರ ಪ್ರತಿಕ್ರಿಯಿಸಲಿ” ಎಂದು ಸವಾಲು ಹಾಕಿದ್ದಾರೆ.

ಒಟ್ಟಿನಲ್ಲಿ ಇಂದು ಭಾರತದಲ್ಲಿ ತಮಗೆ ರುಚಿಸದ ಎಲ್ಲಾ ವಿಷಯಗಳನ್ನು ಬಾಯ್ಕಾಟ್ ಮಾಡಬೇಕೆಂದು ಆಗ್ರಹಿಸುವುದು ಸಾಮಾನ್ಯವಾಗಿಬಿಟ್ಟಿದೆ. ಅದು ತಮಗೆ ಏಕೆ ಸರಿಯೆನಿಸುತ್ತಿಲ್ಲ, ಅದರಿಂದಾಗುವ ಅಪಾಯಗಳೇನು ಎಂದು ವಿವರವಾಗಿ ಚರ್ಚಿಸುವ ಬದಲು ಬಾಯ್ಕಾಟ್ ಎಂದು ಟ್ರೆಂಡ್ ಮಾಡಲಾಗುತ್ತಿದೆ. ಆ ಪಟ್ಟಿಗೆ ಈ ಪ್ರಕರಣ ಹೊಸ ಸೇರ್ಪಡೆಯಾಗಿದೆ.


ಇದನ್ನೂ ಓದಿ: ಮುತ್ತಯ್ಯ ಮುರುಳೀಧರನ್ ಪಾತ್ರದಲ್ಲಿ ವಿಜಯ್ ಸೇತುಪತಿ: ‘800’ ಚಿತ್ರ ಬಾಯ್ಕಾಟ್ ಎಂದ ತಮಿಳಿಗರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಇದೆಲ್ಲವೂ ನಾಟಕವಷ್ಟೇ.
    ಅಮಿತಾಬ್‌ಗೇ ಆಗಲಿ ಅಥವ ಸೋನಿ ವಾಹಿನಿ ಯವರಿಗೇ ಆಗಲಿ ಬಾಬಾಸಾಹೇಬರ ಕುರಿತಾಗಿ ಯಾವುದೇ ರೀತಿಯ ಪ್ರೀತ್ಯಾದರ ಅಥವ ಗೌರವಗಳಾಗಲೀ ಇಲ್ಲ. ಇಂಥಹ ಪ್ರಶ್ನೆಗಳನ್ನು ಕೇಳಿದಾಗ ನಮ್ಮ ದೇಶದಲ್ಲಿ ಸಹಜವಾಗಿಯೇ ವಾಕ್ಸಮರ ಮತ್ತು ತಿಕ್ಕಾಟಗಳಾಗುತ್ತವೆ, ಜಾಲವಾಹಿನಿಯಲ್ಲಿ ಚರ್ಚೆಗಳಾಗುತ್ತವೆ, ತತ್ಕಾರಣದಿಂದ ಬಹುಜನರ ಗಮನ ಕಾರ್ಯಕ್ರಮದತ್ತ ಹರಿದು, ಕಾರ್ಯಕ್ರಮದ ಕುರಿತಾದ ಟಿ ಆರ್ ಪಿ ಹೆಚ್ಚುತ್ತದೆ ಎಂಬ ದುರಾಲೋಚನೆಯಿಂದ ಈ ಪ್ರಶ್ನೆ ಕೇಳಿರುತ್ತಾರೆ. ಇಷ್ಟು ವರ್ಷಗಳಿಂದ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೇಳದ ಪ್ರಶ್ನೆ, ಬೆಜವಾಡ ವಿಲ್ಸನ್ ಹಾಟ್‌ಸೀಟ್‌ನಲ್ಲಿ ಕುಳಿತಾಗಲೇ ಕೇಳಿದ್ದಾರೆಂದರೆ, ಅದರ ಅಂತರಾರ್ಥ ತಿಳಿಯುತ್ತದೆ. ಈಗ ಬೆಜವಾಡ ವಿಲ್ಸನ್‌ರವರ ಕುರಿತು ತಿಳಿದಿರುವವರೂ ಇದರ ಕಡೆ ಗಮನವೀಯುತ್ತಾರೆ. ಬಹುಜನರನ್ನು ಬುಟ್ಟಿಗೆ ಹಾಕಿಕೊಳ್ಳುವ ಕಾರ್ಪೊರೇಟ್ ಕುತಂತ್ರವಿದಷ್ಟೇ….
    ವಿಶ್ವನಾಥ ಎನ್ ಅಮಾಸ

  2. ಇದೆಲ್ಲವೂ ನಾಟಕವಷ್ಟೇ.
    ಅಮಿತಾಬ್‌ಗೇ ಆಗಲಿ ಅಥವ ಸೋನಿ ವಾಹಿನಿ ಯವರಿಗೇ ಆಗಲಿ ಬಾಬಾಸಾಹೇಬರ ಕುರಿತಾಗಿ ಯಾವುದೇ ರೀತಿಯ ಪ್ರೀತ್ಯಾದರ ಅಥವ ಗೌರವಗಳಾಗಲೀ ಇಲ್ಲ. ಇಂಥಹ ಪ್ರಶ್ನೆಗಳನ್ನು ಕೇಳಿದಾಗ ನಮ್ಮ ದೇಶದಲ್ಲಿ ಸಹಜವಾಗಿಯೇ ವಾಕ್ಸಮರ ಮತ್ತು ತಿಕ್ಕಾಟಗಳಾಗುತ್ತವೆ, ಜಾಲವಾಹಿನಿಯಲ್ಲಿ ಚರ್ಚೆಗಳಾಗುತ್ತವೆ, ತತ್ಕಾರಣದಿಂದ ಬಹುಜನರ ಗಮನ ಕಾರ್ಯಕ್ರಮದತ್ತ ಹರಿದು, ಕಾರ್ಯಕ್ರಮದ ಕುರಿತಾದ ಟಿ ಆರ್ ಪಿ ಹೆಚ್ಚುತ್ತದೆ ಎಂಬ ದುರಾಲೋಚನೆಯಿಂದ ಈ ಪ್ರಶ್ನೆ ಕೇಳಿರುತ್ತಾರೆ. ಇಷ್ಟು ವರ್ಷಗಳಿಂದ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೇಳದ ಪ್ರಶ್ನೆ, ಬೆಜವಾಡ ವಿಲ್ಸನ್ ಹಾಟ್‌ಸೀಟ್‌ನಲ್ಲಿ ಕುಳಿತಾಗಲೇ ಕೇಳಿದ್ದಾರೆಂದರೆ, ಅದರ ಅಂತರಾರ್ಥ ತಿಳಿಯುತ್ತದೆ. ಈಗ ಬೆಜವಾಡ ವಿಲ್ಸನ್‌ರವರ ಕುರಿತು ತಿಳಿದಿರುವವರೂ ಇದರ ಕಡೆ ಗಮನವೀಯುತ್ತಾರೆ. ಬಹುಜನರನ್ನು ಬುಟ್ಟಿಗೆ ಹಾಕಿಕೊಳ್ಳುವ ಕಾರ್ಪೊರೇಟ್ ಕುತಂತ್ರವಿದಷ್ಟೇ….
    ವಿಶ್ವನಾಥ ಎನ್ ಅಮಾಸ
    K V Nayaka

  3. ಅಮಿತಾಬ್ ಜೀ ರವರು ಕೇಳಿದ ಪ್ರಶ್ನೆ ಕರೆಕ್ಟ್..ಅದಕ್ಕೆ ನೀಡಿದ ಉತ್ತರ ಸರಿ ಇದೆ…… ನಮ್ಮ ಬಾರತದ ಎಸ್ಟೋ ಜನರಿಗೆ ಬಾಬ ಸಾಬ್ ಅಂಬೇಡ್ಕರ್ ರವರು ಮನುಸ್ಮೃತಿ ಯನ್ನು ಸುಟ್ಟೀಧೂ ಗೊತ್ತಿಲ್ಲ ….ಇದ್ದರಿಂದ ಅದನ್ನು ಏಕೆ ಏತಕ್ಕಾಗಿ ಯಾವ ಜನರಿಗೆ ಅನ್ಯಾಯ ಆಗಿದೆ…ಅದರಲ್ಲಿ ಹಿಂದುಗಳು ಬಡ ಹಿಂದು ಜನರನ್ನು ಹೀಗೆ ಹಲವಾರು ಬಾರಿ ದೇಶದ ನಾನಾ ಭಾಗಗಳಲ್ಲಿ.. ಅಂದರೆ ಕನ್ಯಾಕುಮಾರಿ ಯಿಂದ….ಕಾಶ್ಮೀರದ ವರೆಗೆ…ಈ ಬಡ ಹಿಂದುಗಳಿಗೆ ಶಾಲೆಗೆ….ಕುಡಿಯುವ ನೀರಿಗೆ…ದೇವಸ್ಥಾನ ಪ್ರವೇಶ…ಇನ್ನು ಎಷ್ಟೆಷ್ಟೋ….ಕಾನೂನು ಮಾಡಿ ಬಡ ಜನರಿಗೆ ಬದುಕಲು ಕಷ್ಟ ಆಗಿದೆ……ದಯವಿಟ್ಟು ಮನುಸ್ಮೃತಿ ಜನರು ಓದಿ ಆಗ ನೀವು ಸಹ ಅದನ್ನು ಸುಡಲು ಮನಸ್ಸು ಬರುತ್ತೆ….ಈ ಪ್ರಶ್ನೆ ಕೇಳಿದ್ದು ತಪ್ಪಲ್ಲ…ಕೆಲವು ಬ್ರಾಹ್ಮಣ ಮಂಧಿಗಳು ಮಾತ್ರ ಜನರಿಗೆ ಇದು ಗೊತ್ತಿರಲಿಲ್ಲ…ಮತ್ತೇ ಜನರಿಗೆ ಗೊತ್ತು ಮಾಡಿ ನಮ್ಮ ಮರ್ಯಾದೆ ಹಾಳು ಮಾಡ್ತಾರೆ ಅಂಥಾ ..ಕೋರ್ಟ್ನಲ್ಲಿ ಕೇಸ್ ಹಾಕುತ್ತಾರೆ….ಅಮಿತಾಬ್ ರವರರಿಗೆ ಏನು ಆಗಲ್ಲ…ಜೈ ಅಮಿತಾಬ್ ಜಿ….

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...