Homeಕರ್ನಾಟಕ'ಅಮೇರಿಕಾದ ರೀತಿಯಲ್ಲಿ ಪ್ರತಿಭಟನೆ ಮಾಡಬೇಕು' ಎಂದ ಲೇಖಕ ಆಕಾರ್ ಪಟೇಲ್ ವಿರುದ್ದ FIR

‘ಅಮೇರಿಕಾದ ರೀತಿಯಲ್ಲಿ ಪ್ರತಿಭಟನೆ ಮಾಡಬೇಕು’ ಎಂದ ಲೇಖಕ ಆಕಾರ್ ಪಟೇಲ್ ವಿರುದ್ದ FIR

- Advertisement -
- Advertisement -

ಅಮೆರಿಕಾದ ‘ಬ್ಲಾಕ್ ಲೈಫ್ ಮ್ಯಾಟ್ಟೆರ್ಸ್’ ಆಂದೋಲನವನ್ನು ಹೋಲುವ ರೀತಿಯಲ್ಲಿ ಭಾರತದ ದಲಿತರು, ಮುಸ್ಲಿಮರು, ಆದಿವಾಸಿಗಳು, ಬಡವರು ಹಾಗೂ ಮಹಿಳೆಯರು ಪ್ರತಿಭಟನೆ ಮಾಡಬೇಕು ಎಂದು ಹೇಳಿಕೆ ನೀಡಿದ ಕಾರಣಕ್ಕೆ ಬರಹಗಾರ-ಪತ್ರಕರ್ತ ಹಾಗೂ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾದ ಮಾಜಿ ಮುಖ್ಯಸ್ಥರಾದ ಆಕಾರ್ ಪಟೇಲ್ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆಕಾರ್ ಅವರ ಟ್ವೀಟಿಗೆ ಸ್ವಯಂ ಪ್ರೇರಿತ ದೂರು ದಾಖಲಿಸಿರುವ ಜೆಸಿ ನಗರದ ಪೊಲೀಸರು, ಅಮೆರಿಕಾದಲ್ಲಿ ನಡೆದ ರೀತಿಯ ಪ್ರತಿಭಟನೆ ಮಾಡುವಂತೆ ಕರೆ ಕೊಟ್ಟಿರುವ ಅವರು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮೇ 25 ರಂದು ಅಮೆರಿಕಾದ ಮಿನಿಯಾಪೊಲಿಸ್ ನಲ್ಲಿ ಕರಿಯ ಜನಾಂಗದ ಫ್ಲಾಯ್ಡ್ ಎಂಬ ವ್ಯಕ್ತಿಯನ್ನು ಪೊಲೀಸ್ ಒಬ್ಬರು ಕತ್ತಿನ ಮೇಲೆ ಮೊಣಕಾಲಿಟ್ಟು ಕೊಂದು ಹಾಕಿದ್ದರು. ಇದನ್ನು ವಿರೋಧಿಸಿ ಅಮೆರಿಕಾದಾದ್ಯಂತ ಭಾರಿ ಪ್ರತಿಭಟನೆಗಳು ಭುಗಿಲೆದ್ದಿವೆ.

ಆಕಾರ್ ಅವರ ಟ್ವಿಟ್ಟರ್ ಪೋಸ್ಟ್ ನಲ್ಲಿ “ನಮಗೂ ಇಂತದೇ ಪ್ರತಿಭಟನೆಗಳು ಬೇಕು. ದಲಿತ, ಮುಸ್ಲಿಂ, ಆದಿವಾಸಿ, ಬಡವ ಹಾಗೂ ಮಹಿಳೆಯರ ಕಡೆಯಿಂದ, ಆಗ ವಿಶ್ವ ಗಮನಿಸುತ್ತದೆ. ಪ್ರತಿಭಟನೆ ಕೂಡಾ ಕರಕುಶಲ” ಎಂದು ಹೇಳಿದ್ದಾರೆ.

“ಎಫ್‌ಐಆರ್‌ನ ವಿಷಯಗಳು ನನಗೆ ತಿಳಿದಿಲ್ಲ. ಎಫ್‌ಐಆರ್ ದಾಖಲಿಸಲಾಗಿದೆ ಎಂದು ನಾನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ನಾನು ಹೇಳಿರುವುದರಲ್ಲಿ ಯಾವುದೇ ಅಪರಾಧವಿಲ್ಲ, ಅವರು ಯಾಕೆ ಕೇಸು ದಾಖಲಿಸಿದರು ಎಂದು ನನಗೆ ತಿಳಿದಿಲ್ಲ.” ಎಂದು ಆಕಾರ್ ಪಟೇಲ್ ಹೇಳಿದ್ದಾರೆಂದು ‘ದಿ ಪ್ರಿಂಟ್’ ವರದಿ ಮಾಡಿದೆ.

ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಆಕಾರ್ ಪಟೇಲ್ ಅವರನ್ನು ಬೆಂಬಲಿಸಿ “ದೇಶದಲ್ಲಿ ಭಿನ್ನಾಭಿಪ್ರಾಯದ ಹಕ್ಕನ್ನು ಹೇಗೆ ಅಪರಾಧೀಕಣ ಮಾಡಲಾಗುತ್ತಿದೆ ಎಂಬುದಕ್ಕೆ ಪೊಲೀಸರ ಈ ಎಫ್ಐಆರ್ ಮತ್ತೊಂದು ಉದಾಹರಣೆಯಾಗಿದೆ.” ಎಂದು ಹೇಳಿದೆ.


ಓದಿ: ವಿರೋಧಿಗಳ ಬೇಟೆ: ದೆಹಲಿ ಗಲಭೆಗೆ ಉಮರ್‌ ಖಾಲಿದ್‌‌ರನ್ನು ಸಿಲುಕಿಸಿದ್ದು ಹೇಗೆ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಮ್ಮ ಪೊಲೀಸರ ಪ್ರಕಾರ ಪ್ರತಿಭಟನೆಯ ಅರ್ಥ “ಶಾಂತಿ ಕದಡುವ ಯತ್ನ”. ವಾಹ್! ಎಂತೆಂತಹ ಪ್ರತಿಬಾವಂತರಿದ್ದಾರೆ ನಮ್ಮ ಪೊಲೀಸ್ ಇಲಾಖೆಯಲ್ಲಿ.
    ಆಕಾರ್ ಪಟೇಲ್ ವಿರುದ್ಧ ಎಫ್.ಐ.ಆರ್. ದಾಕಲಿಸಿರುವುದು ಕಂಡನಾರ್ಹ. ಈ ಎಫ್.ಐ.ಆರ್. ಅನ್ನು ಈ ಕೂಡಲೇ ರದ್ದುಪಡಿಸಬೇಕು.
    ಮಾನವತೆಯ ಪರ ಇರುವವರ ಬಾಯಿ ಮುಚ್ಚಿಸಲು ಮಾಡುತ್ತಿರುವ ಈ ಸರ್ವಾಧಿಕಾರಿ ದೋರಣೆಗೆ ದಿಕ್ಕಾರ.

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...