ಕೇರಳದಲ್ಲಿ ನಡೆಯುತ್ತಿರುವ ಸರ್ಕಾರ ವರ್ಸಸ್ ರಾಜ್ಯಪಾಲರ ಸಂಘರ್ಷದ ಸರಣಿ ಮುಂದುವರೆದಿದ್ದು, ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಎರಡು ಮಲಯಾಳಂ ಸುದ್ದಿ ವಾಹಿನಿಗಳ ಪತ್ರಕರ್ತರು ಹೊರ ಹೋಗುವವರೆಗೂ ಗೋಷ್ಠಿಯಲ್ಲಿ ಮಾತನಾಡಲು ನಿರಾಕರಿಸಿದ ಘಟನೆ ನಡೆದಿದೆ.
ಆರಿಫ್ ಖಾನ್ ಅವರು ಇಂದು ಕೊಚ್ಚಿಯ ಎರ್ನಾಕುಲಂ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಅವರು ಕೈರಲಿ ಟಿವಿ ಮತ್ತು ಮೀಡಿಯಾ ಒನ್ ಚಾನೆಲ್ ಅನ್ನು ಹೊರಹೋಗುವಂತೆ ಆಕ್ರೋಶಭರಿತರಾಗಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕೈರಲಿ ಟಿವಿ ಸಿಪಿಐಎಂ ಬೆಂಬಲಿತವಾಗಿದ್ದು, ಮೀಡಿಯಾ ಒನ್ ಮಾಧ್ಯಮಮ್ ಬ್ರಾಡ್ಕಾಸ್ಟಿಂಗ್ ಲಿಮಿಟೆಡ್ನಿಂದ ನಿರ್ವಹಿಸಲ್ಪಡುವ ಚಾನೆಲ್ ಆಗಿದೆ. ಈ ವರ್ಷದ ಆರಂಭದಲ್ಲಿ “ಭದ್ರತಾ ಕಾಳಜಿ” ಆರೋಪದಲ್ಲಿ ಒಕ್ಕೂಟ ಸರ್ಕಾರವು ಮೀಡಿಯಾ ಒನ್ ಪ್ರಸಾರ ಮಾಡುವುದನ್ನು ನಿರ್ಬಂಧಿಸಿತ್ತು.
ಇದನ್ನೂ ಓದಿ: ತಮಿಳುನಾಡು: ರಾಜ್ಯಪಾಲರನ್ನು ಪದಚ್ಯುತಗೊಳಿಸುವ ಜ್ಞಾಪಕ ಪತ್ರಕ್ಕೆ ಸಹಿ ಹಾಕುವಂತೆ ಎಲ್ಲ ಪಕ್ಷಗಳಿಗೆ ಮನವಿ ಮಾಡಿದ ಡಿಎಂಕೆ
ಮೈಕ್ ಮತ್ತು ಕ್ಯಾಮೆರಾಗಳನ್ನು ಹಿಡಿದಿದ್ದ ಪತ್ರಕರ್ತರ ಮಧ್ಯೆ ನಿಂತಿದ್ದ ಆರೀಫ್ ಖಾನ್, “ನಾನು ಕೈರಾಲಿ ಮತ್ತು ಮೀಡಿಯಾ ಒನ್ ನೊಂದಿಗೆ ಮಾತನಾಡುವುದಿಲ್ಲ … ಒಂದು ವೇಳೆ ಇದ್ದರೆ ನಾನು ಹೊರನಡೆಯುತ್ತೇನೆ. ಇಲ್ಲಿ ಕೈರಳಿ ಮತ್ತು ಮೀಡಿಯಾ ಒನ್ ಇಲ್ಲ ಎಂದು ನಾನು ಭಾವಿಸುತ್ತೇನೆ. ಈ ಚಾನೆಲ್ಗಳ ಯಾವುದಾದರೂ ಇಲ್ಲಿ ಇದ್ದಾರೆಯೆ?” ಎಂದು ಅವರು ಪ್ರಶ್ನಿಸಿದ್ದಾರೆ. ಎಂದು ಮೀಡಿಯಾ ಒನ್ ಇದೆಯೇ?”
The Kerala Union of Working Journalists will tomorrow organise a protest march to Raj Bhavan against this horrible, undemocratic conduct of the Governor against select media orgs and journos (those who ask uncomfortable questions)
Video courtesy – @RohitThayyil pic.twitter.com/AYK9AE7pDa— S.R.Praveen (@myopiclenses) November 7, 2022
ಈ ವೇಳೆ ಅಲ್ಲಿದ್ದ ಚಾನೆಲ್ನ ಪತ್ರಕರ್ತರೊಬ್ಬರು,“ಹೌದು, ಸರ್” ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆರಿಫ್ ಖಾನ್, “ನಾನು ನಿಮ್ಮೊಂದಿಗೆ ಮಾತನಾಡಲು ಬಯಸುವುದಿಲ್ಲ. ಗೆಟ್ ಔಟ್, ನಾನು ನಿಮ್ಮೊಂದಿಗೆ ಮಾತನಾಡುವುದಿಲ್ಲ” ಎಂದು ಆಕ್ರೋಶ ಭರಿತರಾಗಿ ಹೇಳಿದ್ದಾರೆ.
ಇದನ್ನೂ ಓದಿ: ‘ವಿಶ್ವವಿದ್ಯಾಲಯದ ವಿರುದ್ಧ ಯುದ್ಧ…”: ರಾಜ್ಯಪಾಲರ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್
“ನಾನು ಕೈರಾಲಿಯೊಂದಿಗೆ ಮಾತನಾಡುವುದಿಲ್ಲ. ದಯವಿಟ್ಟು ಹೊರಟುಹೋಗಿ. ನಾನು ಮೀಡಿಯಾ ಒನ್ ಜೊತೆ ಮಾತನಾಡುವುದಿಲ್ಲ…ಈ ಬಗ್ಗೆ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಕಳೆದ 25 ದಿನಗಳಿಂದ ನಾನು ಪದೇ ಪದೇ ಇದನ್ನು ಹೇಳುತ್ತಿದ್ದೇನೆ. ನಾನು ದೂರ ಹೋಗಬೇಕೆಂದು ನೀವು ಬಯಸಿದರೆ, ನಾನು ಹೋಗುತ್ತೇನೆ. ನಾನು ಈ ಬಗ್ಗೆ ವಾದ ಮಾಡಲು ಬಯಸುವುದಿಲ್ಲ” ಎಂದು ಹೇಳಿದ್ದಾರೆ.
ಇಷ್ಟೆ ಅಲ್ಲದೆ, ಕಾಂಗ್ರೆಸ್ ಬೆಂಬಲಿತ ಟಿವಿ ಚಾನೆಲ್ ‘ಜೈಹಿಂದ್’ ಸುದ್ದಿ ವಾಹಿನಿಗೆ ಕೂಡಾ ಪತ್ರಿಕಾಗೋಷ್ಠಿಯಲ್ಲಿ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಕೇರಳದ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಹೇಳಿದ್ದಾರೆ.
ಕಳೆದ ತಿಂಗಳು, ಅವರು ನಾಲ್ಕು ಸುದ್ದಿ ವಾಹಿನಿಗಳಾದ ಕೈರಾಲಿ, ಮೀಡಿಯಾ ಒನ್, ಜೈ ಹಿಂದ್ ಮತ್ತು ರಿಪೋರ್ಟರ್ ಟಿವಿಯನ್ನು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದ್ದರು.
This is utterly shameful…
Kerala Governor #ArifMuhammadKhan stops #KairaliTv and #MediaOne reporters who had been invited to his press conference from attending it.#Kerala #KeralaGovernor #PressConference pic.twitter.com/mVjHbvd3my
— Hate Detector 🔍 (@HateDetectors) November 7, 2022
2019ರ ಕಾರ್ಯಕ್ರಮವೊಂದರಲ್ಲಿ ಅವಮಾನಿಸಿದ್ದಾಗಿ ಆರೋಪಿಸಿರುವುದರಿಂದ ಹಿಡಿದು ಉಪಕುಲಪತಿಗಳ ನೇಮಕದ ವರೆಗೆ ಹಲವಾರು ಘಟನೆಗಳ ಕುರಿತು ಆರಿಫ್ ಖಾನ್ ಅವರು ಪ್ರಸ್ತುತ ರಾಜ್ಯದಲ್ಲಿ ಪಿಣರಾಯಿ ವಿಜಯನ್ ಸರ್ಕಾರದೊಂದಿಗೆ ಸಂಘರ್ಷದಲ್ಲಿದ್ದಾರೆ. ಕೇರಳ ಸರ್ಕಾರವು ಆರಿಫ್ ಖಾನ್ ಅವರು ಆರ್ಎಸ್ಎಸ್ ಕೈಯಲ್ಲಿರುವ ಸಾಧನ ಎಂದು ಆರೋಪಿಸಿದೆ.
ಇದನ್ನೂ ಓದಿ: ಕೇರಳದ ಎಡರಂಗ ಸರ್ಕಾರ ಉರುಳಿಸಲು ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸುತ್ತಿದೆ: ಕೊಡಿಯೇರಿ ಬಾಲಕೃಷ್ಣನ್ ಆರೋಪ
ಈ ನಡುವೆ, ರಾಜ್ಯಪಾಲರ ವರ್ತನೆಯನ್ನು ‘ನಿರಂಕುಶ ನಡೆ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟವು, ಅವರ ವಿರುದ್ಧ ನಾಳೆ ರಾಜಭವನಕ್ಕೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಿದೆ.