Homeಅಂಕಣಗಳುಧೀರಗಂಭೀರ ಗಿರೀಶ್ ಕಾರ್ನಾಡ್

ಧೀರಗಂಭೀರ ಗಿರೀಶ್ ಕಾರ್ನಾಡ್

- Advertisement -
- Advertisement -

| ರಹಮತ್ ತರೀಕೆರೆ |

ಹಿರಿಯ ಲೇಖಕರಲ್ಲಿ ಅನಂತಮೂರ್ತಿ ಅವರೊಡನೆ ನನಗಿದ್ದ ಮಾತುಕತೆ ವಿಚಾರ ವಿನಿಮಯ ಗಿರೀಶ ಕಾರ್ನಾಡರಲ್ಲಿ ಇರಲಿಲ್ಲ. ಮೇಷ್ಟರಾಗಿದ್ದರಿಂದಲೊ ಭಾಷಣಕಾರರಾಗಿ ಸುತ್ತಾಟ ಮಾಡುತ್ತಿದ್ದರಿಂದಲೊ, ಅನಂತಮೂರ್ತಿ ಅವರಿಗೆ ಹೊಸತಲೆಮಾರಿನ ಲೇಖಕರ ಜತೆ ಒಳ್ಳೆಯ ಒಡನಾಟ ಸ್ಥಾಪನೆಯಾಗಿತ್ತು. ಆದರೆ ಕಾರ್ನಾಡರು ತಮ್ಮ ಕಾಲದ ಕಿರಿಯ ಲೇಖಕರ ಜತೆ ಹೀಗೆ ನಂಟಿರಿಸಿಕೊಂಡವರಲ್ಲ. ಅವರು ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದು ಇದ್ದವರು. ಜೀವಿತದ ಬಹುಕಾಲ ಕರ್ನಾಟಕದ ಹೊರಗೆ ಇದ್ದ ಅವರು ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಲಾಗಾಯ್ತಿನಿಂದ ಲಂಕೇಶ್ ಅನಂತಮೂರ್ತಿ ಅವರಂತೆ ಅವರೊಬ್ಬ ಪಬ್ಲಿಕ್ ಇಂಟಲೆಕ್ಚುವಲ್ ಅಲ್ಲ. ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸುವ ಕೆಲಸ ಮಾಡಿದವರಲ್ಲ.

ಆದರೆ ಹೀಗಿದ್ದ ಕಾರ್ನಾಡರು ತಮ್ಮ ಕೊನೆಯ ವರ್ಷಗಳು ಬದಲಾದರು. ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಅವರು ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ಪಲ್ಲಟ ಮತ್ತು ರೂಪಾಂತರಗಳಿಗೆ ಕಾರಣ, ಭಾರತದಲ್ಲಿ ಪ್ರಭುತ್ವವು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳು. ಅನಂತಮೂರ್ತಿ ತೇಜಸ್ವಿ ಲಂಕೇಶ್ ಮುಂತಾದ ಲೇಖಕರು ತೀರಿಕೊಂಡ ಬಳಿಕ, ಕನ್ನಡದಲ್ಲಿ ಉಂಟಾದ ರಿಕ್ತತೆ ಕೂಡ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬೇಕು. ಅವರು ತಮ್ಮ ಮಾತು ಕೃತಿ ಮತ್ತು ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಫ್ಯಾಸಿಸಮ್ಮನ್ನು ಕುರಿತು ವ್ಯಗ್ರರಾಗಿದ್ದರು. ಅವರು ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಮಾಡಿದ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ವಿ.ಎಸ್. ನೈಪಾಲರ ಹಿಂದುತ್ವವನ್ನು ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮತ್ತು ಅವನ ಕುರಿತು ನಾಟಕಗಳನ್ನು ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆಯ ಪರವಾಗಿ ನಿಂತಿದ್ದು; ದನದ ಮಾಂಸದ ವಿಷಯದಲ್ಲಿ ನಡೆಯುತ್ತಿರುವ ಹಲ್ಲೆಯನ್ನು ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಕೊನೆಯ ಕಾರ್ಯಕ್ರಮದಲ್ಲಿ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಪಡೆದ ಲೇಖಕರು ಇಂತಹದೊಂದು ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ವಿಶಿಷ್ಟವಾಗಿತ್ತು.

ಬಾಬಾಬುಡನಗಿರಿ ಚಳುವಳಿಯಲ್ಲಿ ಅವರ ಜತೆ ಪಯಣಿಸಿದ ಘಟನೆ ನೆನಪಾಗುತ್ತಿದೆ. ಸೂಫಿಗಳ ಮೇಲೆ ಅಧ್ಯಯನ ಮಾಡಿವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಚಿಕ್ಕಮಗಳೂರಿನಿಂದ ಗಿರಿಯನ್ನು ಕಾರು ಹತ್ತುತ್ತಿರುವಾಗ, ಮೇಲಿನ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ ಈ ಜಾಗ’’ ಎಂದು ಎಳೆ ಮಗುವಿನಂತೆ ಪುಟಿಯುತ್ತ ಉದ್ಗರಿಸುತ್ತಿದ್ದರು. ಅವರೊಬ್ಬ ಸೆಲೆಬ್ರಿಟಿಯಾದರೂ ಬಹಳ ಸರಳ ವ್ಯಕ್ತಿ. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ಒಂದು ತೋಟದ ಮನೆಯಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ ಆಡಾಡ್ತಾ ಆಯುಷ್ಯವನ್ನು ಒಳಗೊಂಡಂತೆ ನಾನು ಕನ್ನಡದ ಆತ್ಮಕತೆಗಳ ಸ್ವರೂಪದ ಬಗ್ಗೆ ಉಪನ್ಯಾಸ ಮಾಡಿದೆ. ಉಪನ್ಯಾಸ ಕೇಳಿದ ಬಳಿಕ ಕಾರ್ನಾಡರು “ಭಾರತದ ಮೊಟ್ಟಮೊದಲ ಆತ್ಮಕಥೆ ನೀವು ಓದಿಲ್ಲ ಅಂದರೆ ಓದಲೇಬೇಕು. ಅಪರೂಪದ ಪುಸ್ತಕ ಅದು. 16ನೇ ಶತಮಾನದ್ದು’’ ಎಂದರು. ಬೆಂಗಳೂರಿಗೆ ಹೋದೊಡನೆ `ಅರ್ಧ ಕಥಾನಕ’ದ ನೆರಳಚ್ಚನ್ನು ಕಳಿಸಿಕೊಟ್ಟರು.
ಆದರೆ ನಮ್ಮೀ ಕ್ಷೀಣ ಸಂಬಂಧವು `ಅಮೀರ್‍ಬಾಯಿ ಕರ್ನಾಟಕಿ’ ಪುಸ್ತಕದ ಬಿಡುಗಡೆ ಸನ್ನಿವೇಶದಲ್ಲಿ ಧಕ್ಕೆಗೆ ಒಳಗಾಯಿತು.

ಕಾರ್ನಾಡರು `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ಒಂದು ದಿನ ಮೊದಲೇ ಧಾರವಾಡಕ್ಕೆ ಬರುತ್ತಿರುವುದರಿಂದ, ಆ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು. ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಅದರಲ್ಲಿ ಭಾಗವಹಿಸದೆ ಹೊರಗುಳಿದಿದೆ. ಸಂಘಟಕರು ಇದನ್ನು ಅವರಿಗೆ ತಿಳಿಸಿರಬೇಕು. ಅವರು ನನಗೆ ಕರೆ ಮಾಡಿ `ನೀವು ಸಂಭ್ರಮ ಕಾರ್ಯಕ್ರಮವನ್ನು ವಿರೋಧಿಸುತ್ತಿರುವುದು ನಿಜವೇ?’ ಎಂದು ಕೇಳಿದರು. `ಹೌದು’ ಎಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆಯನ್ನು ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕವನ್ನು ಅವರಿಗೆ ಕಳಿಸಿಕೊಟ್ಟೆ. ಬಹಳ ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನನ್ನು ಕಾಣಲು ಹೇಳಿರುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಒಬ್ಬ ಬಂಗಾಳದ ನಟಿ ಹಂಪಿಗೆ ಬಂದು ಹಣ ಪಾಸ್‍ಪೋರ್ಟು ಇರುವ ಪರ್ಸನ್ನು ಕಳೆದುಕೊಂಡಳು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಹಣ ಕೊಡಲು ಸಾಧ್ಯವೇ ಎಂದು ಕೇಳಿದರು. ಕೂಡಲೇ ನನಗೊಂದು ಚೆಕ್ಕನ್ನು ಕಳಿಸಿಕೊಟ್ಟರು.

ಅನಂತಮೂರ್ತಿ ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ತಮಗೆ ಅರಿಯದಂತೆ ಅನಂತಮೂರ್ತಿ ಲಂಕೇಶ್ ತೇಜಸ್ವಿ ಬಳಿಕ ಕನ್ನಡದ ಸಾಹಿತ್ಯ ಲೋಕದಲ್ಲಿರುವ ಸಾಂಸ್ಕøತಿಕ ನಾಯಕನ ದನಿಯಾಗತೊಡಗಿದ್ದರು. ಬಾಬ್ರಿ ಮಸೀದಿ ಕೆಡವಿದ್ದನ್ನು, ಬಾಬಾಬುಡನಗಿರಿಯನ್ನು ವಶಪಡಿಸಿಕೊಳ್ಳುವುದನ್ನು, ದನದ ಮಾಂಸ ತಿನ್ನುವುದನ್ನು ನಿಷೇಧಿಸುವುದನ್ನು, ಟಿಪ್ಪುವನ್ನು ದುಷ್ಟನಾಗಿ ಚಿತ್ರಿಸುವುದನ್ನು ವಿರೋಧಿಸುವಾಗೆಲ್ಲ, ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ಇದುವೇ ಹಿಂದುತ್ವವಾದಿಗಳು ಅವರನ್ನು ದ್ವೇಷಿಸಲು ಕಾರಣವಾಯಿತು. ಅವರು ಗೌರಿಲಂಕೇಶ್ ಸ್ಮರಣೆಯ ಕಾರ್ಯಕ್ರಮಕ್ಕೆ ನಾನೂ ನಗರ ನಕ್ಸಲ್ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಪ್ರಕರಣವು, ಅವರ ಧೈರ್ಯದ ನಾಟಕೀಯ ರೂಪದಂತಿತ್ತು. ಅವರ ಸಿಟ್ಟು, ಹತಾಶೆ ಮತ್ತು ಕ್ರಿಯಾಶೀಲತೆಯ ಆತ್ಯಂತಿಕ ರೂಪಕದದಂತಿತು. ಆಗ ಅವರ ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದುಕೊಂಡೇ ಬಂದಿದ್ದರು. ಫಲಕಗಳನ್ನು ಅಪರಾಧಿಗಳ ಕೊರಳಿಗೆ ತೂಗುಹಾಕುವುದು ಒಂದು ಪದ್ಧತಿ. ಆದರೆ ಅವರು `ವಿಚಾರ ಮಾಡುವುದು, ಪ್ರಭುತ್ವದ ಕ್ರೌರ್ಯವನ್ನು ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂದು ಸ್ವಯಂ ಫಲಕ ಹಾಕಿಕೊಂಡಿದ್ದರು. ಅವರು ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಯೋಚಿಸುತ್ತಿದ್ದರು.

ಭಾರತೀಯ ಜಾನಪದ ಪುರಾಣಗಳನ್ನು ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪಾಶ್ಚಿಮಾತ್ಯರೇ. ಅವರ ಹಸ್ತಾಕ್ಷರ ಬಲ್ಲವರಿಗೆ ಆ ಫಲಕದ ಬರೆಹ ಬರೆದಿದ್ದು ಅವರೇ ಎಂದು ಗೊತ್ತಿತ್ತು. ಲೋಕದ ಸುದ್ದಿಯಾಗಬೇಕೆಂದೇ ಫಲಕವನ್ನು ಇಂಗ್ಲೀಶಿನಲ್ಲಿ ಬರೆಯಲಾಗಿತ್ತು. ಅದು ಆಕ್ಸ್‍ಫರ್ಡಿನ ಪದವೀಧರರಾದ ಅವರ ವ್ಯಕ್ತಿತ್ವದ ಹರಹಿನ ಸಂಕೇತವಾಗಿತ್ತು. ಆದರೆ ತಾನೊಬ್ಬ ಕನ್ನಡದ ಲೇಖಕ ಎಂಬುದನ್ನು ಮರೆಯದಂತೆ `ನಾನು ಕೂಡ’ ಎಂಬುದನ್ನು ಕನ್ನಡದಲ್ಲಿ ಅಲ್ಲಿ ಬರೆಯಲಾಗಿತ್ತು. ಉಸಿರುಗಟ್ಟಿಸುವ ಸನ್ನಿವೇಶದಲ್ಲಿ ಬದುಕುತ್ತಿರುವವರ ಕಷ್ಟಗಳಿಗೆ ಮಿಡಿಯುವಂತೆ ಅವರು ಕೈಯಲ್ಲಿ ಹಿಡಿದಿದ್ದ ಆಕ್ಸಿಜನ್ ಸಿಲಿಂಡರಿತ್ತು. ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ. ಸಮಾಜದ ಆರೋಗ್ಯಕ್ಕಾಗಿ ತನ್ನ ಅನಾರೋಗ್ಯದಲ್ಲೂ ಒಬ್ಬ ಲೇಖಕ ಇಷ್ಟೊಂದು ಕಷ್ಟ ತೆಗೆದುಕೊಂಡಿದ್ದು ನನಗೆ ತಿಳಿದಿಲ್ಲ. ಕಾರ್ನಾಡರು ಒಬ್ಬ ನಟರಾಗಿದ್ದರು. ಆದರೆ ತಾತ್ವಿಕ ಪ್ರತಿರೋಧ ಮಾಡುವಾಗ ಅವರ ನಡೆನುಡಿಯಲ್ಲಿ ನಟನೆಯಿರಲಿಲ್ಲ. ದ್ವಂದ್ವವಿರಲಿಲ್ಲ. ಅವರಷ್ಟು ಅಂತರಂಗಕ್ಕೆ ಸರಿಯೆನಿಸಿದ್ದನ್ನು ಪರಿಣಾಮ ಲೆಕ್ಕಿಸದೆ ಹೇಳುವ ಮಾಡುವ ಧೀರಗಂಭೀರ ಕನ್ನಡ ಲೇಖಕರು ಕಡಿಮೆ. ಇದು ಅವರ ಶವಸಂಸ್ಕಾರದ ಘಟನೆಯಲ್ಲೂ ವ್ಯಕ್ತವಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...