Homeಕರ್ನಾಟಕಹೆಚ್ಚುತ್ತಿರುವ ದಲಿತರ ಮೇಲಿನ ಹಲ್ಲೆ: ಕೆ.ಆರ್‌.ಪೇಟೆಯಲ್ಲಿ ಪ್ರತಿಬಟನೆ

ಹೆಚ್ಚುತ್ತಿರುವ ದಲಿತರ ಮೇಲಿನ ಹಲ್ಲೆ: ಕೆ.ಆರ್‌.ಪೇಟೆಯಲ್ಲಿ ಪ್ರತಿಬಟನೆ

ಸೂಚನೆ: ‘ಎಲ್ಲರ ಕನ್ನಡ’ ಚರ್‍ಚೆಯ ಬಾಗವಾಗಿ ಮಾಡಲಾದ ಪ್ರಾಯೋಗಿಕ ವರದಿ ಇದಾಗಿದ್ದು, ಮಹಾಪ್ರಾಣ ಬಳಕೆ ಕಡಿತಗೊಳಿಸಲಾಗಿದೆ.

- Advertisement -
- Advertisement -

(ಈ ವರದಿಯಲ್ಲಿ ಮಹಾಪ್ರಾಣ ಬಳಕೆ ಕಡಿತಗೊಳಿಸಲಾಗಿದೆ)

ಮಂಡ್ಯ ಜಿಲ್ಲೆಯಲ್ಲಿ ದಲಿತರ ಮೇಲೆ ಹೆಚ್ಚಾಗುತ್ತಿರುವ ಹಲ್ಲೆಗಳನ್ನು ಕಂಡಿಸಿ, ಸವರ್‍ಣೀಯರ ದಬ್ಬಾಳಿಕೆಯನ್ನು ತಡೆಯಬೇಕೆಂದು ಆಗ್ರಹಿಸಿ ದಲಿತ ಮುಖಂಡರು ಕೆ.ಆರ್‌.ಪೇಟೆಯಲ್ಲಿ ಪ್ರತಿಬಟನೆ ನಡೆಸಿದ್ದಾರೆ.

ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳ ಅವದಿಯಲ್ಲಿ ಎರಡು ಬಾರಿ ದಲಿತರ ಮೇಲೆ ಹಲ್ಲೆ ಪ್ರಕರಣಗಳು ನಡೆದಿವೆ. ಹರಿಹರಪುರ ಗ್ರಾಮದಲ್ಲಿ ದಲಿತರ ಮೇಲೆ ಸಾಮೂಹಿಕವಾಗಿ ಹಲ್ಲೆ ಮಾಡಲಾಗಿತ್ತು. ದೇವಾಲಯ ಪ್ರವೇಶಿಸಿದ್ದರಿಂದ ಸವರ್‍ಣೀಯರು ಹಲ್ಲೆ ನಡೆಸಿರುವುದಾಗಿ 27 ಜನರ ಮೇಲೆ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಶೀಳನೆರೆ ಹೋಬಳಿ ಬಳ್ಳೇಕೆರೆ ಗ್ರಾಮದಲ್ಲಿ ಹಲ್ಲೆ ನಡೆದಿದ್ದು ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಅಲ್ಲದೆ ದಲಿತರಿಗೆ ಕ್ಶೌರ ಮಾಡುವುದಿಲ್ಲ ಎಂದು ಸವಿತಾ ಸಮಾಜದ ವ್ಯಕ್ತಿಯೊಬ್ಬರು ಹೇಳುತ್ತಿರುವ ವಿಡಿಯೊ ಇತ್ತೀಚೆಗೆ ವೈರಲ್‌ ಆಗಿತ್ತು.

ಪದೇ ಪದೇ ಇಂತಹ ಪ್ರಕರಣಗಳು ಜರುಗುತ್ತಿರುತ್ತಿರುವುದನ್ನು ದಲಿತ ಮುಕಂಡರು ಖಂಡಿಸಿದ್ದು, ಕೆ.ಆರ್‌.ಪೇಟೆ ತಾಲ್ಲೂಕಿನ ಪ್ರವಾಸಿ ಮಂದಿರ ಬಳಿ ಸೇರಿ ಪ್ರತಿಬಟನೆ ನಡೆಸಿದ್ದಾರೆ.

ರಾಜ್ಯ ಮಾದಿಗ ಸಮಾಜ ಸಂಗಟನೆಯ ಕೆ.ಆರ್‌.ಪೇಟೆ ತಾಲೂಕು ಅದ್ಯಕ್ಷರಾದ ಹೊಸಹೊಳಲು ದೇವರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿದ್ದರೂ ಪೋಲೀಸ್ ಇಲಾಖೆ, ತಾಲೂಕು ಆಡಳಿತ ದಲಿತರಿಗೆ ರಕ್ಶಣೆ ಕೊಡುವುದರಲ್ಲಿ ವಿಪಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನಾದ್ಯಂತ ಕೆಲವು ಹಳ್ಳಿಗಳಲ್ಲಿ ದಲಿತರ ಮೇಲೆ ದಾಳಿ ನಡೆಯುತ್ತಿವೆ. ಆದರೆ ಜಿಲ್ಲಾಡಳಿತ, ತಾಲೂಕು ಆಡಳಿತ ಕೈಕಟ್ಟಿ ಕೂತಿವೆ. ಮುಂದಿನ ದಿನಗಳಲ್ಲಿ ಅದಿಕಾರಿಗಳ ನಿರ್ಲಕ್ಶ್ಯ ಮುಂದುವರಿದರೆ ತಾಲ್ಲೂಕಿನ ಎಲ್ಲಾ ದಲಿತ ಸಂಗಟನೆಗಳ ಜೊತೆ ಸೇರಿ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಚಲವಾದಿ ಮಹಾಸಬಾದ ಜಿಲ್ಲಾದ್ಯಕ್ಷರಾದ ಮಾಂಬಳ್ಳಿ ಜಯರಾಂ ಮಾತನಾಡಿ, “ತಾಲ್ಲೂಕಿನ ಶೀಳನೆರೆ ಹೋಬಳಿ ಬಳ್ಳೇಕೆರೆ ಗ್ರಾಮದ ದಲಿತ ಮಹಿಳೆಯ ಮೇಲೆ ಸವರ್‍ಣೀಯ ಪುರುಷನು ತನ್ನ ಪತ್ನಿಯ ಜೊತೆ ಸೇರಿ ಕ್ಶುಲ್ಲಕ ಕಾರಣಕ್ಕಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ತಪ್ಪಿತಸ್ತರನ್ನು ಕೂಡಲೇ ಬಂದಿಸಬೇಕು. ಅಲ್ಲದೇ ಹಲ್ಲೆಗೊಳಗಾದ ಕುಟುಂಬಕ್ಕೆ ಪೋಲೀಸ್ ಅದಿಕಾರಿಗಳು ರಕ್ಷಣೆ ನೀಡಬೇಕು” ಎಂದು ಆಗ್ರಹಿಸಿದರು.

ಕೆ.ಆರ್‌.ಪೇಟೆ ತಾಲ್ಲೂಕು ಡಾ.ಜಗಜೀವನರಾಂ ಸಂಗಟನೆಗಳ ಒಕ್ಕೂಟದ ಅದ್ಯಕ್ಷರಾದ ಹೊಸಹೊಳಲು ಪುಟ್ಟರಾಜು ಮಾತನಾಡಿ, “ಇಂದಿಗೂ ಕೆಲವು ಹಳ್ಳಿಗಳಲ್ಲಿ ಜಾತೀಯತೆ ಜೀವಂತವಾಗಿದೆ. ದಲಿತರನ್ನು ಕೀಳಾಗಿ ನೋಡುತ್ತಿದ್ದಾರೆ. ನಾವು ಸಹ ಮನುಷ್ಯರಲ್ಲವೇ?” ಎಂದು ಪ್ರಶ್ನಿಸಿದರು.

“ನಮಗೂ ಹೋರಾಟ ನಡೆಸುವ ಶಕ್ತಿ ಇದೆ. ಬಾಬಾ ಸಾಹೇಬ್ ಡಾ.ಬಿ.ಆರ್‌.ಅಂಬೇಡ್ಕರ್ ಅವರು ಬರೆದಿರುವ ಸಂವಿದಾನದ ಮೇಲೆ ಗೌರವವಿರುವುದರಿಂದ ನಾವು ಯಾರ ಮೇಲೂ ದಬ್ಬಾಳಿಕೆ ಮಾಡದೇ ನ್ಯಾಯಯುತವಾಗಿ ನಡೆದುಕೊಳ್ಳುತ್ತಿದ್ದೇವೆ. ಆದ್ದರಿಂದ ಒಂದು ತಿಂಗಳಿಗೊಮ್ಮೆಯಾದರೂ ದಲಿತರ ಕುಂದುಕೊರತೆಗಳನ್ನು ನಿವಾರಿಸಲು ಪೊಲೀಸ್‌ ಇಲಾಖೆಯ ಹಿರಿಯ ಅದಿಕಾರಿಗಳು ಸಬೆ ನಡೆಸಿ ದಲಿತರಿಗೆ ನ್ಯಾಯ ಕೊಡಿಸಬೇಕು” ಎಂದು ಆಗ್ರಹಿಸಿದರು.

ಇದೇ ಸಂದರ್ಬದಲ್ಲಿ ಕೆ.ಆರ್‌.ಪೇಟೆ ತಾಲೂಕು ದಲಿತ ಸಂಗಟನೆಯ ಸದಸ್ಯರು, ತಾಲೂಕು ಆಡಳಿತ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಬದಲ್ಲಿ ತಾ.ಪಂ.ಮಾಜಿ ಅದ್ಯಕ್ಷರಾದ ಸೋಮಯ್ಯ, ಕೂಡಲಕುಪ್ಪೆ ರಾಜಯ್ಯ, ಕಜಾಂಚಿ ಪುಟ್ಟರಾಜು, ತಾ.ಸಂ. ಕಾರ್ಯದರ್ಶಿ ಮಹಾದೇವ, ಚಲುವರಾಜು, ಉಪಾದ್ಯಕ್ಷರಾದ ಮೋಹನ್, ಆಲೇನಹಳ್ಳಿ ಮಹದೇವ, ಚಟ್ಟಂಗೆರೆ ನಿಂಗರಾಜು, ಸೋಮೇಶ್, ಗ್ರಾ.ಪಂ. ಸದಸ್ಯರಾದ ಶಿವು, ಪಿ.ಬಿ.ಮಂಚನಹಳ್ಳಿ ಮಹೇಶ್, ರಾಯಸಮುದ್ರ ವೆಂಕಟೇಶ್‌ ಸೇರಿದಂತೆ ತಾಲೂಕು ದಲಿತ ಸಂಗಟನೆಯ ನೂರಾರು ಸದಸ್ಯರು ಪ್ರತಿಬಟನೆಯಲ್ಲಿ ಪಾಲ್ಗೊಂಡಿದ್ದರು.


ಇದನ್ನೂ ಓದಿರಿ: ಜಮ್ಮು-ಕಾಶ್ಮೀರ: ಪತ್ರಕರ್‍ತ ಗುಲ್‌ ಬಿಡುಗಡೆಗೆ ಪ್ರೆಸ್‌ ಕ್ಲಬ್‌ ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಎಲ್ಲರ ಕನ್ನಡದಲ್ಲಿ, ಮೊದಲ ಹಂತದಲ್ಲಿ,
    ೧) ಋ,ಐ,ಔ,ಃಃ
    ೨) ಮಹಾಪ್ರಾಣಗಳು
    ೩) ಙ,ಞ,ಷ
    ಬಳಸಬಾರದು

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...