Homeಮುಖಪುಟದೆಹಲಿ: ಕೊರೊನಾ ಸೋಂಕಿತರಿಗಾಗಿ ಆಕ್ಸಿಜನ್ ಲಂಗರ್‌ ಆರಂಭಿಸಿದ ಗುರುದ್ವಾರ

ದೆಹಲಿ: ಕೊರೊನಾ ಸೋಂಕಿತರಿಗಾಗಿ ಆಕ್ಸಿಜನ್ ಲಂಗರ್‌ ಆರಂಭಿಸಿದ ಗುರುದ್ವಾರ

- Advertisement -
- Advertisement -

ಕೊರೊನಾ ಸೋಂಕಿತರಿಗಾಗಿ ಮಸೀದಿಗಳು, ಮಠಗಳು ಆಸ್ಪತ್ರೆಗಳಾಗಿ ಬದಲಾಗಿವೆ. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಗುರುದ್ವಾರಗಳು ಆಮ್ಲಜನಕ ಬಿಕ್ಕಟಿನ ಹಿನ್ನೆಲೆಯಲ್ಲಿ ಆಕ್ಸಿಜನ್ ಒದಗಿಸಲು ದೆಹಲಿಯ ಗಾಜಿಯಾಬಾದ್ ಬಳಿ ಆಕ್ಸಿಜನ್ ಲಂಗರ್ ಆರಂಭಿಸಿವೆ.

ಕೊರೊನಾ ವೈರಸ್ ಸೋಂಕಿತರು ನವದೆಹಲಿ ಆಸ್ಪತ್ರೆಯಲ್ಲಿ ತುರ್ತು ಆರೈಕೆಯಲ್ಲಿರಬೇಕಾದವರೂ ಈಗ ಸಿಖ್ ಗುರುದ್ವಾರದ ಹೊರಗೆ ಕಾರಿನ ಹಿಂಬದಿಯ ಸೀಟಿನಲ್ಲಿ, ಬೆಂಚಿನ ಮೇಲೆ, ಮರದ ನೆರಳಿನಲ್ಲಿ ಆಕ್ಸಿಜನ್ ಮಾಸ್ಕ್ ತೊಟ್ಟು ಕುಳಿತಿದ್ದಾರೆ.

ನವದೆಹಲಿಯ ಹೊರವಲಯದಲ್ಲಿರುವ ಗಾಜಿಯಾಬಾದ್ ನಗರದ ಸಿಖ್ ಗುರುದ್ವಾರ (ದೇವಸ್ಥಾನ) ದಲ್ಲಿ, ಸಿಖ್ ನೆರವು ಗುಂಪು ಖಾಲ್ಸಾ ಹೆಲ್ಪ್ ಇಂಟರ್ನ್ಯಾಷನಲ್ ಸಂಸ್ಥೆ, ತುರ್ತು ಅಗತ್ಯವಿರುವವರಿಗೆ ಸಹಾಯ ಮಾಡಲು  ಕಡಿಮೆ ಪ್ರಮಾಣದಲ್ಲಿ ಆಮ್ಲಜನಕವನ್ನು ಖರೀದಿಸಿ, ನೀಡುತ್ತಿದೆ.

ಇದನ್ನೂ ಓದಿ: ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಉಡುಪಿ ಜಿಲ್ಲಾಧಿಕಾರಿ? ಅವರು ಹೇಳಿದ್ದೇನು?

ಕೊರೊನಾ ರೋಗಿಗಳು ಗುರುದ್ವಾರದ ಹೊರಗೆ ಕಾರುಗಳು, ವ್ಯಾನ್‌ಗಳು ಮತ್ತು ರಿಕ್ಷಾಗಳಲ್ಲಿ ಬೀದಿಯಲ್ಲಿಯೇ ನಿಲ್ಲಿಸಿಕೊಂಡು ಆಮ್ಲಜನಕದ ಮಾಸ್ಕ್ ಹಾಕಿಕೊಂಡು ಉಸಿರಾಡಲು ಹೋರಾಟ ನಡೆಸುತ್ತಿದ್ದಾರೆ. ಇತ್ತ ಸ್ವಯಂಸೇವಕರು ಆಮ್ಲಜನಕದ ಸಿಲಿಂಡರ್‌ಗಳನ್ನು ಹಿಡಿದಿದುಕೊಂಡು ಓಡಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

“ನನಗೆ ಬೇರೆಲ್ಲಿಯೂ ಸಹಾಯ ಸಿಗಲಿಲ್ಲ ಅದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ” ಎಂದು ಕಾರಿನಲ್ಲಿ ತನ್ನ ತಾಯಿ ದೇವಿಯವರ ಪಕ್ಕದಲ್ಲಿ ಕುಳಿತಿದ್ದ ಮನೋಜ್ ಕುಮಾರ್ ಹೇಳುತ್ತಾರೆ. ನಾನು ಆಕ್ಸಿಜನ್‌ಗಾಗಿ ಎಲ್ಲಾ ಕಡೆ ವಿಚಾರಿಸಿದೆ. ಆದರ ಎಲ್ಲೂ ಸಿಗಲಿಲ್ಲ. ತಕ್ಷಣ ನಾನು ಗುರುದ್ವಾರಗೆ ಕರೆ ಮಾಡಿದೆ. ಅವರು ತಕ್ಷಣ ಇಲ್ಲಿಗೆ ಬೇಗ  ತಲುಪಲು ತಿಳಿಸಿದರು” ಎಂದು ಕುಮಾರ್ ಹೇಳಿದ್ದಾರೆ.

ಗುರುದ್ವಾರದ ಅಧ್ಯಕ್ಷ ಮತ್ತು ಖಲ್ಸಾ ಹೆಲ್ಪ್ ಇಂಟರ್‌ನ್ಯಾಷನಲ್‌ನ ಸಂಸ್ಥಾಪಕ ರಮ್ಮಿ, ನವದೆಹಲಿಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಮೂರು ದಿನಗಳ ಹಿಂದೆ ಆಕ್ಸಿಜನ್ ಲಂಗರ್‌ ಸೇವೆಯನ್ನು ನೀಡಲು ಪ್ರಾರಂಭಿಸಿದೆ. ಜನರು ಕೊರೊನಾದಿಂದ ಬೀದಿಗಳಲ್ಲಿ ಸಾಯುತ್ತಿದ್ದಾರೆ. ಅದಕ್ಕಾಗಿಯೇ ನಾವು ಇದನ್ನು ಪ್ರಾರಂಭಿಸಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜಕೀಯ ಕೆಲಸ ಬಿಟ್ಟು, ಜನರ ಸಹಾಯಕ್ಕೆ ನಿಲ್ಲುವಂತೆ ಕಾರ್ಯಕರ್ತರಲ್ಲಿ ರಾಹುಲ್ ಗಾಂಧಿ ಮನವಿ

ಖಲ್ಸಾ ಹೆಲ್ಪ್ ಇಂಟರ್ನ್ಯಾಷನಲ್ ಗ್ರೂಪ್ ಇಲ್ಲಿಯವರೆಗೆ ಸುಮಾರು 700 ರೋಗಿಗಳನ್ನು ಉಳಿಸಿದೆ ಎಂದು ರಮ್ಮಿ ಅಂದಾಜು ಮಾಡಿದ್ದಾರೆ.


ಇದನ್ನೂ ಓದಿ: ಆಕ್ಸಿಜನ್ ಬಿಕ್ಕಟ್ಟಿನಲ್ಲಿ ಹಲವು ರಾಜ್ಯಗಳು, ನಮ್ಮಲ್ಲಿ ಕೊರತೆಯಿಲ್ಲ ಎಂದ ಉತ್ತರಪ್ರದೇಶ ಸಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...