Homeಅಂತರಾಷ್ಟ್ರೀಯಹ್ಯಾಪಿ ಬಾಟಮ್ ಕ್ವಾರ್ಟರ್ ಎಂದರೇನು ಗೊತ್ತೆ?

ಹ್ಯಾಪಿ ಬಾಟಮ್ ಕ್ವಾರ್ಟರ್ ಎಂದರೇನು ಗೊತ್ತೆ?

ಅಷ್ಟೇನೂ ಬುದ್ಧಿವಂತನಲ್ಲ ಎಂದು ಎಲ್ಲರಿಗೂ ಗೊತ್ತಿದ್ದರೂ ಭಾರತದ ರಾಜಕಾರಣಿಯ ಮಗನಿಗೆ ಕೇಂಬ್ರಿಡ್ಜ್ ನಲ್ಲಿ ಪ್ರವೇಶ ದೊರೆತದ್ದು ಹೇಗೆ?

- Advertisement -
- Advertisement -

| ಜಿ.ಆರ್ ವಿದ್ಯಾರಣ್ಯ |

ಇದೆಂತಹ ಕ್ವಾರ್ಟರ್ ಅಥವಾ ಎಣ್ಣೆಯ ಹೊಸ ಹೆಸರೇ ಎಂದು ಯೋಚಿಸಬೇಡಿ. ಇದು ಜಗದ್ವಿಖ್ಯಾತ ವಿದ್ಯಾಸಂಸ್ಥೆಗಳ ಜಾಣತನದ ಬಗ್ಗೆ ಒಂದು ಉದಾಹರಣೆ.

ನಮಗೆಲ್ಲರಿಗೂ ನಮ್ಮ ಮಕ್ಕಳು ಒಳ್ಳೆಯ ಶಾಲಾ-ಕಾಲೇಜುಗಳಲ್ಲಿ ಓದಿ ತುಂಬಾ ವಿದ್ಯಾವಂತರಾಗಲಿ, ನಮ್ಮ ಕುಟುಂಬಕ್ಕೆ, ನಾಡಿಗೆ ಒಳ್ಳೆಯ ಹೆಸರು ತರಬೇಕು ಎಂಬ ಆಸೆಯಂತೂ ಇರುತ್ತದೆ. ಸಾಮಾನ್ಯವಾಗಿ ನಗರ ಪ್ರದೇಶದ ಮಧ್ಯಮ ವರ್ಗದ ಪೋಷಕರ ನಿರ್ಧಾರ ಆ ಶಾಲೆಯ ವರ್ಣರಂಜಿತ ಜಾಹಿರಾತು, ಕಟ್ಟಡ ವಿನ್ಯಾಸ, ಕಲಿಕಾ (ಭಾಷಾ) ಮಾಧ್ಯಮ, ಪ್ರವೇಶ ಎಷ್ಟು ಸುಲಭ/ಕಷ್ಟ, ಪ್ರವೇಶಕ್ಕಾಗಿ ಕಾಯುತ್ತಿರುವವರ ಪಟ್ಟಿ ಎಷ್ಟು ಉದ್ದ, ಪ್ರವೇಶ ಮತ್ತು ಬೋಧನಾ ಶುಲ್ಕ ಎಷ್ಟು ದುಬಾರಿ, ನೆರೆ-ಹೊರೆಯವರ ಅಭಿಪ್ರಾಯ, ಮನೆಯಿಂದ ಶಾಲೆ/ಕಲೇಜು ಎಷ್ಟು ಹತ್ತಿರ/ದೂರ ಅಥವಾ ಸಾರಿಗೆ ಸೌಲಭ್ಯವಿದೆಯೇ, ಮುಂತಾದ ವಿಷಯಗಳ ಮೇಲೆ ಅವಲಂಬಿಸಿರುತ್ತವೆ.

ಶಾಲೆಗೆ ಬೇಕಾದ ಎಲ್ಲಾ ಸರಕಾರಿ ಪರವಾನಗಿ/ಮಾನ್ಯತೆ ದೊರೆತಿದೆಯೋ ಇಲ್ಲವೋ ಎಂಬ ಮಾಹಿತಿ, ಸುಲಭವಾಗಿ ತಿಳಿಯದಿದ್ದಲ್ಲಿ, ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವ ಪ್ರಯತ್ನ ಪೋಷಕರು ಮಾಡುವುದು ವಿರಳ. ತಿಳಿಯದ ಯಾವುದೋ ಕಾರಣಕ್ಕಾಗಿ ಶಾಲೆ ಮಧ್ಯದಲ್ಲೇ ಮುಚ್ಚಲ್ಪಡುತ್ತದೋ ಎನೋ ಎಂಬ ಬಗ್ಗೆ ಅವರು ಆತಂಕಕ್ಕೆ ಮೊದಲೇ ಈಡಾಗುವುದಿಲ್ಲ. ಸಾಮಾನ್ಯ ಮಟ್ಟದ  ಶಾಲೆ/ಕಾಲೇಜಿನಲ್ಲಿ ಕಲಿತು ನಾವೆಲ್ಲರೂ ವಿದ್ಯಾವಂತರಾಗಿ ಸರಿಯಾದ ಜೀವನ ನಡೆಸುತ್ತಿದ್ದರೂ ಸಹ, ನಾವು ಕಲಿತ ಸಂಸ್ಥೆಯಲ್ಲೇ ನಮ್ಮ ಮಕ್ಕಳೂ ಕಲಿಯಲಿ ಎಂದು ಯೋಚಿಸುವವರು ಸಹ ತೀರಾ ಅಪರೂಪ. ತಾವು ಕಲಿತ ಶಾಲೆಗಿಂತ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಮಕ್ಕಳು ಕಲಿಯಲಿ ಎಂಬುದು ಪೋಷಕರ ಆಶಯ.

ಓರ್ವ ವಿದ್ಯಾ ಸಂಸ್ಥೆಯ ಖ್ಯಾತಿ, ಅದರ ಮೇಲೆ ಗೌರವ ನಿಜವಾಗಿ ಹೆಚ್ಚುವುದು ಆ ಸಂಸ್ಥೆಯು ನಡೆಸುತ್ತಿರುವ ಶಾಲಾ-ಕಾಲೇಜುಗಳಲ್ಲಿ ಓದು ಮುಗಿಸಿದ ಎಷ್ಟು ವಿದ್ಯಾರ್ಥಿಗಳು ಮುಂದೆ, ಬೇರೆ ಬೇರೆ ಕ್ಷೇತ್ರದಲ್ಲಿ, ಮಹತ್ತರ ಸಾಧನೆ ಮಾಡಿದ್ದಾರೆ ಅಥವಾ ಖ್ಯಾತಿವಂತ ವ್ಯಕ್ತಿಗಳಾಗಿದ್ದಾರೆ ಎಂಬುದನ್ನು ಅವಲಂಬಿಸಿರುತ್ತದೆ. ಅದರಲ್ಲಿ ಓದಿದ ಎಲ್ಲಾ ವಿದ್ಯಾರ್ಥಿಗಳು ಮುಂದೆ ಪ್ರಸಿದ್ಧಿವಂತರಾಗದೇ ಇರಬಹುದು ಅದರೆ ಅವರಲ್ಲಿ ಹತ್ತಾರು ಜನರಾದರೂ ಖ್ಯಾತಿವಂತರಾದಲ್ಲಿ, ಮಿಕ್ಕವರು, ಕೇವಲ ಆ ಸಂಸ್ಥೆಯಲ್ಲಿ ಓದಿದ ಮಾತ್ರಕ್ಕೆ, ಜಾಣರೆಂದು ಪರಿಗಣಿಸಲ್ಪಡುವ ಸಾಧ್ಯತೆಯಂತೂ ಇರುತ್ತದೆ, ಹೂವಿನ ಜೊತೆಗೆ ನಾರೂ ಸ್ವರ್ಗಕ್ಕೆ ಹೋದಂತೆ.

ಯಾವುದೇ ಒಂದು ಖ್ಯಾತಿವಂತ ವಿದ್ಯಾಸಂಸ್ಥೆಯು ಕನಸಿನ ಕೂಸಾಗಿ ಪ್ರಾರಂಭವಾಗಿರದೆ ಇದ್ದಾಗ, ಹೆಚ್ಚಿನ ಶಾಲೆ/ಕಾಲೇಜುಗಳೂ ಸಹ ಸಾಧಾರಣ ಮಕ್ಕಳಂತೆಯೇ, ಸಣ್ಣದಾಗಿ ಹುಟ್ಟಿ-ಬೆಳೆದು ದೊಡ್ಡದಾಗುತ್ತವೆ. ಆದ್ದರಿಂದ ಅದರ ಖ್ಯಾತಿ ಮಂದಗತಿಯಲ್ಲಿಯೇ ಬೆಳೆಯಬೇಕಾಗುತ್ತದೆ. ಶಾಲೆ/ಕಾಲೇಜು ಬೆಳೆದಂತೆ ಅದರಲ್ಲಿ ಓದುವ ಮಕ್ಕಳ ಸಂಖ್ಯೆಯೂ ಬೆಳೆಯುತ್ತದೆ, ಮುಂದೆ ಈ ಮಕ್ಕಳು ಶೈಕ್ಷಣಿಕ/ಕ್ರೀಡೆ/ಇತರ ಕ್ಷೇತ್ರದಲ್ಲಿ ಮಾಡುವ ಒಳ್ಳೆಯ ಸಾಧನೆಗಳಿಂದ ಅವರೂ ಖ್ಯಾತಿ ಪಡೆದು, ತಮ್ಮ ಕುಟುಂಬಕ್ಕೂ, ವಿದ್ಯಾಸಂಸ್ಥೆಗೂ ಗೌರವ ತರುತ್ತಾರೆ. ಸಂಸ್ಥೆಯಲ್ಲಿ ಓದು ಮುಗಿಸಿದ ನಂತರ ಅವರು ಅದರ ಮಾಜಿ ವಿದ್ಯಾರ್ಥಿ (ಅಲುಮ್ನೈ) ಆಗಿ ಮುಂದೆಯೂ ಸಂಸ್ಥೆಗೆ ಒಳ್ಳೆಯ ಹೆಸರು ತರಬಹುದು, ಆದರೆ ಸಂಸ್ಥೆಗೆ ಇದರ ಸುನಿಶ್ಚತತೆ ಇರುವುದಿಲ್ಲ. ಖ್ಯಾತಿ ಸುನಿಶ್ಚತತೆ ಮಾಡಿಕೊಳ್ಳಲು ಸಾಧ್ಯವೇ ಎಂಬುದು ಈ ಲೇಖನದ ಗುರಿಯಾದರೂ ಸಹ ಇಂದಿನ ಶಿಕ್ಷಣ ವ್ಯವಸ್ಥೆಯ ವಿಡಂಬನೆ ಈ ಲೇಖನ ಎಂದು ನಿಮಗೆ ಅನಿಸಬಹುದು.

ಹಾರ್ವರ್ಡ್, ಯೇಲ್, ಕೇಂಬ್ರಿಡ್ಜ್  ಮುಂತಾದ ವಿಶ್ವವಿಖ್ಯಾತ ವಿದ್ಯಾಸಂಸ್ಥೆಗಳು ತಮ್ಮ ಖ್ಯಾತಿ ನಿರಂತವಾಗಿರಲು ಏನೆಲ್ಲಾ ಮಾಡುತ್ತವೆ, ನೋಡೋಣ. ಇದನ್ನು “ಹ್ಯಾಪಿ ಬಾಟಮ್ ಕ್ವಾರ್ಟರ್” (ಎಚ್.ಬಿ.ಕ್ಯೂ.) ಎಂದುಕರೆಯುತ್ತಾರೆ. ಹಾರ್ವರ್ಡ್ ಇದನ್ನು ಪ್ರಾರಂಬಿಸಿತಾದರೂ ಶೀಘ್ರದಲ್ಲೇ ಇದು ಪ್ರಿನ್ಸ್ಟನ್, ಸ್ಟ್ಯಾನ್ಫರ್ಡ್, ಯೇಲ್, ಮುಂತಾದ ಸಂಸ್ಥೆಗಳಿಗೂ ಪಸರಿಸಿತು. ನಮ್ಮ ದೇಶದ ಐಐಟಿ ಅಥವಾ ಅಮೇರಿಕದ ಕ್ಯಾಲೊಫೋರ್ನಿಯದಲ್ಲಿರುವ ಕ್ಯಾಲ್ಟೆಕ್ವಿದ್ಯಾ ಸಂಸ್ಥೆಯ ಪ್ರವೇಶ ನೀತಿಗೆ ತದ್ವಿರುದ್ಧವಾಗಿ, ಮೇಧಾವಿ ಮಕ್ಕಳನ್ನು ತಮ್ಮಲ್ಲಿಗೆ ಸೇರಿಸಿಕೊಳ್ಳುವ ಬದಲಾಗಿ, ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿವಂತರಾಗುವ ಹೆಚ್ಚು ಸಾಧ್ಯತೆಯುಳ್ಳ ಮಕ್ಕಳಿಗೆ ಮುಖನೋಡಿ ಮಣೆ ಹಾಕುತ್ತಾರೆ. ಆದರೂ ಸಹ ಯಾವುದೇ ಕಾರಣಕ್ಕೂ ತನ್ನ ಖ್ಯಾತಿಗೆ ಚ್ಯುತಿ ಬರದಂತೆಯೂ ಬೇಕಾದ ಜಾಗೃತೆಯನ್ನೂ ವಹಿಸುತ್ತಾರೆ.

ಈ ನೀತಿಯನ್ವಯ ಸಂಸ್ಥೆಯ 25% ಸೀಟುಗಳನ್ನು ಕಾಯ್ದಿರಿಸಿ, ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಮಕ್ಕಳು, ಅಂದರೆ ದೇಶದ ಅಧ್ಯಕ್ಷರು, ಪ್ರಧಾನಮಂತ್ರಿಗಳು, ರಾಜಕಾರಣಿಗಳು, ಆಗರ್ಭ ಶ್ರೀಮಂತರು, ದೊಡ್ಡ ಉದ್ಯೋಗಪತಿಗಳು, ಸಿನಿಮಾನಟ-ನಟಿಯರು, ಕ್ರೀಡಾಪಟುಗಳು, ನೋಬೆಲ್ ಮುಂತಾದ ಪುರಸ್ಕಾರ ವಿಜೇತರು, ಯಾವುದೇ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದವರು, ಮುಂತಾದವರ ಮಕ್ಕಳಿಗೆ ಪ್ರವೇಶ ನೀಡುತ್ತಾರೆ. ಇಂತಹ ಮಕ್ಕಳ ವಿದ್ಯಾಭ್ಯಾಸದ ಖರ್ಚು ಅವರ ಪೋಷಕರಿಗೇನೂ ಭಾರವಲ್ಲ, ಬದಲಾಗಿ ಕೇಳಿದಷ್ಟು ಡೊನೇಷನ್ ಕೊಡಲೂ ಸಿಧ್ಧರಿರುತ್ತಾರಷ್ಟೇ ಅಲ್ಲ, ಅದರ ಬಗ್ಗೆ ಯಾವಾಗಲೂ ತುಟಿಪಿಟಕ್ ಎನ್ನುವುದಿಲ್ಲ. ಇಂತಹವರ ಮಕ್ಕಳು ಮುಂದೆ ಖ್ಯಾತಿವಂತರಾಗುವ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ ಮತ್ತು ಅವರು ನಮ್ಮ ಸಂಸ್ಥೆಯ ಮಾಜಿ ವಿದ್ಯಾರ್ಥಿ ಎಂದು ವಿದ್ಯಾಸಂಸ್ಥೆಯೂ ಹೆಮ್ಮೆಯಿಂದ ಹೇಳಿಕೊಳ್ಳಲು ಮುಂದಾಗಿರುತಾರೆ. ನೋಬೆಲ್  ಮುಂತಾದ ಪುರಸ್ಕಾರ ವಿಜೇತರ ಮತ್ತು ವಿವಿಧ ಕ್ಷೇತ್ರದ ಪರಿಣಿತರ ಮಕ್ಕಳು ತಮ್ಮ ಆಯ್ದ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೆ ಸಿದ್ಧರಾಗಿಯೇ ಇರುತ್ತಾರೆ ಹಾಗೂ ಹಣದ ದಾಹ ಇರುವವರು ಹೇಗೇ ಆದರೂ ಹಣಗಳಿಸಿಯೇ ತೀರುತ್ತಾರೆ.

ಉದ್ಯೋಗಪತಿಗಳ ಮಕ್ಕಳು ಮುಂದೆ ಅಷ್ಟೇ ಪ್ರಖ್ಯಾತರಾಗುತ್ತರೆ ಎನ್ನುವುದು ಕಷ್ಟ ಅಥವಾ ಹೊಸ ಉದ್ಯೋಗ ಪ್ರಾರಂಭಿಸಬಲ್ಲವರು ಅಷ್ಟೇ ಸಫಲರಾಗುತ್ತಾರೆ ಎನ್ನುವುದೂ ಸಹ ಅನಿಶ್ಚಿತ. ಮುಂದಿನ ಫೇಸ್ಪುಕ್ ನಂತಹ ಅತ್ಯಂತ ಸಫಲವಾದ ಸ್ಟಾರ್ಟ್ ಅಪ್ ಧೀರ ಹಾರ್ವರ್ಡಿನಿಂದಲೇ ಬರುತ್ತಾನೆ ಎಂಬುದು ಕೇವಲ ಊಹಾಪೋಹ. ಇದು ಅವರ ನೀತಿಯಲ್ಲಿನ ಒಂದು ಅಪಾಯ (ರಿಸ್ಕ್). ಬಹುರಾಷ್ಟ್ರೀಯ ಕಂಪನಿಯ ಮುಖ್ಯಾಧಿಕಾರಿಗಳು ಸಹ ಅಪಾಯಕರ. ಅದನ್ನು ವಿದ್ಯಾಸಂಸ್ಥೆ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಈಗಿರುವ ಕ್ರೀಡಾಪಟುಗಳು ಮತ್ತು ಸಿನಿಮಾ ನಟ-ನಟಿಯರು ಆಗಲೇ ಹೇರಳ ಹಣ ಸಂಪಾದನೆ ಮಾಡುತ್ತಿರುತ್ತಾರೆ ಮತ್ತು ಅವರಿಗೆ ಪತಿಷ್ಟಿತ ಕಾಲೇಜಿನ ಪದವಿ ಪಡೆಯಲೇಬೇಕು ಎಂಬ ಹುಮ್ಮಸ್ಸು ಅಥವಾ ಸಮಯ ಇರುವುದಿಲ್ಲ ಆದರೆ ತಮ್ಮ ಮಕ್ಕಳನ್ನು ಹಣ ತೆತ್ತು ಒಳ್ಳೆಯ ಕಡೆ ಸೇರಿಸಲು ಸಿದ್ಧರಿರುತ್ತಾರೆ.

ಒಳ್ಳೆಯ ಭವಿಷ್ಯವುಳ್ಳ ಕ್ರೀಡಾಪಟುಗಳನ್ನು ಹುಡುಕುವುದು ಅಂತಹ ಕಷ್ಟಕರವೇನಲ್ಲ, ಅವರಿಗೆ ಕರೆದು ಪ್ರವೇಶ ನೀಡುತ್ತಾರೆ. ಪ್ರಗತಿ ಹೊಂದಿದ ವಿದೇಶದ ರಾಜಕಾರಣಿಗಳ ಮಕ್ಕಳು ಮುಂದೆ ಅಧಿಕಾರಕ್ಕೇರುವ ಸಾಧ್ಯತೆ ಅಷ್ಟೇನೂ ಇಲ್ಲದಿದ್ದರೂ ಭಾರತದಂತಹ ಪ್ರಗತಿಶೀಲ ರಾಜ್ಯಗಳಲ್ಲಿ ಸಾಧ್ಯತೆ ಹೆಚ್ಚಿರುತ್ತದೆ.

ಇಂದಿನ ಜಗತ್ತಿನಲ್ಲಿ ವಂಶಪಾರಂಪರೆಯ ವಾದ ಹೇರಳವಾಗಿದೆ, ಎಲ್ಲಾ ದೇಶದಲ್ಲೂ ಅಡೆತಡೆಯಿಲ್ಲದೆ ನಡೆಯುತ್ತದೆ. ಅಷ್ಟೇನೂ ಬುದ್ಧಿವಂತನಲ್ಲ ಎಂದು ಎಲ್ಲರಿಗೂ ಗೊತ್ತಿದ್ದರೂ ಭಾರತದ ರಾಜಕಾರಣಿಯ ಮಗನಿಗೆ ಕೇಂಬ್ರಿಜ್ನಲ್ಲಿ ಪ್ರವೇಶ ದೊರೆತದ್ದು ಹೇಗೆ ಅಥವಾ ಭಾರತದ ಅತಿ ದೊಡ್ಡ ಉದ್ಯೋಗಪತಿಯ ಎರಡನೆಯ ಮಗ ಅಮೇರಿಕದ ಹಾಲಿ ಅಧ್ಯಕ್ಷ ಹಾಗೂ ಗೂಗಲ್ ಸಂಸ್ಥೆಯ ಹಾಲಿ ಮುಖ್ಯಸ್ಥ ಓದಿದ ವ್ಹಾರ್ಟನ್ ವಿದ್ಯಾಸಂಸ್ಥೆಗೆ ಪ್ರವೇಶ ಗಳಿಸಿದ್ದು ಹೇಗೆ, ಅವರ ಹಾಜರಾತಿ ಸಮರ್ಪಕವಾಗಿತ್ತೇ ಅಥವಾ ಅವರು ಒಳ್ಳೆಯ ಅಂಕ ಪಡೆದು ಉತ್ತೀರ್ಣರಾದರೇ ಎಂದು ಯಾರೂ ತಲೆ ಕೆಡೆಸಿಕೊಳ್ಳುವುದಿಲ್ಲ. ಇಂತಹವರಿಗೆ ಪ್ರವೇಶ ನೀಡುವುದು ಸಂಸ್ಥೆಗೆ ಬಹಳ ಸುಲಭವೂ, ಲಾಭದಾಯಕವೂ ಆಗಿರುತ್ತದೆ. ಭಾರತದಲ್ಲೂ ಡೊನೇಷನ್ ಸೀಟುಗಳು ಸಾರಾಸಗಟಾಗಿ ಮಾರಾಟವಾಗುತ್ತದೆ ಅಥವಾ ಪ್ರಭಾವಶಾಲೀ ವ್ಯಕ್ತಿಗಳಿಗೆ ಕೊಡಲಾಗುತ್ತದೆ. ಅದರಲ್ಲಿ ಸಂಸ್ಥೆಗೆ ಬರುವ ಹಣ ಅಥವಾ ಆಗುವ ಲಾಭವೇ ಮುಖ್ಯವಾಗಿರುತ್ತದೆ ವಿನಃ ಅಂತಹ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಅವರ ಮುಂದಿನ ಭವಿಷ್ಯ ಅಥವಾ ಸಂಸ್ಥೆಯ ಪ್ರಖ್ಯಾತಿ ಅಷ್ಟು ಮಹತ್ವದ್ದಾಗಿರುವುದಿಲ್ಲ.

ಈ “ಹ್ಯಾಪಿ ಬಾಟಮ್ ಕ್ವಾರ್ಟರ್” ನ ಮಧ್ಯದ ಪದ ಗಮನೀಯವಾದದ್ದು. ಈ “ಬಾಟಮ್” ಇರುವುದಕ್ಕೆ ಮುಖ್ಯ ಕಾರಣ ವಿದ್ಯಾಸಂಸ್ಥೆ ತನ್ನ “ಟಾಪ್” 75% ಸೀಟುಗಳನ್ನು ನಿಜವಾದ ಮೇಧಾವಿ ವಿದ್ಯಾರ್ಥಿಗಳಿಗೆ ನೀಡುತ್ತದೆ. ಮೇಧಾವಿ ವಿದ್ಯಾರ್ಥಿಗಳು ಸಂಸ್ಥೆಯಿಂದ ಉತ್ತೀರ್ಣರಾಗಿ ಹೊರ ಹೋಗುವಾಗ ಕೆಳಗಿನ 25% ಸೀಟಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಜೊತೆಗೆ ಖಂಡಿತ ಪೈಪೋಟಿ ಮಾಡುವುದಿಲ್ಲ. ಈ ವಿದ್ಯಾಸಂಸ್ಥೆಗಳು ತಮ್ಮ ಕೆಲವು ಸೀಟುಗಳನ್ನು ಮುಂದೆ ಪ್ರಭಾವಶಾಲಿ ವ್ಯಕ್ತಿಯಾಗಬಲ್ಲವನ ಮೇಲೆ ಜೂಜಾಡಿ ಸ್ವಲ್ಪ ಮಟ್ಟದ “ರಿಸ್ಕ್” ತೆಗೆದುಕೊಳ್ಳುತ್ತವೆ, ಆದರೆ ಅಪಾಯಕ್ಕೆ ತಕ್ಕ ಹಣವಂತೂ ಸಂಸ್ಥೆಯ ಖಾತೆಗೆ ಆಗಲೇ ಜಮಾ ಆಗಿರುತ್ತದೆ. ಮುಂದೆ ಅಂತಹಾ ಅಪಾಯಕಾರಿ ವಿದ್ಯಾರ್ಥಿ 20-30-40 ವರ್ಷದ ನಂತರ, ಯಾವುದೇ ದೇಶದ ಪ್ರಧಾನಿ, ಶ್ರೀಮಂತ ವ್ಯಕ್ತಿ ಆದರೂ ಅಥವಾ ಆಗದಿದ್ದರೂ ಸಹ ಆ ವಿದ್ಯಾಸಂಸ್ಥೆಯ ಹೆಸರು ಕೆಡುವುದಿಲ್ಲ ಅಥವಾ ಅವನು ವಿದ್ಯಾಸಂಸ್ಥೆಯಲ್ಲಿದ್ದಾಗ ಎಂತಹ ವಿದ್ಯಾರ್ಥಿಯಾಗಿದ್ದ ಎಂದು ಯಾರೂ ನೆನಪಿನಲ್ಲಿಡುವುದಿಲ್ಲ.

ಒಟ್ಟಿನಲ್ಲಿ ಇದು ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ದೂರದೃಷ್ಟಿ ಮತ್ತು ಜಾಣತನವಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...