ಗುರಾಯಿಸಿ ನೋಡಿದ್ದಾರೆ ಎಂಬ ಕಾರಣಕ್ಕೆ ಲಿಂಗಾಯತ ಸಮುದಾಯದ ಇಬ್ಬರು ವ್ಯಕ್ತಿಗಳು ದಲಿತ ಯುವಕನೊಬ್ಬನಿಗೆ ಜಾತಿ ನಿಂದನೆ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಗುರುವಾರ ವರದಿಯಾಗಿದೆ. ತೀವ್ರ ದಾಳಿಗೊಳಗಾಗಿರುವ ಯುವಕ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಘಟನೆಯ ಬಗ್ಗೆ ಸಂತ್ರಸ್ತ ಸುನಿಲ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾಗಿ ಅವರ ಸ್ನೇಹಿತರು ನಾನುಗೌರಿ.ಕಾಂಗೆ ತಿಳಿಸಿದ್ದು, ಈವರೆಗೆ ಯಾವುದೆ ಎಫ್ಐಆರ್ ದಾಖಲಾಗಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಬೇಳೂರು ಪೊಲೀಸ್ ಠಾಣೆಯ ಎಸ್ಐ ಪಾಟೀಲ್ ಎರಡೂ ಕಡೆಯವರು ಠಾಣೆಗೆ ಬರುತ್ತಿದ್ದು, ಎಫ್ಐಆರ್ ದಾಖಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಘಟನೆ ವಿವರ
ಬೇಲೂರು ತಾಲೂಕಿನ ಮಲ್ಲೇನಹಳ್ಳಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರುವ ಸುನಿಲ್ ಕುಮಾರ್ (30) ಅವರು ತನ್ನ ಎತ್ತುಗಳನ್ನು ಹೊಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಲಿಂಗಾಯತ ಸಮುದಾಯದ ಚಂದ್ರೇಗೌಡ ಮತ್ತು ಅವರ ಮಗ ಲೋಕೇಶ್ ಅವರು ಸುನಿಲ್ ಕುಮಾರ್ ಅವರು ಗುರಾಯಿಸಿದ್ದಾರೆ ಎಂದು ಕೋಪಗೊಂಡಿದ್ದಾರೆ.
ಇದರ ನಂತರ ಆರೋಪಿಗಳಾದ ಚಂದ್ರೇಗೌಡ ಮತ್ತು ಲೋಕೇಶ್ ಇಬ್ಬರೂ, ಸುನಿಲ್ ಕುಮಾರ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತ ಸುನಿಲ್ ಕುಮಾರ್ ಅವರನ್ನು ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಾನುಗೌರಿ.ಕಾಂಗೆ ಅವರ ಸ್ನೇಹಿತರು ತಿಳಿಸಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಬೇಲೂರು ಪೊಲೀಸ್ ಠಾಣೆಯ ಎಸ್ಐ ಪಾಟೀಲ್, “ಘಟನೆಯ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಎರಡೂ ಕಡೆಯವರು ಠಾಣೆಗೆ ಮಾತುಕತೆಗೆ ಬರುತ್ತಿದ್ದಾರೆ. ಮಾತುಕತೆ ಸರಿಯಾಗಿಲ್ಲ ಅಂದರೆ ಎಫ್ಐಆರ್ ಮಾಡಲಾಗುವುದು. ಪ್ರಕರಣವು ದಲಿತರ ದೌರ್ಜನ್ಯ ಮತ್ತು ಕೊಲೆ ಯತ್ನದ ಅಡಿಯಲ್ಲಿ ಬರುತ್ತದೆ. ಎಫ್ಐಆರ್ ಆದರೆ ಇವುಗಳನ್ನು ಸೇರಿಸಲಾಗುವುದು” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ಅಸ್ಪೃಶ್ಯತಾ ವಿರೋಧಿ ಯೋಜನೆಗೆ ದಲಿತ ಬಾಲಕನ ಹೆಸರಿಟ್ಟ ಕರ್ನಾಟಕ ಸರ್ಕಾರ: ಆ ಬಾಲಕನ ಕುಟುಂಬವನ್ನೆ ಹೊರದಬ್ಬಿದ ಗ್ರಾಮಸ್ಥರು