Homeಮುಖಪುಟಐದು ತಿಂಗಳಲ್ಲಿ ಮತದಾರರ ಪಟ್ಟಿಗೆ 41 ಲಕ್ಷ ಹೊಸ ಮತದಾರರ ಸೇರ್ಪಡೆ ಹೇಗೆ ಸಾಧ್ಯ?: ಪವನ್...

ಐದು ತಿಂಗಳಲ್ಲಿ ಮತದಾರರ ಪಟ್ಟಿಗೆ 41 ಲಕ್ಷ ಹೊಸ ಮತದಾರರ ಸೇರ್ಪಡೆ ಹೇಗೆ ಸಾಧ್ಯ?: ಪವನ್ ಖೇರಾ ಪ್ರಶ್ನೆ

- Advertisement -
- Advertisement -

ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿಯವರ ಆರೋಪವನ್ನು ಬೆಂಬಲಿಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ, 2024ರ ವಿಧಾನಸಭಾ ಚುನಾವಣೆಗೆ ಹಿಂದಿನ ಐದು ತಿಂಗಳಲ್ಲಿ ಮಹಾರಾಷ್ಟ್ರದ ಮತದಾರರ ಪಟ್ಟಿಗೆ 41 ಲಕ್ಷ ಹೊಸ ಮತದಾರರನ್ನು ಸೇರಿಸಲಾಗಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

“ನಮ್ಮ ಪ್ರಶ್ನೆಗಳು ಬಹಳ ಸ್ಪಷ್ಟವಾಗಿವೆ… 2019 ರಿಂದ 2024 ರವರೆಗಿನ ಐದು ವರ್ಷಗಳಲ್ಲಿ, ಮಹಾರಾಷ್ಟ್ರದಲ್ಲಿ 31 ಲಕ್ಷ ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಹೀಗಿರುವಾಗ, ಕೇವಲ ಐದು ತಿಂಗಳಲ್ಲಿ 41 ಲಕ್ಷ ಹೊಸ ಮತದಾರರನ್ನು ಸೇರಿಸಲು ಹೇಗೆ ಸಾಧ್ಯ? ಎಂದು ಖೇರಾ ಕೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು, “ಮಹಾರಾಷ್ಟ್ರ ಚುನಾವಣೆಯಲ್ಲಿ ಸಂಜೆ 5 ಗಂಟೆಯ ನಂತರ ಮತದಾನದ ಶೇಕಡಾವಾರು ಪ್ರಮಾಣ ಭಾರೀ ಏರಿಕೆಯಾದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ.

“ಸಂಜೆ 5 ಗಂಟೆಗೆ ಶೇ. 58.22ರಷ್ಟು ಮತದಾನ ಪ್ರಮಾಣ ತೋರಿಸಲಾಗಿತ್ತು. ಅಂತಿಮ ಮತದಾನ ಪ್ರಮಾಣ ಶೇ. 66ರಷ್ಷು ಆಗಿತ್ತು. ಹಾಗಿದ್ದರೆ, ಒಂದು ಗಂಟೆಯ ಅವಧಿಯಲ್ಲಿ ಶೇ. 8 ರಷ್ಟು ಹೆಚ್ಚಳ ಹೇಗೆ ಸಾಧ್ಯ? ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಅದೇ 12,000 ಬೂತ್‌ಗಳಿಂದ ಹೊಸ ಮತದಾರರು ಬರಲು ಹೇಗೆ ಸಾಧ್ಯ?” ಎಂದು ಖೇರಾ ಕೇಳಿ ಪ್ರಶ್ನಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಏಕೆ ತೆಗೆದುಹಾಕಲಾಯಿತು? ಎಂದು ಪ್ರಶ್ನಿಸಿದ ಪವನ್ ಖೇರಾ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿದ ರಾಹುಲ್ ಗಾಂಧಿಯವರ ಆರೋಪಗಳನ್ನು “ಕಾನೂನಿನ ನಿಯಮಕ್ಕೆ ಅವಮಾನ” ಎಂದು ಚುನಾವಣಾ ಆಯೋಗ ಶನಿವಾರ ಬಣ್ಣಿಸಿದೆ.

“ಮಹಾರಾಷ್ಟ್ರದ ಮತದಾರರ ಪಟ್ಟಿಯ ವಿರುದ್ಧ ಎತ್ತಲಾದ ಆಧಾರರಹಿತ ಆರೋಪಗಳು ಕಾನೂನಿನ ನಿಯಮಕ್ಕೆ ವಿರುದ್ಧವಾಗಿವೆ. ಚುನಾವಣಾ ಆಯೋಗವು ಡಿಸೆಂಬರ್ 24, 2024 ರಂದು ಕಾಂಗ್ರೆಸ್‌ಗೆ ನೀಡಿದ ಉತ್ತರದಲ್ಲಿ ಈ ಎಲ್ಲಾ ಸಂಗತಿಗಳು ಇವೆ. ಅಲ್ಲದೆ ಆಯೋಗದ ವೆಬ್‌ಸೈಟ್‌ನಲ್ಲಿಯೂ ಮಾಹಿತಿ ಲಭ್ಯವಿದೆ. ಮತ್ತೆ ಮತ್ತೆ ಅನುಮಾನಗಳನ್ನು ವ್ಯಕ್ತಪಡಿಸುವಾಗ ಈ ಎಲ್ಲಾ ಸಂಗತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ತೋರುತ್ತದೆ,” ಎಂದು ಚುನಾವಣಾ ಆಯೋಗ ಹೇಳಿದೆ.

“ಯಾರಾದರೂ ತಪ್ಪು ಮಾಹಿತಿಯನ್ನು ಹರಡಿದರೆ, ಅದು ಕಾನೂನಿನ ಬಗ್ಗೆ ಅಗೌರವ ತೋರುವುದಲ್ಲದೆ, ಅವರ ಸ್ವಂತ ರಾಜಕೀಯ ಪಕ್ಷದಿಂದ ನೇಮಕಗೊಂಡ ಸಾವಿರಾರು ಪ್ರತಿನಿಧಿಗಳಿಗೆ ಅಪಖ್ಯಾತಿ ತರುತ್ತದೆ. ಚುನಾವಣೆಯ ಸಮಯದಲ್ಲಿ ದಣಿವರಿಯದೆ ಮತ್ತು ಪಾರದರ್ಶಕವಾಗಿ ಕೆಲಸ ಮಾಡಿದ ಲಕ್ಷಾಂತರ ಚುನಾವಣಾ ಸಿಬ್ಬಂದಿಯನ್ನು ಅವಮಾನಿಸದಂತಾಗುತ್ತದೆ. ಮತದಾರರ ಪ್ರತಿಕೂಲ ತೀರ್ಪಿನ ನಂತರ, ಚುನಾವಣಾ ಆಯೋಗವು ರಾಜಿಯಾಗಿದೆ ಎಂದು ಹೇಳುವ ಮೂಲಕ ಅದೇ ವಿಷಯವನ್ನು ಮತ್ತೆ ಮುನ್ನೆಲೆಗೆ ತರಲು ಪ್ರಯತ್ನಿಸುವುದು ಸಂಪೂರ್ಣವಾಗಿ ಅಸಂಬದ್ಧವಾಗಿದೆ” ಎಂದಿದೆ.

ಮಣಿಪುರ ಮತ್ತೆ ಉದ್ವಿಗ್ನ: ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ, ಇಂಟರ್ನೆಟ್ ಸ್ಥಗಿತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -