- Advertisement -
- Advertisement -
ನಿಮ್ಮ ಬೆಂಕಿ
ಪ್ರಾರ್ಥನಾ ಮಂದಿರಗಳಿಗೆ ನುಗ್ಗಿದೆಯಷ್ಟೆ,
ಪ್ರಾರ್ಥನೆಗಳು ನಿಂತಿಲ್ಲ.
ನಿಮ್ಮ ಬೆಂಕಿ
ಪ್ರೇಮಿಗಳನ್ನು ಅಟ್ಟಾಡಿಸಿದೆಯಷ್ಟೆ,
ಅವರ ಪ್ರೀತಿ ಕಮ್ಮಿಯಾಗಿಲ್ಲ.
ನಿಮ್ಮ ಬೆಂಕಿ
ಆಹಾರವನ್ನು ಕಸಿದಿದೆಯಷ್ಟೆ,
ಅವರ ರಟ್ಟೆಯ ಬಲ ಮುರಿದಿಲ್ಲ.
ನಿಮ್ಮ ಬೆಂಕಿ
ಪಠ್ಯ ಪುಸ್ತಕಗಳಿಗೆ ಹಬ್ಬಿ
ಸಂವಿಧಾನದ ಪುಟವನ್ನು ಭಸ್ಮಗೊಳಿಸಿದೆಯಷ್ಟೆ,
ಒಂದಕ್ಷರವೂ ಮಾಸಿಲ್ಲ.
ನಿಮ್ಮ ಬೆಂಕಿ
ಹಿಜಾಬುಗಳಿಗೆ ಹಬ್ಬಿದೆಯಷ್ಟೆ,
ಶತಮಾನಗಳಿಂದ ಮೌನವಾಗಿದ್ದ
ಸಹಸ್ರಾರು ನಂಗೇಲಿಯರು
ಇಂದು ಎದೆಯುಬ್ಬಿಸಿ ನಿಂತಿದ್ದಾರೆ!
ಇದನ್ನೂ ಓದಿ: ಅಜಾತಶತ್ರು? ಆಹಾ ಗೆಳೆಯನೇ ಇದು ಅತ್ಯಂತ ಕೆಟ್ಟ ಬಿರುದು!- ‘ಭಗತ್ ಸಿಂಗ್ ಜೈಲ್ ಡೈರಿ’
ಒಂದು ಬಳಿಷ್ಠ ಕವನ! ಬೇಜವಾಬ್ದಾರಿ ಗೂಂಡಾಗಳಿಗೆ ಒಂದು ಉನ್ನತ ಉತ್ತರ!!