ದೆಹಲಿ ದಾಳಿಕೋರರಿಗೆ ಪೆಟ್ರೋಲ್ ಬಾಂಬ್ ಸಾಗಿಸಲು ಪೊಲೀಸರು ಸಹಾಯ ಮಾಡಿದ್ದಾರೆ ಎಂಬ ಸುದ್ದಿಯೊಂದು ಫೇಸ್ಬುಕ್ನಲ್ಲಿ ವೈರಲ್ ಆಗಿದೆ.
ಆಪ್ ಪಕ್ಷದ ಕೌನ್ಸಿಲರ್ ಆಗಿರುವ ತಾಹೀರ್ ಹುಸೇನ್ ಐಬಿ ಉದ್ಯೋಗಿ ಸಾವಿನ ಕೇಸಿನಲ್ಲಿ ಪ್ರಧಾನ ಆರೋಪಿಯಾಗಿದ್ದಾರೆ. ಅವರ ಮನೆಯ ತಾರಸಿಗೆ ಪೆಟ್ರೋಲ್ ಬಾಂಬುಗಳನ್ನು ಸಾಗಿಸಲು ಗಲಭೆಕೋರರಿಗೆ ಪೊಲೀಸರು ಸಹಾಯ ಮಾಡುತ್ತಿದ್ದಾರೆ ಎಂದು Barkat Khiljee ಎಂಬುವವರು ಫೇಸ್ಬುಕ್ನಲ್ಲಿ ಫೋಟೊವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಇದನ್ನು ನಂಬಿ ಬರೋಬ್ಬರಿ 22 ಸಾವಿರ ಆ ಪೋಸ್ಟ್ ಅನ್ನು ಷೇರ್ ಮಾಡಿದ್ದಾರೆ.
ಗಲಭೇಕೋರರಿಗೆ ಪೊಲೀಸರು ಸಹಾಯ ಮಾಡಿರುವ ಹಲವಾರು ಉದಾಹರಣೆಗಳು ಇದ್ದುದರಿಂದ ಇದು ಸತ್ಯವೇ ಎಂದು ಪರೀಶೀಲಿಸಿದಾಗ ಅಪ್ಪಟ ಸುಳ್ಳು ಎಂದು ತಿಳಿದುಬಂದಿದೆ. ಏಕೆಂದರೆ ಇದು ಗಲಭೆಯ ಸಂದರ್ಭಧಲ್ಲಿ ಜನರನ್ನು ರಕ್ಷಿಸಲು ಮಾಡುತ್ತಿರುವ ಕಾರ್ಯಾಚರಣೆಯ ದೃಶ್ಯವಾಗಿದೆಯೇ ಹೊರತು ಗಲಭೆಗೆ ಪ್ರಚೋದನೆಯಲ್ಲ ಎಂದು ಆಪ್ ಸಂಸದ ಸಂಜಯ್ ಕುಮಾರ್ ಹಾಕಿದ ವಿಡಿಯೋದಿಂದ ತಿಳಿದುಬಂದಿದೆ.
हिंसा ग्रस्त गाँवडी इलाक़े में लोगों की रक्षा करते हुए @DelhiPolice के बहादुर जवान। pic.twitter.com/Loy9rildLv
— Sanjay Singh AAP (@SanjayAzadSln) February 26, 2020
ದೆಹಲಿಯ ಗಮ್ರಿ ಪ್ರದೇಶದಲ್ಲಿ ಹಿಂಸಾಚಾರದಲ್ಲಿ ಜನರನ್ನು ರಕ್ಷಿಸುವ ಧೈರ್ಯಶಾಲಿ ಪೊಲೀಸ್ ಅಧಿಕಾರಿಗಳು ”ಎಂದು ಅವರು ಬರೆದಿದ್ದಾರೆ. ಈ ವಿಡಿಯೋದಲ್ಲಿ ಜನರನ್ನು ರಕ್ಷಿಸುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಇದೇ ವಿಡಿಯೋದ ಫೋಟೊವನ್ನೇ ಮೇಲಿನ ರೀತಿ ತಿರುಚಲಾಗಿದೆ ಅಷ್ಟೆ.