Homeಮುಖಪುಟಗೋವಾ: ಚಲನಚಿತ್ರೋತ್ಸವದಲ್ಲಿ ಕೈಬಿಟ್ಟ ಜಾತಿ ತಾರತಮ್ಯದ ಕುರಿತ ಕವಿತೆ; ವಿವಾದ

ಗೋವಾ: ಚಲನಚಿತ್ರೋತ್ಸವದಲ್ಲಿ ಕೈಬಿಟ್ಟ ಜಾತಿ ತಾರತಮ್ಯದ ಕುರಿತ ಕವಿತೆ; ವಿವಾದ

- Advertisement -
- Advertisement -

ಗೋವಾದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ದಿವಂಗತ ಗೋವಾದ ಲೇಖಕ ಮತ್ತು ಮಾಜಿ ಶಾಸಕ ವಿಷ್ಣು ಸೂರ್ಯ ವಾಘ್ ಅವರು ಜಾತಿ ತಾರತಮ್ಯದ ಕುರಿತ ಕವಿತೆಯನ್ನು ಪ್ರಕಟಿಸದ ಉತ್ಸವದ ದಿನಪತ್ರಿಕೆಯ ನಿರ್ಧಾರದ ಬಗ್ಗೆ ವಿವಾದ ಭುಗಿಲೆದ್ದಿದೆ.

IFFI ದಿನಪತ್ರಿಕೆಯ ಭಾನುವಾರದ ಆವೃತ್ತಿ ‘ದಿ ಪೀಕಾಕ್’, ಕಲಾವಿದ ಸಿದ್ಧೇಶ್ ಗೌತಮ್ ಅವರ ಎರಡು ಪುಟಗಳ  ವಿವರಣೆ ಒಳಗೊಂಡಿತ್ತು. ಈ ವಿವರಣೆಯನ್ನು ವಾಘ್ ಅವರ ಸೆಕ್ಯುಲರ್ ಕವಿತೆಯ ಜೊತೆಗೆ ಕೊಂಡೊಯ್ಯಲು ಉದ್ದೇಶಿಸಲಾಗಿತ್ತು ಆದರೆ ಕವಿತೆಯನ್ನು ಶನಿವಾರ ತೆಗೆದುಹಾಕಲಾಗಿದೆ.

ಗೋವಾ ಸರ್ಕಾರದ ಪರವಾಗಿ IFFI ನ್ನು ಆಯೋಜಿಸುವ ನೋಡಲ್ ಏಜೆನ್ಸಿಯಾದ ಎಂಟರ್ಟೈನ್ಮೆಂಟ್ ಸೊಸೈಟಿ ಆಫ್ ಗೋವಾ (ESG), ಕವಿತೆಯನ್ನು ಸೃಜನಾತ್ಮಕ ಕಾರಣಗಳಿಗಾಗಿ ಸೇರಿಸದಿರಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ESG ‘ದಿ ಪೀಕಾಕ್‌’ನ ಪ್ರಕಾಶನವನ್ನು ಕೂಡ ಮಾಡುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಗೌತಮ್ ಈ ಕುರಿತು ಬರೆದಿದ್ದು, ಇಂದಿನ ಸಂಚಿಕೆಗಾಗಿ ವಿಷ್ಣು ಸೂರ್ಯ ವಾಘ್ ಅವರ ಕವಿತೆಯನ್ನು ಉಲ್ಲೇಖಿಸದಂತೆ ನನ್ನನ್ನು ಕೇಳಲಾಯಿತು. ವಾಘ್ ಅವರ ಕವಿತೆ ಸೆಕ್ಯುಲರ್, ಇದನ್ನು ನಾನು ಎಚ್ಚರಿಕೆಯಿಂದ ಆರಿಸಿಕೊಂಡಿದ್ದೇನೆ. ಏಕೆಂದರೆ ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿದಿನ ಅನೇಕರಿಂದ ಜಾತಿ ತಾರತಮ್ಯದ ಹಲವಾರು ಘಟನೆಗಳನ್ನು ವ್ಯಕ್ತಪಡಿಸುತ್ತದೆ. ನನ್ನ ಜೀವನದಲ್ಲಿ ನಾನು ಅಪರಿಚಿತ ವಿದ್ಯಾರ್ಥಿಯಾಗಿ ಮಾತ್ರವಲ್ಲದೆ ಪ್ರಸಿದ್ಧ ಕಲಾವಿದನಾಗಿಯೂ ಇದೇ ರೀತಿಯದ್ದನ್ನು ಅನೇಕ ಬಾರಿ ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ. ಗೌತಮ್  ಕವಿತೆಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಕವಿತೆಯನ್ನು ಮುದ್ರಿಸದಿರುವ ನಿರ್ಧಾರದ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಇಎಸ್‌ಜಿ ಸಿಇಒ ಅಂಕಿತಾ ಮಿಶ್ರಾ, ಲೇಖನವನ್ನು ಮುದ್ರಿಸದಿರುವ ನಿರ್ಧಾರವು ಕೇವಲ ಸೃಜನಶೀಲ ಕಾರಣಗಳಿಗಾಗಿ ತೆಗೆದುಕೊಂಡ ಸಂಪಾದಕೀಯ ನಿರ್ಧಾರ ಮತ್ತು ಲೇಖನದ ವಿಷಯಕ್ಕೆ ಮತ್ತು ಇದಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ವಾಘ್ ಅವರ ಸೋದರಳಿಯ ಕೌಸ್ತುಭ್ ನಾಯ್ಕ್, ವಾಘ್ ಅವರ ಸಂಕಲನ ‘ಸುಧೀರ್ ಸೂಕ್ತ’ ಕವಿತೆಯನ್ನು ಭಾಷಾಂತರಿಸಲು ಪೀಕಾಕ್ ತಂಡವು ಕೆಲವು ದಿನಗಳ ಹಿಂದೆ ಹೇಳಿತ್ತು. ಆದರೆ ಬಳಿಕ ಕವಿತೆಯನ್ನು ಮುದ್ರಿಸಲಾಗುವುದಿಲ್ಲ ಎಂದು ಇಎಸ್‌ಜಿ ಅಧಿಕಾರಿಗಳು ತಿಳಿಸಿದ್ದರು. ಕವಿತೆಯನ್ನು ಪ್ರಕಟಿಸದಿರುವ ನಿರ್ಧಾರದ ಹಿಂದಿನ ಕಾರಣಗಳು ತನಗೆ ತಿಳಿದಿಲ್ಲವಾದರೂ, ವಾಘ್ ಅವರ ಕವಿತೆಗಳಲ್ಲಿನ  ಅಂಶಗಳು ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಸುಧೀರ್ ಸೂಕ್ತ ಕವನ ಸಂಕಲನವು 2017ರಲ್ಲಿ ಕೆಲವು ವಿವಾದಗಳನ್ನು ಹುಟ್ಟು ಹಾಕಿತ್ತು.  ವಾಘ್ ಅವರು ತಮ್ಮ ಕವಿತೆ ಮೂಲಕ ಗೋವಾದ ಬಹುಜನ ಸಮಾಜದ ಇತಿಹಾಸಗಳನ್ನು ಉಲ್ಲೇಖಿಸಿದ್ದಾರೆ. ಭಾಷೆಯ ಬಳಕೆ ಮತ್ತು ಅದರ ಚಿತ್ರಣ ಮತ್ತು ವಿಷಯಗಳು ಗೋವಾದ ಸಾಹಿತ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕವಾಗಿವೆ.  ಸಂವಿಧಾನ ದಿನದ ಮುನ್ನಾದಿನದಂದು ಈ ಸೆನ್ಸಾರ್‌ಶಿಪ್ ಕ್ರಿಯೆ ನಡೆದಿರುವುದು ದುರದೃಷ್ಟಕರ ಎಂದು ಕೌಸ್ತುಭ್ ನಾಯ್ಕ್ ಹೇಳಿದ್ದಾರೆ.

2017ರಲ್ಲಿ ವಾಘ್ ಅವರ ಕೊಂಕಣಿಯಲ್ಲಿನ ಕವನಗಳ ಸಂಕಲನವಾದ ಸುಧೀರ್ ಸೂಕ್ತ – ಶೂದ್ರನ ಗೀತೆಗಳು, ಕವನ ವಿಭಾಗದಲ್ಲಿ ಗೋವಾ ಕೊಂಕಣಿ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಆದರೆ ಅಧಿಕೃತವಾಗಿ ಘೋಷಣೆಯ ಮೊದಲು ಪ್ರಶಸ್ತಿಯ ಸುದ್ದಿ ಸೋರಿಕೆಯಾದ ನಂತರ ಪುಸ್ತಕದ ಬಗ್ಗೆ ವಿವಾದವು ಭುಗಿಲೆದ್ದಿತ್ತು. ವಾಘ್ ಮತ್ತು ಪುಸ್ತಕದ ಪ್ರಕಾಶನ ಸಂಸ್ಥೆಯ ವಿರುದ್ಧ ಗೋವಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ವಾಘ್ ಅವರ ಸಹೋದರ ರಾಮರಾವ್ ವಾಘ್ ಮಾತನಾಡುತ್ತಾ, ಕವಿತೆಗಳು ಜಾತಿ ತಾರತಮ್ಯ ಮತ್ತು ಬಹುಜನ ಸಮಾಜ ಅನುಭವಿಸುತ್ತಿರುವ ನೋವಿನ ಬಗ್ಗೆ ಮಾತನಾಡುತ್ತವೆ. ಅವರ ಕವಿತೆಗಳು ಸಮಾಜದ ಕಟುವಾದ ಸತ್ಯಗಳನ್ನು ತೆರೆದಿಟ್ಟಿವೆ. ಆದರೆ ಕವಿತೆ ಪ್ರಕಟಿಸದಿರಲು ಕಾರಣ ತಿಳಿದಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಲೆಸ್ಬೋಸ್ ದ್ವೀಪದಲ್ಲಿ ಹಡಗು ಮುಳುಗಡೆ: ಭಾರತೀಯರು ಸೇರಿದಂತೆ 13 ಮಂದಿ ನಾಪತ್ತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...