Homeಮುಖಪುಟಇಂದು ವಿಶ್ವ ಪ್ರಥಮ ಚಿಕಿತ್ಸಾ ದಿನ: ಜೀವ ರಕ್ಷಣೆ ತಿಳಿದಿರೋಣ

ಇಂದು ವಿಶ್ವ ಪ್ರಥಮ ಚಿಕಿತ್ಸಾ ದಿನ: ಜೀವ ರಕ್ಷಣೆ ತಿಳಿದಿರೋಣ

ಅಪಘಾತಕ್ಕೀಡಾದವರಿಗೆ ನೀರನ್ನು ಕುಡಿಸಿದ್ದರೆ, ವೈದ್ಯರು ಅನಸ್ತೀಶಿಯಾ ಕೊಟ್ಟಾಗ ರೋಗಿಯು ವಾಂತಿ ಮಾಡಿಕೊಂಡು ಸಾವಿಗೀಡಾಗುವ ಸಾಧ್ಯತೆಗಳಿರುತ್ತವೆ. ಗಾಯಗೊಂಡು ಮಲಗಿರುವ ವ್ಯಕ್ತಿಗೆ ನೀರು ಕುಡಿಸಿದಾಗ ಶ್ವಾಸಕೋಶಕ್ಕೆ ನೀರು ಇಳಿಯುತ್ತದೆ. ಇದರಿಂದಾಗಿಯೇ ಹಲವು ಜನ ಸಾಯುತ್ತಾರೆ. ಇದು ಗೊತ್ತಿರುವವರು ನೀರು ಕುಡಿಸುವುದಿಲ್ಲ. ಗೊತ್ತಿಲ್ಲದೇ ಇರುವವರು ತಕ್ಷಣ ನೀರು ಕುಡಿಸಿ ರೋಗಿ ಸಾಯಲು ಕಾರಣರಾಗುತ್ತಾರೆ ಎಂದು ಎಚ್ಚರಿಸುತ್ತಾರೆ ಡಾ.ಐಶ್ವರ್ಯ.

- Advertisement -
- Advertisement -

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ 2019ರಲ್ಲಿ ಒಟ್ಟು 4,49,002 ರಸ್ತೆ ಅಪಘಾತಗಳು ಸಂಭವಿಸಿವೆ. 1,51,113 ಸಾವನ್ನಪ್ಪಿದ್ದರೆ, 451,361 ಮಂದಿ ಗಾಯಗೊಂಡಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ. 3.86ರಷ್ಟು ಅಪಘಾತ ಪ್ರಕರಣಗಳು 2019ರಲ್ಲಿ ಕಡಿಮೆಯಾಗಿರುವುದು ಸಮಾಧಾನಕರ ಸಂಗತಿ. ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್ ಡೌನ್‌ ಪರಿಣಾಮ ರಸ್ತೆ ಅಪಘಾತಗಳು 2020ರಲ್ಲಿ ಗಣನೀಯವಾಗಿ ಕಡಿಮೆಯಾಗಿವೆ ಎನ್ನುತ್ತವೆ ಇತರ ವರದಿಗಳು. ರಸ್ತೆ ಸುರಕ್ಷತೆ ನಿಯಮಗಳ ಕುರಿತು ಜನರು ಎಚ್ಚೆತ್ತುಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾದರೂ ನಿರ್ಲಕ್ಷ್ಯಗಳಿಂದಾಗಿ ಅಮೂಲ್ಯ ಜೀವಗಳನ್ನು ಕಳೆದುಕೊಂಡ ಉದಾಹರಣೆಗಳಿವೆ. ಅಪಘಾತಗಳು ಯಾವಾಗ, ಹೇಗೆ ಸಂಭವಿಸುತ್ತವೆ ಎಂಬುದು ನಮಗೆ ತಿಳಿದಿರುವುದಿಲ್ಲ. ಆದರೆ ಅಪಘಾತ ಸಂಭವಿಸಿದ ತಕ್ಷಣ ಪ್ರಥಮ ಚಿಕಿತ್ಸೆಯನ್ನು ನೀಡಿದರೆ ಸಾವಿನ ಸಾಧ್ಯತೆಯನ್ನು ತಪ್ಪಿಸಬಹುದು. ಹೀಗಾಗಿ ಪ್ರಥಮ ಚಿಕಿತ್ಸೆಯ ಕುರಿತು ಅರಿವು ಬೆಳೆಸಿಕೊಳ್ಳುವುದು ಅಗತ್ಯ ಎನ್ನುತ್ತಾರೆ ವೈದ್ಯರು.

ಪ್ರತಿವರ್ಷ ಸೆಪ್ಟೆಂಬರ್ ಎರಡನೇ ಶನಿವಾರದಂದು ಪ್ರಥಮ ಚಿಕಿತ್ಸಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಇಂದು (ಸೆ.11) ಪ್ರಥಮ ಚಿಕಿತ್ಸಾ ದಿನವಾಗಿದ್ದು, ‘ಪ್ರಥಮ ಚಿಕಿತ್ಸೆ ಮತ್ತು ರಸ್ತೆ ಸುರಕ್ಷತೆ’ ಈ ವರ್ಷದ ಘೋಷವಾಕ್ಯವಾಗಿದೆ. ಇಂಟರ್ ನ್ಯಾಷನಲ್ ಫೆಡರೇಷನ್ ಆಫ್‌ ರೆಡ್ ಕ್ರಾಸ್‌ ಅಂಡ್ ರೆಡ್ ಕ್ರೆಸೆನ್ಟ್ ಸೊಸೈಟೀಸ್ (ಐಎಫ್‌ಆರ್‌ಸಿ) ವತಿಯಿಂದ ಈ ಆಚರಣೆಯನ್ನು 2020ರಲ್ಲಿ ಆಚರಣೆಗೆ ತರಲಾಯಿತು. ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಹೇಗೆ ಜೀವ ಉಳಿಸುವುದು ಎಂದು ಅರಿವು ಮೂಡಿಸುತ್ತಾ ಜನರಿಗೆ ಪ್ರಥಮ ಚಿಕಿತ್ಸೆ ಕುರಿತು ತರಬೇತಿಯನ್ನು ನೀಡುತ್ತಾ ಬಂದಿದೆ ರೆಡ್ ಕ್ರಾಸ್.

ಗಾಯಗೊಂಡ ಸಂದರ್ಭಗಳಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಶೇ. 27ರಷ್ಟು ಸಾವುಗಳು ಸಂಭವಿಸುತ್ತಿವೆ ಎನ್ನುವ ರೆಡ್ ಕ್ರಾಸ್ ಸಂಸ್ಥೆ, ಪ್ರಥಮ ಚಿಕಿತ್ಸೆ  ಕುರಿತು ತಿಳಿವಳಿಕೆ ಇದ್ದರೆ, ವೃತ್ತಿಪರರು ಚಿಕಿತ್ಸೆ ನೀಡುವುದು ತಡವಾದರೂ ರೋಗಿಯನ್ನು ಉಳಿಸುವ ಸಾಧ್ಯತೆ ಹೆಚ್ಚಿದೆ ಎನ್ನುತ್ತದೆ.

‘ನಾನು ಗೌರಿ’ ವೆಬ್ ಸೈಟ್ ನೊಂದಿಗೆ ಮಾತನಾಡಿದ ಕರ್ನಾಟಕ ರೆಡ್ ಕ್ರಾಸ್ ಘಟಕದ ಚೇರ್‍ಮನ್ ಹಾಗೂ ತುಮಕೂರಿನ ‘ಪ್ರಜಾಪ್ರಗತಿ’ ಪತ್ರಿಕೆಯ ಸಂಪಾದಕರೂ ಆದ ಎಸ್.ನಾಗಣ್ಣ, “ಪ್ರಥಮ ಚಿಕಿತ್ಸೆಯ ಕುರಿತು ಎಂಟರಿಂದ ಹತ್ತನೇ ತರಗತಿ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ರೆಡ್‌ ಕ್ರಾಸ್ ನಡೆಸುತ್ತಿದೆ. ಪಿಯುಸಿ ಹಂತದ ಮಕ್ಕಳಿಗೆ ಜಾಗೃತಿ ಮೂಡಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಘಟನೆಯಾದ ಒಂದು ಗಂಟೆಯ ಅವಧಿಯಲ್ಲಿ ಪ್ರಥಮ ಚಿಕಿತ್ಸೆ ಮಹತ್ವದ್ದಾಗಿರುತ್ತದೆ. ಅಪಘಾತ, ಹಾವು ಕಚ್ಚಿದ ಸಂದರ್ಭ, ಹೃದಯಾಘಾತ ಹಾಗೂ ಪಾರ್ಶ್ವವಾಯು ಸಂಭವಿಸಿದ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಮುಖ್ಯ” ಎನ್ನುತ್ತಾರೆ.

ಕರ್ನಾಟಕ ರೆಡ್ ಕ್ರಾಸ್ ಘಟಕದ ಚೇರ್‍ಮನ್ ಎಸ್.ನಾಗಣ್ಣ

“ಕೈಗಾರಿಕೆ ಅಥವಾ ಉತ್ಪಾದನಾ ಪ್ರದೇಶಗಳಲ್ಲಿ ಮೂವತ್ತು ಜನರಲ್ಲಿ ಒಬ್ಬರಿಗೆ ತರಬೇತಿಯನ್ನು ನೀಡುತ್ತಿದ್ದೇವೆ. ಒಂದು ಕೈಗಾರಿಕೆಯಲ್ಲಿ ಕನಿಷ್ಠ ಎರಡು ದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ತರಬೇತಿ ನೀಡಿದ ಬಳಿಕ, ಸರಿಯಾಗಿ ಕಲಿತ್ತಿದ್ದಾರೋ ಇಲ್ಲವೋ ಎಂಬುದನ್ನು ಮೌಲ್ಯಮಾಪನ ಮಾಡುತ್ತೇವೆ. ನಂತರ ದೆಹಲಿಯಲ್ಲಿರುವ ರೆಡ್ ಕ್ರಾಸ್ ಮುಖ್ಯ ಕಚೇರಿಯಿಂದ ಅರ್ಹತಾ ಪತ್ರವನ್ನು ಕೊಡಿಸಲಾಗುತ್ತದೆ. ತರಬೇತಿ ಪಡೆದವರಿಂದ ಮತ್ತಷ್ಟು ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಸೆಂಟ್ ಜಾನ್ಸ್ ಅಂಬ್ಯುಲೆನ್ಸ್ ಸಂಸ್ಥೆಯು ರೆಡ್ ಕ್ರಾಸ್ ಜೊತೆಗೆ ಕೈಜೋಡಿಸಿದೆ” ಎನ್ನುತ್ತಾರೆ ನಾಗಣ್ಣ.

“ಯಾರಾದರೂ ಅಪಘಾತಕ್ಕೆ ತುತ್ತಾದಾಗ ಬಹಳಷ್ಟು ಜನ ಫೋಟೋ ತೆಗೆದುಕೊಳ್ಳುವ ಉತ್ಸಾಹದಲ್ಲಿರುತ್ತಾರೆ. ಅದಕ್ಕಿಂತ ಮುಖ್ಯವಾಗಿ ಒಂದು ಜೀವವನ್ನು ಉಳಿಸುವುದು ಆದ್ಯತೆಯಾಗಬೇಕು. ಮೊದಲು ಜೀವ ಮುಖ್ಯ ಎಂಬ ಮನಸ್ಥಿತಿಯನ್ನು ಪ್ರಥಮ ಚಿಕಿತ್ಸಾ ತರಬೇತಿ ಪಡೆಯುವವರಲ್ಲಿ ಬೆಳೆಸುತ್ತಿದ್ದೇವೆ” ಎನ್ನುವ ಎಸ್.ನಾಗಣ್ಣ, “ರೆಡ್ ಕ್ರಾಸ್‌ ಎಂದಿಗೂ ತಟಸ್ಥ ನೀತಿಯನ್ನು ಅನುಸರಿಸುತ್ತಿದೆ. ಇದಕ್ಕೆ ಶತ್ರು, ಮಿತ್ರ ಎಂಬ ವಿಗಂಡಣೆಗಳಿಲ್ಲ. ಉದಾಹರಣೆಗೆ ಅಫಘಾನಿಸ್ತಾನದಲ್ಲಿ ಸಂಘರ್ಷ ಏರ್ಪಟ್ಟಿದೆ. ಅಲ್ಲಿ ಸಾವು ನೋವುಗಳು ಆಗುತ್ತಿದ್ದಾಗ, ರೆಡ್ ಕ್ರಾಸ್ ಸದಸ್ಯರು ತಮ್ಮ ಚಿಹ್ನೆಗಳನ್ನು ಧರಿಸಿ ಹೊರಟರೆಂದರೆ ಯಾರೂ ಅವರಿಗೆ ತೊಂದರೆ ಕೊಡುವುದಿಲ್ಲ. ವಿಪತ್ತಿನ ಸಂದರ್ಭದಲ್ಲಿ ಶತ್ರು, ಮಿತ್ರ ಎನ್ನದೆ ಗಾಯಾಳುಗಳನ್ನು ರಕ್ಷಿಸುವುದಷ್ಟೇ ರೆಡ್ ಕ್ರಾಸ್ ಸಂಸ್ಥೆಯ ಗುರಿಯಾಗಿರುತ್ತದೆ” ಎನ್ನುತ್ತಾರೆ ಅವರು.

PC: esafety.com

ಎರಡು ವಿಧದ ಪ್ರಥಮ ಚಿಕಿತ್ಸೆ

ಅಪಘಾತದಿಂದ ಗಾಯಗೊಂಡ ಸಂದರ್ಭದಲ್ಲಿನ ಪ್ರಥಮ ಚಿಕಿತ್ಸೆ ಹಾಗೂ ಹೃದಯಾಘಾತ, ಪಾರ್ಶ್ವವಾಯು ಥರದ ಸಮಸ್ಯೆಗಳು ಎದುರಾದಾಗ ಕೈಗೊಳ್ಳುವ ವೈದ್ಯಕೀಯ ತುರ್ತು ಪ್ರಥಮ ಚಿಕಿತ್ಸೆ ಎಂಬ ಎರಡು ವಿಧದ ಪ್ರಥಮ ಚಿಕಿತ್ಸೆಗಳಿವೆ ಎನ್ನುತ್ತಾರೆ ತುರ್ತು ಚಿಕಿತ್ಸಕರಾದ ಡಾ.ಐಶ್ವರ್ಯ ಎಸ್.ಮೂರ್ತಿ.

“ಗಾಯಗೊಂಡು ರಕ್ತಸ್ರಾವ ಹೆಚ್ಚಾಗಿದ್ದ ಸಂದರ್ಭದಲ್ಲಿ ಮೊದಲ ವಿಧದ ಪ್ರಥಮ ಚಿಕಿತ್ಸೆಯು ಬಹಳ ಉಪಕಾರಿಯಾಗಿರುತ್ತದೆ. ಗಾಯಗೊಂಡು ರಕ್ತಸ್ರಾವವಾಗುತ್ತಿದ್ದಾಗ ಗಾಯಗೊಂಡ ಭಾಗದಲ್ಲಿ ಒತ್ತಿ ಹಿಡಿದರೆ ಸಾಕು, ರಕ್ತ ಸ್ರಾವ ನಿಲ್ಲುತ್ತದೆ. ಆದರೆ ನಾವು ಗಾಯಗೊಂಡ ಭಾಗದಲ್ಲಿ ಬಿಗಿಯಾಗಿ ದಾರದಿಂದಲೋ ಬಟ್ಟೆಯಿಂದಲೋ ಕಟ್ಟಿದರೆ ಮುಂದಿನ ಭಾಗಕ್ಕೆ ರಕ್ತ ಚಲನೆಯೇ ನಿಂತುಹೋಗುವ ಅಪಾಯವಿರುತ್ತದೆ. ಹಾವು ಕಡಿದಾಗಲೂ ಬಟ್ಟೆ ಕಟ್ಟಿ ಎಂದು ಹೇಳುವವರಿದ್ದಾರೆ. ಉದಾಹರಣೆಗೆ ಕಾಲಿನ ಭಾಗಕ್ಕೆ ಹಾವು ಕಚ್ಚಿದ್ದರೆ ನಾವು ಬಟ್ಟೆ ಕಟ್ಟಿದಾಗ ಪಾದಕ್ಕೆ ರಕ್ತ ಚಲನೆ ಆಗುವುದಿಲ್ಲ. ಇಂತಹ ಸಂದರ್ಭಗಳಲ್ಲೂ ಸಾವಾಗುವ ಸಾಧ್ಯತೆಗಳಿವೆ” ಎಂದು ಎಚ್ಚರಿಸುತ್ತಾರೆ ಅವರು.

ಡಾ.ಐಶ್ವರ್ಯ ಎಸ್.ಮೂರ್ತಿ

ನೀರು ಕುಡಿಸದಿರಿ

ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ವೈದ್ಯರು ಅನಸ್ತೀಶಿಯಾ ಕೊಡಬೇಕಿರುತ್ತದೆ. ಅಪಘಾತಕ್ಕೀಡಾದವರಿಗೆ ನೀರನ್ನು ಕುಡಿಸಿದ್ದರೆ, ವೈದ್ಯರು ಅನಸ್ತೀಶಿಯಾ ಕೊಟ್ಟಾಗ ರೋಗಿಯು ವಾಂತಿ ಮಾಡಿಕೊಂಡು ಸಾವಿಗೀಡಾಗುವ ಸಾಧ್ಯತೆಗಳಿರುತ್ತವೆ. ಗಾಯಗೊಂಡು ಮಲಗಿರುವ ವ್ಯಕ್ತಿಗೆ ನೀರು ಕುಡಿಸಿದಾಗ ಶ್ವಾಸಕೋಶಕ್ಕೆ ನೀರು ಇಳಿಯುತ್ತದೆ. ಇದರಿಂದಾಗಿಯೇ ಹಲವು ಜನ ಸಾಯುತ್ತಾರೆ. ಗೊತ್ತಿರುವವರು ನೀರು ಕುಡಿಸುವುದಿಲ್ಲ. ಗೊತ್ತಿಲ್ಲದೇ ಇರುವವರು ತಕ್ಷಣ ನೀರು ಕುಡಿಸಿ ರೋಗಿ ಸಾಯಲು ಕಾರಣರಾಗುತ್ತಾರೆ ಡಾ.ಐಶ್ವರ್ಯ.

Aishwarya S Murthy

ಪಾರ್ಶ್ವವಾಯು ಸಂದರ್ಭಗಳಲ್ಲಿ ರೋಗದ ಗುಣಲಕ್ಷಣಗಳನ್ನು ಗುರುತಿಸುವುದು ಅಗತ್ಯ. ಮಾತು ತೊದಲುತ್ತಿರುವುದು, ಬಾಯಿ ತಿರುಚುತ್ತಿರುವುದು, ಹಲ್ಲುಗಳು ಕ್ರಮಬದ್ಧವಾಗಿ ಇರದೇ ಇರುವುದು, ಕೈಗಳು ಸ್ವಾಧೀನ ಕಳೆದುಕೊಂಡಿರುವುದು- ಈ ಗುಣಲಕ್ಷಣಗಳಿದ್ದಲ್ಲಿ ವ್ಯಕ್ತಿ ಪಾರ್ಶ್ವವಾಯುಗೆ ತುತ್ತಾಗಿರುವ ಸಾಧ್ಯತೆಗಳಿರುತ್ತವೆ. ಪಾರ್ಶ್ವವಾಯು ಸಂಭವಿಸಿದ ಮೂರ್ನಾಲ್ಕು ಗಂಟೆಗಳಲ್ಲಿ ವ್ಯಕ್ತಿಯನ್ನು ಕರೆದುಕೊಂಡು ಬಂದಲ್ಲಿ ರಕ್ತ ಹೆಪ್ಪುಗಟ್ಟಿರುವಿಕೆಯನ್ನು ಕರಗಿಸಿ ರೋಗಿಯನ್ನು ಅಪಾಯದಿಂದ ಪಾರು ಮಾಡಬಹುದು. ಹಾಗೆಯೇ ಹೃದಯಾಘಾತದ ಲಕ್ಷಣಗಳ ಕುರಿತು ಎಚ್ಚರಿಕೆ ವಹಿಸಿದರೆ ವ್ಯಕ್ತಿಯನ್ನು ಉಳಿಸಬಹುದು ಎನ್ನುತ್ತಾರೆ ಅವರು.

ಪ್ರಥಮ ಚಿಕಿತ್ಸೆಯು ಇಂದು ಬಹಳ ಅಗತ್ಯವಾಗಿದ್ದು,  ಪ್ರಾಥಮಿಕ ಶಾಲಾ ಹಂತದಲ್ಲೇ ಪರಿಣಾಮಕಾರಿಯಾಗಿ ಪಠ್ಯದಲ್ಲಿ ಅಳವಡಿಸಿ ಪ್ರಥಮ ಚಿಕಿತ್ಸೆ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು ಎಂಬುದು ತಜ್ಞರೆಲ್ಲರ ಅಭಿಪ್ರಾಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...