“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಬೇಕಾದರೆ ಕೊಲ್ಲಿ. ಒಂದು ತಲೆ ಉರುಳಿದೆ, ಇನ್ನೂ 9 ಮುಸ್ಲಿಮರ ತಲೆ ಉರುಳಬೇಕಾಗಿದೆ” ಎಂದು ಹೇಳಿಕೆ ನೀಡಿದ್ದ ಋಷಿಕುಮಾರ ಅಲಿಯಾಸ್ ಕಾಳಿ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿದೆ.
ತುಮಕೂರಿನ ತಿಲಕ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನಗರದ ಪಿಯುಸಿಎಲ್ ಮುಖಂಡರಾದ ಕೆಂಪರಾಜು ಅವರು ನೀಡಿದ ದೂರಿನ ಅನ್ವಯ ಕ್ರಮ ಜರುಗಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಶನಿವಾರ ತುಮಕೂರಿನ ಪ್ರಗತಿಪರ ವೇದಿಕೆ ಸಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದೆ. ಕೆಂಪರಾಜುರವರು ನೀಡಿದ ದೂರಿನ ಹಿನ್ನಲೆಯಲ್ಲಿ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಸಾಮರಸ್ಯಕ್ಕೆ ಅಡ್ಡಿಪಡಿಸುವುದು) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
“ತುಮಕೂರಿನ ಟೌನ್ ಹಾಲ್ ಮುಂದೆ ದಿನಾಂಕ 29-7-2022ರಂದು ನಡೆದ ಪ್ರತಿಭಟನೆ ವೇಳೆ ಕಾಳಿ ಸ್ವಾಮಿ ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ. ಒಂಬತ್ತು ಮುಸ್ಲಿಮರ ತಲೆ ಕಡಿಯಬೇಕು ಎಂದಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹಸಚಿವರ ಹತ್ಯೆ ಮಾಡುವಂತೆ ಹೇಳಿಕೆ ನೀಡಿದ್ದಾರೆ. ತುಮಕೂರಿನ ಹಿಂದೂ ಮುಸ್ಲಿಂ ಬಾಂಧವರಲ್ಲಿ ಅಶಾಂತಿ ಉಂಟು ಮಾಡಿ ನಾಗರಿಕ ದಂಗೆಗಳು ನಡೆಯುವಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ತುಮಕೂರಿನ ಶಾಂತಿಗೆ ಧಕ್ಕೆ ತಂದಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾಳಿ ಸ್ವಾಮೀಜಿ ಹೇಳಿದ್ದೇನು?
ಒಂದು ಸಮುದಾಯದ ವಿರುದ್ಧ ಸದಾ ದ್ವೇಷದ ಹೇಳಿಕೆಗಳನ್ನು ನೀಡುವ ಕಾಳಿ ಸ್ವಾಮೀಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಕೊಲೆಗೆ ಪ್ರಚೋದನೆ ನೀಡಿದ್ದರು.
ಅತ್ಯಂತ ಅವಹೇಳನಕಾರಿಯಾಗಿ, ಸಮುದಾಯಗಳ ನಡುವೆ ದ್ವೇಷ ಬಿತ್ತುವಂತೆ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಅಣಕಿಸುವಂತೆ ಮಾತನಾಡಿದ್ದ ಕಾಳಿ ಸ್ವಾಮೀಜಿ, “ಇನ್ನೂ 9 ಜನ ಮುಸ್ಲಿಮರ ತಲೆ ಕಡಿಯಬೇಕು” ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಸುರತ್ಕಲ್ನಲ್ಲಿ ಫಾಝಿಲ್ ಎಂಬ ವ್ಯಕ್ತಿಯನ್ನು ಕೊಂದಿರುವ ಕುರಿತು ಮಾತನಾಡಿದ್ದ ಕಾಳಿ ಸ್ವಾಮೀಜಿ, “ನಮ್ಮವರೇ ಏನಾದರೂ ಹೊಡೆದಿದ್ದರೆ ನಾನು ಅವರಿಗೆ ಅಭಿನಂದನೆ ಸಲ್ಲಿಸುವೆ. ಇನ್ನು ಒಬ್ಬರನ್ನೇ ಕೊಂದಿರುವುದೆಂದು ಹೇಳುತ್ತಿದ್ದೀರಿ. ಇನ್ನು 9 ತಲೆ ಬೇಕು. ಅವರವರೇ ಹೊಡೆದುಕೊಂಡು ಸತ್ತು ಹೋಗಿದ್ದರೆ ನಮ್ಮವರಿಗೆ ಇನ್ನೂ ಮನಸ್ಥಿತಿ ಗಟ್ಟಿಯಾಗಿಲ್ಲ ಎಂದಷ್ಟೇ. ತುರುಕರೇ ನಿಮ್ಮ ಒಂದೊಂದು ಕತ್ತು ತಗಿಯಲಿಲ್ಲ ಎಂದರೆ ದೇವರಾಣೆಯೂ ಸುಧಾರಿಸಿಕೊಳ್ಳುವುದಿಲ್ಲ” ಎಂದು ಹೇಳಿಕೆ ನೀಡಿದ್ದರು.
“ನೀವು ನನ್ನನ್ನು ಎತ್ತಿ. ಎಸ್ಡಿಪಿಐ, ಪಿಎಫ್ಐ ………. ನನ್ನನ್ನು ಎತ್ತಿ. ನಿಮ್ಮ ಕೈಲಾದ್ರೆ ನಳಿನ್ ಕುಮಾರ್ ಕಟೀಲ್ರನ್ನು ಎತ್ತಿ. ನಿಮ್ಮ ಕೈಲಾದರೆ ಬೊಮ್ಮಾಯಿ, ಹೋಮ್ಮಿನಿಸ್ಟರ್ರನ್ನು ಎತ್ತಿ….” ಎಂದಿದ್ದರು.
ಇದನ್ನೂ ಓದಿರಿ: ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ
ಅತ್ಯಂತ ಕೆಟ್ಟ ಪದಗಳನ್ನು ಮುಸ್ಲಿಂ ಸಮುದಾಯದ ವಿರುದ್ಧ ಕಾಳಿ ಸ್ವಾಮೀಜಿ ಬಳಸಿದ್ದರು. “ನೀವು ನನ್ನನ್ನು ಹೊಡೆದ ತಕ್ಷಣ ಗೋದ್ರಾ ಹತ್ಯಾಕಾಂಡ ಶುರುವಾಗುತ್ತದೆ. ಗೋರಿಪಾಳ್ಯ, ಕಲಾಸಿಪಾಳ್ಯಕ್ಕೆ ನುಗ್ಗಿ ಬೆಂಕಿ ಹಚ್ಚಲಾಗುತ್ತದೆ. ನಮ್ಮ ತಾಕತ್ತು ಏನೆಂಬುದು ತೋರಿಸುತ್ತೇವೆ. ಹೊಡೆಯುವುದಾದರೆ ದೊಡ್ಡದನ್ನು ಹೊಡೆಯಿರಿ…. ಯಾವ ಶಾಂತಿ ಕಾಪಾಡಬೇಕು ಮುಖ್ಯಮಂತ್ರಿಗಳೇ…” ಎಂದು ಬಾಯಿಗೆ ಬಂದಂತೆ ಮಾತನಾಡಿರುವ ಅವರು ಮುಸ್ಲಿಮರನ್ನು ಗುಂಡಿಕ್ಕಿ ಕೊಲ್ಲಲು ಪ್ರಚೋದಿಸಿದ್ದರು.
“ಮೂರು ದಿನದೊಳಗೆ ಎನ್ಕೌಂಟರ್ ಮಾಡಿ. ಇಲ್ಲವಾದರೆ ಪಾದಯಾತ್ರೆ ಮಾಡ್ತೀವಿ. ಒಂದು ಕತ್ತಿಗೆ ಹತ್ತು ಕತ್ತು ಉದುರಿಸಬೇಕು” ಎಂದು ಹೇಳಿಕೆ ನೀಡಿದ್ದರು.
Nothing will happen only eye wash