Homeಎಕಾನಮಿ'ನೋಟು ನಿಷೇಧದಿಂದ ಭಾರತದ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು': ನೊಬೆಲ್ ಪುರಸ್ಕೃತೆ ಎಸ್ತಾರ್ ಡುಫ್ಲೋ

‘ನೋಟು ನಿಷೇಧದಿಂದ ಭಾರತದ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು’: ನೊಬೆಲ್ ಪುರಸ್ಕೃತೆ ಎಸ್ತಾರ್ ಡುಫ್ಲೋ

- Advertisement -
- Advertisement -

ಭಾರತದಲ್ಲಿ 2016ರಲ್ಲಿ ಬಿಜೆಪಿ ಸರ್ಕಾರ ಏಕಾಏಕಿ, ರಾತ್ರೋರಾತ್ರಿ ಪ್ರಕಟಿಸಿದ್ದ ನೋಟು ಅಮಾನ್ಯೀಕರಣ ಕೆಲವೇ ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಲಿದೆ ಎಂದು ಹಲವು ಅರ್ಥಶಾಸ್ತ್ರಜ್ಞರು, ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು. ನಿಗದಿತ ಕಾರ್ಯಸೂಚಿ ಹಾಗೂ ಪರಿಣಾಮಗಳ ಬಗ್ಗೆ ಅಂದಾಜಿಲ್ಲದೆ ಹೇರಲಾಗಿರುವ ನೋಟು ನಿಷೇಧ ಕ್ರಮ ಮುಂದೊಂದು ದಿನ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು ನೀಡಲಿದೆ. ಇದರಿಂದ ಆಗಲಿರುವ ನೋವಿನ ಬಗ್ಗೆ ನಮಗ್ಯಾರಿಗೂ ಅಂದಾಜಿಲ್ಲ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞೆ ಎಸ್ತಾರ್ ಡುಫ್ಲೋ ಅಂದೇ ಹೇಳಿದ್ದರು.

ಹೌದು… 2016ರಲ್ಲಿ ಭಾರತದಲ್ಲಿ ನೋಟು ಅಮಾನ್ಯೀಕರಣವಾದಾಗಲೇ, ಈ ಕ್ರಮದಿಂದ ಭಾರತದ ಆರ್ಥಿಕತೆ ಅಪಾಯ ಎದುರಿಸಲಿದೆ ಎಂದು ಅರ್ಥಶಾಸ್ತ್ರಜ್ಞೆ ಎಸ್ತಾರ್ ಡುಫ್ಲೋ ಹೇಳಿದ್ದರು. ಫ್ರಾನ್ಸ್ ಮೂಲದ ಎಸ್ತಾರಾ ಡುಫ್ಲೋ, ಎಂಐಟಿಗೆ ತೆರಳುವ ಮುನ್ನ ಇತಿಹಾಸ ಮತ್ತು ಅರ್ಥಶಾಸ್ತ್ರವನ್ನು ಪ್ಯಾರಿಸ್ ಮೂಲದ ಎಕೋಲ್ ನಾರ್ಮಲ್ ಸುಪಿರೀಯರ್ ಕಾಲೇಜಿನಲ್ಲಿ ಓದಿದ್ದರು. 1999ರಲ್ಲಿ ಪಿ.ಎಚ್.ಡಿ ಪಡೆದಿದ್ದಾರೆ. ಡಾಕ್ಟರೇಟ್ ಪದವಿ ನಂತರದ ಐದು ವರ್ಷಗಳಲ್ಲಿ ಎಸ್ತಾರ್ ಅರ್ಥಶಾಸ್ತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದರು. 2010ರಲ್ಲಿ ಜಾನ್ ಬೇಟ್ಸ್ ಕ್ಲರ್ಕ್ ಪ್ರಶಸ್ತಿ ಪಡೆದರು. ನಂತರ 2012 ರಲ್ಲಿ ಡುಫ್ಲೋ ಮತ್ತು ಅಭಿಜಿತ್ ಬ್ಯಾನರ್ಜಿ ಬಡತನದ ಆರ್ಥಿಕತೆ ಎಂಬ ಪುಸ್ತಕ ಪ್ರಕಟಿಸಿದರು. ಬಡತನ ಹೋಗಲಾಡಿಸುವ ದಾರಿ ಯಾವುದು..? ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿದ್ದರು. ಎಂಐಟಿಯಲ್ಲಿ ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆ್ಯಕ್ಷನ್ ಲ್ಯಾಬ್ ( ಜೆ-ಪಾಲ್) ತೆರೆದರು. ಆರ್ಥಿಕತೆಯ ಅಭಿವೃದ್ಧಿ ಮತ್ತು ಹೊಸ ನೀತಿಗಳನ್ನು ತಿಳಿಸಲು ಸಹಕಾರಿಯಾಗಿದೆ.

ಲೈವ್ ಮಿಂಟ್ ಸುದ್ದಿವಾಹಿನಿ ನಡೆಸಿದ್ದ ಸಂದರ್ಶನದಲ್ಲಿ ಎಸ್ತಾರ್ ಡುಫ್ಲೋ ಭಾರತದ ಆರ್ಥಿಕತೆಯ ಮೇಲೆ ನೋಟು ನಿಷೇಧ ಯಾವ ರೀತಿ ಪರಿಣಾಮ ಬೀರಲಿದೆ, ದೇಶದಲ್ಲಿನ ಆರೋಗ್ಯ ಸ್ಥಿತಿ, ಶೈಕ್ಷಣಿಕ ಪ್ರಗತಿ ಮತ್ತು ಮಟ್ಟಕ್ಕೆ ಕಡಿಮೆ ಪ್ರಾತಿನಿಧ್ಯ ನೀಡುತ್ತಿರುವ ಕುರಿತು ಸುದೀರ್ಘವಾಗಿ ಹೇಳಿದ್ದರು. ಸಂದರ್ಶನದ ಕೆಲ ಪ್ರಶ್ನೋತ್ತರಗಳು ಈ ಕೆಳಗಿನಂತಿದೆ.

  • ನಿಮ್ಮ ಬಡತನದ ಅರ್ಥಶಾಸ್ತ್ರಜ್ಞ ಪುಸ್ತಕದಲ್ಲಿ ನೋಟು ಅಮಾನ್ಯೀಕರಣ ಒಂದು ಪ್ರಕರಣವಾಗಿದೆ. ಆಲೋಚನೆಯಿಲ್ಲದೆ ಮಾಡಿರುವ ನೋಟು ನಿಷೇಧ ಕ್ರಮ ನಗದು ರಹಿತ ಆರ್ಥಿಕ ವ್ಯವಸ್ಥೆಗೆ ಒಂದು ಪ್ರಕರಣದಂತೆ ಎಂದು ನೀವು ಭಾವಿಸುತ್ತೀರಾ..?

ನನ್ನ ಪ್ರಕಾರ ನೋಟು ನಿಷೇಧ ಅನುಷ್ಠಾನಕ್ಕೂ ಮೊದಲು ಆಲೋಚನೆ ಮಾಡದೇ, ಇದಕ್ಕೆ ಕಡಿಮೆ ಪ್ರಾಮುಖ್ಯತೆ ನೀಡಲಾಗಿದೆ. ಹೀಗಾಗಿ ನೋಟು ಅಮಾನ್ಯೀಕರಣ ಜಾರಿ, ನಾಟಕೀಯ ಬೆಳವಣಿಗೆಗೆ ಒಂದು ಉದಾಹರಣೆಯಾಗಿದೆ. ನೂರಕ್ಕೂ ಹೆಚ್ಚು ನಿಯಮಗಳನ್ನು ಮಾಡಲಾಗಿದೆ. ಆದರೆ ಅದ್ಯಾವುದರ ಬಗ್ಗೆಯೂ ಸ್ಪಷ್ಟತೆಯಿಲ್ಲ. ಉದಾಹರಣೆಗೆ ಯುಪಿಐ ( ಯೂನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ ) ವೇದಿಕೆ ನಗದು ರಹಿತ ಪೇಟಿಎಂ ಇದ್ದಂತೆ. ಬ್ಯಾಂಕುಗಳು ನೋಟು ನಿಷೇಧ ನಿಯಮಗಳ ಜಾರಿ ಮಾಡಲು ಸಿದ್ಧವಾಗಿಲ್ಲ, ಅವುಗಳ ಅನುಮೋದನೆಗೆ ಹಿಂಜರಿಯುತ್ತಿವೆ. ಯಾವುದೇ ಪ್ರಮುಖ ನಿಯಂತ್ರಣವಿಲ್ಲದೇ ನಗದು ರಹಿತ ಆರ್ಥಿಕತೆಯತ್ತ ಸಾಗಲು ತೆಗೆದುಕೊಂಡ ಕ್ರಮ ಇದಾಗಿದೆ.

  • ನೋಟು ಅಮಾನ್ಯೀಕರಣದ ಪರಿಣಾಮ ಹೆಚ್ಚು ಅನೌಪಚಾರಿಕ ವಲಯದ ಮೇಲೆ ಬೀರುತ್ತದೆ ಎಂದೇ ಹೇಳಲಾಗುತ್ತಿದೆ. ಇದು ಹೆಚ್ಚಾಗಿ ಬಡ ಜನರ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ಬಡವರ ಆದಾಯದ ಮೇಲೆ ಬೀರುವ ಈ ಆಘಾತ ಭಾರತದಲ್ಲಿನ ಬಡತನದ ವಿರುದ್ಧ ಹೋರಾಟ ನಡೆಸಲು ಸೂಕ್ತವೇ, ಇದರ ಪರಿಣಾಮ ಏನಾಗಲಿದೆ..?

ಈ ಬಗ್ಗೆ ನಮಗೆ ಗೊತ್ತಿಲ್ಲ. ಈ ನಾವು ಏನನ್ನೂ ಈಗಲೇ ಹೇಳುವುದು ಸಾಧ್ಯವಿಲ್ಲ. ಆರ್ಥಿಕತೆಯ ಅನೌಪಚಾರಿಕ ಜಿಡಿಪಿ ಸೃಷ್ಟಿಯನ್ನು ಅಳೆಯಲು ಯಾವುದೇ ಕಾರ್ಯವಿಧಾನವಿಲ್ಲ. ಅನೌಪಚಾರಿಕ ಆರ್ಥಿಕತೆ, ಜಿಡಿಪಿಯನ್ನು ಔಪಚಾರಿಕ ಆರ್ಥಿಕ ಜಿಡಿಪಿಗೆ ಸೂಚಿಸುವ ಮೂಲಕ ಲೆಕ್ಕ ಹಾಕಲಾಗುತ್ತದೆ. ನಷ್ಟದ ನಿಖರತೆಯ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಅಷ್ಟೇ ಅಲ್ಲ ಯಾವುದೇ ಹಿನ್ನಡೆ ಇಲ್ಲ ಎಂಬುದಕ್ಕೆ ಸರ್ಕಾರ ಅಂಕಿ ಅಂಶಗಳನ್ನು ಬಳಸಬಹುದು. ಕಾರ್ಯಸ್ಥಳಗಳಿಂದ ಕಾರ್ಮಿಕರು ಗ್ರಾಮಗಳತ್ತ ತೆರಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ದತ್ತಾಂಶವಿಲ್ಲ. ಇದು ಅಲ್ಫಾವಧಿಯಲ್ಲಿ ಜನತೆ ಅನುಭವಿಸುವ ನೋವನ್ನು ಎತ್ತಿ ಹಿಡಿಯುತ್ತದೆ.

  • ಆರ್ಥಿಕತೆಯ ಚಿಂತನೆ ಹಾಗೂ ಬೆಳವಣಿಗೆ, ಕಲ್ಯಾಣ, ಆರ್ಥಿಕತೆಯ ಮೇಲೆ ಕೇಂದ್ರೀಕರಿಸುವುದರ ನಡುವಿನ ವಿಭಜನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು..?

ಕೇವಲ ಆರ್ಥಿಕತೆಯ ಬೆಳವಣಿಗೆ ಮೇಲೆ ದೃಷ್ಟಿ ಕೇಂದ್ರೀಕರಿಸುವುದರಿಂದ ಸಮಸ್ಯೆ ಹಾಗೂ ಯಾವ ಬೆಳವಣಿಗೆ ಆಗಲಿದೆ ಎಂಬುದನ್ನು ಹೇಳುವುದು ಕಷ್ಟ. ಇದು ಕೇವಲ ನನ್ನ ಅಭಿಪ್ರಾಯ ಮಾತ್ರವಲ್ಲ. ಆರ್ಥಿಕ ಬೆಳವಣಿಗೆಯ ಹಲವು ನಿರ್ಧಾರಕಗಳ ಬಗ್ಗೆ ಅಧ್ಯಯನ ಮಾಡಿರುವ ಸ್ಥೂಲ ಅರ್ಥಶಾಸ್ತ್ರಜ್ಞರು ಇದನ್ನೇ ಹೇಳಿದ್ದಾರೆ. ಕೇವಲ ಬೆಳವಣಿಗೆಯ ಮೇಲೆಯೇ ಕೇಂದ್ರೀಕೃತವಾಗಿರುವುದು ಅನುಪಯುಕ್ತ. ಭವಿಷ್ಯದ ಪೀಳಿಗೆಗೆ ಸಾಮಾಜಿಕ ಚಲನಶೀಲತೆಯನ್ನು ಖಚಿತಪಡಿಸುವಲ್ಲಿ ವಿಫಲವಾಗುವುದು ಬೆಳವಣಿಗೆಗೆ ಪ್ರಮುಖ ಮತ್ತೊಂದು ವಿಷಯ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರ ಪ್ರಾಥಮಿಕ ಅಥವಾ ಚುನಾವಣೆ ವೇಳೆ ಬರ್ನಿ ಸ್ಯಾಂಡರ್ಸ್ ಗೆ ಬೆಂಬಲ ವ್ಯಕ್ತವಾಯಿತು. ಬೆಳವಣಿಗೆಗೆ ಏನು ಕಾರಣ ಎಂದು ಒಬ್ಬರು ತಿಳಿದಿದ್ದರೂ ಸಹ, ಬೆಳವಣಿಗೆಯೊಂದರ ಮೇಲೆಯೇ ದೃಷ್ಟಿ ಕೇಂದ್ರೀಕರಿಸಿ, ದೊಡ್ಡ ಲಾಭಗಳನ್ನು ನಿರ್ಲಕ್ಷಿಸುವಾಗ ಅದರ ಮೇಲೆ ಕೇಂದ್ರೀಕರಿಸುವುದು ಪ್ರತಿ ಉತ್ಪಾದಕವಾಗಿದೆ ಎಂದು ನಾನು ಭಾವಿಸುತ್ತೇನೆ.

ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳನ್ನು ನಿಷೇಧ ಮಾಡಿರುವುದು, ಯಾವುದೇ ಗಂಭೀರ ಆಲೋಚನೆಯಿಲ್ಲದೆ ಮಾಡಿದ ನೀತಿ ಪ್ರಕಟಣೆಯಾಗಿದೆ. ಕರೆನ್ಸಿ-ಸ್ಕ್ರ್ಯಾಪಿಂಗ್ ಗ್ಯಾಂಬಿಟ್‌ನ ನೈಜ ಪರಿಣಾಮ ಎಂದಿಗೂ ಕೂಡಲೇ ತಿಳಿದು ಬರುವುದಿಲ್ಲ. ಯಾಕೆಂದರೆ ಭಾರತದ ಸಂಖ್ಯಾಶಾಸ್ತ್ರೀಯ ಅಂಕಿಅಂಶಗಳು ಅನೌಪಚಾರಿಕ ಆರ್ಥಿಕತೆಯ ದತ್ತಾಂಶವನ್ನು ನಿಯಮಿತವಾಗಿ ಸೆರೆ ಹಿಡಿಯುವುದಿಲ್ಲವೆಂಬ ಬಗ್ಗೆ ಎಸ್ತಾರ್ ಡುಫ್ಲೋ 2016ರಲ್ಲೇ ತಿಳಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...