Homeಮುಖಪುಟಪಾಕ್ ಕ್ರಿಕೆಟ್ ನಾಯಕಿಯ ಪುಟ್ಟ ಮಗುವಿನೊಂದಿಗೆ ಭಾರತೀಯ ತಂಡದ ಪ್ರೀತಿಯ ಕ್ಷಣಗಳು: ಎಲ್ಲೆಡೆ ಅಭಿಮಾನದ ಮಹಾಪೂರ

ಪಾಕ್ ಕ್ರಿಕೆಟ್ ನಾಯಕಿಯ ಪುಟ್ಟ ಮಗುವಿನೊಂದಿಗೆ ಭಾರತೀಯ ತಂಡದ ಪ್ರೀತಿಯ ಕ್ಷಣಗಳು: ಎಲ್ಲೆಡೆ ಅಭಿಮಾನದ ಮಹಾಪೂರ

- Advertisement -
- Advertisement -

ಮಹಿಳಾ ವಿಶ್ವಕಪ್ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 107 ರನ್‌ಗಳ ಅಂತರದಿಂದ ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಆದರೆ ಭಾರತೀಯ ತಂಡ ಅದಕ್ಕಿಂತಲೂ ಹೆಚ್ಚು ಖುಷಿ ಕೊಡುವ ಪ್ರೀತಿಯನ್ನು ಅಂಗಳದ ಹೊರಗೆ ಸಹ ತೋರಿಸಿತು. ಪಂದ್ಯದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡ ನಾಯಕಿ ಬಿಸ್ಮಾ ಮರೂಫ್‌ರವರ 7 ತಿಂಗಳ ಹೆಣ್ಣು ಮಗುವಿ ಫಾತಿಮಳೊಂದಿಗೆ ಆಟವಾಡಿದ ಭಾರತದ ಆಟಗಾರ್ಟಿಯರು ಪ್ರೀತಿಯ ಕ್ಷಣಗಳಿಗೆ ಸಾಕ್ಷಿಯಾದರು. ಆ ಸಂದರ್ಭದಲ್ಲಿ ಮಗು ಮತ್ತು ಪಾಕ್ ನಾಯಕಿಯ ಜೊತೆಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಈ ಸುಂದರ ಕ್ಷಣದ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಭಾರತೀಯ ತಂಡದ ಆ ಮಮತೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

ಭಾರತೀಯ ಆಟಗಾರ್ಟಿಯರು ಸೆಲ್ಫಿ ತೆಗೆದುಕೊಳ್ಳುತ್ತಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಐಸಿಸಿ, “ಪುಟ್ಟ ಫಾತಿಮಾಗೆ ಕ್ರಿಕೆಟ್ ಸ್ಫೂರ್ತಿಯ ಮೊದಲ ಪಾಠ – ಭಾರತ ಮತ್ತು ಪಾಕ್ ಆಟಗಾರ್ತಿಯರಿಂದ” ಎಂದು ಬರೆದಿದೆ.

“ಎಂತಹ ಸುಂದರ ಕ್ಷಣ! ಕ್ರಿಕೆಟ್ ಮೈದಾನದಲ್ಲಿ ಬೌಂಡರಿಗಳನ್ನು ಹೊಂದಿದೆ, ಆದರೆ ಅದು ಮೈದಾನದ ಹೊರಗೆ ಎಲ್ಲವನ್ನೂ ಮುರಿಯುತ್ತದೆ. ಕ್ರೀಡೆ ಒಂದುಗೂಡಿಸುತ್ತದೆ!” ಎಂದು ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ಜನರು ತಮ್ಮ ಸರ್ಕಾರದಂತೆಯೇ ಇರುವುದಿಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಎಂದು ಇಂಕ್ವಿಲಾಬ್ ಇಂಡಿಯಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಆ ಮೂಲಕ ಭಾರತ ಮತ್ತ ಪಾಕ್ ಸರ್ಕಾರಗಳ ದ್ವೇಷ ರಾಜಕಾರಣವನ್ನು ಟೀಕಿಸಿದೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡವು ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕ್ ತಂಡವನ್ನು ಸೋಲಿಸಿದೆ. ಆದರೆ ಈ ಗೆಲುವಿಗಿಂತ ಹೆಚ್ಚು ಸುದ್ದಿಯಾದುದು, ಭಾರತೀಯ ಆಟಗಾರ್ತಿಯರು ಪಾಕ್ ಆಟಗಾರ್ತಿಯರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡದ್ದು ಮತ್ತು ಪಾಕ್ ತಂಡದ ನಾಯಕಿ ಬಿಸ್ಮ ಮಹ್ರೂಫ್ ಅವರ ಪುಟ್ಟ ಮಗಳು ಫಾತಿಮಾಳ ಜೊತೆ ಆಟವಾಡುತ್ತಾ ಭಾರತೀಯ ಆಟಗಾರರು ಸಮಯ ಕಳೆದಿರುವುದು. ಐಸಿಸಿ ಈ ವಿಡಿಯೋ ಮತ್ತು ಫೋಟೋವನ್ನು ಹಂಚಿಕೊಂಡಿದೆ.
ನಿನ್ನೆ ಧೋನಿ ಮತ್ತು ಕೊಹ್ಲಿ. ಇವತ್ತು ಎಕ್ತಾ ಬಿಸ್ತ್ ಮತ್ತು ಇತರರು. ದ್ವೇಷ ಮತ್ತೆ ಮತ್ತೆ ಸೋಲುತ್ತಲೇ ಇದೆ ಎಂದು ಏ ಕೆ ಕುಕ್ಕಿಲರವರು ಬರೆದಿದ್ದಾರೆ.


ಇದನ್ನೂ ಓದಿ: ಮಹಿಳಾ ವಿಶ್ವಕಪ್‌: ಪಾಕ್‌ ವಿರುದ್ಧ ಭಾರತ ಜಯಭೇರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...