Homeಮುಖಪುಟಭಯೋತ್ಪಾದಕರೊಂದಿಗೆ ಸಿಕ್ಕಿಬಿದ್ದ ಪೊಲೀಸ್‌ ಅಧಿಕಾರಿ ದೇವಿಂದರ್ ಸಿಂಗ್ ಕುರಿತು ರಾಷ್ಟ್ರೀಯವಾದಿ ಟಿವಿಗಳ ವಿಚಿತ್ರ ಮೌನ!

ಭಯೋತ್ಪಾದಕರೊಂದಿಗೆ ಸಿಕ್ಕಿಬಿದ್ದ ಪೊಲೀಸ್‌ ಅಧಿಕಾರಿ ದೇವಿಂದರ್ ಸಿಂಗ್ ಕುರಿತು ರಾಷ್ಟ್ರೀಯವಾದಿ ಟಿವಿಗಳ ವಿಚಿತ್ರ ಮೌನ!

ಅರ್ನಾಬ್ ಗೋಸ್ವಾಮಿಯಿಂದ ಹಿಡಿದು ಸುಧೀರ್ ಚೌಧರಿಯ ತನಕ ಸ್ವಯಂಘೋಷಿತ ರಾಷ್ಟ್ರೀಯವಾದಿ ಟಿವಿ ನಿರೂಪಕರೆಲ್ಲಾ ಭಯೋತ್ಪಾದಕ ದಾಳಿಯನ್ನು ಯೋಜಿಸುತ್ತಿದ್ದರೆನ್ನಲಾದ ಉಗ್ರಗಾಮಿಗಳ ಜೊತೆ ಬಂಧಿತನಾದ ಪೊಲೀಸ್ ಅಧಿಕಾರಿಗಿಂತ ಪ್ರತಿಭಟನಾನಿರತ ವಿದ್ಯಾರ್ಥಿಗಳ ಬಗ್ಗೆಯೇ ಹೆಚ್ಚು ಆತಂಕ ಹೊಂದಿರುವಂತಿದೆ.

- Advertisement -
- Advertisement -

ಕಾಶ್ಮೀರದಿಂದ ಇತ್ತೀಚಿನ ದಿನಗಳಲ್ಲಿ ಹೊರಬಂದ ಅತ್ಯಂತ ರೋಚಕ ಸುದ್ದಿಯೊಂದರ ಪ್ರಕಾರ, ಪೊಲೀಸ್ ಉನ್ನತಾಧಿಕಾರಿಯೊಬ್ಬರನ್ನು ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿಗಳ ಜೊತೆಯಲ್ಲಿ ಬಂಧಿಸಲಾಗಿದ್ದು, ಇವರಲ್ಲಿ ಒಬ್ಬಾತ ವಲಸೆ ಕಾರ್ಮಿಕರ ಕೊಲೆಗಳ ಆರೋಪದಲ್ಲಿ ಪೊಲೀಸರಿಗೆ ಬೇಕಾಗಿದ್ದವನು. ಹೀಗೆ ಬಂಧಿತನಾದ ದೇವಿಂದರ್ ಸಿಂಗ್ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಡೆಪ್ಯುಟಿ ಸುಪರಿಂಟೆಂಟ್ ಆಗಿದ್ದು, ಎರಡು ದಶಕಗಳ ಕಾಲ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಗಳ ತಜ್ಞರಾಗಿದ್ದವರು ಮಾತ್ರವಲ್ಲ, ರಾಷ್ಟ್ರಪತಿಯವರಿಂದ ಶೌರ್ಯ ಪ್ರಶಸ್ತಿ ಪಡೆದವರು. ಆತ ಹಣಕ್ಕಾಗಿ ಉಗ್ರಗಾಮಿಗಳ ಸಾಗಾಟಗಾರನಾಗಿ ಕೆಲಸ ಮಾಡುತ್ತಿದ್ದುದು ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದೆ. ಆದರೂ, ಈ ಸ್ವಯಂಘೋಷಿತ ರಾಷ್ಟ್ರೀಯವಾದಿ ಟಿವಿಗಳಿಗೆ ಇದೊಂದು ದೊಡ್ಡ ಸುದ್ದಿಯಾಗಿ ಕಾಣಲೇ ಇಲ್ಲ.

ಈ ವಿಷಯ ಇನ್ನಷ್ಟು ಗಂಭೀರವಾಗಿರುವುದಕ್ಕೆ ಕಾರಣವೆಂದರೆ, ಸಂಸತ್ ಮೇಲಿನ ದಾಳಿಗಾಗಿ ಮರಣದಂಡನೆಗೆ ಗುರಿಯಾದ ಅಫ್ಜಲ್ ಗುರು, 2004ರಲ್ಲಿ ತಿಹಾರ್ ಜೈಲಿನಿಂದ ತನ್ನ ವಕೀಲ ಸುಶೀಲ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಈ ದೇವಿಂದರ್ ಸಿಂಗ್ ಬಗ್ಗೆ ಉಲ್ಲೇಖವಿದೆ. ದಾಳಿಕೋರರಿಗೆ ಕಾರು ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಮಾಡುವಂತೆ ಸಿಂಗ್ ತನ್ನನ್ನು ಕೇಳಿಕೊಂಡದ್ದಾಗಿ ಈ ಪತ್ರದಲ್ಲಿ ಆರೋಪಿಸಲಾಗಿತ್ತು. ನಂತರ ತಾನು ಅಫ್ಜಲ್ ಗುರುವಿಗೆ ಚಿತ್ರಹಿಂಸೆ ನೀಡಿರುವುದಾಗಿ ಸಿಂಗ್ ಒಪ್ಪಿಕೊಂಡಿದ್ದರು.

ಈಗ, 2020ರಲ್ಲಿ ಗಣರಾಜ್ಯೋತ್ಸವದಂದು ದಿಲ್ಲಿಯಲ್ಲಿ ದಾಳಿ ನಡೆಸಲು ಹೋಗುತ್ತಿದ್ದರು ಎನ್ನಲಾದ ಇಬ್ಬರು ಉಗ್ರಗಾಮಿಗಳ ಜೊತೆ ಸಿಂಗ್ ಬಂಧಿತರಾಗಿದ್ದಾರೆ. ಸಾಮಾನ್ಯವಾಗಿ ಇಂತಹಾ ಮಹತ್ವದ ಸುದ್ದಿ ಹೆಚ್ಚಿನ ಸುದ್ದಿ ಚಾನೆಲ್‌ಗಳಲ್ಲಿ ಪ್ರಮುಖ ಸುದ್ದಿಯಾಗಿ ಬರುತ್ತಿತ್ತು. ನಾಗರಿಕ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುವ ವಿದ್ಯಾರ್ಥಿಗಳನ್ನು ಮತ್ತು ಇತರರನ್ನು ಖಂಡಿಸಲು ಆದನ್ನು ಬಳಸಲಾಗುತ್ತಿತ್ತು. ‘ರಾಷ್ಟ್ರೀಯವಾದಿ’ ಟಿವಿ ನಿರೂಪಕರು “ಭಾರತದ ಮೇಲೆ ದಾಳಿ ಮಾಡಲು ಬರುತ್ತಿದ್ದ ಭಯೋತ್ಪಾದಕರ ಬಂಧನ! ಕನ್ನಯ್ಯ ಕುಮಾರ್ ಏನು ಹೇಳುತ್ತಾರೆ? ಅವರನ್ನು ಬೆಂಬಲಿಸುತ್ತಾರೊ?” ಎಂದು ಕಿರುಚಾಡುವುದನ್ನು ಊಹಿಸಬಹುದಿತ್ತು.

ವಿಚಿತ್ರವೆಂದರೆ, ಇಂತಹಾ ಕೋಡಂಗಿಯಾಟ ಈ ತನಕ ಈ ಸುದ್ದಿಯ  ಬಗ್ಗೆ ಕಂಡುಬಂದಿಲ್ಲ. ಸ್ವಯಂಘೋಷಿತ ರಾಷ್ಟ್ರೀಯವಾದಿ ಟಿವಿ ನಿರೂಪಕರು ಈ ಸುದ್ದಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ‘ಟೈಮ್ಸ್ ನೌ’ನಲ್ಲಿ ಅರ್ನಾಬ್ ಗೋಸ್ವಾಮಿಯ ಶಿಷ್ಯರಾದ ನವಿಕಾ ಕುಮಾರ್ ಮತ್ತು ಅರ್ನಾಬ್‌ವಾದಿ ರಾಹುಲ್ ಶಿವ ಶಂಕರ್ (ಆರೆಸ್ಸೆಸ್) ಜಾಮಿಯಾದಲ್ಲಿ ನಡೆಯುತ್ತಿರುವ “ಆತಂಕಕಾರಿ” ಪ್ರತಿಭಟನೆಗಳ ಬಗ್ಗೆ ಕಿರುಚಾಡುತ್ತಾ, ಅದಕ್ಕೆ ಸಂಪೂರ್ಣವಾಗಿ ಇಸ್ಲಾಮಿಕ್ ಬಣ್ಣ ಬಳಿದುಬಿಟ್ಟಿದ್ದಾರೆ. ಅದಕ್ಕೆ ಆರೆಸ್ಸೆಸ್ ನೀಡಿರುವ ಸಾಕ್ಷ್ಯವಾದರೂ ಏನು? ವಾಸ್ತವವಾಗಿ ಅಲ್ಲಿ ಕೂಗಲಾದ ಘೋಷಣೆಯನ್ನು ಶಿವ ಶಂಕರ್ “ಇಸ್ಲಾಮಿಕ್” ಎಂದು ಬಣ್ಣಿಸಿದ್ದರು.

ಇನ್ನು ರಿಪಬ್ಲಿಕ್ ಟಿವಿಯಲ್ಲಿ ಅರ್ನಾಬ್ ಗೋಸ್ವಾಮಿ ಮೂರು ಭಯಂಕರ ಚರ್ಚೆಗಳನ್ನು ನಡೆಸಿ,  ಫೇಸ್‌ಬುಕ್‌ನಲ್ಲಿ #CantStopRepublic #AzadiHypocrisy and #CongressVsBharat ಮುಂತಾದ ಹ್ಯಾಷ್‌ಟ್ಯಾಗ್‌ಗಳನ್ನು ಹಾಕಿದ್ದರು. ಆದರೆ, ದೇವಿಂದರ್ ಸಿಂಗ್ ಬಗ್ಗೆ ಏನೂ ಇರಲಿಲ್ಲ ಎಂದು ಬೇರೆ ಹೇಳಬೇಕಾಗಿಲ್ಲ. ಕಾಶ್ಮೀರದಲ್ಲಿ ಭಯೋದ್ಪಾದಕ ದಾಳಿಯನ್ನು ವಿಫಲಗೊಳಿಸಿದ ಬಗ್ಗೆ ಏನೇನೂ ಇಲ್ಲ!

‘ಇಂಡಿಯಾ ಟುಡೆ’ಯ ನಿರೂಪಕ ಶಿವ ಆರೂರ್ ತನ್ನ ಶೋ ‘ ಇಂಡಿಯಾ ಫಸ್ಟ್’ನಲ್ಲಿ ಈ ಸುದ್ದಿಯ ವಿವರ ನೀಡಿ, ‘ರಾ’ಮತ್ತು ‘ಐಬಿ’ಯಂತಹ ಗುಪ್ತಚರ ಸಂಸ್ಥೆಗಳು ಬಂಧಿತ ಪೊಲೀಸ್ ಅಧಿಕಾರಿಯ ವಿಚಾರಣೆ ನಡೆಸಲಿರುವುದಾಗಿ ತಿಳಿಸಿದ್ದರು. ಆದರೆ, ಚಾನೆಲ್‌ನ ಸ್ವಯಂಘೋಷಿತ ‘ಆರ್ಮಿ ಕಮಾಂಡೊ’ ಗೌರವ್ ಸಾವಂತ್ ನಾಪತ್ತೆಯಾಗಿದ್ದರು. ಅವರು ಟ್ವಿಟರ್‌ನಲ್ಲಿ ಪಾಕಿಸ್ತಾನದ ಯಾವುದೋ ಮಂತ್ರಿಯನ್ನು ಟ್ರೋಲ್ ಮಾಡಿದ್ದು ಕಂಡುಬಂತು. ಇಂಡಿಯಾ ಟುಡೆಯ “ಸಮರ ಭೂಮಿ”ಯಲ್ಲಿ ಸಾವಂತ್ ಗೆಳೆಯನಾದ ರಾಹುಲ್ ಕನ್ವಲ್ ತನ್ನ ಶೋ “ನ್ಯೂಸ್ ಟ್ರ್ಯಾಕ್‌”ನಲ್ಲಿ ಯಾವುದೋ “ಜೆಎನ್‌ಯು ತಪ್ಪೊಪ್ಪಿಗೆ” ಟೇಪನ್ನು ನುಡಿಸುತ್ತಿದ್ದರು.

ಝೀ ಟಿವಿಯ ಭಾರತ ವಿರೋಧಿಗಳ ವಿರೋಧಿ ಸ್ವಯಂಘೋಷಿತ ಯೋಧ ಸುಧೀರ್ ಚೌಧರಿ, ಜೆಎನ್‌ಯು ವಿದ್ಯಾರ್ಥಿಗಳ “ಡಿಎನ್‌ಎ ಪರೀಕ್ಷೆ” ಮಾಡುತ್ತಾ, ಪೂರಿಗಳ ಚಿತ್ರಹಾಕುತ್ತಾ  ಉಪವಾಸ ಇರುವುದರ ಲಾಭಗಳ ಬಗ್ಗೆ ಚರ್ಚೆ ನಡೆಸುತ್ತಾ ಕುಳಿತಿದ್ದರು.

ಎಬಿಪಿ ನ್ಯೂಸ್‌ನ ರುಬಿಕಾ, “ಭಾರತದದ ಅತ್ಯಂತ ದೊಡ್ಡ ಶತ್ರು”- ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಕುರಿತು ಚರ್ಚಿಸುತ್ತಿದ್ದರು. ಅವರಿಗೆ ವಿಫಲಗೊಳಿಸಲಾದ ಭಯೋತ್ಪಾದಕ ದಾಳಿಗಿಂತ ಜಾಮಿಯಾದ ವಿದ್ಯಾರ್ಥಿಗಳು ಮತ್ತು ಉಪಕುಲಪತಿ ನಡುವಿನ ವಾಗ್ವಾದ ಮುಖ್ಯವಾಗಿತ್ತು. ರುಬಿಕಾರ ಅರೆ ಸಹೋದರಿ ಅಂಜನಾ ಓಂ ಕಷ್ಯಪ್ ಕ್ಯಾಂಪಸ್‌ಗಳ ಎಡ-ಬಲ ಕಾದಾಟದಲ್ಲಿ ಯಾರು ಸರಿ ಎಂದು ಚರ್ಚಿಸುತ್ತಿದ್ದರು.

ಇಲ್ಲಿ ಒಂದು ವಿನ್ಯಾಸ ಕಾಣುತ್ತಿದೆಯೆ? ಈ ಎಲ್ಲಾ ರಾಷ್ಟ್ರೀಯವಾದಿಗಳು ದೇಶದ ಮೇಲೆ ನಡೆಯಲುದ್ದೇಶಿಸಿದ್ದ ಭಯೋತ್ಪಾದಕ ದಾಳಿಯ ಕುರಿತು ಚರ್ಚಿಸಲಿಲ್ಲ. ಅವರಿಗೆ ಪ್ರತಿಭಟನಾನಿರತ ವಿದ್ಯಾರ್ಥಿಗಳೇ ದೊಡ್ಡ ಶತ್ರುಗಳಂತೆ ಕಂಡರು.

ಇದೀಗ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಾಂಗ್ರೆಸ್ ಮೇಲೆ ವಾಗ್ದಾಳಿ ಮಾಡಲು ಸುದ್ದಿಗೋಷ್ಟಿ ನಡೆಸಿದ ಬಳಿಕ ಟೈಮ್ಸ್ ನೌ ಮತ್ತು ರಿಪಬ್ಲಿಕ್ ಟಿವಿ ಕೊನೆಗೂ ಈ ಸುದ್ದಿ ಬಗ್ಗೆ ಎಚ್ಚರಗೊಂಡಿವೆ. ಗಂಟೆಗಟ್ಟಲೆ ಕಾಲ ಪ್ರೈಮ್ ಟೈಮ್‌ನಲ್ಲಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಪಾಕಿಸ್ತಾನದ ಪರವಾಗಿವೆ ಎಂದು ಕಿರಿಚಾಡುವುದರಲ್ಲೇ ಪ್ರಮುಖ ಚಾನೆಲ್‌ಗಳು ಕಾಲಕಳೆಯುತ್ತಿವೆ. ಈ ಗದ್ದಲದ ನಡುವೆ ಭಯೋತ್ಪಾದಕರ ಜೊತೆ ಈ ಪೊಲೀಸ್ ಅಧಿಕಾರಿಗೆ ಏನು ಕೆಲಸ ಎಂದು ಕೇಳುವುದನ್ನು ನಾವೆಲ್ಲರೂ ಮರೆತೇಬಿಡುತ್ತೇವೆ!

ಕೃಪೆ: ನ್ಯೂಸ್‌ಲಾಂಡ್ರಿ

ಅನುವಾದ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...