ಪ್ರಧಾನಿ ನರೇಂದ್ರ ಮೋದಿ ಇದ್ದ ವೇದಿಕೆಯಲ್ಲೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತಮಿಳುನಾಡಿಗೆ ಆಗುತ್ತಿರುವ ಅನ್ಯಾಯಗಳನ್ನು ಪ್ರಸ್ತಾಪಿಸಿದ್ದು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬೇಸರಗೊಂಡಿದ್ದಾರೆ.
ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಸಂಜೆ ಚೆನ್ನೈಗೆ ಭೇಟಿ ನೀಡಿದಾಗ ಆಡಳಿತಾರೂಢ ಸರ್ಕಾರ ರಾಜಕೀಯ ನಾಟಕ ನಡೆಸಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಕಿಡಿಕಾರಿದ್ದಾರೆ.
ನಿನ್ನೆ ಸಂಜೆ ಪ್ರಧಾನಿ ಮೋದಿ ವೇದಿಕೆಯಲ್ಲಿದ್ದಾಗ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಾಡಿದ ಭಾಷಣವು ರಾಜಕೀಯ ನಾಟಕದಿಂದ ಕೂಡಿತ್ತು ಎಂದು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಾಷ್ಟ್ರೀಯ ಆರ್ಥಿಕತೆಗೆ ತಮಿಳುನಾಡು ನೀಡುತ್ತಿರುವ ಕೊಡುಗೆ ಜೊತೆಗೆ ಕೇಂದ್ರ ಸರ್ಕಾರದಿಂದ ಪಡೆದ ಪಾಲಿನ ನಡುವಿನ ಅಸಮಾನತೆಯನ್ನು ಸ್ಟಾಲಿನ್ ಪ್ರಸ್ತಾಪಿಸಿದ್ದರು.
ಜಿಡಿಪಿಯಲ್ಲಿ ರಾಜ್ಯದ ಪಾಲು ಶೇ 9.22 ಮತ್ತು ಕೇಂದ್ರ ಸರ್ಕಾರದ ಒಟ್ಟಾರೆ ತೆರಿಗೆ ಆದಾಯದಲ್ಲಿ ರಾಜ್ಯದ ಪಾಲು ಶೇ 6ರಷ್ಟಿದೆ. ಆದರೆ ಕೇಂದ್ರ ಸರ್ಕಾರದಿಂದ ತಮಿಳುನಾಡು ಪಡೆಯುವ ಆದಾಯ ಕೇವಲ ಶೇ 1.23 ಮಾತ್ರ ಎಂದು ಸ್ಟಾಲಿನ್ ಪ್ರಸ್ತಾಪಿಸಿದರು. ಬಾಕಿ ಉಳಿದಿರುವ ಜಿಎಸ್ಟಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿರಿ: ಸ್ಟಾಲಿನ್ ಮುಖ್ಯಮಂತ್ರಿಯಾಗಿ ಒಂದು ವರ್ಷ: ರಾಷ್ಟ್ರ ರಾಜಕಾರಣಕ್ಕೆ ಬೇಕಲ್ಲವೇ ‘ತಮಿಳುನಾಡು ಮಾದರಿ?’
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ, “ರಾಜ್ಯವು ಕೇಂದ್ರ ಸರ್ಕಾರಕ್ಕೆ 25,979 ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದೆ, ಆದರೆ ಕೇಂದ್ರ ಹಣಕಾಸು ಸಚಿವರಾಗಲಿ ಅಥವಾ ಪ್ರಧಾನಿಯಾಗಲಿ ಈ ಬಗ್ಗೆ ಮಾತನಾಡಲಿಲ್ಲ. ಜಿಎಸ್ಟಿ ಬಾಕಿಯನ್ನು ಜಿಎಸ್ಟಿ ಕೌನ್ಸಿಲ್ ಇತ್ಯರ್ಥಪಡಿಸಬೇಕು. ನಮ್ಮ ಹಣಕಾಸು ಸಚಿವರು ಅವರನ್ನು ತಡೆಯಲು ನಿರ್ಧರಿಸಿದರೂ ಅದು ಸಾಧ್ಯವಿಲ್ಲ. ತಮಿಳುನಾಡಿಗೆ ಬಾಕಿ ಇರುವ ಜಿಎಸ್ಟಿ ಬಾಕಿಯನ್ನು ನಿಲ್ಲಿಸುವಲ್ಲಿ ಹಣಕಾಸು ಸಚಿವರ ಪಾತ್ರವಿಲ್ಲ” ಎಂದಿದ್ದಾರೆ.
ಭಾಷಣದಲ್ಲಿ ಸ್ಟಾಲಿನ್ ಗಮನ ಸೆಳೆದ ಅಂಶಗಳು
“ಹಿಂದಿಗೆ ಸಮಾನವಾಗಿ ತಮಿಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ಟಾಲಿನ್ ಒತ್ತಾಯಿಸಿದರು.
ರಾಜ್ಯ ವಿಧಾನಸಭೆಯಲ್ಲಿ ನೀಟ್ ವಿರುದ್ಧ ಮಸೂದೆಯನ್ನು ಅಂಗೀಕರಿಸಿದ್ದು, ತಮಿಳುನಾಡಿಗೆ ನೀಟ್ನಿಂದ ವಿನಾಯಿತಿ ನೀಡಬೇಕು. ಇತರ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡು ವಿಶಿಷ್ಟವಾಗಿದೆ. ಸಾಮಾಜಿಕ ನ್ಯಾಯ, ಮಹಿಳಾ ಅಭಿವೃದ್ಧಿ ಮತ್ತು ಸಮಾನತೆಗೆ ಆದ್ಯತೆ ನೀಡಿದೆ ಎಂದು ತಿಳಿಸಿದರು.
“ದ್ರಾವಿಡ ಮಾದರಿಯ ಆಡಳಿತವು ಹಣಕಾಸಿನ ಅಸಮತೋಲನವನ್ನು ಬಹುಮಟ್ಟಿಗೆ ಸರಿಪಡಿಸಿದೆ. ರಾಜ್ಯಗಳಿಗೆ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ಹೆಚ್ಚಿಸಬೇಕು. ಆಗ ಮಾತ್ರ ಸಹಕಾರಿ ಫೆಡರಲಿಸಂನ ನಿಜವಾದ ಮನೋಭಾವವನ್ನು ಎತ್ತಿಹಿಡಿದಂತಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
14,006 ಕೋಟಿ ರೂಪಾಯಿಗಳ ಜಿಎಸ್ಟಿ ಪರಿಹಾರದ ಬಾಕಿಯನ್ನು ಬಿಡುಗಡೆ ಮಾಡಬೇಕು. ಜೂನ್ 2022 ರಿಂದ ಪರಿಹಾರದ ಅವಧಿಯನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿರಿ: ಒಕ್ಕೂಟ ಸರ್ಕಾರ ತಿರಸ್ಕರಿಸಿದ ಟ್ಯಾಬ್ಲೊ ತಮಿಳುನಾಡಿನಾದ್ಯಂತ ಪ್ರದರ್ಶನ: ಸಿಎಂ ಸ್ಟಾಲಿನ್
ಕಳೆದ ವರ್ಷ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ಡಿಎಂಕೆ, ತಮಿಳಿಗೆ “ಅಧಿಕೃತ ಮತ್ತು ಆಡಳಿತಾತ್ಮಕ” ಭಾಷಾ ಸ್ಥಾನಮಾನವನ್ನು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ತಮಿಳಿಗೆ “ಶಾಸ್ತ್ರೀಯ ಭಾಷೆ” ಸ್ಥಾನಮಾನ ನೀಡಲಾಗಿತ್ತು.
ಮೋದಿ ಮಾತುಗಳು
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ತಮಿಳು ಭಾಷೆ “ಶಾಶ್ವತ” ಎಂದು ಬಣ್ಣಿಸಿದರು.
ಎನ್ಡಿಎ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಭಾರತೀಯ ಭಾಷೆಗಳನ್ನು ಉತ್ತೇಜಿಸಲು ವಿಶೇಷ ಪ್ರಾಮುಖ್ಯತೆಯನ್ನು ನೀಡಿದೆ ಎಂದು ಪ್ರತಿಪಾದಿಸಿದರು.
“ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ತಾಂತ್ರಿಕ ಮತ್ತು ವೈದ್ಯಕೀಯ ಕೋರ್ಸ್ಗಳನ್ನು ಸ್ಥಳೀಯ ಭಾಷೆಗಳಲ್ಲಿ ಮಾಡಬಹುದು. ತಮಿಳುನಾಡಿನ ಯುವಕರು ಇದರಿಂದ ಪ್ರಯೋಜನ ಪಡೆಯುತ್ತಾರೆ” ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯು ಅಸಮಾನ ಶಿಕ್ಷಣ ವ್ಯವಸ್ಥೆಯನ್ನು ತರಲಿದೆ ಎಂದು ತಮಿಳುನಾಡು ಆತಂಕ ವ್ಯಕ್ತಪಡಿಸುತ್ತಿದೆ.
Modi is not an able PM . His predecessors are good PMs.
ಎಂ ಜಿ ಆರ್ ಕರುಣಾನಿಧಿ ಜಯಲಲಿತ ಇವತ್ತಿನ ಸ್ಟಾಲಿನ್ ಆಗಲೀ ಅವರ nativity ಉಳಿಸಿಕೊಳ್ಳುವತ್ತ ಪ್ರಾಮಾಣಿಕ ಹೆಜ್ಜೆಹಾಕಿದ್ದಾರೆ…ನಮ್ಮ ರಾಜ್ಯದ ಹಣೆ ಬರಹ ನೋಡಿ ಎಲ್ಲಕ್ಕೂ ದೆಹಲಿಯ ಸುಲ್ತಾನರ ಮುಂದೆ ಮಂಡಿಯೂರಬೇಕು….ಅಲ್ಲಿ ಬಂದವರೆಲ್ಲ ಮುಖ್ಯ ? ಮಂತ್ರಿ ಗಳಾದರೆ ..ನಮ್ಮ ರಾಜ್ಯಕ್ಕೆ ಮಾತ್ರ ಯಾವಾಗಲೂ ಅಮುಖ್ಯ ಮಂತ್ರಿಗಳದೇ I mean ದೆಹಲಿಯ ಗುಲಾಮರ ಸಂತತಿ