Homeಮುಖಪುಟಭಾರತ ಆಧ್ಯಾತ್ಮಿಕ ಗಣರಾಜ್ಯವೇ?

ಭಾರತ ಆಧ್ಯಾತ್ಮಿಕ ಗಣರಾಜ್ಯವೇ?

- Advertisement -
- Advertisement -

ಆರೆಸ್ಸೆಸ್ಸಿನ ವಕೀಲರ ಸಂಘಟನೆಯಾದ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ತಿನ ಸದಸ್ಯರಿಗಾಗಿ ಏರ್ಪಡಿಸಲಾಗಿದ್ದ ಒಂದು ಉಪನ್ಯಾಸದಲ್ಲಿ, “1976ರಲ್ಲಿ ಭಾರತದ ಸಂವಿಧಾನದ ಪೀಠಿಕೆಯೊಳಗೆ ’ಸಮಾಜವಾದಿ’ (ಸೋಶಿಯಲಿಸ್ಟ್) ಮತ್ತು ’ಸೆಕ್ಯುಲರ್’ (ಧರ್ಮ ನಿರಪೇಕ್ಷ/ಜಾತ್ಯತೀತ ಮುಂತಾದಾಗಿ ವ್ಯಾಖ್ಯಾನಿಸಲಾಗಿದೆ. ಮುಂದೆ ಇದನ್ನು ಸೆಕ್ಯುಲರ್ ಎಂದೇ ಉಳಿಸಿಕೊಳ್ಳಲಾಗಿದೆ) ಎಂಬ ಶಬ್ದಗಳನ್ನು ಸೇರಿಸಿದುದು ಸಂವಿಧಾನದ ’ಆಧ್ಯಾತ್ಮಿಕ ವರ್ಚಸ್ಸಿನ ವಿಸ್ತಾರ’ವನ್ನು ಸಂಕುಚಿತಗೊಳಿಸಿದೆ” ಎಂದು ಜಮ್ಮು-ಕಾಶ್ಮೀರ-ಲಢಾಖ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಪಂಕಜ್ ಮಿತ್ತಲ್ ಅವರು ಹೇಳಿದರು. ದೇಶವನ್ನು ’ಭಾರತ ಆಧ್ಯಾತ್ಮಿಕ ಗಣರಾಜ್ಯ’ ಎಂದು ಕರೆಯಬೇಕು ಎಂದೂ ಅವರು ಹೇಳಿದರು.

ಸಂವಿಧಾನದೊಳಗೆ 1976ರಲ್ಲಿ ಈ ಪರಿಕಲ್ಪನೆಗಳನ್ನು ಸೇರಿಸಿದ್ದನ್ನು ನ್ಯಾ. ಮಿತ್ತಲ್ ಅವರಿಗಿಂತ ಮೊದಲೂ ಸಹ ವಿಮರ್ಶೆ ಮಾಡಿದವರಿದ್ದಾರೆ: ಈ ಪರಿಕಲ್ಪನೆಗಳನ್ನು ಸಂವಿಧಾನ ಕರ್ತರು ತಿರಸ್ಕರಿಸಿದ್ದರು, ಅವನ್ನು ಇಂದಿರಾ ಗಾಂಧಿಯವರು ’ಆಮದು’ ಮಾಡಿಕೊಂಡಿದ್ದಾರೆ – ಎನ್ನುವುದು ಅದಕ್ಕೆ ಕೊಡಲಾಗಿರುವ ಕಾರಣ. ಸೆಕ್ಯುಲರ್ ಎಂಬ ಶಬ್ದವು ಭಾರತದ ಸಂವಿಧಾನಕ್ಕೆ ಹೊರಗಿನದು ಎಂಬ ವಿಮರ್ಶೆ ತಪ್ಪು ಎಂದು ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಗಳ ವಿಶ್ಲೇಷಣೆಯ ಮೂಲಕವೂ, ಸುಪ್ರೀಂ ಕೋರ್ಟು ನೀಡಿದ ಒಂದು ತೀರ್ಪಿನ ಮೂಲಕವೂ ಈಗಾಗಲೇ ಸಾಬೀತು ಮಾಡಲಾಗಿದೆ.

ಸಂವಿಧಾನ ರಚನಾ ಸಭೆಯು ಸೆಕ್ಯುಲರ್ ಎಂಬ ಶಬ್ದವನ್ನು ಪೀಠಿಕೆಯಲ್ಲಿ ಸೇರಿಸಲು ಒಪ್ಪದೆ ಇದ್ದಾಗ್ಯೂ, ಸೆಕ್ಯುಲರಿಸಂನ ಮೂಲಭೂತ ತಳಹದಿಯಾದ, ತಾವು ನಂಬಿರುವ ಧರ್ಮವನ್ನು ಆಚರಿಸಲು ಎಲ್ಲ ವ್ಯಕ್ತಿಗಳಿಗೂ ಸ್ವಾತಂತ್ರ್ಯವಿದೆ ಹಾಗೂ ಪ್ರಭುತ್ವವು ಧರ್ಮದ ಆಧಾರದಲ್ಲಿ ಯಾವುದೇ ವ್ಯಕ್ತಿಯ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ ಎಂಬ ವಿಚಾರದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ ಎಂಬುದು ಅಲ್ಲಿ ಮಾತನಾಡಿದ ಅನೇಕ ಭಾಷಣಕಾರರ ಮಾತುಗಳಲ್ಲಿ ಸ್ಪಷ್ಟವಾಗಿತ್ತು. ಕೆ.ಎಂ.ಮುನ್ಷಿಯವರು ಸಭೆಯಲ್ಲಿ ಮಾತನಾಡುತ್ತಾ, ’… ನಮ್ಮ ಪ್ರಭುತ್ವಕ್ಕೆ ತನ್ನದೇ ಆದ ಒಂದು ಪ್ರಭುತ್ವ ಧರ್ಮ ಎಂಬುದು ಬಹುಶಃ ಇರಲು ಸಾಧ್ಯವಿಲ್ಲ’ ಎಂದು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ವಿಶಾಲ ಸಹಮತಿ ವ್ಯಕ್ತವಾಗಿತ್ತು.

ಎಸ್.ಆರ್.ಬೊಮ್ಮಾಯಿ ವರ್ಸಸ್ ಭಾರತ ಒಕ್ಕೂಟ ಎಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ಸೆಕ್ಯುಲರಿಸಂ ಭಾರತೀಯ ಸಂವಿಧಾನದ ಮೂಲ ಸಂರಚನೆಯೊಳಗಿನ ಒಂದು ಅವಿಭಾಜ್ಯ ಭಾಗವಾಗಿದೆ ಎಂಬ ನಿಲುವಿಗೆ ತಲುಪಿತು ಹಾಗೂ 42ನೇ ಸಂವಿಧಾನ ತಿದ್ದುಪಡಿಯು ಭಾರತದ ಸಂವಿಧಾನದಲ್ಲಿ ಅಂತರ್ಗತವಾಗಿದ್ದ ಅಂಶವನ್ನು ಪ್ರಕಟವಾಗಿ ವ್ಯಕ್ತಪಡಿಸಿದೆ ಎಂದು ಸ್ಪಷ್ಟವಾಗಿ ತೀರ್ಮಾನ ಹೇಳಿತು. ಸಂವಿಧಾನದ ಪೀಠಿಕೆಯೇ ’ಚಿಂತನೆ, ಅಭಿವ್ಯಕ್ತಿ, ವಿಶ್ವಾಸ, (ಧಾರ್ಮಿಕ) ನಂಬಿಕೆ ಹಾಗೂ ಆರಾಧನೆಗಳ ಸ್ವಾತಂತ್ರ್ಯ’ಗಳ ಕುರಿತು ಹೇಳಿರುವುದರಿಂದಲೂ, ಧರ್ಮದ ಆಧಾರದಲ್ಲಿನ ತಾರತಮ್ಯವನ್ನು ಸಂವಿಧಾನದ 15ನೇ ವಿಧಿಯು ನಿಷೇಧಿಸಿರುವುದರಿಂದಲೂ, ಸೆಕ್ಯುಲರಿಸಂ ಎಂಬುದು ನಮ್ಮ ಸಂವಿಧಾನಕ್ಕೆ ಹೊರಗಿನದು ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ. ವಾಸ್ತವದಲ್ಲಿ, ’ಧರ್ಮದ ಆಧಾರದಲ್ಲಿನ ತಾರತಮ್ಯದ ಬಗ್ಗೆ ಸಂವಿಧಾನವು ಅಸಹ್ಯವನ್ನೇ ವ್ಯಕ್ತಪಡಿಸಿದೆ.’

ಪಂಕಜ್ ಮಿತ್ತಲ್

ಪೀಠಿಕೆಯೊಳಗೆ ’ಸಮಾಜವಾದ’ ಶಬ್ದವನ್ನು ಸೇರಿಸುವುದನ್ನು ಕುರಿತ ತಿದ್ದುಪಡಿಯೊಂದನ್ನು ಸಂವಿಧಾನ ರಚನಾ ಸಭೆಯು ಸ್ಪಷ್ಟವಾಗಿ ತಿರಸ್ಕರಿಸಿತಾದರೂ, ಪೀಠಿಕೆಯಲ್ಲಿ ಹೇಳಲಾಗಿರುವ ’ನ್ಯಾಯ – ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ’ ಎಂಬ ಉಲ್ಲೇಖದಲ್ಲಿ ಸಮಾಜವಾದದ ಕೆಲವು ಅಂಶಗಳು ಅದಾಗಲೇ ಒಳಗೊಂಡಿದ್ದವು. ದೇಶದ ಅರ್ಥ ವ್ಯವಸ್ಥೆಯು ಸಂಪತ್ತಿನ ಕೇಂದ್ರೀಕರಣಕ್ಕೆ ದಾರಿ ಮಾಡದ ರೀತಿಯಲ್ಲಿ ಪ್ರಭುತ್ವ ನೀತಿ ಇರಬೇಕು ಎಂದು ’ರಾಜ್ಯ ನಿರ್ದೇಶಕ ತತ್ವಗಳ’ ಆರ್ಟಿಕಲ್ 38(b) ಸ್ಪಷ್ಟಪಡಿಸಿರುವುದರಲ್ಲಿ ಸಮಾಜವಾದಿ ಕಳಕಳಿಯೇ ವ್ಯಕ್ತವಾಗಿರುವುದು. ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಎಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ’ಜನಕಲ್ಯಾಣ ಸಮಾಜ ಮತ್ತು ಸಮಾನತೆಯ ಸಮಾಜ’ವನ್ನು ನಿರ್ಮಿಸುವುದು ’ಭಾರತ ಸಂವಿಧಾನದ ಮೂಲ ರಚನೆ’ಯ ಭಾಗವಾಗಿದೆ ಎಂದು ಸೂಚಿಸಿದೆ. ಇದೂ ಸಹ ಸಮಾಜವಾದಿ ತತ್ವದ ಉಲ್ಲೇಖವೇ ಆಗಿದೆ.

ಹೀಗೆ, ಸೆಕ್ಯುಲರಿಸಂ ಮತ್ತು ಸಮಾಜವಾದಗಳನ್ನು ಕುರಿತಂತೆ ಸುಭದ್ರವಾದ ಒಂದು ನ್ಯಾಯಿಕ ಮತ್ತು ಸಾಂವಿಧಾನಿಕ ಚರ್ಚೆ ನಡೆದುಬಂದಿದೆ. ಸಂವಿಧಾನ ರಚನಾ ಸಭೆಯ ಚರ್ಚೆಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನಾಧರಿಸಿ, 1976ರಲ್ಲಿ ಈ ಶಬ್ದಗಳನ್ನು ಸೇರ್ಪಡೆ ಮಾಡಿರುವ ವಿಚಾರದ ಪರವಾಗಿಯಾಗಲಿ ಅಥವಾ ವಿರುದ್ಧವಾಗಿಯಾಗಲಿ ವಾದ ಮಾಡುವುದು ಸಾಧ್ಯವಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಿರುವುದು – ಈ ಶಬ್ದಗಳನ್ನು ಸೇರ್ಪಡೆ ಮಾಡುವುದಾಗಲಿ ತೆಗೆದು ಹಾಕುವುದಾಗಲಿ ’ಭಾರತ ಸಂವಿಧಾನದ ಮೂಲ ರಚನೆ’ಯನ್ನು ನಾಶಪಡಿಸುವುದಿಲ್ಲ ಎನ್ನುವುದು.

ಮೇಲೆ ಹೇಳಿದ ಉಪನ್ಯಾಸದಲ್ಲಿ ಸದರಿ ಮುಖ್ಯ ನ್ಯಾಯಾಧೀಶರು ತಮ್ಮ ವ್ಯಾಖ್ಯಾನವನ್ನು ಮುಂದಿಡುವ ತವಕದಲ್ಲಿ, ’ಮೇಲ್ಪಂಕ್ತಿ’ಯ ಮೌಲ್ಯವಿರುವ ನ್ಯಾಯಿಕ ಚರ್ಚೆಗಳನ್ನೂ, ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ ಪರಿಕಲ್ಪನೆಗಳ ಜಾಡು ಹಿಡಿಯುವುದನ್ನೂ ಕಡೆಗಣಿಸಿದ್ದಾರೆ.

ಭಾರತದ ’ಆಧ್ಯಾತ್ಮಿಕ ಚಿತ್ರಣ’ದ ’ವಿಸ್ತಾರ’ವನ್ನು ’ಸೆಕ್ಯುಲರ್’ ಎಂಬ ಪದವು ಕಿರಿದಾಗಿಸುತ್ತದೆ ಎಂಬ ಹೇಳಿಕೆಯನ್ನು ಸಾಮಾನ್ಯರು ಹೇಳಿದ್ದರೆ ಅರ್ಥಮಾಡಿಕೊಳ್ಳಬಹುದು. ಆದರೆ ತನ್ನ ಪ್ರತಿಜ್ಞೆಯಲ್ಲಿ ’ಸಂವಿಧಾನದ ಮೇಲೆ ನಿಜವಾದ ನಂಬಿಕೆ ಮತ್ತು ನಿಷ್ಠೆ ಇರಿಸುತ್ತೇನೆ’ ಎಂದಿರುವ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯೊಬ್ಬರಿಂದ ಈ ಹೇಳಿಕೆ ಬಂದಾಗ ಅತಿಯಾದ ಗೊಂದಲ ಹುಟ್ಟುತ್ತದೆ.

ಈ ದೇಶವು ’ಭಾರತದ ಆಧ್ಯಾತ್ಮಿಕ ಗಣರಾಜ್ಯ’ವೆಂದು ಕರೆಯಲ್ಪಡಬೇಕೆಂದು ಪ್ರತಿಪಾದಿಸುವ ಮೂಲಕ, ಸಂವಿಧಾನ ರಚನಾ ಸಭೆಯು ’ಧರ್ಮ’ ಅಥವಾ ಆಧ್ಯಾತ್ಮವನ್ನು ಆಧಾರವಾಗಿ ಪರಿಗಣಿಸುವುದನ್ನು ಖಚಿತವಾಗಿ ತಿರಸ್ಕರಿಸಿತು ಮತ್ತು ಅದರ ಬದಲಿಗೆ ’ಭಾರತದ ಪ್ರಜೆಗಳಾದ ನಾವು’ಗಳ ಮೇಲೆ ನಂಬಿಕೆಯಿರಿಸಿತು ಎಂಬುದನ್ನು ಅವರು ಅರ್ಥಮಾಡಿಕೊಳ್ಳುವಲ್ಲಿ ಸೋತಿರಬೇಕು. ಮುಖ್ಯ ನ್ಯಾಯಮೂರ್ತಿಗಳು ಪ್ರಸ್ತಾಪಿಸಿದ ಬದಲಾವಣೆಗಳು ’ಸಂವಿಧಾನ ಎಲ್ಲರಿಗಾಗಿ’-ಆಸ್ತಿಕರು ಮತ್ತು ನಾಸ್ತಿಕರು ಎಲ್ಲರಿಗೂ- ಎಂಬ ತಿಳಿವಳಿಕೆಗೇ ಸವಾಲೆಸೆಯುತ್ತದೆ.

ಮುಖ್ಯ ನ್ಯಾಯಮೂರ್ತಿಗಳು ನೀಡಿದ ಈ ಹೇಳಿಕೆಯ ಕೆಲವು ದಿನಗಳಲ್ಲೇ ಬಾಬ್ರಿ ಮಸೀದಿ ಧ್ವಂಸ ಮಾಡಿದ 28ನೇ ವರ್ಷದ ದಿನ ಬಂದಿದ್ದು ಭಾರತದ ಸಮಾಜವನ್ನು ಇಂದು ಹಿಡಿದಿರುವ ಅತಿ ದೊಡ್ಡ ಸವಾಲಾದ ಸಂವಿಧಾನ ವಿರೋಧಿ ಮನಸ್ಥಿತಿಯ ದ್ಯೋತಕವಾಗಿದೆ. ಸಂವಿಧಾನವನ್ನು ರಕ್ಷಿಸುವ ಪ್ರಮಾಣ ವಚನ ಸ್ವೀಕರಿಸುವ ನ್ಯಾಯಮೂರ್ತಿಗಳೂ ಈ ಅಲೆಯಿಂದ ಬಚಾವಾಗಿಲ್ಲವೆನ್ನುವುದು ಆತಂಕಕಾರಿಯಾದ ಸಂಗತಿಯಾಗಿದೆ.

ಸೆಕ್ಯುಲರ್ ಪದದ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳಿಗಿರುವ ತೊಂದರೆ ಮತ್ತು ’ಭಾರತವು ಅಧ್ಯಾತ್ಮಿಕ ಗಣರಾಜ್ಯ’ವೆಂಬ ಅವರ ವಕಾಲತ್ತು, ಭಾರತೀಯ ಸಂವಿಧಾನಕ್ಕೆ ಒಮ್ಮೆ ಕರಸೇವೆ ಮಾಡಬೇಕು ಎಂದು ಪರೋಕ್ಷವಾಗಿ ಹೇಳಿದಂತೆ ತೋರುತ್ತಿದೆ.

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಅರವಿಂದ್ ನಾರಾಯಣ್ ಸಂವಿಧಾನ ತಜ್ಞರು, ಆಲ್ಟರ್‌ನೇಟಿವ್ ಲಾ ಫೋರಂನ ಸ್ಥಾಪಕ ಸದಸ್ಯರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳ ಹಿಂದಿರುವ ವ್ಯಕ್ತಿ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಕೋಮು ಸಂಘರ್ಷಗಳ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಒದಗಿಸುತ್ತಾ ಬಂದಿದ್ದಾರೆ.


ಇದನ್ನೂ ಓದಿ: ಸಂವಿಧಾನ ಬದಲಿಸಬೇಕು ಎನ್ನುವವರಿಗೆ ಪಂಚಾಯತ್ ವ್ಯವಸ್ಥೆ ಬಗ್ಗೆ ನಂಬಿಕೆ ಇದೆಯಾ? – ಹರಿಪ್ರಸಾದ್ ಪ್ರಶ್ನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...