Homeಮುಖಪುಟ’ಎವರಿಥಿಂಗ್ ಈಸ್ ಸಿನೆಮಾ’ ಎಂಬುದನ್ನು ತೋರಿಸಿಕೊಟ್ಟ ಜೀನ್-ಲ್ಯೂಕ್ ಗೋದಾರ್ದ್

’ಎವರಿಥಿಂಗ್ ಈಸ್ ಸಿನೆಮಾ’ ಎಂಬುದನ್ನು ತೋರಿಸಿಕೊಟ್ಟ ಜೀನ್-ಲ್ಯೂಕ್ ಗೋದಾರ್ದ್

- Advertisement -
- Advertisement -

ನನ್ನೊಳಗಿನ ಸಿನೆಮಾ ನಿರ್ದೇಶಕನನ್ನು ಬಡಿದೆಬ್ಬಿಸಿದ್ದು, ನಾನು ಸಿನೆಮಾ ಮಾಡಬಲ್ಲೆ ಎಂಬ ಆತ್ಮವಿಶ್ವಾಸವನ್ನು ನನ್ನಲ್ಲಿ ಹುಟ್ಟುಹಾಕಿದವನು ಜೀನ್-ಲ್ಯೂಕ್ ಗೋದಾರ್ದ್. ಅವನ ಸಾಕಷ್ಟು ಸಿನೆಮಾಗಳನ್ನು ನೋಡಿದ ನಂತರವೇ ನಾನೂ ಸಿನೆಮಾ ನಿರ್ದೇಶಕನಾಗಬಹುದು ಎಂಬ ಆಸೆಯ ಮೊಳಕೆ ನನ್ನೊಳಗೆ ಮೂಡಿದ್ದು; ಇದಕ್ಕೆ ನನ್ನ ’ಮಧ್ಯಾಹ್ನದ ಹಾಡು’ ಮತ್ತು ’ಥ್ರೀ ಮಂತ್ ಆಫ್ ಸಾಲಿಟ್ಯೂಡ್’ ಎಂಬ ಮೊದಲ ಎರಡು ಕಿರುಚಿತ್ರಗಳೇ ಸಾಕ್ಷಿ; ಈ ಚಿತ್ರಗಳಲ್ಲಿ ಗೋದಾರ್ದ್‌ನ ಪ್ರಭಾವವನ್ನು ನಿಚ್ಚಳವಾಗಿ ಕಾಣಬಹುದು. ಈ ಚಿತ್ರಗಳ ನಂತರ ನಾನು ಅವನ ಪ್ರಭಾವದಿಂದ ಬಿಡಿಸಿಕೊಂಡು ನನ್ನದೇ ಆದ ನನ್ನ ಪರಿಸರಕ್ಕೆ, ಸ್ವಭಾವಕ್ಕೆ, ಅನುಭವಕ್ಕೆ ಒದಗಿದ ಬೇರೆದಾರಿ ಹಿಡಿದೆ.

’ಎವರಿಥಿಂಗ್ ಈಸ್ ಸಿನೆಮಾ’ ಎಂಬುದನ್ನು ಅಕ್ಷರಶಃ ಇವನ ಕೃತಿಗಳಲ್ಲಿ ಕಾಣಬಹುದು, ಸಿನೆಮಾವನ್ನು ಬರೀ ಕಥೆ, ಕಾದಂಬರಿಯ ರೂಪದಲ್ಲಿ ಮಾತ್ರ ಏಕೆ ನೋಡಬೇಕು, ಪ್ರಬಂಧದ ರೂಪದಲ್ಲಿ, ತತ್ವಜ್ಞಾನಿಯ ರೂಪದಲ್ಲಿ, ಕವಿಯ ಪರಿಭಾಷೆಯಲ್ಲಿ, ನಾಟಕಕಾರನಂತೆ, ಇತಿಹಾಸಕಾರನಂತೆ, ವಿಮರ್ಶಕನಾಗಿ ಹೇಗಾದರೂ ಕಟ್ಟಬಹುದು ಎಂಬುದನ್ನು ತನ್ನ ಕೃತಿಗಳ ಮೂಲಕವೇ ಮಾಡಿ ತೋರಿಸಿದನು. ಸಿನೆಮಾವನ್ನು ಆರಂಭ, ಮಧ್ಯ, ಕ್ಲೈಮ್ಯಾಕ್ಸ್ ಎಂಬ ಕ್ರಮದಲ್ಲೇ ಯಾಕೆ ಕಟ್ಟಬೇಕು? ಎಂದು ಸಿನಿಮಾ ಮಾಧ್ಯಮದ ಸಮಗ್ರ ಸಾಧ್ಯತೆಗಳನ್ನು ಮೂಸೆಗೆ ಹಾಕಿ ಕುದಿಸಿದನು. ಕತೆ ಎಲ್ಲಿಂದಲಾದರೂ ಶುರುವಾಗಬಹುದು ಎಲ್ಲಿಗಾದರೂ ಅಂತ್ಯವಾಗಬಹುದು, ಆದರೆ ಅದಕ್ಕೆ ಅದರದೇ ಆದ ಲಯವಿರುತ್ತದೆ, ಅದನ್ನು ಕಂಡುಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟನು. ಈ ಯತ್ನದಲ್ಲಿ ಅವನು ಯಶಸ್ಸು ಸಾಧಿಸಿದನು ಎಂದು ಹೇಳುವುದು ಕಷ್ಟ; ಆದರೆ ಸಾಧ್ಯತೆ ವಿಫಲತೆಗಿಂತಲೂ ತನ್ನನ್ನು ತಾನು ಹೊಸಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು ಅವನಿಗೆ ಮುಖ್ಯವಾಗಿತ್ತು. ಅದಕ್ಕೆ ಅಂತಾ ಕಾಣತ್ತೆ 2009ರಲ್ಲಿ ರಿಚರ್ಡ್ ಬ್ರೂಡಿ ಬರೆದ ಗೋದಾರ್ದ್‌ನ ಜೀವನಚರಿತ್ರೆಯ ಪುಸ್ತಕಕ್ಕೆ ’ಎವರಿಥಿಂಗ್ ಈಸ್ ಸಿನೆಮಾ’ ಎಂದು ಹೆಸರಿಟ್ಟಿದ್ದಾನೆ.

ಸಿನೆಮಾದ ವೈಜ್ಞಾನಿಕತೆ, ತಾಂತ್ರಿಕತೆಯ ಮೂಲಕ ಕಥೆಯನ್ನು ಹೇಳುವ ಕಲೆಯನ್ನು ಸೃಷ್ಟಿಸಲು ಸಾಧ್ಯ ಎಂದು ಮೊದಲಿಗೆ ಗುರುತಿಸಿದವನು ಡಿ.ಡಬ್ಲ್ಯೂ. ಗ್ರಿಫಿತ್. ಇವನ ಸಂಕಲನದ ತಂತ್ರಗಾರಿಕೆಯಿಂದ ಸಿನೆಮಾ ಮಾಧ್ಯಮದ ಕ್ರಮಬದ್ಧವಾದ ಕಥನಾಕ್ರಮದ ವ್ಯಾಕರಣ ಚಾಲ್ತಿಗೆ ಬಂತು. ಇದೆಲ್ಲದರ ಯಶಸ್ಸಿನ ಜೊತೆಜೊತೆಗೆ ಸಿನೆಮಾ ಒಂದು ಉದ್ಯಮವಾಗಿಯೂ ರೂಪುಗೊಂಡಿತು. ಇವನ ಈ ಸಂಕಲನದ ತಂತ್ರಗಾರಿಕೆಯಿಂದ ಪ್ರಭಾವಿತನಾಗಿ ಚಾರ್ಲಿ ಚಾಪ್ಲಿನ್ ತನ್ನದೇ ಆದ ವಿಡಂಬನಾ ಶೈಲಿಯನ್ನು ಕಂಡುಕೊಂಡು ಜಗತ್‌ಪ್ರಸಿದ್ಧಿ ಗಳಿಸಿದ್ದು ಈಗ ಇತಿಹಾಸ.

ಇದರ ಮುಂದುವರಿದ ಭಾಗವಾಗಿ ರಷ್ಯಾದ ಪ್ರಮುಖ ಚಿತ್ರನಿರ್ದೇಶಕ ಐಸೆನ್‌ಸ್ಟೇನ್ ಸಿನೆಮಾ ಸಂಕಲನದಲ್ಲಿ ಮೋಂತಾಜ್ ಎಂಬ ಹೊಸ ತಂತ್ರಗಾರಿಕೆಯನ್ನು ಹುಟ್ಟುಹಾಕಿದ. ಈ ತಂತ್ರಗಾರಿಕೆಯಲ್ಲಿ ಕಥೆಯನ್ನು ಎಷ್ಟು ಪರಿಣಾಮಕಾರಿಯಾಗಿ ಕಟ್ಟಬಹುದು ಎಂಬುದನ್ನು ಒಂದೇ ದೃಶ್ಯವನ್ನು ಬೇರೆಬೇರೆ ಆಯಾಮಗಳಲ್ಲಿ ಬಿಡಿಬಿಡಿ ಚಿತ್ರಿಕೆಗಳನ್ನು ಸೆರೆಹಿಡಿದು ಅವುಗಳ ಕ್ರಮಬದ್ಧ ಜೋಡಣೆಯಿಂದ ಸೃಷ್ಟಿಯಾಗುವ ಭಾವತೀವ್ರತೆಯನ್ನು ಸಾಧ್ಯ ಮಾಡುವ ಕ್ರಮ; ಕಥನಕ್ಕೆ ಪೂರಕವಾಗಿ ಮತ್ತು ನೋಡುಗರಲ್ಲಿ ಅನುಭವಕ್ಕೆ ದಕ್ಕುವ ರೀತಿಯಲ್ಲಿ ಈ ತಂತ್ರಗಾರಿಕೆ ಮಹತ್ತರವಾದ ಪಾತ್ರ ವಹಿಸಿತು. ಮುಂದೆ ಸಾಕಷ್ಟು ಜನ ನಿರ್ದೇಶಕರು ಈ ತಂತ್ರವನ್ನು ಅನುಸರಿಸಿ ಅದನ್ನೂ ಮೀರಲು ಪ್ರಯತ್ನಿಸಿದರು.

Jean Luc Godard a 7/7 en 1983 PARIS . 1983 (Sipa via AP Images)

ಹಾಗೆ ಅದನ್ನು ಮೀರಿದ ಪ್ರಮುಖರಲ್ಲಿ ಜೀನ್-ಲ್ಯೂಕ್ ಗೋದಾರ್ದ್ ಬಹು ಮುಖ್ಯ ಚಲನಚಿತ್ರ ನಿರ್ದೇಶಕ.
ಗೋದಾರ್ದ್ ಬರೀ ಕಥನಕ್ರಮದಲ್ಲಿ ಮಾತ್ರ ಬದಲಾ ವಣೆಯನ್ನು ಮಾಡಿಕೊಳ್ಳಲಿಲ್ಲ ಅದನ್ನು ನಿರೂಪಿಸುವ ಕ್ರಮದಲ್ಲಿ, ಕಥಾಹಂದರವನ್ನು ಮುರಿದುಕಟ್ಟುವ, ಸಾಕ್ಷ್ಯಚಿತ್ರದಂತಹ ಕ್ಯಾಮರದ ಚಲನೆ, ವಿಲಕ್ಷಣ ಶಬ್ದಗಳ ಬಳಕೆ, ಸಂಭಾಷಣೆಗಳ ಜೋಡಣೆಗಳ ಜೊತೆಗೆ ನೆಗೆತದ ಕತ್ತರಿ (ಜಂಪ್‌ಕಟ್ಸ್) ಪ್ರಯೋಗಗಳನ್ನು ಇವನಷ್ಟು ಪರಿಣಾಮಕಾರಿಯಾಗಿ ಯಾರೂ ಮಾಡಿಲ್ಲವೆಂದು ಕಾಣುತ್ತದೆ. ಈ ಎಲ್ಲಾ ಪ್ರಯೋಗಗಳಿಂದ ಆತ ತನ್ನದೇ ಆದ ಒಂದು ದೃಶ್ಯಭಾಷೆಯೊಂದನ್ನು ಕಟ್ಟಿಕೊಂಡನು. ಆ ದೃಶ್ಯಬಾಷೆ ಹಾಗೇ ಧುತ್ ಎಂದು ಹುಟ್ಟಿದ್ದಲ್ಲ, ಅದಕ್ಕೆ ತಾತ್ವಿಕವಾದ, ಸೈದ್ಧಾಂತಿಕವಾದ, ರಾಜಕೀಯವಾದ, ಸಾಂಸ್ಕೃತಿಕವಾದ ಹಿನ್ನೆಲೆಯಿದೆ. ಅದು ಗೋದಾರ್ದ್‌ನ ಅಧ್ಯಯನದಲ್ಲಿ ಬಹು ಮುಖ್ಯವಾಗುತ್ತದೆ. ಮಾರ್ಕ್ಸ್‌ವಾದ ಮತ್ತು ಬ್ರೆಕ್ಟ್‌ನ ’ಎಪಿಕ್ ಥಿಯೇಟರ್’ ಪರಿಕಲ್ಪನೆಯನ್ನು ತನ್ನ ಚಿತ್ರ ಸೃಷ್ಟಿಯಲ್ಲಿ ಅಳವಡಿಸಿಕೊಂಡನು. ನೋಡುಗನು ಭಾವೋನ್ಮಾದದಲ್ಲಿ ತೇಲಿ ಹೋಗಬಾರದು, ಅದರ ಹಿಂದಿನ ರಾಜಕೀಯವನ್ನು ಸಮಗ್ರವಾಗಿ ಗ್ರಹಿಸಬೇಕು ಎನ್ನುವುದು ಈ ಒಂದು ಫಾರ್ಮ್‌ನ ಮುಖ್ಯ ಉದ್ದೇಶವಾಗಿತ್ತು. ನಮ್ಮಲ್ಲಿನ ಯಕ್ಷಗಾನ, ಬಯಲಾಟ ಇದಕ್ಕೆ ಒಳ್ಳೆಯ ಉದಾಹರಣೆಗಳು.

ಗೋದಾರ್ದ್ ಸಿನೆಮಾದೊಂದಿಗೆ ಸಂಬಂಧವನ್ನು ಆರಂಭಿಸಿದ್ದು ’ಕ್ಯಹೀರ್ಸ್‌ದು ಸಿನೆಮಾ’ ಎಂಬ ಪ್ರಸಿದ್ಧ ಪತ್ರಿಕೆಗೆ ಸಿನೆಮಾ ವಿಮರ್ಶೆ ಬರೆಯುವುದರ ಮೂಲಕ. ಅವನ ಸಮಕಾಲೀನ ಸಿನೆಮಾ ನಿರ್ದೇಶಕ ಟ್ರುಫೋ ಕೂಡ ಇದೇ ಪತ್ರಿಕೆಗೆ ವಿಮರ್ಶೆ ಬರೆಯುವುದರ ಮೂಲಕವೇ ಚಿತ್ರರಂಗವನ್ನು ಪ್ರವೇಶಿಸಿದ್ದು. ಮುಂದೆ ಈ ಇಬ್ಬರೂ ಫ್ರೆಂಚ್ ಹೊಸ ಅಲೆಯ ಚಿತ್ರಗಳ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.

’ಬ್ರೆಥ್‌ಲೆಸ್’ ಗೋದಾರ್ದ್‌ನ ಮೊದಲ ಚಿತ್ರ. ತನ್ನ ಮೊದಲ ಚಿತ್ರದಲ್ಲೇ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಸಿದ್ಧ ಮಾದರಿಗಳನ್ನೆಲ್ಲಾ ಮುರಿದು ಹೊಸ ದೃಶ್ಯಭಾಷೆಗೆ ನಾಂದಿ ಹಾಡಿದ. ಅವನಿಗೆ ಯಾವುದೇ ಪೂರ್ವಗ್ರಹಗಳಿರಲಿಲ್ಲ ಮತ್ತು ತನ್ನ ಚಿತ್ರಕ್ಕೆ ಸಾಹಿತ್ಯ, ನಾಟಕ, ಚಿತ್ರಕಲೆ, ಸಂಗೀತದ ಭಿನ್ನ ಪ್ರಕಾರಗಳಿಂದ, ಎಲ್ಲಿಂದ ಏನನ್ನಾದರೂ ನಿರ್ಭಿಡೆಯಿಂದ ಎತ್ತಿಕೊಂಡು ತನ್ನ ಚಿತ್ರಕ್ಕನುಗುಣವಾಗಿ ಬಗ್ಗಿಸಿಕೊಳ್ಳುತ್ತಿದ್ದ. ಪಿಕೋಸೊನ, ಮತೀಸನ, ಪಾಲ್‌ಕ್ಲೀ, ರೆನ್ವಾನ ಚಿತ್ರ, ಮೊಜ಼ಾರ್ಟ್‌ನ ಸಂಗೀತ, ಶೇಕ್ಸ್‌ಪಿಯರ್, ಬರ್ಗ್‌ಮನ್, ಫ್ರಿಟ್ಸ್‌ಲ್ಯಾಂಗ್‌ನ ಉಕ್ತಿಗಳನ್ನು ಎಲ್ಲಿ ಸೂಕ್ತವೆನಿಸುತ್ತೋ ಅಲ್ಲಲ್ಲಿ ಬಳಸುವುದರ ಜೊತೆಗೆ ಶಬ್ದಗಳೊಂದಿಗಿನ ಟೆಸ್ಟ್‌ಗೂ ಪ್ರಾಮುಖ್ಯತೆ ಕೊಟ್ಟನು.

ಗೋದಾರ್ದ್ ಸಿನಿ ರಸಿಕರು ಎಂದು ಅನ್ನಿಸಿಕೊಂಡವರನ್ನು ಗೇಲಿ ಮಾಡಿದನು; ಸಂದರ್ಶನಗಳಲ್ಲಿ ಪ್ರಶ್ನೆ ಕೇಳುವವರಿಗೇ ಮರುಪ್ರಶ್ನೆಗಳನ್ನೆಸೆದು ಅವಾಕ್ಕಾಗಿಸಿದನು; ಸೋಗಲಾಡಿಗಳನ್ನು ಅಪಹಾಸ್ಯ ಮಾಡಿದನು; ಅವನ ಈ ವಿಲಕ್ಷಣ ನಡವಳಿಕೆಗಳು ಬರೀ ಸಿನೆಮಾಗೆ ಮಾತ್ರ ಸೀಮಿತವಾಗಿರಲಿಲ್ಲ, ತನ್ನ ನಿಜಜೀವನದಲ್ಲೂ ಅದನ್ನು ಎಗ್ಗಿಲ್ಲದೇ ರೂಢಿಸಿಕೊಂಡಿದ್ದನು. ಅದಕ್ಕೆ ಅವನ ’ಕಿಂಗ್ ಲಿಯರ್’ ಚಿತ್ರ ಒಂದು ಉತ್ತಮ ಉದಾಹರಣೆ. 1985ರಲ್ಲಿ ಗೋದಾರ್ದ್ ಕಾನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ; ಭೋಜನ ಔತಣಕೂಟವೊಂದಲ್ಲಿ ಕೆನಾನ್ ಗ್ರೂಪ್ ಎಂಬ ಕಂಪನಿಯ ಪಾಲುದಾರರಾಗಿದ್ದ, ಜನಪ್ರಿಯ ಚಲನಚಿತ್ರಗಳ ನಿರ್ಮಾಪಕ ವ್ಯಾಪಾರಿಗಳಾದ ಗೊಲಾನ್ ಅಂಡ್ ಗ್ಲೊಬಸ್‌ರೊಂದಿಗೆ ಚಿತ್ರನಿರ್ಮಾಣವೊಂದಕ್ಕೆ ಒಂದು ಮಿಲಿಯನ್ ಯುಎಸ್ ಡಾಲರ್ಸ್ ಬಂಡವಾಳದ ಒಪ್ಪಂದ ಮಾಡಿಕೊಳ್ಳುತ್ತಾನೆ. ಅದೂ ಕೂಡ ಕೈ ಒರೆಸುವ ಕಾಗದದ ಮೇಲೆ! ಇದಾದ ಒಂದೂವರೆ ವರ್ಷದ ನಂತರ ಆ ಕಂಪನಿಯವರು ಗೋದಾರ್ದ್‌ಗೆ ಫೋನ್ ಮಾಡಿ, ’ನಮಗೆ ಈ ಪ್ರ್ರಾಜೆಕ್ಟ್ ಮಾಡಲು ಸಾಧ್ಯವಿಲ್ಲವೆನ್ನಿಸಿದೆ, ನಾವು ನಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದೇವೆ, ಜೊತೆಗೆ ನಮ್ಮ ಹೆಸರನ್ನೂ’ ಎಂದು ಇತಿಶ್ರೀ ಹಾಡುತ್ತಾರೆ. ಗೋದಾರ್ದ್ ಆ ಫೋನ್ ಸಂಭಾಷಣೆಯನ್ನೇ ರೆಕಾರ್ಡ್ ಮಾಡಿ ಅವನ ’ಕಿಂಗ್ ಲಿಯರ್’ ಚಿತ್ರದ ಆರಂಭದ ಶಾಟ್‌ನಲ್ಲೇ ಸೇರಿಸಿಕೊಂಡ. ಇದು ಗೋದಾರ್ದ್‌ನ ಸೃಜನಶೀಲತೆಯ ಒಂದು ಝಲಕ್. ಕಿಂಗ್ ಲಿಯರ್ ನಾಟಕದ ಮುಖ್ಯ ದ್ರವ್ಯವೇ ಭಾಷೆಯ ಸೋಲು; ಕಿಂಗ್ ಲಿಯರ್ ತನ್ನ ಮೂರು ಜನ ಹೆಣ್ಣುಮಕ್ಕಳನ್ನು ಕೇಳುತ್ತಾನೆ, ’ನಿಮ್ಮಲ್ಲಿ ಯಾರು ಹೆಚ್ಚು ಪ್ರೀತಿಸುವವರು?’ ಮೊದಲ ಇಬ್ಬರು ಉತ್ಪ್ರೇಕ್ಷೆಯಿಂದ ಹೊಗಳಿದರೆ ಮೂರನೆಯ ಮಗಳು ಕಾರ್ಡೀಲಿಯ ತನ್ನ ಇಬ್ಬರು ಅಕ್ಕಂದಿರಿಗಿಂತ ಹೆಚ್ಚಾಗಿ ಅಪ್ಪನನ್ನು ಪ್ರೀತಿಸುತ್ತಿದ್ದರೂ ಅದನ್ನ ಭಾಷೆಯ ಮೂಲಕ ತೋರ್ಗಣಿಸುವುದಿಲ್ಲ. ’ನಿನ್ನ ಅಕ್ಕಂದಿರಿಗಿಂತಲೂ ಹೆಚ್ಚಿನದೇನು ನಿನಗೆ ಬೇಕು ಕೇಳಿಕೋ’ ಅಂದರೆ, ಕಾರ್ಡೀಲಿಯ ’ಏನೂ ಇಲ್ಲ’ವೆನ್ನುತ್ತಾಳೆ. ಈ ನೊ-ಥಿಂಗ್ ಎಂಬ ಪದವನ್ನೇ ಬೇರೆಬೇರೆ ಪದರಗಳಲ್ಲಿ, ವಿಭಿನ್ನ ಸನ್ನಿವೇಶಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸುತ್ತಾ ಹೋಗುತ್ತಾನೆ ಗೋದಾರ್ದ್. ಕಥೆಯ ಹಂಗಿಲ್ಲದೇ ಕಥನ ಕಟ್ಟುವುದನ್ನು ಗೋದಾರ್ದ್‌ನಿಂದ ಕಲಿಯಬೇಕು. ಸಿನೆಮಾ ಮಾಧ್ಯಮದ ಗರಿಷ್ಠ ಸಾಧ್ಯತೆಗಳನ್ನು ಪರದೆಯ ಮೇಲೆ ಸಾಧ್ಯವಾಗಿಸಿದ ಕೀರ್ತಿ ಗೋದಾರ್ದ್‌ಗೆ ಸಲ್ಲುತ್ತದೆ. ಈ ಜಗತ್ತು ಇರುವವರೆಗೂ ಸಿನೆಮಾ ಇತಿಹಾಸದಲ್ಲಿ ಸದಾಕಾಲ ಉಳಿಯುವ ದಂತಕಥೆ ಗೋದಾರ್ದ್.

(ಜೀನ್-ಲ್ಯೂಕ್ ಗೋದಾರ್ದ್ 13 ಸೆಪ್ಟಂಬರ್ 2022ರಂದು ಕೊನೆಯುಸಿರೆಳೆದರು.)

ಎಂ.ಎಸ್. ಪ್ರಕಾಶ್ ಬಾಬು

ಎಂ.ಎಸ್. ಪ್ರಕಾಶ್ ಬಾಬು
ಕಲಾವಿದ ಪ್ರಕಾಶ್ ಬಾಬು ಹಲವು ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದು, ಸದ್ಯಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಿನಿಮಾ ಶಿಕ್ಷಣದ ತರಬೇತಿ ನೀಡುತ್ತಿದ್ದಾರೆ. ಅವರು ನಿರ್ದೇಶಿಸಿದ ’ಅತ್ತಿಹಣ್ಣು ಮತ್ತು ಕಣಜ’ ಹಲವು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.


ಇದನ್ನೂ ಓದಿ: ನಟ್ಚತಿರಮ್ ನಗರ್ಗಿರದು: ಸೋಕಾಲ್ಡ್ ಮೇಲ್ವರ್ಗದವರಿಗೆ ಪ.ರಂಜಿತ್ ಕರುಣಿಸಿದ ಹೊಸ ಅರಿವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...