Homeಮುಖಪುಟ‘ಮಾಬ್‌ ಲಿಂಚಿಂಗ್‌ ವಿರೋಧಿ ಮಸೂದೆ’ಗೆ ಸಹಿ ಹಾಕಲು ನಿರಾಕರಿಸಿದ ಜಾರ್ಖಂಡ್‌ ರಾಜ್ಯಪಾಲ

‘ಮಾಬ್‌ ಲಿಂಚಿಂಗ್‌ ವಿರೋಧಿ ಮಸೂದೆ’ಗೆ ಸಹಿ ಹಾಕಲು ನಿರಾಕರಿಸಿದ ಜಾರ್ಖಂಡ್‌ ರಾಜ್ಯಪಾಲ

- Advertisement -
- Advertisement -

ಮೂರು ತಿಂಗಳ ಹಿಂದೆ ಅಂಗೀಕರಿಸಿದ ‘ಲಿಂಚಿಂಗ್‌ ವಿರೋಧಿ ಮಸೂದೆ’ಯನ್ನು ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್ ಅವರು ಸಹಿ ಹಾಕಲು ನಿರಾಕರಿಸಿದ್ದು ರಾಜ್ಯ ಸರ್ಕಾರಕ್ಕೆ ವಾಪಾಸು ಕಳುಹಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಶುಕ್ರವಾರ ವರದಿ ಮಾಡಿದೆ. ಜಾರ್ಖಂಡ್‌ ವಿಧಾನಸಭೆಯು ಡಿಸೆಂಬರ್‌ 12 ರಂದು ಗುಂಪು ಹಿಂಸಾಚಾರ ಮತ್ತು ಗುಂಪು ಹತ್ಯೆ ತಡೆ ಮಸೂದೆ, 2021 ಅನ್ನು ಅಂಗೀಕರಿಸಿತ್ತು.

ಆದರೆ, ‘ಗುಂಪು’ (Mob-ಗುಂಪು) ಪದದ ವ್ಯಾಖ್ಯಾನವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲ ರಮೇಶ್‌‌‌ ಬೈಸ್‌‌ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. (ಮಾಬ್‌ ಲಿಂಚಿಂಗ್ ಅನ್ನು ಕನ್ನಡದಲ್ಲಿ ‘ಗುಂಪು ಹತ್ಯೆ’ ಎಂದು ಬರೆಯಲಾಗುತ್ತದೆ)

ಇದನ್ನೂ ಓದಿ: ಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್: ಲಿಂಗಸಗೂರಿನಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಕಳೆದ ಡಿಸೆಂಬರ್‌ನಲ್ಲಿ, ಬಿಜೆಪಿ ಶಾಸಕ ಅಮಿತ್ ಕುಮಾರ್ ಮಂಡಲ್ ಅವರು ‘ಗುಂಪು’ ಎಂಬ ಪದವನ್ನು ಸರಿಯಾಗಿ ವ್ಯಾಖ್ಯಾನಿಸಲಾಗಿಲ್ಲ ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ವಿಧೇಯಕವನ್ನು ವಿಧಾನಸಭೆಯಲ್ಲಿ ಚರ್ಚೆ ನಡೆಸುತ್ತಿದ್ದಾಗ ಬಿಜೆಪಿ ಅದನ್ನು ವಿರೋಧಿಸಿ, ತುಷ್ಟೀಕರಣ ರಾಜಕಾರಣ ಮಾಡುವ ಯತ್ನ ಎಂದು ಆರೋಪಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್‌ ಅವರು, ಬಿಜೆಪಿ ಜನರಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದರಯ. ‘ನಾವು ಗುಂಪು ಹತ್ಯೆ(ಮಾಬ್‌ ಲಿಂಚ್‌) ಕಾಯಿದೆಯ ಬಗ್ಗೆ ಮಾತನಾಡುತ್ತಿದ್ದೇವೆ, ಅದು ಮುಸ್ಲಿಂ ಹತ್ಯೆ ಕಾಯಿದೆಯೊ, ಆದಿವಾಸಿ ಹತ್ಯೆ ಕಾಯಿದೆಯೊ ಅಥವಾ ಹಿಂದೂ ಹತ್ಯೆ ಕಾಯಿದೆಯೊ ಅಲ್ಲ…ಗುಂಪು ಅಂದರೆ ಗುಂಪು ಅಷ್ಟೆ” ಎಂದು ಅವರು ಕೇಳಿದ್ದರು.

ಫೆಬ್ರವರಿ 11 ರಂದು, ಬುಡಕಟ್ಟು ಸಮುದಾಯಗಳ ಪ್ರತಿನಿಧಿಯಾಗಿ ‘ಜಂಜಾಟಿ ಸುರಕ್ಷಾ ಮಂಚ್’ ಎಂಬ ಸಂಘಟನೆಯ ಕೆಲವು ಸದಸ್ಯರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಈ ವೇಳೆ ಅವರು ರಾಜ್ಯಪಾಲರೊಂದಿಗೆ ಮಸೂದೆಯನ್ನು ಅನುಮೋದಿಸದಂತೆ ಕೇಳಿಕೊಂಡಿದ್ದರು. ಈ ಮಸೂದೆಯು ಬುಡಕಟ್ಟು ಸಮುದಾಯದ ವಿಶೇಷ ಕಾನೂನು ನಿಬಂಧನೆಗಳನ್ನು ದುರ್ಬಲಗೊಳಿಸಿದೆ ಎಂದು ಪ್ರತಿಪಾದಿಸಿದ್ದರು.

ಇದನ್ನೂ ಓದಿ: ಹೈಕೋರ್ಟ್ ಹಿರಿಯ ವಕೀಲ ಎಸ್.ಬಾಲನ್ ಅವರೊಂದಿಗೆ ಸಂದರ್ಶನ; ಮನುವಾದಕ್ಕೆ ಅಂಬೇಡ್ಕರ್ ಎಂದರೆ ಅಸಹನೆ 

ಈ ಮಸೂದೆಯು ‘ಲಿಂಚಿಗ್‌‌’ ಅನ್ನು, “ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ, ಭಾಷೆ, ಆಹಾರ ಪದ್ಧತಿಗಳು, ಲೈಂಗಿಕ ದೃಷ್ಟಿಕೋನ, ರಾಜಕೀಯ ಸಂಬಂಧ, ಜನಾಂಗೀಯತೆ ಅಥವಾ ಯಾವುದೇ ಇತರ ಹಿನ್ನಲೆಯ ಆಧಾರದ ಮೇಲೆ ಜನರ ಗುಂಪು ನಡೆಸುವ ಏಕಾಏಕಿ ಅಥವಾ ಯೋಜಿತವಾಗಿರುವ ಯಾವುದೇ ಹಿಂಸಾಚಾರದ ಅಥವಾ ಹತ್ಯೆಯ ಕೃತ್ಯ ಅಥವಾ ಸರಣಿ ಕೃತ್ಯ” ಎಂದು ವ್ಯಾಖ್ಯಾನಿಸಿತ್ತು.

ಮಾಬ್‌ ಲಿಂಚಿಂಗ್‌ ಅಲ್ಲಿ ತೊಡಗಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದು ಮತ್ತು ಅಪರಾಧದ ತೀವ್ರತೆಗೆ ಅನುಗುಣವಾಗಿ 3 ಲಕ್ಷ ರೂ. ನಿಂದ 5 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ. ಒಂದು ವೇಳೆ ಮಾಬ್‌ ಲಿಂಚ್‌ ಸಮಯದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟರೆ, ಅಪರಾಧಿಗಳಿಗೆ 25 ಲಕ್ಷ ರೂ. ದಂಡ ವಿಧಸಬಹುದಾಗಿದೆ.

ಮಸೂದೆಯ ಅಡಿಯಲ್ಲಿರುವ ಎಲ್ಲಾ ಅಪರಾಧಗಳನ್ನು ಕಾಗ್‌‌ನೈಸಬಲ್, ಜಾಮೀನು ರಹಿತ ಮತ್ತು ಸಂಯೋಜಿತವಲ್ಲದಂತೆ ಮಾಡಲಾಗಿದೆ. ಮಾಬ್‌ ಲಿಂಚಿಂ‌ಗ್‌ ಅನ್ನು ಯೋಜಿಸುವ, ಬೆಂಬಲಿಸುವ ಅಥವಾ ಪ್ರಯತ್ನಿಸುವ ವ್ಯಕ್ತಿಗಳನ್ನು ಶಿಕ್ಷಿಸಲು ಇದು ಅವಕಾಶ ನೀಡಿದೆ.

ಮಸೂದೆಗೆ ರಾಜ್ಯಪಾಲರ ಒಪ್ಪಿಗೆ ದೊರೆತರೆ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಮಣಿಪುರದ ನಂತರ ಗುಂಪು ಹಿಂಸಾಚಾರದ ವಿರುದ್ಧ ಕಾನೂನನ್ನು ಅಂಗೀಕರಿಸಿದ ಭಾರತದ ನಾಲ್ಕನೇ ರಾಜ್ಯವಾಗಿ ಜಾರ್ಖಂಡ್ ಆಗಲಿದೆ.

ಇದನ್ನೂ ಓದಿ: ಕ್ರಿಮಿನಲ್ ಕಾನೂನುಗಳನ್ನು ಬದಲಿಸಲು ಕೇಂದ್ರ ಸಮಿತಿ; ಅಬ್ಜೆಕ್ಶನ್, ಮೈ ಲಾರ್ಡ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...