ವಿವೇಕ್ ಅಗ್ನಿಹೋತ್ರಿಯವರ `ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಕಾಶ್ಮೀರ್ ಫೈಲ್ಸ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಈ ಸಿನಿಮಾ ಅರ್ಧ ಸತ್ಯವನ್ನಷ್ಟೇ ಹೇಳುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ್ದು, ಚಿತ್ರದಲ್ಲಿ ಸತ್ಯವನ್ನು ತೋರಿಸಲಾಗಿದ್ದು, ಜನರು ತಪ್ಪದೇ ನೋಡಬೇಕು ಎಂದಿದ್ದಾರೆ.
ಕಾಶ್ಮೀರ್ ಫೈಲ್ಸ್ ಅಷ್ಟೇ ಅಲ್ಲ, ದಲಿತ್ ಫೈಲ್ಸ್, ಗುಜರಾತ್ ಫೈಲ್ಸ್, ನೆಲ್ಲಿ ಫೈಲ್ಸ್ ಹೀಗೆ ಹಲವು ಕಥೆಗಳ ಕುರಿತು ಸಿನಿಮಾ ಮಾಡಬೇಕು. ಸರ್ಕಾರ ಒಂದು ಸಿನಿಮಾವನ್ನು ತನ್ನ ಪ್ರೊಪಗಾಂಡಕ್ಕೆ ಬಳಸಬಾರದು ಎಂಬ ಚರ್ಚೆ ಮುನ್ನೆಲೆಯಲ್ಲಿದೆ.
ಇದರ ನಡುವೆ ಬಾಲಿವುಡ್ ನಿರ್ದೇಶಕ ವಿನೋದ್ ಕಾಪ್ರಿ ಶೀಘ್ರದಲ್ಲೇ ಗುಜರಾತ್ ಫೈಲ್ಸ್ ಎಂಬ ಹೊಸ ಚಿತ್ರವನ್ನು ಮಾಡುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಪ್ರಧಾನಿ ಮೋದಿಯವರಿಗೆ ಕೆಲವು ಪ್ರಶ್ನೆಗಳನ್ನೂ ಕೇಳಿದ್ದಾರೆ. ‘ಗುಜರಾತ್ ಫೈಲ್ಸ್’ ಸಂಬಂಧ ಎರಡು ಟ್ವೀಟ್ ಮಾಡಿದ್ದಾರೆ.
#GujaratFiles के नाम से मैं “तथ्यों के आधार पर पर , आर्ट के आधार पर” फ़िल्म बनाने को तैयार हूँ और उसमें आपकी भूमिका का भी “सत्यता” से ,विस्तार से ज़िक्र होगा ।
क्या आप आज देश के सामने मुझे भरोसा देंगे कि फ़िल्म का रिलीज़ नहीं रोकेंगे @narendramodi जी ? https://t.co/X13hfvUKAM
— Vinod Kapri (@vinodkapri) March 15, 2022
ವಿನೋದ್ ಕಾಪ್ರಿ ಅವರು ತಮ್ಮ ಮೊದಲ ಟ್ವೀಟ್ನಲ್ಲಿ ಪ್ರಧಾನಿ ಮೋದಿಯನ್ನು ಟ್ಯಾಗ್ ಮಾಡಿದ್ದು, ‘ಗುಜರಾತ್ ಫೈಲ್ಸ್ ಹೆಸರಿನಲ್ಲಿ, ಕಲೆ ಹಾಗೂ ಸತ್ಯಗಳ ಆಧಾರದ ಮೇಲೆ ಚಲನಚಿತ್ರ ಮಾಡಲು ನಾನು ಸಿದ್ಧನಿದ್ದೇನೆ. ಅದರಲ್ಲಿ ನಿಮ್ಮ ಪಾತ್ರವನ್ನು ಸಹ ವಿವರವಾಗಿ ತೋರಿಸಲಾಗುತ್ತಿದೆ’ ಎಂದಿದ್ದಾರೆ. ಮುಂದುವರಿದು, ‘ನರೇಂದ್ರ ಮೋದಿ ಜಿ ಚಿತ್ರದ ಬಿಡುಗಡೆಯನ್ನು ನಿಲ್ಲಿಸುವುದಿಲ್ಲ ಎಂದು ನೀವು ಇಂದು ದೇಶದ ಮುಂದೆ ನನಗೆ ಭರವಸೆ ನೀಡುತ್ತೀರಾ?’ ಎಂದು ಕೇಳಿದ್ದಾರೆ.
#GujaratFiles के नाम से मैं “तथ्यों के आधार पर पर , आर्ट के आधार पर” फ़िल्म बनाने को तैयार हूँ और उसमें आपकी भूमिका का भी “सत्यता” से ,विस्तार से ज़िक्र होगा ।
क्या आप आज देश के सामने मुझे भरोसा देंगे कि फ़िल्म का रिलीज़ नहीं रोकेंगे @narendramodi जी ? https://t.co/X13hfvUKAM
— Vinod Kapri (@vinodkapri) March 15, 2022
ಎರಡನೇ ಟ್ವೀಟ್ನಲ್ಲಿ, ವಿನೋದ್ ಕಾಪ್ರಿ, “ನನ್ನ ಈ ಟ್ವೀಟ್ ನಂತರ, ನಾನು ಕೆಲವು ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಗುಜರಾತ್ ಫೈಲ್ಸ್ ನಿರ್ಮಿಸಲು ಸಿದ್ಧರಾಗಿದ್ದಾರೆ. ಈಗ ಪ್ರಧಾನಿಯವರು ಹೇಳುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಭರವಸೆಯನ್ನು ಈ ಚಿತ್ರಕ್ಕೂ ನೀಡಬೇಕು ಎಂಬ ಭರವಸೆ ಮಾತ್ರ ಅವರಿಗೆ ಬೇಕಾಗಿದೆ” ಎಂದಿದ್ದಾರೆ. ವಿನೋದ್ ಕಾಪ್ರಿ ಅವರ ಈ ಎರಡೂ ಟ್ವೀಟ್ಗಳು ಹೆಚ್ಚು ವೈರಲ್ ಆಗುತ್ತಿವೆ.
‘ಕಾಶ್ಮೀರ್ ಫೈಲ್ಸ್’ ಎನ್ನುವವರಿಗೆ ‘ದಲಿತ್ ಫೈಲ್ಸ್’ ಕಾಣುವುದಿಲ್ಲವೇ?
ಡಿಸೆಂಬರ್ 15, 2021ರಲ್ಲಿ ಪ್ರಕಟವಾಗಿರುವ ಸುದ್ದಿ ಇದು. ಆರ್ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡಿದ್ದ ಶ್ರೀನಗರ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಯ ಡಿಎಸ್ಪಿ, “1990ರಲ್ಲಿ ಭಯೋತ್ಪಾದನೆ ಆರಂಭವಾದಾಗಿನಿಂದ 1,724 ಜನರನ್ನು ಕೊಲ್ಲಲಾಗಿದೆ. ಅದರಲ್ಲಿ 89 ಕಾಶ್ಮೀರಿ ಪಂಡಿತರು ಸೇರಿದ್ದಾರೆ. 89 ಕಾಶ್ಮೀರಿ ಪಂಡಿತರನ್ನು ಹೊರತುಪಡಿಸಿ, ಅದೇ ಅವಧಿಯಲ್ಲಿ 1,635 ಇತರ ಧರ್ಮದ ಜನರೂ ಕೊಲೆಯಾಗಿದ್ದಾರೆ” ಎಂದಿದ್ದರು.
ಯಾವುದೇ ಕೊಲೆ, ಅಪರಾಧ ಖಂಡನೀಯ. ಆದರೆ ಕಾಶ್ಮೀರ್ ಫೈಲ್ಸ್ ಎನ್ನುವವವರು ದಲಿತ್ ಫೈಲ್ಸ್ಗಳ ಬಗ್ಗೆ ಯಾಕೆ ಮೌನ ವಹಿಸುತ್ತಾರೆ ಎಂದು ಕೇಳಲಾಗುತ್ತಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್ಸಿಆರ್ಬಿ) ಅಂಕಿಅಂಶಗಳ ಪ್ರಕಾರ, 2011 ಮತ್ತು 2020ರ ನಡುವೆ ನಡೆದ ದಲಿತರ ಮೇಲಿನ ದೌರ್ಜನ್ಯಗಳ ಸಂಖ್ಯೆ 4,15,821. ಎನ್ಸಿಆರ್ಬಿ ಮಾಹಿತಿಯ ಪ್ರಕಾರ, 2011ರಲ್ಲಿ ದಲಿತರ ವಿರುದ್ಧ 33,719 ಅಪರಾಧ ಪ್ರಕರಣಗಳು ದಾಖಲಾಗಿವೆ. 2020ರಲ್ಲಿ ಈ ಸಂಖ್ಯೆ 50,291ಕ್ಕೆ ಏರಿದೆ. ಅಂದರೆ ಒಂದು ದಶಕದ ಅವಧಿಯಲ್ಲಿ ದಲಿತರ ಮೇಲೆ ಹಲ್ಲೆಗಳು ಗಣನೀಯವಾಗಿ ಹೆಚ್ಚಾದವು. ಮುಖ್ಯವಾಗಿ ಕೇಸರಿ ಪಕ್ಷ ಆಡಳಿತವಿರುವಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ದ್ವಿಗುಣವಾಗುತ್ತಿವೆ. ಕಳೆದ ಒಂದು ದಶಕದ ಅವಧಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ಉತ್ತರ ಪ್ರದೇಶ (95,751), ಬಿಹಾರ (63,116), ರಾಜಸ್ಥಾನ (58,945), ಮಧ್ಯಪ್ರದೇಶ (44,469) ಮತ್ತು ಆಂಧ್ರಪ್ರದೇಶ (26,881) ರಾಜ್ಯಗಳಲ್ಲಿ ದಾಖಲಾಗಿವೆ. (ವಿವರಗಳಿಗೆ ‘ಇಲ್ಲಿ’ ಓದಿ)
ಇದನ್ನೂ ಓದಿರಿ: ಅರ್ಧಸತ್ಯ ಹೇಳುವ ಕಾಶ್ಮೀರ್ ಫೈಲ್ಸ್: ವೀಕ್ಷಣೆಯ ಬಳಿಕ ಛತ್ತೀಸ್ಗಡ ಸಿಎಂ ವಿಮರ್ಶೆ