Homeಮುಖಪುಟಅಗಲಿ ಹೋದ ಪ್ರೀತಿಯ ಕರುಳು ಜೋಗುರಾ ನೆನಪು

ಅಗಲಿ ಹೋದ ಪ್ರೀತಿಯ ಕರುಳು ಜೋಗುರಾ ನೆನಪು

- Advertisement -
- Advertisement -

|ಜಯಪ್ರಕಾಶ್ ಶೆಟ್ಟಿ. ಹೆಚ್ |
ಸಹಪ್ರಾಧ್ಯಾಪಕರು, ತೆಂಕನಿಡಿಯೂರು.ಉಡುಪಿ.

2008ರ ನವೆಂಬರ್‍ನಲ್ಲಿ ನಾನು ನಿರೀಕ್ಷೆಯೇ ಮಾಡಿರದ ರಾಜಕೀಯ ಪ್ರೇರಿತವಾದ ಅಕಸ್ಮಾತ್ ವರ್ಗಾವಣೆಯೊಂದು ನನಗೆ ನಾನು ಈ ಹಿಂದೆ ಕಂಡಿರದ ಹಾವೇರಿಯ ಹಿರೇಕೆರೂರಿನ ದುರ್ಗಮ್ಮನ ಕೆರೆಯನ್ನು ಕಾಣಿಸುವ ಜೊತೆಗೆ ನೇರನಡೆನುಡಿಯ ಗೆಳೆಯನೊಬ್ಬನನ್ನೂ ಕಾಣಿಸಿತ್ತು. ನೀರಿರದ ಊರಿಗೆ ನನ್ನನ್ನು ಎತ್ತಿ ಎಸೆಯುವ ಕೇಡಿಗರ ಧಾವಂತದಲ್ಲಿ ತುಂಬಿದ ಕೆರೆಯಿರುವ ಊರಿಗೆ ಹೋಗಿ ಬಿದ್ದ ನನಗೆ ಅರಿಯದ ಊರಿನ ಅನಾಥನೆಂಬ ಆತಂಕವೇ ಬಾಧಿಸದಂತೆ ಮನುಷ್ಯಪ್ರೀತಿಯ ನೆರಳೂ ಸಿಕ್ಕಿತ್ತು. ಸಂಸಾರದಿಂದ ದೂರವಿದ್ದ ಸಂಕಟ ಇದ್ದುದು ನಿಜವಿದ್ದರೂ ನಾನಾಗ ಜೀವಪರ ಚಿಂತನೆಯ ಆಲೋಚನೆಗಳನ್ನು ನಿರ್ಭೀತವಾಗಿ ಹಂಚಿಕೊಳ್ಳುತ್ತಿದ್ದ ಸಮಾನಮನಸ್ಕನೊಬ್ಬನ ಗೆಳೆತನದ ಮೂಲಕ ಬರಡು ನೆಲದಿಂದ ಕಿಂಚಿತ್ತಾದರೂ ಪಾರಾದ ಸುಖವನ್ನೂ ಅನುಭವಿಸಿದ್ದೆ. ಅದಕ್ಕಿಂತಲೂ ಹೆಚ್ಚಾಗಿ ಶೇರು, ಬಡ್ಡಿ, ಚೀಟಿ, ಹೊಲ ಮನಿ, ಸೈಟು ಇವ್ಯಾವುದರ ಗೋಜಿಗೆ ಬೀಳದೆ ವೃತ್ತಿ ಮತ್ತು ವಿದ್ಯಾರ್ಥಿಗಳ ಜೊತೆಗೆ ಅಪಾರವಾಗಿ ಬದುಕನ್ನು ಪ್ರೀತಿಸುತ್ತಿದ್ದ ಅಸಲಿ ಮೇಷ್ಟರೊಬ್ಬರ ಗೆಳೆತನ ಉಂಡಿದ್ದೆ. ಹೀಗೆ ಅಂದು ಬೆಸೆದುಕೊಂಡ ಗೆಳೆಯ ಜೋಗುರನೆಂಬ ಆ ಪ್ರೀತಿಯ ಕೊಂಡಿ ಮತ್ತೆಂದೂ ಕಳಚಿಕೊಂಡಿರಲಿಲ್ಲ.

ಜೋಗುರರು ನನ್ನಂತಹ ಕೆಲವೇ ಮಂದಿ ಸ್ನೇಹಿತರಿಗಷ್ಟೇ ಪರಿಚಿತರಲ್ಲ. ಸಮಾಜಶಾಸ್ತ್ರದ ಉಪನ್ಯಾಸಕನಾಗಿ, ಹವ್ಯಾಸಿ ಪತ್ರಕರ್ತ, ಕತೆಗಾರ, ಸಮೂಹಪರ ಚಿಂತನೆಯ ಬರಹಗಾರ, ಅತ್ಯುತ್ತಮ ವಾಗ್ಮಿಯಾಗಿ ತನ್ನನ್ನು ಗುರುತಿಸಿಕೊಂಡ ಜೋಗುರ ಕನ್ನಡದ ಓದುಗರಿಗೆ ಚಿರಪರಿಚಿತರು. ಸಾವಿಗೆ ಸಮೀಪದಲ್ಲಿದ್ದಾಗಲೂ ಅಕ್ಷರ ಮತ್ತು ಬದುಕುಗಳೆರಡರ ಅಪಾರಪ್ರೀತಿಯಲ್ಲಿ ಜೀವಂತವಾಗಿ ಉಳಿದವರು. ಈ ಲೋಕದ ಸಾಮಾಜಿಕ ಆಗುಹೋಗುಗಳು ಮತ್ತು ರಾಜಕೀಯದ ಸೂಕ್ಷ್ಮಗಳ ಕುರಿತಂತೆ ಅನೇಕ ಜನಪರ ಚಳುವಳಿಗಳಲ್ಲಿ ಸಮಾನಮನಸ್ಕರೊಂದಿಗೆ ಪ್ರಗತಿಪರ ವಿವೇಕದೊಂದಿಗೆ ಬೆರೆಯುತ್ತಿದ್ದವರು. ಸಂವೇದನೆಗಳು ಸತ್ತು ಮತಿಹೀನ ಉದ್ರೇಕಗಳೇ ಮಿಂಚುತ್ತ್ತಿರುವ ಜಗತ್ತಿನಲ್ಲಿ ಒಬ್ಬ ಬರಹಗಾರನಿಗೆ ಇರುವ ಹೊಣೆಗಾರಿಕೆಯ ಮಹತ್ವವನ್ನು ಅರಿತವರು.

ಮನುಷ್ಯನಾಗಿ ಸ್ವಯಂ ಕಷ್ಟದ ಬದುಕನ್ನು ಬದುಕಿದ ಅನುಭವದ ಹಿನ್ನೆಲೆಯುಳ್ಳ ಜೋಗುರರು ಬಡತನದ ಬಗೆಗೆ ಎಂದೂ ಅವಹೇಳನ ಮಾಡಿದವರಲ್ಲ. ಈ ನೆಲದ ಜಾತಿಜಾಡ್ಯದ ಪರ ವಹಿಸಿದ ಸಣ್ಣತನದವರೂ ಅಲ್ಲ. ಜಾತಿಯನ್ನು ವಿರೋಧಿಸಿದ ಜೋಗುರರು ಸ್ವಯಂ ಅಂತಹ ಉದಾಹರಣೆಯಾಗಿ ಬದುಕಿದವರು. ಮಾತನ್ನು ಕೃತಿಯಾಗಿಸುವ ಬಸವಪರಂಪರೆಯ ನಿಜ ವಾರಸುದಾರನಂತೆ ಜಾತಿಯ ಕಕ್ಷೆಯನ್ನು ಮೀರಿ ವಿವಾಹ ಸಂಬಂಧವನ್ನು ಹೊಂದಿದ್ದಷ್ಟೇ ಅಲ್ಲ, ಅದನ್ನು ಅತ್ಯಂತ ಪ್ರೀತಿಯಿಂದ ಬದುಕಿದವರು. ಆದರೆ ಜೋಗುರರ ಬರಹಗಳನ್ನು ಗಮನಿಸುವುದಾದರೆ ಆ ಬರಹಗಳಲ್ಲಿ ಇರುವ ವ್ಯವಸ್ಥೆಯನ್ನು ನಿರಾಕರಿಸಲೇಬೇಕೆಂಬ ಹಟವೇನೂ ಇಲ್ಲ. ಮುಖ್ಯವಾಗಿ ಅವು ಸಾಮಾಜಿಕ ಸ್ವಾಸ್ಥ್ಯದ ಕಡೆಗೆ ಹೆಚ್ಚು ಒಲಿದವುಗಳು. ಅವರ ಅನೇಕ ಬರಹಗಳು ಕೆಲವೊಂದು ಸಾಮಾಜಿಕಸಂಸ್ಥೆಗಳನ್ನು ಅವುಗಳ ಆರೋಗ್ಯಕರ ಸ್ವರೂಪದಲ್ಲಿ ಹಾಗೆಯೇ ಮುಂದುವರೆಯಬೇಕೆಂದು ತಣ್ಣಗೆ ಆಶಿಸುವಂತೆಯೂ ಕಂಡುಬರುತ್ತವೆ. ಕುಟುಂಬ ಸಂಬಂಧ, ಮನುಷ್ಯ ಸಂಬಂಧಗಳ ಆರೋಗ್ಯಕರ ಇರುವಿಕೆಯ ನಿರೀಕ್ಷೆಯಲ್ಲಿ ಸಾಂಸ್ಥಿಕಸ್ವರೂಪಗಳನ್ನು ಒಂದು ಹಂತಗಳಲ್ಲಿ ಅವರ ಬರಹಗಳು ಬೆಂಬಲಿಸುತ್ತವೆ ಕೂಡಾ. ಅದು ಅವರ ಬದುಕಿನ ತರ್ಕವೂ ಆಗಿರುವಂತಿದೆ.

ಕೆಲವೇ ಸಮಯ ಒಟ್ಟಿಗೆ ಕೆಲಸ ಮಾಡಿದ ನಾವಿಬ್ಬರೂ ಒಟ್ಟಿಗೇ ವರ್ಗಾವಣೆ ಪಡೆದು ಹಿರೇಕೆರೂರನ್ನು ಬಿಟ್ಟು ನಾನು ಉಡುಪಿಗೆ ಬಂದೆ ಅವರು ಧಾರವಾಡಕ್ಕೆ ಹೋದರು. ಆದರೆ ನಮ್ಮ ಗೆಳೆತನ ಹಾಗೆಯೇ ಉಳಿದಿತ್ತು. ಅವರ ಹಟಕ್ಕೆ ಕಟ್ಟುಬಿದ್ದು ಕಾರವಾರದ ‘ಕರಾವಳಿ ಮುಂಜಾವು’ ದಿನಪತ್ರಿಕೆಯಲ್ಲಿ ನಾನು ಒಂದು ವರ್ಷದ ತನಕ ಅಂಕಣವನ್ನೂ ಬರೆದೆ. ಹೀಗೆ ಸಲುಗೆಯಲ್ಲಿ ಒತ್ತಾಯಿಸಬಲ್ಲ, ಅಷ್ಟೇ ಸಲೀಸಾಗಿ ತಾನು ಕಂಡ ಮಿತಿಯನ್ನು ಹೇಳಬಲ್ಲ ಪ್ರೀತಿಯ ಜೋಗುರ ಇನ್ನಿಲ್ಲವಾದರು ಎಂಬುದು ನನ್ನನ್ನೂ ಒಳಗೊಂಡಂತೆ ಅನೇಕ ಗೆಳೆಯರಿಗೆ ಮರೆಯಲಾರದ ನೋವು. ಆದರೆ ಅಗಲಿ ಹೋದ ಈ ಪ್ರೀತಿಯ ಕರುಳು ನಮ್ಮೊಳಗೆ ಉಳಿಸಿ ಹೋದ ಗೆಳೆತನದ ತೇವ ಮತ್ತು ಅಗಲಿಕೆಯ ನೋವುಗಳಲ್ಲಿ ಆ ಜೀವದ ನೆನಪು ನಮ್ಮೊಳಗೆ ಹಸಿರಾಗಿರಲಿ ಎಂಬುದಷ್ಟೇ ಕರಗಿ ಹೋದ ಗೆಳೆಯನಿಗೆ ನಮ್ಮೆಲ್ಲರ ಹರಕೆ ಎಂದುಕೊಳ್ಳುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...