ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಂಜೆ ಭಾರತ್ ರಾಷ್ಟ್ರ ಸಮಿತಿಯ (ಬಿಆರ್ಎಸ್) ಕೆ ಕವಿತಾ ಅವರನ್ನು ಬಂಧಿಸಿದ್ದು, ಅವರ ಸಹೋದರ, ಬಿಆರ್ಎಸ್ ನಾಯಕ ಕೆಟಿ ರಾಮರಾವ್ ಮತ್ತು ಕವಿತಾ ಅವರನ್ನು ಕರೆದೊಯ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡದ ನಡುವೆ ನಾಟಕೀಯ ಘರ್ಷಣೆಗೆ ಕಾರಣವಾಯಿತು.
ಕೆ ಕವಿತಾ ಅವರ ಹೈದರಾಬಾದ್ ಮನೆಯೊಳಗಿನ ವೀಡಿಯೊದಲ್ಲಿ ಕೆಟಿಆರ್, ಇಡಿ ಅಧಿಕಾರಿಗಳೊಂದಿಗೆ ಬಿಸಿಯಾದ ಮಾತಿನ ಚಕಮಕಿಯನ್ನು ಕಾಣಬಹುದಾಗಿದೆ. ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರನ್ನು ದೆಹಲಿಗೆ ಸ್ಥಳಾಂತರಿಸಲು ಏಜೆನ್ಸಿ ಅಧಿಕಾರಿಗಳ ಬಳಿ ಟ್ರಾನ್ಸಿಟ್ ವಾರಂಟ್ ಇಲ್ಲ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.
ಶೋಧನೆ ಪೂರ್ಣಗೊಂಡಿದ್ದು, ಬಂಧನ ವಾರಂಟ್ ನೀಡಲಾಗಿದೆ ಎಂದು ಅಧಿಕಾರಿ ಭಾನು ಪ್ರಿಯಾ ಮೀನಾ ಹೇಳುತ್ತಾರೆ. ಆದರೆ ಅವರ ಬಳಿ ಟ್ರಾನ್ಸಿಟ್ ವಾರಂಟ್ ಇಲ್ಲ ಮತ್ತು ಈಗ ಅವರು ಬರಲು ಸಾಧ್ಯವಿಲ್ಲ ಎಂದು ಎಂದು ಇಡಿ ಅಧಿಕಾರಿಗಳನ್ನು ಕೆಟಿಆರ್ ಪ್ರಶ್ನಿಸಿದ್ದಾರೆ.
‘ಹಾಗಾದರೆ ನೀವು ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಸಾಧ್ಯವಿಲ್ಲ. ನೀವು ಹೇಗೆ ಕೇಸ್ ಮಾಡುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.
ಟ್ರಾನ್ಸಿಟ್ ವಾರಂಟ್ ಅಥವಾ ಟ್ರಾನ್ಸಿಟ್ ರಿಮಾಂಡ್ ಆರ್ಡರ್, ನ್ಯಾಯಾಂಗ ಮ್ಯಾಜಿಸ್ಟ್ರೇಟ್ನ ನಿರ್ದೇಶನವಾಗಿದ್ದು, ಬಂಧಿತ ವ್ಯಕ್ತಿಯನ್ನು ರಾಜ್ಯದ ಗಡಿಯುದ್ದಕ್ಕೂ ಕಾನೂನುಬದ್ಧವಾಗಿ ಸ್ಥಳಾಂತರಿಸುವ ಮೊದಲು ಪೊಲೀಸ್ ಕಸ್ಟಡಿಗೆ ನಿಯೋಜಿಸುತ್ತದೆ.
ಕವಿತಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲಾಗುವುದು ಎಂದು ಇಡಿ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಕೆ. ಕವಿತಾ ಅವರ ಮನೆಯಿಂದ 43 ಸೆಕೆಂಡ್ಗಳ ವೀಡಿಯೊ ಬಿಡುಗಡೆಯಾಗಿದ್ದು, ಕೆಟಿಆರ್ ಮತ್ತು ಅವರ ಸಹಾಯಕರು, ತನಿಖಾ ಸಂಸ್ಥೆ ತಂಡವು ಮುಖಾಮುಖಿಯಾಗುತ್ತಿರುವುದನ್ನು ತೋರಿಸುತ್ತದೆ.
ಇದನ್ನೂ ಓದಿ; ದೆಹಲಿ ಅಬಕಾರಿ ನೀತಿ ಪ್ರಕರಣ: ಬಿಆರ್ಎಸ್ ನಾಯಕಿಯನ್ನು ವಶಕ್ಕೆ ಪಡೆದ ಇಡಿ ಅಧಿಕಾರಿಗಳು